ಬ್ಯಾಂಕ್ ಅಕೌಂಟ್ಗೆ ಹಣ ಬರಬಹುದೆಂದು ಚೆಕ್ ಮಾಡುತ್ತಿದ್ದ ಮಹಿಳೆ
‘ನಿಮ್ಮ ಹೆಸರಲ್ಲಿ ಸಿಮ್ ಕಾರ್ಡ್ ಖರೀದಿಸಿ, ಕೋಟಿ ಕೋಟಿ ವ್ಯವಹಾರ’
₹60 ಕೋಟಿ ಅಕ್ರಮವಾಗಿ ವರ್ಗಾವಣೆ ಎಂದು ಹೇಳಿದ್ದ ಖದೀಮರು
ವಿಶ್ವದಲ್ಲಿ ಟೆಕ್ನಾಲಜಿ ಡೆವಲಪ್ ಆಗುತ್ತಿದ್ದಂತೆ ಆನ್ಲೈನ್ ಮೂಲಕ ಹಣ ಲಪಟಾಯಿಸುವವರ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ. ಇಷ್ಟು ದಿನ ಆನ್ಲೈನ್ ಆ್ಯಪ್, ಆನ್ಲೈನ್ ಮಾರ್ಕೆಟಿಂಗ್, ಮೆಸೇಜ್ಗಳು, ಇನ್ಸ್ಟಾ ಹಾಗೂ ಫೇಸ್ಬುಕ್ ಮೂಲಕ ಬ್ಯಾಂಕ್ ಅಕೌಂಟ್ಗೆ ಕನ್ನ ಹಾಕುತ್ತಿದ್ದರು. ಕೇವಲ ಒಂದೇ ಒಂದು ಕಾಲ್ ರಿಸೀವ್ ಮಾಡಿದ್ದಕ್ಕೆ ಒಂದು ಕೋಟಿಗೂ ಹೆಚ್ಚು ರೂಪಾಯಿಗಳನ್ನು ವೃದ್ಧೆಯೊಬ್ಬರು ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಸೂರ್ಯ ಕ್ಯಾಪ್ಟನ್ ಆದ್ರೆ ದಬ್ಬಾಳಿಕೆ ಮಾಡ್ತಾರಾ.. ಅವಾಚ್ಯ ಶಬ್ದಗಳಿಂದ ನಿಂದಿಸ್ತಾರಾ; ಏನಿದು ಸ್ಟೋರಿ?
ಈ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದ ವೃದ್ಧೆ ಎಲ್ಲೋ ಅಮೆರಿಕದವರೋ, ಫ್ರಾನ್ಸ್ನವರೋ ಅಲ್ಲ. ಇದೇ ಬೆಂಗಳೂರಿನ ಆರ್.ಟಿ ನಗರದವರು. ಹೆಸರು ಲಕ್ಷ್ಮಿ ಶಿವಕುಮಾರ್ ಇವರಿಗೆ 76 ವರ್ಷಗಳು ಆಗಿವೆ. ಇವರಿಗೆ ಕಳೆದ ತಿಂಗಳು ಜೂನ್ನಲ್ಲಿ ಅಪರಿಚಿತ ನಂಬರ್ನಿಂದ ಫೋನ್ ಕಾಲ್ ಬಂದಿದ್ದರಿಂದ ರಿಸೀವ್ ಮಾಡಿ ಮಾತನಾಡಿದ್ದಾರೆ. ನಾವು ಟೆಲಿಕಮ್ಯುನಿಕೇಷನ್ ಮಾತನಾಡುತ್ತಿದ್ದೇವೆ. ನೀವು ಸಿಮ್ಕಾರ್ಡ್ ಅನ್ನು ಖರೀದಿ ಮಾಡಿ ಅಕ್ರಮ ಚಟುವಟಿಕೆಗಳಿಗೆ ಬಳಸಿದ್ದೀರಿ. ಹೀಗಾಗಿ ಮುಂಬೈಯಲ್ಲಿರೋ ಕ್ರೈಂ ಬ್ರ್ಯಾಂಚ್ನಲ್ಲಿ ಕೇಸ್ ದಾಖಲಾಗಿದ್ದು ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಸುಳ್ಳು ಹೇಳಿದ್ದಾರೆ.
ಇದನ್ನೂ ಓದಿ: ಕಾರ್ಗಿಲ್ ಯುದ್ಧಕ್ಕೆ ಇಂದು ರಜತ ಮಹೋತ್ಸವ.. ‘ಇತಿಹಾಸದಿಂದ ಪಾಕಿಸ್ತಾನ ಏನನ್ನೂ ಕಲಿತ್ತಿಲ್ಲ’; PM ಮೋದಿ
ಇದರಿಂದ ವೃದ್ಧೆ ಗಾಬರಿಗೊಂಡಿದ್ದರು. ಮತ್ತೊಂದು ಕಾಲ್ ಅದೇ ರೀತಿ ಬಂದಿದೆ. ಸಂದೀಪ್ ರಾವ್ ಮತ್ತು ಆಕಾಶ್ ಎಂದು ಕ್ರೈಂ ಬ್ರಾಂಚ್ನಿಂದ ಮಾತಾಡುತ್ತಿದ್ದೇವೆ ಎಂದಿದ್ದಾರೆ. ನಿಮ್ಮ ಅಕೌಂಟ್ನಿಂದ ಸುಮಾರು 60 ಕೋಟಿ ಹಣ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಇದನ್ನ ಚೆಕ್ ಮಾಡಲು ನಿಮ್ಮ ಬ್ಯಾಂಕ್ ಅಕೌಂಟ್, ಇನ್ವೆಸ್ಟ್ಮೆಂಟ್ ದಾಖಲೆ ಕೊಡಿ. ಇಲ್ಲದಿದ್ದರೇ ನಿಮ್ಮನ್ನ ಬಂಧಿಸಬೇಕಾಗುತ್ತದೆ ಎಂದು ನಕಲಿ ಎಫ್ಐಆರ್ ಕಾಪಿ ತೋರಿಸಿದ್ದಾರೆ. ಇದೆಲ್ಲವನ್ನು ಕೇಳಿದ ವೃದ್ಧೆ ನಿಜ ಇರಬಹುದೆಂದು ನಂಬಿದ್ದಾರೆ.
ಇದನ್ನೂ ಓದಿ: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಯಾರಾಗ್ತಾರೆ.. ಡಿ.ಕೆ ಶಿವಕುಮಾರ್ ಬೆಂಬಲ ಯಾರಿಗೆ..?
ಹೀಗಾಗಿ ತನ್ನ ಬ್ಯಾಂಕ್ ಖಾತೆಯ ವಿವರ, ಆಧಾರ್ ಕಾರ್ಡ್ ಇತ್ಯಾದಿಗಳನ್ನು ದಾಖಲೆಗಳನ್ನ ಖದೀಮರಿಗೆ ನೀಡಿದ್ದಾರೆ. ಈ ಎಲ್ಲವನ್ನು ಕೊಟ್ಟಿದ್ದೇ ತಡ ವೃದ್ಧೆಯ ಅಕೌಂಟ್ನಿಂದ 1 ಕೋಟಿ 28 ಲಕ್ಷದ 70 ಸಾವಿರ ರೂಪಾಯಿಗಳನ್ನ ಲಪಟಾಯಿಸಿ ಮತ್ತೆ ವಾಪಸ್ ಮಾಡುವುದಾಗಿ ಹೇಳಿದ್ದಾರೆ. ಅವರು ಹಣ ಹಾಕಬಹುದೆಂದು ತನ್ನ ಬ್ಯಾಂಕ್ ಅಕೌಂಟ್ ಅನ್ನು ವೃದ್ಧೆ ಚೆಕ್ ಮಾಡುತ್ತಾ ಇದ್ದರಂತೆ. ಆದ್ರೆ ಹಣನೂ ಇಲ್ಲ, ಯಾವುದು ಫೋನ್ ಕಾಲ್ ಕೂಡ ಬಂದಿಲ್ಲ. ಹಾಗಾಗಿ ತನಗೆ ಬಂದ ನಂಬರ್ಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಎಂದು ಹೇಳುತ್ತಿದೆ. ಇದರಿಂದ ತಾನು ಮೋಸ ಹೋಗಿದ್ದೇನೆ ಎಂದು ತಿಳಿದು ಬೆಂಗಳೂರಿನ ಉತ್ತರ ವಿಭಾಗದ ಸಿಇಎನ್ ಪೊಲೀಸರಿಗೆ ವೃದ್ಧೆಯ ಕುಟುಂಬಸ್ಥರು ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆನ್ಲೈನ್ ಮೂಲಕ ಹಣ ಮೋಸವಾದರೆ ಸಿಕ್ಕರೆ ಸಿಗಬಹುದು, ಇಲ್ಲ ಅಂದರೆ ದುಡ್ಡು ಹೋದಾಗೆ ಆಗುತ್ತದೆ. ಹೀಗಾಗಿ ಜನರು ಹಣದ ಬಗ್ಗೆ ಜಾಗೃತಿಯಾಗಿರಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬ್ಯಾಂಕ್ ಅಕೌಂಟ್ಗೆ ಹಣ ಬರಬಹುದೆಂದು ಚೆಕ್ ಮಾಡುತ್ತಿದ್ದ ಮಹಿಳೆ
‘ನಿಮ್ಮ ಹೆಸರಲ್ಲಿ ಸಿಮ್ ಕಾರ್ಡ್ ಖರೀದಿಸಿ, ಕೋಟಿ ಕೋಟಿ ವ್ಯವಹಾರ’
₹60 ಕೋಟಿ ಅಕ್ರಮವಾಗಿ ವರ್ಗಾವಣೆ ಎಂದು ಹೇಳಿದ್ದ ಖದೀಮರು
ವಿಶ್ವದಲ್ಲಿ ಟೆಕ್ನಾಲಜಿ ಡೆವಲಪ್ ಆಗುತ್ತಿದ್ದಂತೆ ಆನ್ಲೈನ್ ಮೂಲಕ ಹಣ ಲಪಟಾಯಿಸುವವರ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ. ಇಷ್ಟು ದಿನ ಆನ್ಲೈನ್ ಆ್ಯಪ್, ಆನ್ಲೈನ್ ಮಾರ್ಕೆಟಿಂಗ್, ಮೆಸೇಜ್ಗಳು, ಇನ್ಸ್ಟಾ ಹಾಗೂ ಫೇಸ್ಬುಕ್ ಮೂಲಕ ಬ್ಯಾಂಕ್ ಅಕೌಂಟ್ಗೆ ಕನ್ನ ಹಾಕುತ್ತಿದ್ದರು. ಕೇವಲ ಒಂದೇ ಒಂದು ಕಾಲ್ ರಿಸೀವ್ ಮಾಡಿದ್ದಕ್ಕೆ ಒಂದು ಕೋಟಿಗೂ ಹೆಚ್ಚು ರೂಪಾಯಿಗಳನ್ನು ವೃದ್ಧೆಯೊಬ್ಬರು ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಸೂರ್ಯ ಕ್ಯಾಪ್ಟನ್ ಆದ್ರೆ ದಬ್ಬಾಳಿಕೆ ಮಾಡ್ತಾರಾ.. ಅವಾಚ್ಯ ಶಬ್ದಗಳಿಂದ ನಿಂದಿಸ್ತಾರಾ; ಏನಿದು ಸ್ಟೋರಿ?
ಈ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದ ವೃದ್ಧೆ ಎಲ್ಲೋ ಅಮೆರಿಕದವರೋ, ಫ್ರಾನ್ಸ್ನವರೋ ಅಲ್ಲ. ಇದೇ ಬೆಂಗಳೂರಿನ ಆರ್.ಟಿ ನಗರದವರು. ಹೆಸರು ಲಕ್ಷ್ಮಿ ಶಿವಕುಮಾರ್ ಇವರಿಗೆ 76 ವರ್ಷಗಳು ಆಗಿವೆ. ಇವರಿಗೆ ಕಳೆದ ತಿಂಗಳು ಜೂನ್ನಲ್ಲಿ ಅಪರಿಚಿತ ನಂಬರ್ನಿಂದ ಫೋನ್ ಕಾಲ್ ಬಂದಿದ್ದರಿಂದ ರಿಸೀವ್ ಮಾಡಿ ಮಾತನಾಡಿದ್ದಾರೆ. ನಾವು ಟೆಲಿಕಮ್ಯುನಿಕೇಷನ್ ಮಾತನಾಡುತ್ತಿದ್ದೇವೆ. ನೀವು ಸಿಮ್ಕಾರ್ಡ್ ಅನ್ನು ಖರೀದಿ ಮಾಡಿ ಅಕ್ರಮ ಚಟುವಟಿಕೆಗಳಿಗೆ ಬಳಸಿದ್ದೀರಿ. ಹೀಗಾಗಿ ಮುಂಬೈಯಲ್ಲಿರೋ ಕ್ರೈಂ ಬ್ರ್ಯಾಂಚ್ನಲ್ಲಿ ಕೇಸ್ ದಾಖಲಾಗಿದ್ದು ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಸುಳ್ಳು ಹೇಳಿದ್ದಾರೆ.
ಇದನ್ನೂ ಓದಿ: ಕಾರ್ಗಿಲ್ ಯುದ್ಧಕ್ಕೆ ಇಂದು ರಜತ ಮಹೋತ್ಸವ.. ‘ಇತಿಹಾಸದಿಂದ ಪಾಕಿಸ್ತಾನ ಏನನ್ನೂ ಕಲಿತ್ತಿಲ್ಲ’; PM ಮೋದಿ
ಇದರಿಂದ ವೃದ್ಧೆ ಗಾಬರಿಗೊಂಡಿದ್ದರು. ಮತ್ತೊಂದು ಕಾಲ್ ಅದೇ ರೀತಿ ಬಂದಿದೆ. ಸಂದೀಪ್ ರಾವ್ ಮತ್ತು ಆಕಾಶ್ ಎಂದು ಕ್ರೈಂ ಬ್ರಾಂಚ್ನಿಂದ ಮಾತಾಡುತ್ತಿದ್ದೇವೆ ಎಂದಿದ್ದಾರೆ. ನಿಮ್ಮ ಅಕೌಂಟ್ನಿಂದ ಸುಮಾರು 60 ಕೋಟಿ ಹಣ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಇದನ್ನ ಚೆಕ್ ಮಾಡಲು ನಿಮ್ಮ ಬ್ಯಾಂಕ್ ಅಕೌಂಟ್, ಇನ್ವೆಸ್ಟ್ಮೆಂಟ್ ದಾಖಲೆ ಕೊಡಿ. ಇಲ್ಲದಿದ್ದರೇ ನಿಮ್ಮನ್ನ ಬಂಧಿಸಬೇಕಾಗುತ್ತದೆ ಎಂದು ನಕಲಿ ಎಫ್ಐಆರ್ ಕಾಪಿ ತೋರಿಸಿದ್ದಾರೆ. ಇದೆಲ್ಲವನ್ನು ಕೇಳಿದ ವೃದ್ಧೆ ನಿಜ ಇರಬಹುದೆಂದು ನಂಬಿದ್ದಾರೆ.
ಇದನ್ನೂ ಓದಿ: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಯಾರಾಗ್ತಾರೆ.. ಡಿ.ಕೆ ಶಿವಕುಮಾರ್ ಬೆಂಬಲ ಯಾರಿಗೆ..?
ಹೀಗಾಗಿ ತನ್ನ ಬ್ಯಾಂಕ್ ಖಾತೆಯ ವಿವರ, ಆಧಾರ್ ಕಾರ್ಡ್ ಇತ್ಯಾದಿಗಳನ್ನು ದಾಖಲೆಗಳನ್ನ ಖದೀಮರಿಗೆ ನೀಡಿದ್ದಾರೆ. ಈ ಎಲ್ಲವನ್ನು ಕೊಟ್ಟಿದ್ದೇ ತಡ ವೃದ್ಧೆಯ ಅಕೌಂಟ್ನಿಂದ 1 ಕೋಟಿ 28 ಲಕ್ಷದ 70 ಸಾವಿರ ರೂಪಾಯಿಗಳನ್ನ ಲಪಟಾಯಿಸಿ ಮತ್ತೆ ವಾಪಸ್ ಮಾಡುವುದಾಗಿ ಹೇಳಿದ್ದಾರೆ. ಅವರು ಹಣ ಹಾಕಬಹುದೆಂದು ತನ್ನ ಬ್ಯಾಂಕ್ ಅಕೌಂಟ್ ಅನ್ನು ವೃದ್ಧೆ ಚೆಕ್ ಮಾಡುತ್ತಾ ಇದ್ದರಂತೆ. ಆದ್ರೆ ಹಣನೂ ಇಲ್ಲ, ಯಾವುದು ಫೋನ್ ಕಾಲ್ ಕೂಡ ಬಂದಿಲ್ಲ. ಹಾಗಾಗಿ ತನಗೆ ಬಂದ ನಂಬರ್ಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಎಂದು ಹೇಳುತ್ತಿದೆ. ಇದರಿಂದ ತಾನು ಮೋಸ ಹೋಗಿದ್ದೇನೆ ಎಂದು ತಿಳಿದು ಬೆಂಗಳೂರಿನ ಉತ್ತರ ವಿಭಾಗದ ಸಿಇಎನ್ ಪೊಲೀಸರಿಗೆ ವೃದ್ಧೆಯ ಕುಟುಂಬಸ್ಥರು ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆನ್ಲೈನ್ ಮೂಲಕ ಹಣ ಮೋಸವಾದರೆ ಸಿಕ್ಕರೆ ಸಿಗಬಹುದು, ಇಲ್ಲ ಅಂದರೆ ದುಡ್ಡು ಹೋದಾಗೆ ಆಗುತ್ತದೆ. ಹೀಗಾಗಿ ಜನರು ಹಣದ ಬಗ್ಗೆ ಜಾಗೃತಿಯಾಗಿರಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ