/newsfirstlive-kannada/media/post_attachments/wp-content/uploads/2025/06/BNG_AKSHAY_BIKE_1.jpg)
- ಬೆಂಗಳೂರು ಜನರ ಪ್ರಾಣಕ್ಕೆ ಕಂಟಕವಾದ ಮರಗಳು
- ಅಕ್ಷಯ್ ಸಾವಿನಿಂದ ಎಚ್ಚೆತ್ತ ಪಾಲಿಕೆ, ಹೊಸ ರೂಲ್ಸ್
- ಠಾಣೆಯಲ್ಲಿ ಅಕ್ಷಯ್ ಸಹೋದರ ಬೆನಕ್ ರಾಜ್ ದೂರು
ಬೆಂಗಳೂರಲ್ಲಿ ಸಾಲು ಸಾಲು ಮರ ಬಿದ್ದು ಅವಾಂತರಗಳಾದ್ಮೇಲೆ ಈಗ ಪಾಲಿಕೆ ಕಣ್ಬಿಟ್ಟಂತೆ ಕಾಣ್ತಿದೆ. ಮರದ ಕೊಂಬೆಯೊಂದು ಅಕ್ಷಯ್​ ಎಂಬ ತರುಣನ ಜೀವ ಬಲಿ ಪಡೆದಿದೆ. ಈ ಬೆನ್ನಲ್ಲೆ ಎಚ್ಚೆತ್ತ ಬಿಬಿಎಂಪಿ ಹೊಸ ಆದೇಶಗಳನ್ನ ಜಾರಿ ಮಾಡಿದೆ.
ಮರಗಳಿಗೆ ಗೈಡ್​ಲೈನ್ಸ್​​!
- ಅವೈಜ್ಞಾನಿಕ ಕಾಮಾಗಾರಿಗಳು ಮರಗಳ ಆರೋಗ್ಯ ಮೇಲೆ ಪರಿಣಾಮ
- ಅಸಮರ್ಪಕ ಗಾಳಿ, ನೀರಿನ ಒಳಹರಿವಿನಿಂದ ಬೇರು ಪೋಷಣೆ ಆಗ್ತಿಲ್ಲ
- ವೃಕ್ಷಗಳ ಬೇರು ಆಳಕ್ಕೆ ಇಳಿಯದೆ ದುಷ್ಪರಿಣಾಮಗಳಿಗೆ ಕಾರಣ ಆಗ್ತಿದೆ
- ಮಳೆ, ಗಾಳಿಯಲ್ಲಿ ಶಕ್ತಿ ಕುಂದಿ ಮರಗಳು, ರೆಂಬೆ-ಕೊಂಬೆಗಳು ಬೀಳುತ್ತಿವೆ
- ಕಾಂಕ್ರೀಟಿಕರಣದಿಂದ ಮರಗಳ ಬೇರುಮಟ್ಟದಲ್ಲೇ ಶಕ್ತಿ ಕಳೆದುಕೊಂಡಿವೆ
- ರಸ್ತೆ ಬದಿ ನೆಡಲಾದ ಮರಗಳ ಕುರಿತು ಬಿಬಿಎಂಪಿಯಿಂದ ಅಧಿಸೂಚನೆ
- 1 ಮೀ. ಸುತ್ತಳತೆಯಲ್ಲಿನ ಕಾಂಕ್ರೀಟ್, ಕಲ್ಲು, ಸಿಮೆಂಟ್ ಬ್ಲಾಕ್​ಗಳ ತೆರವು
ಠಾಣೆಯಲ್ಲಿ ಅಕ್ಷಯ್ ಸಹೋದರ ಬೆನಕ್ ರಾಜ್ ದೂರು!
ಅಕ್ಷಯ್ ಸಾವು ಪ್ರಕರಣಕ್ಕೆ ಸಂಬಂಧಿಸಿ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.. RFO, ACF, DFO ಮತ್ತು ಇತರರ ಮೇಲೆ BNS ಕಾಯ್ದೆಯ ಸೆಕ್ಷನ್ 105 ಅಡಿ ಎಫ್​ಐಆರ್ ಆಗಿದೆ.. BNS 105 ಕಾಯ್ದೆ ಅಂದ್ರೆ, ಸಾವಿಗೆ ಸಮಾನದ ಉದ್ದೇಶ ಅಥವಾ ಸಾವಿಗೆ ಕಾರಣವಾಗುವ ದೈಹಿಕ ಗಾಯ ಉಂಟುಮಾಡುವುದು ಅನ್ನೋ ಗಂಭೀರ ಕೇಸ್ ಇದಾಗಿದೆ.
ಇದನ್ನೂ ಓದಿ: ನಿಗೂಢವಾಗಿದ್ದ ನಿತ್ಯಾನಂದನ ಕೈಲಾಸ ರಾಷ್ಟ್ರದ ಜಾಗ ಬಹಿರಂಗ.. ಕೋರ್ಟ್​ನಲ್ಲಿ ಶಿಷ್ಯರಿಂದ ಅಸಲಿ ಸತ್ಯ..!
ಇತ್ತ, ಬದುಕಿದ್ದಾಗ ಬಂದಿಲ್ಲ.. ಸತ್ಮೇಲೆ ಏನ್ ಮಾಡ್ತೀರಾ ಅಂತ ಶಾಸಕ ರವಿ ಸುಬ್ರಮಣ್ಯಗೆ ಸ್ಥಳೀಯರು ತರಾಟೆ ತೆಗೆದುಕೊಂಡಿದ್ದಾರೆ. ಅಕ್ಷಯ್ ಮೃತದೇಹದ ಎದುರಲ್ಲೇ ಶಾಸಕರ ಜೊತೆ ವಾಗ್ವಾದ ನಡೆದಿದೆ.. ಒಟ್ಟಾರೆ, ಮಳೆಗಾಲದಲ್ಲಿ ಗಾಳಿ-ಮಳೆಗೆ ದುರಂತ ಸಂಭವಿಸ್ತಿವೆ.. ಮಾನ್ಸೂನ್​​ಗೆ ಈ ಬಾರಿ ಬಿಬಿಎಂಪಿ ಸಿದ್ಧವೇ ಆಗಿರಲಿಲ್ಲ.
ಇದನ್ನೂ ಓದಿ: ಕೊಹ್ಲಿ-ರೋಹಿತ್​ ಇಲ್ಲ.. ಇವರ ಜವಾಬ್ದಾರಿಯನ್ನ ಈ ಮೂರು ಸ್ಟಾರ್ ಹೊರಲೇಬೇಕು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ