Advertisment

ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಬೇಸಿಗೆಗೆ ಮೊದಲೇ ಬಿಸಿಲಿನ ಝಳ.. ಹವಾಮಾನ ಇಲಾಖೆ ಹೇಳಿದ್ದೇನು?

author-image
Bheemappa
Updated On
ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಬೇಸಿಗೆಗೆ ಮೊದಲೇ ಬಿಸಿಲಿನ ಝಳ.. ಹವಾಮಾನ ಇಲಾಖೆ ಹೇಳಿದ್ದೇನು?
Advertisment
  • ಮಾರ್ಚ್​ನಿಂದ ಆರಂಭವಾಗಬೇಕಿದ್ದ ಬಿಸಿಲು ಈಗಲೇ ಬಂತು
  • ಶಾಲಾ ಮಕ್ಕಳ ಬಗ್ಗೆ ಪೋಷಕರಿಗೆ ಇರಲಿ ಎಚ್ಚರ, ಹೀಗೆ ಮಾಡಿ!
  • ಮಾರ್ಚ್​​ನಿಂದ ನಗರದಲ್ಲಿ ಗರಿಷ್ಠ ತಾಪಮಾನ ದಾಖಲಾಗುತ್ತಾ?

ಬೆಂಗಳೂರು: ಇನ್ನೂ ಚಳಿಗಾಲ ಮುಗಿದಿಲ್ಲ. ಆದರೆ ಆಗಲೇ ನಿಗಿ ನಿಗಿ ಬಿಸಿಲು ಬರುತ್ತಿದೆ. ಸಿಲಿಕಾನ್ ಸಿಟಿ ಸೇರಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಚಳಿಗಾಲ ಮುಗಿಯುವ ಮೊದಲೇ ಬಿಸಿಲ ಝಳ ಗರಿಷ್ಠವಾಗಿದೆ. ಫೆಬ್ರುವರಿಯಲ್ಲೇ ಕ್ರಮೇಣವಾಗಿ ತಾಪಮಾನ ಹೆಚ್ಚುತ್ತಿರುವ ಕಾರಣ ಮಾರ್ಚ್​​ನಿಂದ ಬಿಸಿಲಿನ ಝಳ ತೀವ್ರವಾಗಿ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisment

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಫೆಬ್ರವರಿ ಅಂದರೇ ಇದೆ ತಿಂಗಳಲ್ಲೇ 32 ರಿಂದ 37 ಡಿಗ್ರಿಯವರೆಗೆ ತಾಪಮಾನ ದಾಖಲು ಆಗುತ್ತಿದೆ. ಇಂದು ಬೆಂಗಳೂರಿನಲ್ಲಿ ಗರಿಷ್ಠ 31.9 ಡಿಗ್ರಿ ತಾಪಮಾನ ದಾಖಲಾಗಿದೆ. ಕನಿಷ್ಠ ತಾಪಮಾನ 28 ರಿಂದ 29 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ತಮಿಳುನಾಡಿನಿಂದ ಪೂರ್ವ ಮಾರುತಗಳು ಬೀಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚುತ್ತಿದೆ.

publive-image

ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ಹೋಗಿ ಜೀವ ಕಳೆದುಕೊಂಡ ಕರ್ನಾಟಕದ ಮತ್ತೊಬ್ಬ ಯುವಕ

ಫೆಬ್ರುವರಿ 5, ಬುಧವಾರದ ನಂತರ ತಾಪಮಾನದಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಈ ತಿಂಗಳಲ್ಲೇ ಬಿಸಿಲು ಹೀಗೆದೆ ಎಂದರೆ ಮಾರ್ಚ್​​ನಲ್ಲಿ ನಗರದ ಗರಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಬೇಸಿಗೆಯ ಬಿಸಿಲಿನ ತೀವ್ರತೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯ ಹವಾಮಾನ ಇಲಾಖೆ ತಜ್ಞರ ಸಲಹೆ ನೀಡಿದ್ದಾರೆ.

ಬೆಳಗ್ಗೆ 10 ಗಂಟೆ ಆಗುವಷ್ಟರಲ್ಲಿ ಸೂರ್ಯ ನೆತ್ತಿ ಸುಡುತ್ತಿದ್ದಾನೆ. ಹೀಗಾಗಿ ಮನೆಯಿಂದ ಹೊರಡುವಾಗ ಜೊತೆಯಲ್ಲಿ ನೀರಿನ ಬಾಟಲ್, ಕೊಡೆ, ತೆಳು ಬಟ್ಟೆ​ ತೆಗೆದುಕೊಂಡು ಹೋದರೆ ಉತ್ತಮ. ಇನ್ನು ಶಾಲಾ ಮಕ್ಕಳಿಗೆ ಜೊತೆಯಲ್ಲಿ ನೀರಿನ ಬಾಟಲ್ ಅನ್ನು ಪೋಷಕರು ಕೊಟ್ಟು ಕಳಿಸಲೇಬೇಕು. ನಗರ ಪ್ರದೇಶಗಳಲ್ಲಿ ಧೂಳು ಹೆಚ್ಚಾಗುವುದರಿಂದ ಮುಖಕ್ಕೆ ಮಾಸ್ಕ್ ಅಥವಾ ಕರ್ಚೀಪ್​ನಿಂದ ರಕ್ಷಣೆ ಮಾಡಿಕೊಳ್ಳಬೇಕು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment