/newsfirstlive-kannada/media/post_attachments/wp-content/uploads/2025/05/Bangalore-Traffic-Towing-2.jpg)
ಬೆಂಗಳೂರು: ಸಿಲಿಕಾನ್​ ಸಿಟಿ ವಾಹನ ಸವಾರರಿಗೆ ಇದು ನಿಜಕ್ಕೂ​ ಶಾಕಿಂಗ್ ನ್ಯೂಸ್. ಬೆಂಗಳೂರು ನಗರದಲ್ಲಿ ಮತ್ತೆ ಟೋಯಿಂಗ್​ ಶುರುವಾಗಲಿದೆ. ಇನ್ಮುಂದೆ ರೋಡ್​ ರೋಡ್​​ನಲ್ಲಿ ವೆಹಿಕಲ್​ ಪಾರ್ಕ್ ಮಾಡಿದ್ರೆ ಟ್ರಾಫಿಕ್ ಪೊಲೀಸರು ಎತ್ಹಾಕೊಂಡು ಹೋಗ್ತಾ ಇರ್ತಾರೆ.
ಹಲವು ದಿನಗಳಿಂದ ನಿಂತಿದ್ದ ಟೋಯಿಂಗ್ ರೂಲ್ಸ್ ಅನ್ನ ಮತ್ತೆ ಆರಂಭಿಸಲು ಪೊಲೀಸರು ಸಜ್ಜಾಗಿದ್ದಾರೆ. ಇನ್ಮುಂದೆ ಎಲ್ಲೆಲ್ಲೆಂದ್ರಲ್ಲಿ ಗಾಡಿ ನಿಂತಿದ್ದರೆ ಎತ್ತಂಗಡಿ ಫಿಕ್ಸ್​​​.
/newsfirstlive-kannada/media/post_attachments/wp-content/uploads/2025/05/Bangalore-Traffic-Towing-1.jpg)
ಇತ್ತೀಚೆಗೆ ಬೆಂಗಳೂರು ಉಸ್ತುವಾರಿ ಸಚಿವ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ನಗರದಲ್ಲಿ 21 ದಿನ ವಾಹನಗಳನ್ನು​ ಒಂದೇ ಕಡೆ ಪಾರ್ಕ್ ಮಾಡಿದ್ರೆ ಹರಾಜು ಮಾಡುತ್ತೇವೆ ಎಂದಿದ್ದರು. ಡಿ.ಕೆ ಶಿವಕುಮಾರ್ ಅವರ ಹೇಳಿಕೆ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಅವರಿಂದಲೂ ಟೋಯಿಂಗ್ ಜಾರಿಗೆ ತರುವುದಾಗಿ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಅಪ್ಪನ ಎದೆ ಮೇಲೆ ನಿದ್ದೆ.. ತಂದೆಗೆ ಮಗಳ ಕೈ ತುತ್ತು; ಮಂಡ್ಯದ ಹೃತಿಕ್ಷಾ ವಿಡಿಯೋ ನೋಡಿ ಹೆತ್ತವರ ಕಣ್ಣೀರು
/newsfirstlive-kannada/media/post_attachments/wp-content/uploads/2023/06/PARAMESHWAR14062023.jpg)
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಗೃಹಸಚಿವ ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ಸಭೆ ಬಳಿಕ ಮಾತನಾಡಿದ ಡಾ.ಜಿ ಪರಮೇಶ್ವರ್ ಅವರು, ಬೆಂಗಳೂರು ನಗರದಲ್ಲಿ ಟೋಯಿಂಗ್ ಅನ್ನು ಹಿಂದೆ ನಿಲ್ಲಿಸಿದ್ದೇವು. ಅದನ್ನ ರೀ ಇಂಟ್ರಡ್ಯೂಸ್ ಮಾಡ್ತೀವಿ.
ಈ ಹಿಂದೆ ಟೋಯಿಂಗ್ಗೆ ಬಾಡಿಗೆ ವಾಹನಗಳನ್ನು ತೆಗೆದುಕೊಳುತ್ತಾ ಇದ್ವಿ. ಈಗ ನಮ್ಮದೆ ವೆಹಿಕಲ್, ನಮ್ಮದೇ ಸಿಬ್ಬಂದಿಗಳಿಂದ ಅದನ್ನ ಹ್ಯಾಂಡಲ್ ಮಾಡ್ತೀವಿ. ಈ ಬಗ್ಗೆ ಇವತ್ತಿನ ಸಭೆಯಲ್ಲಿ ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us