/newsfirstlive-kannada/media/post_attachments/wp-content/uploads/2024/10/Bhavya-Gowda.jpg)
ಕಿಚ್ಚನ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಕಾರ್ಯಕ್ರಮ 1 ವಾರ ಪೂರ್ಣಗೊಂಡು ಮುನ್ನುಗ್ಗುತ್ತಿದೆ. ವಾರದ ಕತೆ ಮುಗಿದ ಬಳಿಕ ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಗುತ್ತಿದೆ. ಅದರಂತೆಯೇ ಇದೀಗ ಮನೆಯಲ್ಲಿ ವೇದಿಕೆಯನ್ನು ನಿರ್ಮಿಸಲಾಗಿದ್ದು, ಅದರ ಮೇಲೆ ನಿಂತ ಸದಸ್ಯರು ಯಾಕೆ ಅನರ್ಹರು ಎಂದು ವಾದ-ಪ್ರತಿವಾದ ಮಾಡಬೇಕು ಎಂದು ಹೇಳಿದ್ದಾರೆ. ಈ ವೇಳೆ ಸ್ಪರ್ಧಿಗಳು ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ಗೆ ಬಿಗ್ ಶಾಕ್; ದೊಡ್ಮನೆಗೆ ಮಹಿಳಾ ಆಯೋಗ ಎಂಟ್ರಿ? ಬದಲಾಗುತ್ತಾ ಆಟದ ಶೈಲಿ?
ಗೀತಾ ನಟಿ ಭವ್ಯ ಅವರನ್ನು ಐಶ್ವರ್ಯಾರವರು ಸಮಯದ ಗೊಂಬೆ ಎಂದು ಹೇಳಿದ್ದಾರೆ. ಅತ್ತ ಉಗ್ರಂ ಮಂಜು ಮನೆಯಲ್ಲಿ ತೋರಿಸುವ ಸೆಂಟಿಮೆಂಟ್ ಗೇಮ್ಗೋಸ್ಕರನಾ? ಎಂದು ನಟಿ ಭವ್ಯನ ಪ್ರಶ್ನಿಸಿದ್ದಾರೆ. ಮನೆಯ ಸ್ಪರ್ಧಿಗಳ ಮಾತು ಕೇಳಿ ನಟಿ ಭವ್ಯ ಕಣ್ಣೀರು ಹಾಕಿದ್ದಾರೆ.
View this post on Instagram
ಇದನ್ನೂ ಓದಿ: ಜನಪದ ಕಲಾವಿದ ಗುರುರಾಜ್ ಹೊಸಕೋಟೆ ಕಾರು ಅಪಘಾತ.. ಮಹಾಲಿಂಗಪುರಕ್ಕೆ ಹೊರಟಿದ್ದಾಗ ಅವಘಡ
ಅತ್ತ ಚೈತ್ರಾ ಕುಂದಾಪುರ ಮೇಲೂ ಎಲ್ಲ ಸ್ಪರ್ಧಿಗಳು ವಾದ- ಪ್ರತಿವಾದ ಮಾಡಿದ್ದಾರೆ. ಈ ವೇಳೆ ನಟಿ ಕಿರುಚಾಡಿದ್ದಾರೆ. ಇದರ ಜೊತೆಗೆ ಧನು ಆಚಾರ್, ಜಗದೀಶ್, ತಿವಿಕ್ರಮ್, ಅನುಷಾ ಮುಖದ ಮೇಲೆ ಕಪ್ಪು ಮಸಿ ಎರೆಚಲಾಗಿದೆ. ಒಟ್ಟಿನಲ್ಲಿ ಇಂದಿನ ಎಪಿಸೋಡ್ ಕುತೂಹಲದಿಂದ ಕೂಡಿದ್ದು, ಜಗಳ, ಬಿರುಕು ಎಲ್ಲವೂ ಮಸಿಯಲ್ಲಿ ಅಡಗಿದೆ ಎಂಬುದು ಸಾಬೀತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ