newsfirstkannada.com

ಉತ್ತರ ಪ್ರದೇಶದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ; ಅನ್ಯ ಕೋಮಿನ ವ್ಯಕ್ತಿಯಿಂದ ಇಬ್ಬರು ಮಕ್ಕಳ ಬರ್ಬರ ಹತ್ಯೆ

Share :

Published March 20, 2024 at 11:13am

Update March 20, 2024 at 11:24am

    ದೇಶದಲ್ಲಿ ಭಾರೀ ಸಂಚಲ ಮೂಡಿಸಿದೆ ಜೋಡಿ ಕೊಲೆ ಕೇಸ್

    ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಆರೋಪಿ ಎನ್​ಕೌಂಟರ್

    ಹಿಂದೂಪರ ಸಂಘಟನೆಗಳಿಂದ ಕೃತ್ಯ ಖಂಡನೆ, ಕಠಿಣ ಕ್ರಮಕ್ಕೆ ಆಗ್ರಹ

ಉತ್ತರ ಪ್ರದೇಶ: ಕ್ಷೌರಿಕನೋರ್ವ ಇಬ್ಬರು ಮಕ್ಕಳನ್ನು ಕತ್ತು ಸೀಳಿ ಕೊಂದ ಘಟನೆ ಬುಡೌನ್​ನಲ್ಲಿ ನಡೆದಿದೆ. ಮಕ್ಕಳನ್ನು ಕೊಂದು ಪರಾರಿಯಾಗಲು ಯತ್ನಿಸುತ್ತಿದ್ದ ಕ್ಷೌರಿಕ ಪೊಲೀಸ್​ ಎನ್​ಕೌಂಟರ್​ಗೆ ಬಲಿಯಾಗಿದ್ದಾನೆ.

ಸಾಲ ಕೇಳಿದ್ದ ಕ್ಷೌರಿಕ

ಮಂಗಳವಾರ ಸಂಜೆ ನಡೆದ ಘಟನೆ ಇದಾಗಿದೆ. ಸಾಜಿದ್​ ಎಂಬ ಕ್ಷೌರಿಕ ತನ್ನ ಅಂಗಡಿ ಎದುರು ವಾಸಿಸುತ್ತಿದ್ದ ಮನೆಗೆ ಹೋಗಿದ್ದಾನೆ. ಆ ಮನೆಯಲ್ಲಿ ವಿನೋದ್​ ಎಂಬಾತನ ಪರಿಚಯವಿದ್ದ ಕಾರಣ ಆತನ ಬಳಿ 5 ಸಾವಿರ ರೂಪಾಯಿ ಸಾಲ ಕೇಳಿದ್ದನು. ಆದರೆ ಮನೆಯಲ್ಲಿ ವಿನೋದ್​ ಇಲ್ಲದ ಕಾರಣ ಆತನ ಪತ್ನಿ ಮತ್ತು ಮೂವರು ಮಕ್ಕಳು ಇದ್ದರು. ಈ ವೇಳೆ ವಿನೋದ್​ ಪತ್ನಿ ಆತನನಿಗೆ ಚಹಾ ಮಾಡಲು ಅಡುಗೆ ಕೋಣೆಗೆ ಹೋದಾಗ ಕ್ಷೌರಿಕ ನೇರವಾಗಿ ಮಹಡಿಗೆ ಹೋಗಿದ್ದಾನೆ.

ಮಹಡಿಯಲ್ಲಿದ್ದ ಮಕ್ಕಳನ್ನು ಕೊಂದ

ಮಹಡಿಗೆ ಹೋದ ಕ್ಷೌರಿಕ ಸಾಜಿದ್​​ ವಿನೋದ್​ ಮಕ್ಕಳಾದ ಆಯುಷ್​ (11), ಪಿಯೂಷ್​ (7) ಮತ್ತು ಅಹಾನ್​ (6) ಮೇಲೆ ಹಲ್ಲೆ ಮಾಡಿದ್ದಾನೆ. ಅದರಲ್ಲಿ ಆಯುಷ್​ ಮತ್ತು ಅಹಾನ್​ ಕುತ್ತಿಗೆಯನ್ನು ಸೀಳಿದ್ದಾನೆ. ನಂತರ ಅಲ್ಲಿಂದ ಓಡಲು ಯತ್ನಿಸುವ ವೇಳೆ ಪಿಯೂಷ್​ಗೂ ಗಾಯಗೊಳಿಸಿ ತಪ್ಪಿಸಿಕೊಂಡಿದ್ದಾನೆ. ಪರಿಣಾಮ ಆಯುಷ್​ ಮತ್ತು ಅಹಾನ್​ ಮೃತಪಟ್ಟರೆ, ಪಿಯೂಷ್​ ಗಂಭೀರ ಗಾಯಗೊಂಡಿದ್ದಾನೆ.

ಎನ್​ಕೌಂಟರ್​

ಪೊಲೀಸರಿಗೆ ಈ ವಿಚಾರ ತಿಳಿದು ಕ್ಷೌರಿಕ ಸಾಜಿದ್​​ನನ್ನು ಹುಡುಕಾಡಿದಾಗ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಈ ವೇಳೆ ಅವರ ಮೇಲೂ ದಾಳಿ ಮಾಡಲು ಮುಂದಾಗಿದ್ದಾನೆ. ಹಲ್ಲೆ ಮಾಡಲು ಮುಂದಾದ ಸಾಜಿದ್​ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪರಿಣಾಮ ಆತ ಸಾವನ್ನಪ್ಪಿದ್ದಾನೆ.

ನನಗೂ ಆತನನಿಗೆ ಯಾವುದೇ ಮನಸ್ತಾಪವಿರಲಿಲ್ಲ

ಇನ್ನು ಘಟನೆ ಬಗ್ಗೆ ವಿನೋದ್​ ವಿವರಿಸಿದ್ದು, ‘‘ನನಗೆ ಮತ್ತು ಆತನಿಗೆ ಯಾವುದೇ ಮನಸ್ತಾಪವಿರಲಿಲ್ಲ. ಆತ ಮನೆಗೆ ಬಂದಾಗ ನಾನು ಕೆಲಸ ನಿಮಿತ್ತ ಹೊರಗೆ ಹೋಗಿದ್ದೆ. ಆತ 5 ಸಾವಿರ ಸಾಲ ಕೇಳಿದ್ದನು. ನನ್ನ ಹೆಂಡತಿ ಆತನಿಗೆ ಹಣ ನೀಡಿದ್ದಾಳೆ. ನನ್ನ ಮಗ ಆತನ ದಾಳಿಯಿಂದ ತಪ್ಪಸಿಕೊಂಡ ನನ್ನ ಪತ್ನಿ ಬಳಿ ಓದಿ ಬಂದಿದ್ದಾನೆ’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರ ಪ್ರದೇಶದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ; ಅನ್ಯ ಕೋಮಿನ ವ್ಯಕ್ತಿಯಿಂದ ಇಬ್ಬರು ಮಕ್ಕಳ ಬರ್ಬರ ಹತ್ಯೆ

https://newsfirstlive.com/wp-content/uploads/2024/03/Uttar-pradesh.jpg

    ದೇಶದಲ್ಲಿ ಭಾರೀ ಸಂಚಲ ಮೂಡಿಸಿದೆ ಜೋಡಿ ಕೊಲೆ ಕೇಸ್

    ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಆರೋಪಿ ಎನ್​ಕೌಂಟರ್

    ಹಿಂದೂಪರ ಸಂಘಟನೆಗಳಿಂದ ಕೃತ್ಯ ಖಂಡನೆ, ಕಠಿಣ ಕ್ರಮಕ್ಕೆ ಆಗ್ರಹ

ಉತ್ತರ ಪ್ರದೇಶ: ಕ್ಷೌರಿಕನೋರ್ವ ಇಬ್ಬರು ಮಕ್ಕಳನ್ನು ಕತ್ತು ಸೀಳಿ ಕೊಂದ ಘಟನೆ ಬುಡೌನ್​ನಲ್ಲಿ ನಡೆದಿದೆ. ಮಕ್ಕಳನ್ನು ಕೊಂದು ಪರಾರಿಯಾಗಲು ಯತ್ನಿಸುತ್ತಿದ್ದ ಕ್ಷೌರಿಕ ಪೊಲೀಸ್​ ಎನ್​ಕೌಂಟರ್​ಗೆ ಬಲಿಯಾಗಿದ್ದಾನೆ.

ಸಾಲ ಕೇಳಿದ್ದ ಕ್ಷೌರಿಕ

ಮಂಗಳವಾರ ಸಂಜೆ ನಡೆದ ಘಟನೆ ಇದಾಗಿದೆ. ಸಾಜಿದ್​ ಎಂಬ ಕ್ಷೌರಿಕ ತನ್ನ ಅಂಗಡಿ ಎದುರು ವಾಸಿಸುತ್ತಿದ್ದ ಮನೆಗೆ ಹೋಗಿದ್ದಾನೆ. ಆ ಮನೆಯಲ್ಲಿ ವಿನೋದ್​ ಎಂಬಾತನ ಪರಿಚಯವಿದ್ದ ಕಾರಣ ಆತನ ಬಳಿ 5 ಸಾವಿರ ರೂಪಾಯಿ ಸಾಲ ಕೇಳಿದ್ದನು. ಆದರೆ ಮನೆಯಲ್ಲಿ ವಿನೋದ್​ ಇಲ್ಲದ ಕಾರಣ ಆತನ ಪತ್ನಿ ಮತ್ತು ಮೂವರು ಮಕ್ಕಳು ಇದ್ದರು. ಈ ವೇಳೆ ವಿನೋದ್​ ಪತ್ನಿ ಆತನನಿಗೆ ಚಹಾ ಮಾಡಲು ಅಡುಗೆ ಕೋಣೆಗೆ ಹೋದಾಗ ಕ್ಷೌರಿಕ ನೇರವಾಗಿ ಮಹಡಿಗೆ ಹೋಗಿದ್ದಾನೆ.

ಮಹಡಿಯಲ್ಲಿದ್ದ ಮಕ್ಕಳನ್ನು ಕೊಂದ

ಮಹಡಿಗೆ ಹೋದ ಕ್ಷೌರಿಕ ಸಾಜಿದ್​​ ವಿನೋದ್​ ಮಕ್ಕಳಾದ ಆಯುಷ್​ (11), ಪಿಯೂಷ್​ (7) ಮತ್ತು ಅಹಾನ್​ (6) ಮೇಲೆ ಹಲ್ಲೆ ಮಾಡಿದ್ದಾನೆ. ಅದರಲ್ಲಿ ಆಯುಷ್​ ಮತ್ತು ಅಹಾನ್​ ಕುತ್ತಿಗೆಯನ್ನು ಸೀಳಿದ್ದಾನೆ. ನಂತರ ಅಲ್ಲಿಂದ ಓಡಲು ಯತ್ನಿಸುವ ವೇಳೆ ಪಿಯೂಷ್​ಗೂ ಗಾಯಗೊಳಿಸಿ ತಪ್ಪಿಸಿಕೊಂಡಿದ್ದಾನೆ. ಪರಿಣಾಮ ಆಯುಷ್​ ಮತ್ತು ಅಹಾನ್​ ಮೃತಪಟ್ಟರೆ, ಪಿಯೂಷ್​ ಗಂಭೀರ ಗಾಯಗೊಂಡಿದ್ದಾನೆ.

ಎನ್​ಕೌಂಟರ್​

ಪೊಲೀಸರಿಗೆ ಈ ವಿಚಾರ ತಿಳಿದು ಕ್ಷೌರಿಕ ಸಾಜಿದ್​​ನನ್ನು ಹುಡುಕಾಡಿದಾಗ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಈ ವೇಳೆ ಅವರ ಮೇಲೂ ದಾಳಿ ಮಾಡಲು ಮುಂದಾಗಿದ್ದಾನೆ. ಹಲ್ಲೆ ಮಾಡಲು ಮುಂದಾದ ಸಾಜಿದ್​ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪರಿಣಾಮ ಆತ ಸಾವನ್ನಪ್ಪಿದ್ದಾನೆ.

ನನಗೂ ಆತನನಿಗೆ ಯಾವುದೇ ಮನಸ್ತಾಪವಿರಲಿಲ್ಲ

ಇನ್ನು ಘಟನೆ ಬಗ್ಗೆ ವಿನೋದ್​ ವಿವರಿಸಿದ್ದು, ‘‘ನನಗೆ ಮತ್ತು ಆತನಿಗೆ ಯಾವುದೇ ಮನಸ್ತಾಪವಿರಲಿಲ್ಲ. ಆತ ಮನೆಗೆ ಬಂದಾಗ ನಾನು ಕೆಲಸ ನಿಮಿತ್ತ ಹೊರಗೆ ಹೋಗಿದ್ದೆ. ಆತ 5 ಸಾವಿರ ಸಾಲ ಕೇಳಿದ್ದನು. ನನ್ನ ಹೆಂಡತಿ ಆತನಿಗೆ ಹಣ ನೀಡಿದ್ದಾಳೆ. ನನ್ನ ಮಗ ಆತನ ದಾಳಿಯಿಂದ ತಪ್ಪಸಿಕೊಂಡ ನನ್ನ ಪತ್ನಿ ಬಳಿ ಓದಿ ಬಂದಿದ್ದಾನೆ’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More