/newsfirstlive-kannada/media/post_attachments/wp-content/uploads/2024/10/Yograj-Bhat.jpg)
ಸ್ಯಾಂಡಲ್​​ವುಡ್​ ನಟ, ಬಿಗ್​ ಬಾಸ್​ ಕನ್ನಡ ನಿರೂಪಕ ಕಿಚ್ಚ ಸುದೀಪ್​ ತನ್ನ ತಾಯಿಯನ್ನು ಕಳೆದುಕೊಂಡಿದ್ದಾರೆ. ಕಳೆದ ಆದಿತ್ಯವಾರದಂದು ಬೆಳಗ್ಗೆ ಕಿಚ್ಚನ ಅಮ್ಮ ಇಹಲೋಕ ತ್ಯಜಿಸಿದ್ದಾರೆ. ಸದ್ಯ ಅಮ್ಮನ ನೆನಪಲ್ಲೇ ಉಳಿದಿರುವ ನಟ ಈ ವಾರದ ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ.
ಹೌದು. ಕಿಚ್ಚ ಸುದೀಪ್ ವಾರದ ಕೊನೆಯಲ್ಲಿ ಬಂದು ಪಂಚಾಯ್ತಿ ನಡೆಸುತ್ತಿದ್ದರು. ಆದರೆ ತಾಯಿ ಸರೋಜಾ ಅವರನ್ನು ಕಳೆದುಕೊಂಡ ಸುದೀಪ್​ ಈ ವಾರಾಂತ್ಯದಲ್ಲಿ ನಿರೂಪಣೆಗೆ ಗೈರಾಗಲಿದ್ದಾರೆ. ಹಾಗಾಗಿ ಈ ವಾರದ ಬಿಗ್​ ಬಾಸ್​ ಮನೆಯೆ ಇಬ್ಬರು ಹೊಸ ಅತಿಥಿಗಳು ಭೇಟಿ ನೀಡಲಿದ್ದಾರೆ.
ದೊಡ್ಮನೆ ಬೊಂಬೆಗಳಿಗೆ ಕೀ ಕೊಡಲು ಬಂದ್ರು ಯೋಗರಾಜ್ ಭಟ್!
ಬಿಗ್ ಬಾಸ್ ಕನ್ನಡ ಸೀಸನ್ 11 | ಇಂದು ರಾತ್ರಿ 9:00#BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepapic.twitter.com/pbH1Sahrxi
— Colors Kannada (@ColorsKannada)
ದೊಡ್ಮನೆ ಬೊಂಬೆಗಳಿಗೆ ಕೀ ಕೊಡಲು ಬಂದ್ರು ಯೋಗರಾಜ್ ಭಟ್!
ಬಿಗ್ ಬಾಸ್ ಕನ್ನಡ ಸೀಸನ್ 11 | ಇಂದು ರಾತ್ರಿ 9:00#BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepapic.twitter.com/pbH1Sahrxi— Colors Kannada (@ColorsKannada) October 26, 2024
">October 26, 2024
ಇಂದು ನಿರ್ದೇಶಕ ಯೋಗರಾಜ್​ ಭಟ್ಟರು ಬಿಗ್​​ ಬಾಸ್​​ ಮನೆಯೊಳಕ್ಕೆ ಕಾಲಿಟ್ಟಿದ್ದಾರೆ. ಸ್ಪರ್ಧಿಗಳ ಜೊತೆಗೆ ಮಾತು, ನಗು, ಚರ್ಚೆ ಮಾಡಿದ್ದಾರೆ. ನಾಳೆ ಸೃಜನ್​ ಲೋಕೇಶ್​​ ಬಿಗ್​ ಬಾಸ್​​ ಮನೆಯೊಳಕ್ಕೆ ಎಂಟ್ರಿ ನೀಡಲಿದ್ದಾರೆ. ಆ ಮೂಲಕ ಕಿಚ್ಚನ ವಾರಾಂತ್ಯದ ಜವಾಬ್ದಾರಿಯನ್ನು ಇವರಿಬ್ಬರು ತುಂಬಲಿದ್ದಾರೆ. ಜೊತೆಗೆ ವೀಕ್ಷಕರಿಗೆ ಮನೋರಂಜನೆ ನೀಡಲಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಹಿನ್ನಡೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ
ಸುದೀಪ್​ ಅವರ ತಾಯಿ ಸರೋಜಾ ಸಂಜೀವ್​ರವರು ಕಳೆದ ಅದಿತ್ಯವಾರದಂದು ಬೆಳಗ್ಗಿನ ಜಾವ ನಿಧನರಾದರು. ವಯೋಸಹಜ ಕಾಯಿಲೆಯಿಂದಾಗಿ ನಿಧನರಾದರು. ಸರೋಜಾರವರು ಪತಿ ಸಂಜೀವ್​, ಮತ್ತು ಕಿಚ್ಚ ಸುದೀಪ್​ ಸೇರಿ ಮೂವರು ಮಕ್ಕಳನ್ನು ಅಗಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us