/newsfirstlive-kannada/media/post_attachments/wp-content/uploads/2025/06/cake-boy-death.jpg)
ಬೆಂಗಳೂರಿನಲ್ಲಿ ಸಂಚಲನ ಸೃಷ್ಟಿಸಿದ್ದ 5 ವರ್ಷದ ಮಗು ಬಲಿಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್​ವೊಂದು ಸಿಕ್ಕಿದೆ. ಎಂಟು ತಿಂಗಳ ಬಳಿಕ ಯಾರೂ ಊಹಿಸಲಾರದ ಟ್ವಿಸ್ಟ್​ ಪಡೆದುಕೊಂಡಿದೆ ಈ ಕೇಸ್.​ ಎಫ್​ಎಸ್​ಎಲ್ ಹಾಗೂ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯ ತನಿಖೆಯಲ್ಲಿ ಬೆಚ್ಚಿ ಬೀಳಿಸುವ ಅಂಶ ರಿವೀಲ್ ಆಗಿದೆ.
ಇದನ್ನೂ ಓದಿ:ಸಿನಿಮಾವನ್ನೂ ಮೀರಿಸುವಂತಿದೆ ಸೋನಂ ಪ್ಲಾನ್.. ತನಿಖೆಯಲ್ಲಿ ಪ್ರತಿ ಸನ್ನಿವೇಶಗಳೂ ಮರುಸೃಷ್ಟಿ..
ಏನಿದು ಪ್ರಕರಣ?
2024ರ ಅಕ್ಟೋಬರ್ 7ರಂದು ಬೆಂಗಳೂರಿನ ಕೆ.ಪಿ ಅಗ್ರಹಾರದ ಭುವನೇಶ್ವರಿನಗರದಲ್ಲಿ ಫುಡ್​ ಪಾಯಿಸನ್​ನಿಂದ 5 ವರ್ಷದ ಮಗು ಬಲಿಯಾಗಿತ್ತು. ಅಲ್ಲದೇ ತಂದೆ ಹಾಗೂ ತಾಯಿ ಸ್ಥಿತಿ ಗಂಭೀರವಾಗಿ, ಇಬ್ಬರಿಗೂ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆಗ ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದ ಕೇಕ್ ತಿಂದು ಫುಡ್​ ಪಾಯಿಸನ್​ ಆಗಿದೆ ಅನ್ನೋ ವಿಚಾರ ಹರಿದಾಡಿತ್ತು.
ಈ ಬಗ್ಗೆ ಎಫ್​ಎಸ್ಎಲ್ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿದ್ದರು. ಇದೀಗ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಅಚ್ಚರಿಯ ವಿಚಾರ ರಿವೀಲ್ ಆಗಿದೆ. ಫ್ರಿಡ್ಜ್​ನಲ್ಲಿಟ್ಟ ವಾಂಗಿಬಾತ್​ಗೆ ಫಂಗಸ್ ಆಗಿತ್ತು, ಇದೇ ವಾಂಗಿಬಾತ್​​​ ತಿಂದ ಎಫೆಕ್ಟ್​ನಿಂದ ಮಗು ಮೃತಪಟ್ಟಿದೆ ಎಂದು ದೃಢವಾಗಿದೆ. ಹೀಗಾಗಿ ಕೆ.ಪಿ ಅಗ್ರಹಾರ ಪೊಲೀಸರು ಕೋರ್ಟ್​ಗೆ ವರದಿ ಕೊಡಲು ತಯಾರಿ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ