/newsfirstlive-kannada/media/post_attachments/wp-content/uploads/2024/11/Jitesh-Sharma-Kohli.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಸ್ಫೋಟಕ ಬ್ಯಾಟರ್ ಜಿತೇಶ್ ಶರ್ಮಾ ಅವರನ್ನು ಖರೀದಿ ಮಾಡಿದ್ದೇಕೆ? ಎಂದು ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಬಿಚ್ಚಿಟ್ಟಿದ್ದಾರೆ.
ಏನಂದ್ರು ದಿನೇಶ್ ಕಾರ್ತಿಕ್?
ಜಿತೇಶ್ ಶರ್ಮಾ ಕುರಿತು ಮಾತಾಡಿದ ಆರ್ಸಿಬಿ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ದಿನೇಶ್ ಕಾರ್ತಿಕ್ ಹೀಗಂದ್ರು. ಮೊಲದ ದಿನದಿಂದಲೂ ಜಿತೇಶ್ ಶರ್ಮಾ ನಮ್ಮ ಲಿಸ್ಟ್ನಲ್ಲಿ ಇದ್ದರು. ನಮಗೆ ಮಿಡಲ್ ಆರ್ಡರ್ನಲ್ಲಿ ಸ್ಪಿನ್ನರ್ಸ್ ವಿರುದ್ಧ ಆಡಬಲ್ಲ ಬ್ಯಾಟರ್ ಬೇಕಿತ್ತು. ಹಾಗಾಗಿ ನಾವು ಜಿತೇಶ್ ಶರ್ಮಾ ಅವರನ್ನು ಖರೀದಿ ಮಾಡಿದೆವು. ಇನ್ನೂ ಕಡಿಮೆ ದುಡ್ಡಿಗೆ ಖರೀದಿ ಮಾಡೋ ಪ್ಲ್ಯಾನ್ ಇತ್ತು. ಆದರೆ, ಪಂಜಾಬ್ ಬಳಿ ಬಹಳ ದುಡ್ಡು ಇದ್ದ ಕಾರಣ ಆರ್ಟಿಎಂ ಮೂಲಕ ಖರೀದಿ ಮಾಡಬಹುದು ಎಂದು ಹೀಗೆ ಪ್ಲ್ಯಾನ್ ಮಾಡಿದೆವು ಎಂದರು.
ಜಿತೇಶ್ ಶರ್ಮಾ ಅವರಿಗಾಗಿ ಆರಂಭದಿಂದಲೇ ಸನ್ರೈಸರ್ಸ್ ಹೈದರಾಬಾದ್, ಕೆಕೆಆರ್, ಪಂಜಾಬ್ ಕಿಂಗ್ಸ್, ಆರ್ಸಿಬಿ ಮಧ್ಯೆ ಭಾರೀ ಪೈಪೋಟಿ ನಡೆಯಿತು. ಕೊನೆಗೆ ಜಿತೇಶ್ ಶರ್ಮಾ ಬರೋಬ್ಬರಿ 11 ಕೋಟಿಗೆ ಆರ್ಸಿಬಿ ಪಾಲಾದ್ರು.
ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟರ್ ಜಿತೇಶ್ ಶರ್ಮಾ. ಇವರು ಅದ್ಭುತ ವಿಕೆಟ್ ಕೀಪರ್ ಕೂಡ ಹೌದು. ಇವರು ದಿನೇಶ್ ಕಾರ್ತಿಕ್ ಅವರ ಸ್ಥಾನ ತುಂಬಬಹುದು. ಆರ್ಸಿಬಿಗೆ ಇಂಡಿಯನ್ ವಿಕೆಟ್ ಕೀಪರ್ ಅಗತ್ಯ ಇತ್ತು.
ಪಂಜಾಬ್ ಕಿಂಗ್ಸ್ ತಂಡದಿಂದ ಬಿಡುಗಡೆಯಾದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಅವರಿಗೆ ಹರಾಜಿನಲ್ಲಿ ಭಾರೀ ಡಿಮ್ಯಾಂಡ್ ಇತ್ತು. ಕಡಿಮೆ ಬೆಲೆಗೆ ಲಭ್ಯವಿದ್ದರೆ ಜಿತೇಶ್ ಶರ್ಮಾ ಅವರನ್ನು ಎಲ್ಲಾ ತಂಡಗಳು ಖರೀದಿ ಮಾಡಲು ಮುಗಿ ಬಿದ್ದಿದ್ದವು. ಆಕ್ರಮಣಕಾರಿಯಾಗಿ ಆಡುವುದರ ಹೊರತಾಗಿ ಇವರು ವಿಕೆಟ್ ಕೀಪಿಂಗ್ನಲ್ಲೂ ಬೆಸ್ಟ್ ಇದ್ದಾರೆ.
ಇದನ್ನೂ ಓದಿ: ಆರ್ಸಿಬಿಯಿಂದ ಕೊಹ್ಲಿ ಆಪ್ತನಿಗೆ ಮಣೆ; ಕೋಟಿ ಕೋಟಿ ಕೊಟ್ಟು ಖರೀದಿ ಮಾಡಿದ ಬೆಂಗಳೂರು
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್