ಮಧ್ಯಾಹ್ನ 1.10ಕ್ಕೆ ಎಂಟ್ರಿ; ಬ್ಯಾಂಕ್​​ಗೆ ನುಗ್ಗಿದ್ದು ಐವರು; ಕೇವಲ 5 ನಿಮಿಷದಲ್ಲಿ 12 ಕೋಟಿ ಲೂಟಿ ಮಾಡಿದ್ಹೇಗೆ?

author-image
Ganesh Nachikethu
Updated On
ಮಧ್ಯಾಹ್ನ 1.10ಕ್ಕೆ ಎಂಟ್ರಿ; ಬ್ಯಾಂಕ್​​ಗೆ ನುಗ್ಗಿದ್ದು ಐವರು; ಕೇವಲ 5 ನಿಮಿಷದಲ್ಲಿ 12 ಕೋಟಿ ಲೂಟಿ ಮಾಡಿದ್ಹೇಗೆ?
Advertisment
  • ರಾಜ್ಯದಲ್ಲಿ ಒಂದರ ಮೇಲೋಂದರಂತೆ ಬ್ಯಾಂಕ್ ದರೋಡೆ
  • ಮಂಗಳೂರು ಬ್ಯಾಂಕಲ್ಲಿ ಕೇವಲ 5 ನಿಮಿಷದಲ್ಲಿ ಲೂಟಿಗೈದ್ರು
  • ಬ್ಯಾಂಕ್​ಗೆ ನುಗ್ಗಿದ ಐವರು ರಾಜರೋಷವಾಗಿ ದೋಚಿದ್ರು!

ಮಂಗಳೂರು: ಬೀದರ್​ ಬೆನ್ನಲ್ಲೇ ಮಂಗಳೂರಲ್ಲಿ ಬ್ಯಾಂಕ್​ ದರೋಡೆ ಆಗಿದೆ. ಥೇಟ್​​ ಸಿನಿಮಾ ಶೈಲಿಯಲ್ಲೇ ಮಂಗಳೂರು ಬ್ಯಾಂಕ್​ನಲ್ಲಿ ದರೋಡೆ ನಡೆದಿದೆ. ಮಂಗಳೂರಿನ ಉಲ್ಲಾಳದ ಕೆಸಿ ರಸ್ತೆಯಲ್ಲಿರೋ ಕೋಟೆಕಾರು ಬ್ಯಾಂಕ್​​ಗೆ ನುಗ್ಗಿ ಹಾಡುಹಗಲೇ ದರೋಡೆ ಮಾಡಲಾಗಿದೆ. ಬ್ಯಾಂಕ್​ಗೆ ನುಗ್ಗಿದ ಐದು ಜನರ ಖತರ್ನಾಕ್​​ ಕಳ್ಳರ ಗ್ಯಾಂಗ್​​ ಸಿಬ್ಬಂದಿಗೆ ಬೆದರಿಸಿ ಕೋಟಿಗಟ್ಟಲೇ ಹಣದ ಜೊತೆಗೆ ಚಿನ್ನ ಕದ್ದು ಎಸ್ಕೇಪ್​ ಆಗಿದೆ.

ಪಕ್ಕಾ ಪ್ಲಾನ್​ ಮಾಡಿ ಕದ್ದ ಗ್ಯಾಂಗ್​

ಸುಮಾರು 12 ಕೋಟಿ ಹಣದೊಂದಿಗೆ ಚಿನ್ನ ಕದ್ದು ಎಸ್ಕೇಪ್​ ಆದ ಗ್ಯಾಂಗ್​​ ಕನ್ನಡದಲ್ಲೇ ಮಾತಾಡುತ್ತಿದ್ದರು ಎಂದು ತಿಳಿದು ಬಂದಿದೆ. ಫಿಯೆಟ್​ ಕಾರಿನಲ್ಲಿ ಬಂದು ಪಿಸ್ತೂಲು, ತಲವಾರು ತೋರಿಸಿ ಲೂಟಿ ಮಾಡಲಾಗಿದೆ.

ಸಿಸಿಟಿವಿ ಕ್ಯಾಮೆರಾ ರಿಪೇರಿಗೆ!

ಇಂದು ಸಿಸಿಟಿವಿ ಕ್ಯಾಮೆರಾ ರಿಪೇರಿಗೆ ನೀಡಲಾಗಿತ್ತು. ಅಷ್ಟೇ ಅಲ್ಲ ಶುಕ್ರವಾರ ಮಧ್ಯಾಹ್ನ ಆದ ಕಾರಣ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಮಸೀದಿಗಾಗಿ ತೆರಳುತ್ತಿದ್ದರು. ಮಂಗಳೂರಲ್ಲಿ ಸಿಎಂ ಪ್ರೋಗ್ರಾಮ್​ ಇದ್ದ ಕಾರಣ ಹೆಚ್ಚಿನ ಪೊಲೀಸ್​​ ಭದ್ರತೆ ಕೂಡ ಇತ್ತು. ಇದೇ ಒಳ್ಳೆಯ ಅವಕಾಶ ಎಂದು ಭಾವಿಸಿ ಪಕ್ಕಾ ಪ್ಲಾನ್​ ಮಾಡಿ ಕದಿಯಲಾಗಿದೆ. ಸ್ಥಳೀಯರು ಬ್ಯಾಂಕ್​ ಸಿಬ್ಬಂದಿ ಮೇಲೆ ಅನುಮಾನ ವ್ಯಪ್ತಡಿಸಿದ್ದಾರೆ.

ಕ್ಯಾಮೆರಾದಲ್ಲಿ ದೃಶ್ಯ ಸೆರೆ; ಹಣ ಸಾಗಿಸಿದ್ದು ಹೇಗೆ?

ಒಬ್ಬ ಬ್ಯಾಂಕ್​ ಹೊರಗೆ ಫಿಯೆಟ್​ ಕಾರಲ್ಲಿ ಕೂತಿದ್ದ. ಇನ್ನೂ ನಾಲ್ವರು ಸ್ಟೈಲ್​ ಆಗಿ ಬ್ಯಾಂಕ್​​ ಒಳಗೆ ಹೋದರು. ಮಧ್ಯಾಹ್ನ ಯಾರು ಇಲ್ಲದ ಹೊತ್ತಲ್ಲಿ ಫೋನಲ್ಲಿ ಮಾತಾಡುತ್ತಾ ಆರಾಮಾಗಿ ಬ್ಯಾಂಕ್​ಗೆ ನುಗ್ಗಿದರು. ಕೇವಲ 5 ನಿಮಿಷದಲ್ಲಿ ಮೂಟೆಯಲ್ಲಿ ಹಣ ಮತ್ತು ಚಿನ್ನ ತುಂಬಿ ಎಸ್ಕೇಪ್​ ಆಗಿದ್ದಾರೆ. ಮೊದಲು ಇಬ್ಬರು ಮೂಟೆ ತೆಗೆದುಕೊಂಡು ಬ್ಯಾಂಕ್​​ನಿಂದ ಹೊರಬಂದು ಕಾರು ಹತ್ತಿದರು. ನಂತರ ಇನ್ನಿಬ್ಬರು ಬಂದು ಕಾರು ಒಳಗೆ ಕೂತರು. ಸಲೀಸಾಗಿ ಯಾವುದೇ ಭಯ ಇಲ್ಲದೆ ದರೋಡೆ ಮಾಡಿದ ಹಣವನ್ನು ಕಾರಿನಲ್ಲಿ ಸಾಗಿಸಿದ್ರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment