Advertisment

BBK11: ಮನೆಯಲ್ಲಿ ಮತ್ತೆ ಭುಗಿಲೆದ್ದ ಅಸಮಾಧಾನ.. ನನ್ನ ನಾಯಕತ್ವ​ ಕ್ಯಾನ್ಸಲ್​ ಮಾಡಿ ಎಂದ ಹನುಮಂತು!

author-image
AS Harshith
Updated On
ಶಿಗ್ಗಾಂವಿ ಉಪಚುನಾವಣೆಯ ಮತದಾನಕ್ಕೆ ಗೈರಾದ ಬಿಗ್​ಬಾಸ್​ ಹನುಮಂತ; ತಂದೆ ಹೇಳಿದ್ದೇನು?
Advertisment
  • ಈ ರೀತಿ ಜಗಳ ಆಡುತ್ತೀರಾ ಅಂದ್ರೆ ನಾನು ಬರುತ್ತಿರಲಿಲ್ಲ ಎಂದ ಹನುಮಂತು
  • ಹನುಮಂತುವಿನ ಈ ವಿಚಾರಕ್ಕೆ ಅಸಮಾಧಾನಗೊಂಡ ಮನೆಯ ಸ್ಪರ್ಧಿಗಳು
  • ನಾನು ಈ ಆಟದಲ್ಲಿ ಇಲ್ಲ.. ನಾಯಕತ್ವ ಕ್ಯಾನ್ಸಲ್​ ಮಾಡಿ ಎಂದ ಹನುಮಂತು

ಬಿಗ್​ ಬಾಸ್​ ಕನ್ನಡ ಸೀಸನ್​ 11 ಕಾರ್ಯಕ್ರಮ ಭಾರೀ ಕುತೂಹಲದಿಂದ ಸಾಗುತ್ತಿದೆ. ಈಗಾಗಲೇ ಮನೆಯಿಂದ ಮೂರು ಸ್ಪರ್ಧಿಗಳು ಹೊರಹೋಗಿದ್ದು, ಅದರಲ್ಲಿ ಇಬ್ಬರನ್ನು ಹಲ್ಲೆ ವಿಚಾರಕ್ಕೆ ಹೊರಹಾಕಲಾಗಿದೆ. ಇದರ ಬೆನ್ನಲ್ಲೇ ದೊಡ್ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಗಾಯಕ ಹನುಮಂತ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದು, ಬಿಗ್​ ಬಾಸ್​ ಮನೆಯ ನಾಯಕ ಸ್ಥಾನವನ್ನು ಅವರ ಕೈಗಿಟ್ಟಿದ್ದಾರೆ. ಹೀಗಿರುವಾಗ ಮನೆಯ ಸ್ಪರ್ಧಿಗಳ ನಡುವೆ ಅಸಮಾಧಾನ ಭುಗಿಲೆದ್ದಿದೆ. ಅದಕ್ಕೆ ಟಾಸ್ಕ್​ ಕಾರಣವಾಗಿದೆ.

Advertisment

ಹೌದು. ಬಿಗ್​ ಬಾಸ್​ ಮನೆಯ ಹೊಸ ಕ್ಯಾಪ್ಟನ್​ ಹನುಮಂತನಿಗೆ ಟಾಸ್ಕ್​​ ಕೊಟ್ಟಿದ್ದಾರೆ. ಮನೆಯ ಸ್ಪರ್ಧಿಗಳನ್ನು ನಂಬರ್​ ಆಧಾರದ ಮೇಲೆ ಸ್ಥಾನಗಳನ್ನು ನೀಡುವ ಟಾಸ್ಕ್​ ನೀಡಿದ್ದಾರೆ. ಆದರೆ ಹನುಮಂತು ನೀಡಿರುವ ಸ್ಥಾನದ ಕುರಿತು ಸ್ಪರ್ಧಿಗಳ ನಡುವೆ ಅಸಮಾಧಾನ ಉಂಟಾಗಿದೆ.

ಇದನ್ನೂ ಓದಿ: ಊರಿಗೆ ಹೋಗಿದ್ದಕ್ಕೆ ಸಿಟ್ಟು.. ನನಗೆ ಊಟ ಮಾಡಿಕೊಡೋರು ಯಾರು ಎಂದು ತಾಯಿಯನ್ನೇ ಕೊಂ*ದ ಮಗ

ಚೈತ್ರಾ ಕುಂದಾಪುರ, ಭವ್ಯ ಗೌಡ, ಕೀರ್ತಿ ಧರ್ಮರಾಜ್​, ತ್ರಿವಿಕ್ರಮ್​ ಹೀಗೆ ಕೆಲವರು ಹನುಮಂತು​ ಮೇಲೆ ಸಿಟ್ಟಿಗೆದ್ದಿದ್ದಾರೆ. ನನಗೆ ಈ ಸ್ಥಾನವನ್ನು ಯಾಕೆ ಕೊಟ್ಟೆ ಎಂದು ಕೋಪಿಸಿಕೊಂಡಿದ್ದಾರೆ. ಜೊತೆಗೆ ಹನುಮಂತುವನ್ನು ಪ್ರಶ್ನಿಸಿದ್ದಾರೆ.

Advertisment


">October 21, 2024

ಇದನ್ನೂ ಓದಿ: ಹೊಳೆಯಂತಾದ ಬೆಂಗಳೂರು.. ಒಂದಾ, ಎರಡಾ, ಸಾಲು ಸಾಲು ಅವಾಂತರಗಳ ನಡುವೆ ಸಂಕಷ್ಟದಲ್ಲಿ ಜನರು

ಇವರೆಲ್ಲರ ಮಾತು ಕೇಳಿ ಹನುಮಂತು ಸುಸ್ತಾಗಿದ್ದಾರೆ. ಕೊನೆಗೆ ಈ ರೀತಿ ಜಗಳ ಆಡುತ್ತೀರಾ ಅಂದರೆ ಬರುತ್ತಿರಲಿಲ್ಲ. ನಾನು ಈ ಆಟದಲ್ಲಿ ಇಲ್ಲ. ಕ್ಯಾನ್ಸಲ್​, ಕ್ಯಾಪ್ಟನ್​ ಕ್ಯಾನ್ಸಲ್​ ಎಂದು ಹನುಮಂತು ಬಿಗ್​ ಬಾಸ್​ ಬಳಿ ಹೇಳಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment