/newsfirstlive-kannada/media/post_attachments/wp-content/uploads/2025/04/Dinesh-karthik.jpg)
ಚಿನ್ನಸ್ವಾಮಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಬಾರಿ ಸೋಲು ಅನುಭವಿಸಿದೆ. ಗುಜರಾತ್ ಮತ್ತು ಡೆಲ್ಲಿ ವಿರುದ್ಧ ತವರಿನಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದ ಆರ್ಸಿಬಿ, ಇದೀಗ ಸೋಲಿಗೆ ಬ್ಲೇಮ್ ಗೇಮ್ ಶುರುಮಾಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲಿನ ಬಳಿಕ ಆರ್ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್, ಬ್ಲೇಮ್ ಗೇಮ್ ಶುರುಮಾಡಿದ್ದಾರೆ. ನಮ್ಮ ತಂಡದ ಸೋಲಿಗೆ ಚಿನ್ನಸ್ವಾಮಿ ಪಿಚ್ ಕಾರಣ ಎಂದು ಆರೋಪಿಸಿದ್ದಾರೆ. ಆರ್ಸಿಬಿಗೆ ಹೋಂ ಪಿಚ್ ಅಡ್ವಾಂಟೇಜ್ ಆಗಲಿಲ್ಲ. ಸೋಲಿಗೆ ಪಿಚ್ ಕ್ಯೂರೇಟರ್ ಹೊಣೆ ಎಂದು ನೇರವಾಗಿ ಆರೋಪಿಸಿದ್ದಾರೆ.
ಏನಂದ್ರು ಕೋಚ್..?
T20 ಕ್ರಿಕೆಟ್ ಅಂದ್ರೆ ರನ್ ನಿರೀಕ್ಷೆ ಇದ್ದೇ ಇರುತ್ತೆ. ಬ್ರಾಡ್ಕಾಸ್ಟರ್ ಮತ್ತು ಕ್ರಿಕೆಟ್ ಫ್ಯಾನ್ಸ್ ಇದನ್ನೇ ನಿರೀಕ್ಷಿಸುತ್ತಾರೆ. ಎಲ್ಲರೂ ಬೌಂಡರಿಗಳನ್ನ ನೋಡೋಕೆ ಇಷ್ಟ ಪಡ್ತಾರೆ. ನಾವು ಮೊದಲೆರಡು ಪಂದ್ಯಗಳಲ್ಲಿ ಒಳ್ಳೆ ಪಿಚ್ಗಳನ್ನ ಕೇಳಿದ್ವಿ. ಆದ್ರೆ ಕ್ಯೂರೇಟರ್ ಇದನ್ನ ತಳ್ಳಿಹಾಕಿದ್ರು. ರನ್ಗಳಿಸೋಕೆ ಬ್ಯಾಟರ್ಸ್ ಸಿಕ್ಕಾಪಟ್ಟೆ ಪರದಾಡಿದರು ಎಂದು ದಿನೇಶ್ ಕಾರ್ತಿಕ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: LSG ವಿರುದ್ಧದ ಪಂದ್ಯಕ್ಕೂ ಮೊದಲೇ ಗಿಲ್ಗೆ ಬಿಗ್ ಶಾಕ್.. ಸ್ಟಾರ್ ಆಲ್ರೌಂಡರ್ IPLನಿಂದಲೇ ಔಟ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್