Advertisment

BBK11: ಹನುಮಂತ ರಾಕ್.. ರಜತ್, ಮಂಜು, ತ್ರಿವಿಕ್ರಮ್‌ಗೆ ಶಾಕ್‌! ಕಿಚ್ಚ ಸುದೀಪ್‌ ಹೇಳಿದ್ದೇನು?

author-image
admin
Updated On
BBK11: ಬಿಗ್​ಬಾಸ್​ನಲ್ಲಿ ಹನುಮಂತ ಅಸಲಿ ಆಟ ಶುರು ಮಾಡಿದ್ದು ಯಾವಾಗ? ಮನೆ ಮಂದಿ ಹೇಳಿದ್ದೇನು?
Advertisment
  • ಕಿಚ್ಚ ಸುದೀಪ್ ಮುಂದೆ ಹನುಮಂತನ ಪಂಚಿಂಗ್ ಡೈಲಾಗ್
  • ಫಿನಾಲೆ ತಲುಪಿರುವ ಹನುಮಂತನ ಖದರ್ ಚೇಂಜ್ ಆಯ್ತಾ?
  • ಸೂಪರ್ ಸಂಡೇ ವಿತ್ ಬಾದ್ ಷಾ ಎಪಿಸೋಡ್‌ನಲ್ಲಿ ಸಖತ್ ಕಿಕ್‌!

ಬಿಗ್ ಬಾಸ್ ಸೀಸನ್ 11 ಫಿನಾಲೆಗೆ ಮತ್ತಷ್ಟು ಹತ್ತಿರವಾಗಿದೆ. ಇವತ್ತು ಬಿಗ್ ಬಾಸ್ ಮನೆಯಿಂದ ಒಬ್ಬರು ಔಟ್ ಆಗಿ ಆಚೆ ಬರುತ್ತಿದ್ದಾರೆ. ಒಬ್ಬರ ತಲೆ ಮೇಲೆ ಎಲಿಮಿನೇಷನ್ ತೂಗುಗತ್ತಿ ನೇತಾಡುತ್ತಾ ಇದೆ. ಈ ಮಧ್ಯೆ ಹನುಮಂತನ ಪಂಚಿಂಗ್ ಡೈಲಾಗ್ ಮನೆ ಮಂದಿಯೆಲ್ಲಾ ಬಿದ್ದು, ಬಿದ್ದು ನಗುವಂತೆ ಮಾಡಿದೆ.

Advertisment

ಬಿಗ್ ಬಾಸ್ ಮನೆಯಲ್ಲಿ ಈಗ ಹನುಮಂತ ಫುಲ್ ರಾಕಿಂಗ್ ಸ್ಟಾರ್ ಆಗಿದ್ದಾರೆ. ಫಿನಾಲೆ ತಲುಪಿರುವ ಹನುಮಂತನ ಆಟ ಜೋರಾಗಿದ್ದು, ಬಿಗ್ ಬಾಸ್ ವೀಕ್ಷಕರಿಗೂ ಸಖತ್ ಇಷ್ಟವಾಗುತ್ತಿದೆ. ಇಂದು ಸೂಪರ್ ಸಂಡೇ ವಿತ್ ಬಾದ್ ಷಾ ಎಪಿಸೋಡ್‌ನಲ್ಲೂ ಕಿಚ್ಚ ಸುದೀಪ್ ಹನುಮಂತನ ಮಾತಿಗೆ ಕಳೆದು ಹೋಗಿದ್ದಾರೆ.

publive-image

ಸೂಪರ್ ಸಂಡೇ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಮನೆಯ ಸದಸ್ಯರು ಒಂದು ವಿಶೇಷ ಚಟುವಟಿಕೆಯನ್ನ ನೀಡಿದ್ದಾರೆ. ಪ್ರಶ್ನೆಗೆ ಉತ್ತರಿಸುವ ಈ ಟಾಸ್ಕ್‌ನಲ್ಲಿ ತಪ್ಪಾದ ಉತ್ತರ ನೀಡುವವರಿಗೆ ಶಾಕಿಂಗ್ ಟ್ರೀಟ್‌ಮೆಂಟ್ ಕೊಡಲಾಗುತ್ತಿದೆ. ಅಂದ್ರೆ ಸುದೀಪ್ ಕೇಳುವ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟುವರು ವಿಲವಿಲ ಒದ್ದಾಡಿದ್ದಾರೆ.

ಇದನ್ನೂ ಓದಿ: BBK11: ಹನುಮಂತುಗೆ ಸಿಕ್ತು ಕಿಚ್ಚನಿಂದ ಫೈಯರ್​ ಡೈಲಾಗ್​; ಮನೆ ಮಂದಿ ಫುಲ್ ಶಾಕ್​! 

Advertisment

ಮೊದಲಿಗೆ ಭವ್ಯಾ, ಮಂಜು, ಗೌತಮಿ, ತ್ರಿವಿಕ್ರಮ್, ಚೈತ್ರಾ, ಧನರಾಜ್, ಮೋಕ್ಷಿತಾಗೆ ಸುದೀಪ್ ಪ್ರಶ್ನೆ ಕೇಳಿದ್ದಾರೆ. ತಪ್ಪು ಉತ್ತರ ಕೊಟ್ಟವರಿಗೆ ಬಿಗ್ ಬಾಸ್ ಕಡೆಯಿಂದ ಶಾಕ್‌ ಕೊಡಲಾಗಿದೆ. ಈ ಶಾಕಿಂಗ್ ಟಾಸ್ಕ್‌ನಲ್ಲೂ ಹನುಮಂತ ಸುದೀಪ್‌ಗೆ ಒಂದು ಮನವಿ ಮಾಡಿದ್ದಾರೆ.

ಶಾಕ್‌ ಕೊಡುವ ಟಾಸ್ಕ್‌ಗೂ ಮುಂಚೆ ಹನುಮಂತ ಕಿಚ್ಚ ಸುದೀಪ್ ಅವರ ಬಳಿ ನಾನು ಮೊದಲು ಮೂತ್ರ ವಿಸರ್ಜನೆ ಮಾಡಿ ಬರುತ್ತೇನೆ ಎಂದು ಮನವಿ ಮಾಡಿದ್ದಾರೆ. ಹನುಮಂತು ಅವರ ಈ ಮುಗ್ಧತೆಯ ಮಾತು ಬಿಗ್ ಬಾಸ್ ಮನೆಯ ಎಲ್ಲರನ್ನೂ ನಗೆಗಡಲಲ್ಲಿ ತೇಲುವಂತೆ ಮಾಡಿದೆ. ಕಿಚ್ಚ ಸುದೀಪ್ ಅವರಂತೂ ಹನುಮಂತು ಪರಿಸ್ಥಿತಿ ನೋಡಿ ಬಿದ್ದು, ಬಿದ್ದು ನಕ್ಕಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment