ಸೋಲಿನ ಬೆನ್ನಲ್ಲೇ ಕಾರ್ತಿಕ್ ಆಕ್ರೋಶ.. RCB ಕೋಚ್​​ನಿಂದ ಬ್ಲೇಮ್ ಗೇಮ್..!

author-image
Ganesh
Updated On
ಸೋಲಿನ ಬೆನ್ನಲ್ಲೇ ಕಾರ್ತಿಕ್ ಆಕ್ರೋಶ.. RCB ಕೋಚ್​​ನಿಂದ ಬ್ಲೇಮ್ ಗೇಮ್..!
Advertisment
  • ಚಿನ್ನಸ್ವಾಮಿಯಲ್ಲೇ ಆರ್​ಸಿಬಿಗೆ ಸತತ ಸೋಲು
  • ಸೋಲಿನ ಬಳಿಕ ಅಸಮಾಧಾನ ಹೊರ ಹಾಕಿದ ಕಾರ್ತಿಕ್
  • ಬ್ಯಾಟಿಂಗ್ ಕೋಚ್, ಮೆಂಟರ್ ಆರೋಪ ಸರೀನಾ?

ಚಿನ್ನಸ್ವಾಮಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಬಾರಿ ಸೋಲು ಅನುಭವಿಸಿದೆ. ಗುಜರಾತ್ ಮತ್ತು ಡೆಲ್ಲಿ ವಿರುದ್ಧ ತವರಿನಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದ ಆರ್​ಸಿಬಿ, ಇದೀಗ ಸೋಲಿಗೆ ಬ್ಲೇಮ್ ಗೇಮ್ ಶುರುಮಾಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲಿನ ಬಳಿಕ ಆರ್​ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್, ಬ್ಲೇಮ್ ಗೇಮ್ ಶುರುಮಾಡಿದ್ದಾರೆ. ನಮ್ಮ ತಂಡದ ಸೋಲಿಗೆ ಚಿನ್ನಸ್ವಾಮಿ ಪಿಚ್ ಕಾರಣ ಎಂದು ಆರೋಪಿಸಿದ್ದಾರೆ. ಆರ್​ಸಿಬಿಗೆ ಹೋಂ ಪಿಚ್ ಅಡ್ವಾಂಟೇಜ್ ಆಗಲಿಲ್ಲ. ಸೋಲಿಗೆ ಪಿಚ್ ಕ್ಯೂರೇಟರ್ ಹೊಣೆ ಎಂದು ನೇರವಾಗಿ ಆರೋಪಿಸಿದ್ದಾರೆ.

ಏನಂದ್ರು ಕೋಚ್​..?

T20 ಕ್ರಿಕೆಟ್ ಅಂದ್ರೆ ರನ್ ನಿರೀಕ್ಷೆ ಇದ್ದೇ ಇರುತ್ತೆ. ಬ್ರಾಡ್​ಕಾಸ್ಟರ್ ಮತ್ತು ಕ್ರಿಕೆಟ್ ಫ್ಯಾನ್ಸ್ ಇದನ್ನೇ ನಿರೀಕ್ಷಿಸುತ್ತಾರೆ. ಎಲ್ಲರೂ ಬೌಂಡರಿಗಳನ್ನ ನೋಡೋಕೆ ಇಷ್ಟ ಪಡ್ತಾರೆ. ನಾವು ಮೊದಲೆರಡು ಪಂದ್ಯಗಳಲ್ಲಿ ಒಳ್ಳೆ ಪಿಚ್​ಗಳನ್ನ ಕೇಳಿದ್ವಿ. ಆದ್ರೆ ಕ್ಯೂರೇಟರ್ ಇದನ್ನ ತಳ್ಳಿಹಾಕಿದ್ರು. ರನ್​ಗಳಿಸೋಕೆ ಬ್ಯಾಟರ್ಸ್​ ಸಿಕ್ಕಾಪಟ್ಟೆ ಪರದಾಡಿದರು ಎಂದು ದಿನೇಶ್ ಕಾರ್ತಿಕ್ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: LSG ವಿರುದ್ಧದ ಪಂದ್ಯಕ್ಕೂ ಮೊದಲೇ ಗಿಲ್​ಗೆ ಬಿಗ್ ಶಾಕ್.. ಸ್ಟಾರ್ ಆಲ್​ರೌಂಡರ್​ IPLನಿಂದಲೇ ಔಟ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment