/newsfirstlive-kannada/media/post_attachments/wp-content/uploads/2025/01/BBK1168.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11, 104ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್ ವೇದಿಕೆಗೆ ಕಿಚ್ಚ ಸುದೀಪ ಖಡಕ್​ ಆಗಿ ಎಂಟ್ರಿ ಕೊಟ್ಟಿದ್ದಾರೆ. ಆದ್ರೆ ವೇದಿಕೆಗೆ ಬರುತ್ತಿದ್ದಂತೆ ಈ ವಾರ ವೇಗದ ಮಿತಿಮೀರಿ, ಆಟದ ಗತಿ ತಪ್ಪಿಸಿದೋರು ಯಾರು ಎಂದು ಕ್ಲಾಸ್​ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ.
/newsfirstlive-kannada/media/post_attachments/wp-content/uploads/2025/01/BBK1169.jpg)
ಹೌದು, ಈ ವಾರ ಸ್ಪರ್ಧಿಗಳಿಗೆ ತುಂಬಾ ಮುಖ್ಯವಾಗಿತ್ತು. ಅದರಲ್ಲೂ ಟಿಕೆಟ್ ಟು ಫಿನಾಲೆಗೆ ಎಂಟ್ರಿ ಕೊಡುವ ಸಲುವಾಗಿ ಸ್ಪರ್ಧಿಗಳು ನಾ ಮುಂದು, ತಾ ಮುಂದು ಅಂತ ಹೋರಾಟ ಮಾಡಿರೋ ವಾರವಾಗಿತ್ತು. ಆದರೆ ಕೇವಲ 2 ಸೆಕೆಂಡ್​ಗಳಲ್ಲಿ ಟಿಕೆಟ್ ಟು ಫಿನಾಲೆ ಪಾಸ್​ ಅನ್ನು ಹನುಮಂತ ಪಡೆದುಕೊಂಡಿದ್ದಾರೆ.
View this post on Instagram
ಅಲ್ಲದೇ ಈ ವಾರ ಸ್ಪರ್ಧಿಗಳು ಎಲ್ಲಿ ಎಡವಿದರೂ, ಎಲ್ಲಿ ಧ್ವನಿ ಎತ್ತಬೇಕಾಗಿತ್ತು, ಉಸ್ತುವಾರಿ ಮಾಡಿರೋ ತಪ್ಪೇನು, ಭವ್ಯಾ ಗೌಡ ಹನುಮಂತ ಮೇಲೆ ಕೈ ಮಾಡಿದ್ದೇಕೆ ಎಂಬೆಲ್ಲಾ ವಿಚಾರಗಳ ಬಗ್ಗೆ ಇಂದಿನ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಕ್ಲಾಸ್​ ತೆಗೆದುಕೊಳ್ಳಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ​
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us