/newsfirstlive-kannada/media/post_attachments/wp-content/uploads/2024/10/Dhanraj.jpg)
ನಟಿ ಯಮುನಾ ಬಿಗ್ ಬಾಸ್ ಮನೆಯಲ್ಲಿ 6 ದಿನ ಕಳೆದು ಹೊರಬಂದಿದ್ದಾರೆ. ದೊಡ್ಮನೆಯಿಂದ ಹೊರಬಂದ ನಟಿ ನ್ಯೂಸ್ಫಸ್ಟ್ ಜೊತೆ ಮಾತನಾಡಿದ್ದಾರೆ. ಹಲವು ಸಂಗತಿಗಳ ಬಗ್ಗೆ ಮನಬಿಚ್ಚಿದ್ದಾರೆ.
ಸ್ಪರ್ಧಿಗಳ ಬಗ್ಗೆ ಮಾತನಾಡುತ್ತಾ ನಟಿ ಯುಮುನಾ, ಇನ್ನೂ ಬಿಗ್ ಬಾಸ್ ಮನೆಯಲ್ಲಿ ಆಟ ಪ್ರಾರಂಭಿಸದವರ ಬಗ್ಗೆ ಹೇಳಿಕೊಂಡಿದ್ದಾರೆ. ಅದರಲ್ಲೂ ನಟ ಧನ್ರಾಜ್ ಆಚಾರ್ ಇನ್ನು ಆಟ ಪ್ರಾರಂಭಿಸಬೇಕಿದೆ. ಕೀರ್ತಿ ಧರ್ಮರಾಜ್ ಕೂಡ ಆಟ ಶುರು ಮಾಡಬೇಕಿದೆ ಎಂದು ಹೇಳಿದ್ದಾರೆ. ಲಾಯರ್ ಜಗದೀಶ್ ಆಟ ಪ್ರಾರಂಭಿಸಿದ ಬಗ್ಗೆಯೂ ಮಾತನಾಡಿದ್ದಾರೆ.
ಇದನ್ನೂ ಓದಿ: BBK11: ಜಗದೀಶ್ ಅಲ್ವಂತೆ! ಬಿಗ್ ಬಾಸ್ ಮನೆಯಲ್ಲಿ ಈ ವ್ಯಕ್ತಿ ತುಂಬಾ ಡೇಂಜರಸ್ ಎಂದ ನಟಿ ಯಮುನಾ!
ಇದರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ತುಂಬಾ ಡೇಂಜರಸ್ ವ್ಯಕ್ತಿಯ ಬಗ್ಗೆಯೂ ನಟಿ ಯಮುನಾ ಹೇಳಿದ್ದಾರೆ. ಲಾಯರ್ ಜಗದೀಶ್ಗಿಂತ ಉಗ್ರಂ ಮಂಜು ತುಂಬಾ ಡೇಂಜರಸ್ ಎಂದು ಹೇಳಿದ್ದಾರೆ. ಸಿಕ್ಕಪಟ್ಟೆ ಮ್ಯಾನಿಪುಲೇಟ್, ಎಲ್ಲರನ್ನು ತಮ್ಮತ್ತ ಸೆಳೆಯುವವರು. ಏನು ಹೇಳದೆ ಏನು ಮಾಡದೆ ಟ್ರಿಕ್ ಮಾಡುವವರು ಎಂದು ಹೇಳಿದ್ದಾರೆ.
ಇದನ್ನೂ ಓದಿ: BBK11: ಬಿಗ್ ಬಾಸ್ ಮನೆಯಲ್ಲಿ ಭವ್ಯ ಸಮಯದ ಗೊಂಬೆ ಎಂದ ಐಶ್ವರ್ಯಾ! ಕಣ್ಣೀರು ಹಾಕಿದ ಗೀತಾ
ಸದ್ಯ ಮೊದಲ ವಾರ ಯಮುನಾ ಹೊರಬಂದಿದ್ದಾರೆ. ಸ್ವರ್ಗದಲ್ಲಿದ್ದ ನಟಿ ಎಲಿಮಿನೇಟ್ ಆಗಿದ್ದಾರೆ. ಮುಂಬರುವ ತಿಂಗಳು ನರಕದ ಬಾಗಿಲಿನಲ್ಲಿರುವ ಸ್ಪರ್ಧಿ ಮನೆಯಿಂದ ಹೊರ ಹೋಗುತ್ತಾರಾ? ಅಥವಾ ಬೇರೆಯಾರಾದರೂ ಹೊಗುತ್ತಾರಾ? ಎಂಬ ಕುತೂಹಲತೆ ಅಭಿಮಾನಿಗಳನ್ನು ಕಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ