/newsfirstlive-kannada/media/post_attachments/wp-content/uploads/2024/12/TRIVIKRAM.jpg)
ಬಿಗ್​​ಬಾಸ್​ ಮನೆಯಲ್ಲಿ ಗೇಮ್​​ಗಳ ಮೂಲಕ ನಾಮಿನೇಷನ್ ಟಾಸ್ಕ್​ ನಡೆಯುತ್ತಿದೆ. ರಜತ್ ಮತ್ತು ತ್ರಿವಿಕ್ರಮ್ ನೇತೃತ್ವದಲ್ಲಿ ಎರಡು ತಂಡಗಳನ್ನಾಗಿ ಮಾಡಿದ್ದು, ಅಂತೆಯೇ ಟಾಸ್ಕ್​ಗಳು ನಡೆಯುತ್ತಿವೆ.
ಇಂದು ರಾತ್ರಿ ಪ್ರಸಾರವಾಗಲಿರುವ ಎಪಿಸೋಡ್​​ಗೆ ಸಂಬಂಧಿಸಿದಂತೆ ಪ್ರೊಮೋವನ್ನು ಕಲರ್ಸ್ ಕನ್ನಡ ರಿಲೀಸ್ ಮಾಡಿದೆ. ಅದರಲ್ಲಿ ನಾಮಿನೇಷನ್ ವಿಚಾರಕ್ಕೆ ರಜತ್ ಗರಂ ಆಗಿದ್ದಾರೆ. ಟಾಸ್ಕ್​​ನಲ್ಲಿ ರಜತ್​ ಅವರಿದ್ದ ತಂಡ ಸೋತಿದೆ. ಪರಿಣಾಮ ಗೆದ್ದ ತಂಡವು, ಎದುರಾಳಿ ತಂಡದ ಓರ್ವ ಸದಸ್ಯರನ್ನು ಮನೆಯಿಂದ ಆಚೆ ಕಳುಹಿಸಲು ನಾಮಿನೇಟ್ ಮಾಡುವ ಅರ್ಹತೆ ಪಡೆಯುತ್ತಾರೆ. ಅದರಲ್ಲಿ ರಜತ್ ಹೆಸರನ್ನು ಬಹುತೇಕ ಸ್ಪರ್ಧಿಗಳು ತೆಗೆದುಕೊಂಡಿದ್ದು, ಇದಕ್ಕೆ ರಜತ್ ಸಿಡಿಮಿಡಿಗೊಂಡಿದ್ದಾರೆ.
ಇದನ್ನೂ ಓದಿ:BBK11 ಮೋಕ್ಷಿತಾ, ಮಂಜು ಆಯ್ತು.. ಈಗ ರಜತ್ ಮೇಲೆ ರೊಚ್ಚಿಗೆದ್ದ ಗೌತಮಿ..! ಆಗಿದ್ದೇನು?
ನಾಮಿನೇಷನ್​​ಗೆ ಕೊಟ್ಟಿರುವ ಕಾರಣಗಳನ್ನು ಕೇಳಿಸಿಕೊಂಡರು ರಜತ್ ಗರಂ ಆಗಿದ್ದಾರೆ. ಕೋಪಿಸಿಕೊಂಡು ರಜತ್ ಖಡಕ್ ಡೈಲಾಗ್ ಹೊಡೆದಿದ್ದಾರೆ. ‘ಇಂಡಿವಿಶುವಲ್.. ಆಡಿ.. ನಿಮ್ಗೆ ತಾಖತ್ತು ಇಲ್ವಾ? ನಾನಿಲ್ಲ ಸುಪಿರಿಯರೇ, ನಾನು ಕರಾಬೇ, ನಾನು ಮಸ್ತೇ, ಹೌದು ನಾಮಿನೇಷನ್​ ಮಾಡಿದ್ರೆ ಚೇಂಜ್ ಆಗಿಬಿಡ್ತೀನಾ? ನಾಳೆಯಿಂದ ನಾನು ಬೇರೆಯವ್ರ ಹೀರೋ ಅಂತೀನಾ? ನಾನೇ ಹೀರೋ..’ ಎಂದು ಡೈಲಾಗ್ ಹೊಡೆದಿದ್ದಾರೆ..
ಇದನ್ನೂ ಓದಿ:IND vs AUS; ಅರ್ಧಶತಕ ಸಿಡಿಸಿ ಟೀಮ್ ಇಂಡಿಯಾಗೆ ನೆರವಾದ ಕನ್ನಡಿಗ KL ರಾಹುಲ್​, ಜಡೇಜಾ
ನಾಮಿನೇಷನ್ಗೆ ಡೋಂಟ್ ಕೇರ್ ಅಂದ್ರಾ ರಜತ್ ಕಿಶನ್?
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepa#BBKPromopic.twitter.com/cTB0qU3ca8— Colors Kannada (@ColorsKannada) December 17, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ