/newsfirstlive-kannada/media/post_attachments/wp-content/uploads/2024/12/TRIVIKRAM.jpg)
ಬಿಗ್ಬಾಸ್ ಮನೆಯಲ್ಲಿ ಗೇಮ್ಗಳ ಮೂಲಕ ನಾಮಿನೇಷನ್ ಟಾಸ್ಕ್ ನಡೆಯುತ್ತಿದೆ. ರಜತ್ ಮತ್ತು ತ್ರಿವಿಕ್ರಮ್ ನೇತೃತ್ವದಲ್ಲಿ ಎರಡು ತಂಡಗಳನ್ನಾಗಿ ಮಾಡಿದ್ದು, ಅಂತೆಯೇ ಟಾಸ್ಕ್ಗಳು ನಡೆಯುತ್ತಿವೆ.
ಇಂದು ರಾತ್ರಿ ಪ್ರಸಾರವಾಗಲಿರುವ ಎಪಿಸೋಡ್ಗೆ ಸಂಬಂಧಿಸಿದಂತೆ ಪ್ರೊಮೋವನ್ನು ಕಲರ್ಸ್ ಕನ್ನಡ ರಿಲೀಸ್ ಮಾಡಿದೆ. ಅದರಲ್ಲಿ ನಾಮಿನೇಷನ್ ವಿಚಾರಕ್ಕೆ ರಜತ್ ಗರಂ ಆಗಿದ್ದಾರೆ. ಟಾಸ್ಕ್ನಲ್ಲಿ ರಜತ್ ಅವರಿದ್ದ ತಂಡ ಸೋತಿದೆ. ಪರಿಣಾಮ ಗೆದ್ದ ತಂಡವು, ಎದುರಾಳಿ ತಂಡದ ಓರ್ವ ಸದಸ್ಯರನ್ನು ಮನೆಯಿಂದ ಆಚೆ ಕಳುಹಿಸಲು ನಾಮಿನೇಟ್ ಮಾಡುವ ಅರ್ಹತೆ ಪಡೆಯುತ್ತಾರೆ. ಅದರಲ್ಲಿ ರಜತ್ ಹೆಸರನ್ನು ಬಹುತೇಕ ಸ್ಪರ್ಧಿಗಳು ತೆಗೆದುಕೊಂಡಿದ್ದು, ಇದಕ್ಕೆ ರಜತ್ ಸಿಡಿಮಿಡಿಗೊಂಡಿದ್ದಾರೆ.
ಇದನ್ನೂ ಓದಿ:BBK11 ಮೋಕ್ಷಿತಾ, ಮಂಜು ಆಯ್ತು.. ಈಗ ರಜತ್ ಮೇಲೆ ರೊಚ್ಚಿಗೆದ್ದ ಗೌತಮಿ..! ಆಗಿದ್ದೇನು?
ನಾಮಿನೇಷನ್ಗೆ ಕೊಟ್ಟಿರುವ ಕಾರಣಗಳನ್ನು ಕೇಳಿಸಿಕೊಂಡರು ರಜತ್ ಗರಂ ಆಗಿದ್ದಾರೆ. ಕೋಪಿಸಿಕೊಂಡು ರಜತ್ ಖಡಕ್ ಡೈಲಾಗ್ ಹೊಡೆದಿದ್ದಾರೆ. ‘ಇಂಡಿವಿಶುವಲ್.. ಆಡಿ.. ನಿಮ್ಗೆ ತಾಖತ್ತು ಇಲ್ವಾ? ನಾನಿಲ್ಲ ಸುಪಿರಿಯರೇ, ನಾನು ಕರಾಬೇ, ನಾನು ಮಸ್ತೇ, ಹೌದು ನಾಮಿನೇಷನ್ ಮಾಡಿದ್ರೆ ಚೇಂಜ್ ಆಗಿಬಿಡ್ತೀನಾ? ನಾಳೆಯಿಂದ ನಾನು ಬೇರೆಯವ್ರ ಹೀರೋ ಅಂತೀನಾ? ನಾನೇ ಹೀರೋ..’ ಎಂದು ಡೈಲಾಗ್ ಹೊಡೆದಿದ್ದಾರೆ..
ಇದನ್ನೂ ಓದಿ:IND vs AUS; ಅರ್ಧಶತಕ ಸಿಡಿಸಿ ಟೀಮ್ ಇಂಡಿಯಾಗೆ ನೆರವಾದ ಕನ್ನಡಿಗ KL ರಾಹುಲ್, ಜಡೇಜಾ
ನಾಮಿನೇಷನ್ಗೆ ಡೋಂಟ್ ಕೇರ್ ಅಂದ್ರಾ ರಜತ್ ಕಿಶನ್?
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepa#BBKPromopic.twitter.com/cTB0qU3ca8— Colors Kannada (@ColorsKannada) December 17, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ