/newsfirstlive-kannada/media/post_attachments/wp-content/uploads/2024/03/Summer.jpg)
ಬೆಂಗಳೂರು: ಮಳೆ ಬಂತು, ಚಳಿಯೂ ಹೊಯ್ತು. ಈಗ ಸಿಲಿಕಾನ್ ಸಿಟಿ ಸದ್ದಿಲ್ಲದೇ ಬೇಸಿಗೆ ಕಾಲಕ್ಕೆ ಸಜ್ಜಾಗುತ್ತಿದೆ. ಇತ್ತೀಚೆಗೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಣ ಹವೆ ಆರಂಭವಾಗಿದ್ದು, ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೆವ ಚಳಿ ಕಡಿಮೆ ಆಗುತ್ತಾ ಬಂದಿದೆ. ಅಂದ್ರೆ ಈ ಬಾರಿ ಚಳಿ ಸ್ವಲ್ಪ ಬೇಗನೆ ಮುಗಿಯುತ್ತಿದ್ದು, ಒಣ ಹವೆಯ ವಾತಾವರಣ ಶುರುವಾಗಿದೆ. ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಶಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ಅವರು ಬೇಸಿಗೆ ಕಾಲದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/12/BANGALORE-WINTER.jpg)
ಸದ್ಯ ಮಧ್ಯಭಾರತದಲ್ಲಿ ಗಾಳಿ ವಿರುದ್ಧ ದಿಕ್ಕಿನಲ್ಲಿದೆ. ಇದರಿಂದ ಮುಂದಿನ ಒಂದು ವಾರ ರಾಜ್ಯಾದ್ಯಂತ ಒಣ ಹವೆ ಮುಂದುವರಿಯಲಿದೆ. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಫೆಬ್ರವರಿ 1ರಿಂದ ಫೆಬ್ರವರಿ 7ರವರೆಗೆ ಒಣ ಹವೆ ಮುಂದುವರಿಯುವ ಹೆಚ್ಚಿನ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಟೀ ಕುಡಿಯೋದು ಎಷ್ಟು ಡೇಂಜರ್​​? ಚಹಾ ಬಿಟ್ರೆ ಲಾಭಗಳೇನು? ಎಲ್ಲರೂ ಓದಲೇಬೇಕಾದ ಸ್ಟೋರಿ
ಇನ್ನು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಕನಿಷ್ಠ ಉಷ್ಣಾಂಶ 18 ರಿಂದ 19 ಡಿಗ್ರಿ ಸೆಂಟಿಗ್ರೇಟ್ ಹಾಗೂ ಗರಿಷ್ಠ ಉಷ್ಣಾಂಶ 31-32 ಡಿ.ಸೆ ದಾಖಲಾಗುವ ಸಾಧ್ಯತೆ ಇದೆ. ವಿಜಯಪುರ, ಕಲಬುರ್ಗಿ ಸೇರಿದಂತೆ ಉತ್ತರ ಒಳನಾಡಿನ ಗರಿಷ್ಠ ಉಷ್ಣಾಂಶ 32-34 ಡಿ.ಸೆ. ಕನಿಷ್ಠ ಉಷ್ಣಾಂಶ 16 ಡಿ.ಸೆ ಇರುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಕನಿಷ್ಟ ಉಷ್ಣಾಂಶ 23 ಡಿ.ಸೆ. ಗರಿಷ್ಟ 33 ಡಿ.ಸೆ. ಇರುವ ಸಾಧ್ಯತೆ ಇದೆ.
ರಾಜ್ಯಾದ್ಯಂತ ಬೆಳಗಿನ ಜಾವ ಬೀಳುತ್ತಿದ್ದ ಚುಮು, ಚುಮು ಚಳಿ ಮಾಯವಾಗುತ್ತಿದ್ದು, ಈ ವರ್ಷದ ಬೇಸಿಗೆ ಕಾಲ ಮಾರ್ಚ್ 1ರಿಂದ ಆರಂಭವಾಗುವುದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us