newsfirstkannada.com

BBK11: ನನಗೆ ಇರೋಕೆ ಇಷ್ಟವಿಲ್ಲ, ಬಿಗ್​ ಬಾಸ್​ನಿಂದ ಹೊರ ಹೋಗುತ್ತೇನೆಂದ ಸ್ಪರ್ಧಿ!

Share :

Published October 3, 2024 at 8:54am

Update October 3, 2024 at 9:01am

    ಬಿಗ್​ ಬಾಸ್​ ಪ್ರಾರಂಭವಾಗಿ 5ನೇ ದಿನ

    ಮನೆಯಿಂದ ಹೊರ ಹೋಗಲು ನಿರ್ಧರಿಸಿದ ಸ್ಪರ್ಧಿ

    ಡೋರ್​ ಮುರಿದು ಹೊರಬರುತ್ತೇನೆಂದ BBK11 ಸ್ಪರ್ಧಿ

ಬಿಗ್​ ಬಾಸ್ ಕನ್ನಡ ಸೀಸನ್​ 11 ಪ್ರಾರಂಭವಾಗಿ 4 ದಿನಗಳು ಉರುಳಿ 5ನೇ ದಿನದತ್ತ ಕಾಲಿಟ್ಟಿದೆ. ಪ್ರಾರಂಭದಲ್ಲಿ ನಗು ಮೊಗದಿಂದ ಮಾತನಾಡುತ್ತಿದ್ದ ಮನೆಮಂದಿಯ ನಡುವೆ ಇದೀಗ ಕೊಂಚ ವೈಮನಸ್ಸು ಕಾಣಿಸಿಕೊಂಡಿದೆ.​ ಜಗಳ, ಕಿತ್ತಾಟ ಶುರುವಾಗಿದೆ. ಹೀಗಿರುವಾಗ ಸ್ಪರ್ಧಿಯೊಬ್ಬರು ಬಿಗ್​ ಬಾಸ್​ ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದಾರೆ. ನನಗೆ ಇರೋಕೆ ಇಷ್ಟವಿಲ್ಲ, ಬಿಗ್​ ಬಾಸ್​ನಿಂದ ಹೊರ ಹೋಗುತ್ತೇನೆ ಎಂದು ಹೇಳಿದ್ದಾರೆ.

ಈ ಬಾರಿಯ ಬಿಗ್​​ ಬಾಸ್​ ಸೀಸನ್​​ 11ನಲ್ಲಿ ಲಾಯರ್​ಯೊಬ್ಬರು ಕಾಣಿಸಿಕೊಂಡಿದ್ದಾರೆ. ಬೆಂಗಳೂರು ಮೂಲಕ​​ ಜಗದೀಶ್ ಬಿಗ್​ ಬಾಸ್​ ಮನೆಯಲ್ಲಿದ್ದಾರೆ. ಆದರೀಗ ಮನೆಯ ಮಂದಿ ಮತ್ತು ಅವರ ನಡುವೆ ಜಗಳ ಶುರುವಾಗಿದ್ದು, ಈ ವೇಳೆ ಕೆಂಡಾಮಂಡಲರಾಗಿದ್ದಾರೆ.

ಇದನ್ನೂ ಓದಿ: ದಯವಿಟ್ಟು ನಿಮ್ಮ ರಾಜಕೀಯ ಜಗಳದಿಂದ ನನ್ನ ಹೆಸರು ಹೊರಗಿಡಿ.. ಸಚಿವೆಯ ವಿವಾದಿತ ಹೇಳಿಕೆಗೆ ನಟಿ ಸಮಂತಾ ಬೇಸರ

ಕ್ಯಾಮೆರಾ ಮುಂದೆ ಹೋಗಿ ಲಾಯರ್​ ಜಗದೀಶ್​ ಮಾತನಾಡಿದ್ದಾರೆ. ಬಿಗ್​ ಬಾಸ್​ ನನಗೆ ಇಲ್ಲಿ ಇರೋಕೆ ಇಷ್ಟವಿಲ್ಲ. ನಾನು ಹೊರ ಹೋಗುತ್ತೇನೆ ಎಂದಿದ್ದಾರೆ.

ಇದಲ್ಲದೆ ಬಿಗ್​ ಬಾಸ್​​ಗೂ ಅವಾಜ್​ ಹಾಕಿದ ಜಗದೀಶ್​. ನಾನು ಈ ಪ್ರೋಗ್ರಾಂ ಹಾಳು ಮಾಡದಿದ್ದರೆ ನನ್ನ ಹೆಸರು ಜಗದೀಶ್​ ಅಲ್ಲ ಎಂದಿದ್ದಾರೆ. ಯಾವನು ಕಾಲು ಇಡಬಾರದು ಇಲ್ಲಿ. ಮನಸ್ಸು ಮಾಡಿದ್ರೆ ನಾನು ಹೆಲಿಕಾಪ್ಟರ್​ ತರಿಸುತ್ತೇನೆ. ಈ ಡೋರನ್ನೇ ಉಡಾಯಿಸಿ ಬಿಡುತ್ತೇನೆ. ನನ್ನನ್ನು ಎದುರಾಕಿಕೊಂಡು ಕರ್ನಾಟಕದಲ್ಲಿ ಬಿಗ್​ ಬಾಸ್​ ಓಡಿಸುತ್ತೀರಾ? ಓಡ್ಸಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಟ ದರ್ಶನ್​ ಕೇಸ್​ಗೆ ಟ್ವಿಸ್ಟ್​​; ಈ ಮೂವರು ಆರೋಪಿಗಳ ನಿಜವಾದ ಪಾತ್ರವೇನು?

ಸದ್ಯ ಬಿಗ್​ ಬಾಸ್​​ ಜಗದೀಶ್​​ ಅವರನ್ನು ಮನೆಯಿಂದ ಹೊರಗೆ ಕಲಿಸುತ್ತಾರಾ? ಅಥವಾ ನರಕಕ್ಕೆ ಕಲಿಸುತ್ತಾರಾ ಎಂದು ಕಾದು ನೋಡಬೇಕಿದೆ. ಇದಲ್ಲದೆ ನಾಮಿನೇಟ್​​ ಆಗಿರುವ ಜಗದೀಶ್​ ಮೊದಲ ದಿನವೇ ಎಲಿಮಿನೇಟ್​ ಆಗುತ್ತಾರಾ ಎಂಬುದು ಎಲ್ಲರ ಕುತೂಹಲವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11: ನನಗೆ ಇರೋಕೆ ಇಷ್ಟವಿಲ್ಲ, ಬಿಗ್​ ಬಾಸ್​ನಿಂದ ಹೊರ ಹೋಗುತ್ತೇನೆಂದ ಸ್ಪರ್ಧಿ!

https://newsfirstlive.com/wp-content/uploads/2024/10/BBK11.jpg

    ಬಿಗ್​ ಬಾಸ್​ ಪ್ರಾರಂಭವಾಗಿ 5ನೇ ದಿನ

    ಮನೆಯಿಂದ ಹೊರ ಹೋಗಲು ನಿರ್ಧರಿಸಿದ ಸ್ಪರ್ಧಿ

    ಡೋರ್​ ಮುರಿದು ಹೊರಬರುತ್ತೇನೆಂದ BBK11 ಸ್ಪರ್ಧಿ

ಬಿಗ್​ ಬಾಸ್ ಕನ್ನಡ ಸೀಸನ್​ 11 ಪ್ರಾರಂಭವಾಗಿ 4 ದಿನಗಳು ಉರುಳಿ 5ನೇ ದಿನದತ್ತ ಕಾಲಿಟ್ಟಿದೆ. ಪ್ರಾರಂಭದಲ್ಲಿ ನಗು ಮೊಗದಿಂದ ಮಾತನಾಡುತ್ತಿದ್ದ ಮನೆಮಂದಿಯ ನಡುವೆ ಇದೀಗ ಕೊಂಚ ವೈಮನಸ್ಸು ಕಾಣಿಸಿಕೊಂಡಿದೆ.​ ಜಗಳ, ಕಿತ್ತಾಟ ಶುರುವಾಗಿದೆ. ಹೀಗಿರುವಾಗ ಸ್ಪರ್ಧಿಯೊಬ್ಬರು ಬಿಗ್​ ಬಾಸ್​ ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದಾರೆ. ನನಗೆ ಇರೋಕೆ ಇಷ್ಟವಿಲ್ಲ, ಬಿಗ್​ ಬಾಸ್​ನಿಂದ ಹೊರ ಹೋಗುತ್ತೇನೆ ಎಂದು ಹೇಳಿದ್ದಾರೆ.

ಈ ಬಾರಿಯ ಬಿಗ್​​ ಬಾಸ್​ ಸೀಸನ್​​ 11ನಲ್ಲಿ ಲಾಯರ್​ಯೊಬ್ಬರು ಕಾಣಿಸಿಕೊಂಡಿದ್ದಾರೆ. ಬೆಂಗಳೂರು ಮೂಲಕ​​ ಜಗದೀಶ್ ಬಿಗ್​ ಬಾಸ್​ ಮನೆಯಲ್ಲಿದ್ದಾರೆ. ಆದರೀಗ ಮನೆಯ ಮಂದಿ ಮತ್ತು ಅವರ ನಡುವೆ ಜಗಳ ಶುರುವಾಗಿದ್ದು, ಈ ವೇಳೆ ಕೆಂಡಾಮಂಡಲರಾಗಿದ್ದಾರೆ.

ಇದನ್ನೂ ಓದಿ: ದಯವಿಟ್ಟು ನಿಮ್ಮ ರಾಜಕೀಯ ಜಗಳದಿಂದ ನನ್ನ ಹೆಸರು ಹೊರಗಿಡಿ.. ಸಚಿವೆಯ ವಿವಾದಿತ ಹೇಳಿಕೆಗೆ ನಟಿ ಸಮಂತಾ ಬೇಸರ

ಕ್ಯಾಮೆರಾ ಮುಂದೆ ಹೋಗಿ ಲಾಯರ್​ ಜಗದೀಶ್​ ಮಾತನಾಡಿದ್ದಾರೆ. ಬಿಗ್​ ಬಾಸ್​ ನನಗೆ ಇಲ್ಲಿ ಇರೋಕೆ ಇಷ್ಟವಿಲ್ಲ. ನಾನು ಹೊರ ಹೋಗುತ್ತೇನೆ ಎಂದಿದ್ದಾರೆ.

ಇದಲ್ಲದೆ ಬಿಗ್​ ಬಾಸ್​​ಗೂ ಅವಾಜ್​ ಹಾಕಿದ ಜಗದೀಶ್​. ನಾನು ಈ ಪ್ರೋಗ್ರಾಂ ಹಾಳು ಮಾಡದಿದ್ದರೆ ನನ್ನ ಹೆಸರು ಜಗದೀಶ್​ ಅಲ್ಲ ಎಂದಿದ್ದಾರೆ. ಯಾವನು ಕಾಲು ಇಡಬಾರದು ಇಲ್ಲಿ. ಮನಸ್ಸು ಮಾಡಿದ್ರೆ ನಾನು ಹೆಲಿಕಾಪ್ಟರ್​ ತರಿಸುತ್ತೇನೆ. ಈ ಡೋರನ್ನೇ ಉಡಾಯಿಸಿ ಬಿಡುತ್ತೇನೆ. ನನ್ನನ್ನು ಎದುರಾಕಿಕೊಂಡು ಕರ್ನಾಟಕದಲ್ಲಿ ಬಿಗ್​ ಬಾಸ್​ ಓಡಿಸುತ್ತೀರಾ? ಓಡ್ಸಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಟ ದರ್ಶನ್​ ಕೇಸ್​ಗೆ ಟ್ವಿಸ್ಟ್​​; ಈ ಮೂವರು ಆರೋಪಿಗಳ ನಿಜವಾದ ಪಾತ್ರವೇನು?

ಸದ್ಯ ಬಿಗ್​ ಬಾಸ್​​ ಜಗದೀಶ್​​ ಅವರನ್ನು ಮನೆಯಿಂದ ಹೊರಗೆ ಕಲಿಸುತ್ತಾರಾ? ಅಥವಾ ನರಕಕ್ಕೆ ಕಲಿಸುತ್ತಾರಾ ಎಂದು ಕಾದು ನೋಡಬೇಕಿದೆ. ಇದಲ್ಲದೆ ನಾಮಿನೇಟ್​​ ಆಗಿರುವ ಜಗದೀಶ್​ ಮೊದಲ ದಿನವೇ ಎಲಿಮಿನೇಟ್​ ಆಗುತ್ತಾರಾ ಎಂಬುದು ಎಲ್ಲರ ಕುತೂಹಲವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More