ದುಲೀಪ್ ಟ್ರೋಫಿ ಕಣದಲ್ಲಿ ಸೂಪರ್ ಸ್ಟಾರ್ಗಳು
ಯುವ ಆಟಗಾರರಿಗೆ ನಾಯಕನ ಪಟ್ಟ ಒಲಿದು ಬಂದಿದೆ
ಕಣದಲ್ಲಿ ಅಗ್ನಿಪರೀಕ್ಷೆಗಿಳಿದ ಕನ್ನಡದ ಸ್ಟಾರ್ಸ್ ಯಾರೆಲ್ಲ ಇದ್ದಾರೆ?
ಬಹು ನಿರೀಕ್ಷೆ ಹುಟ್ಟು ಹಾಕಿದ್ದ ದುಲೀಪ್ ಟ್ರೋಫಿ ಟೂರ್ನಿಗೆ ಕೊನೆಗೂ ತಂಡಗಳು ಅನೌನ್ಸ್ ಆಗಿವೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಡೊಮೆಸ್ಟಿಕ್ ಕ್ರಿಕೆಟ್ ಆಡ್ತಾರೆ ಅನ್ನೋ ನಿರೀಕ್ಷೆ ಹುಸಿಯಾಗಿದೆ. ಇಬ್ಬರ ಹೊರತಾಗಿ ಟೀಮ್ ಇಂಡಿಯಾದ ಉಳಿದ ಸ್ಟಾರ್ಗಳು ಡೊಮೆಸ್ಟಿಕ್ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.
ಶ್ರೀಲಂಕಾ ಪ್ರವಾಸದಲ್ಲಿ ಮುಖಭಂಗ ಅನುಭವಿಸಿದ ಬಳಿಕ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ. ಮುಂಬರೋ ಬಾಂಗ್ಲಾದೇಶ ಸರಣಿಗೆ ಇನ್ನೂ ತಿಂಗಳಿಗೂ ಹೆಚ್ಚು ಕಾಲ ಅಂತರವಿದೆ. ಈ ಗ್ಯಾಪ್ನಲ್ಲಿ ರೆಸ್ಟ್ ಮಾಡೋ ಲೆಕ್ಕಾಚಾರದಲ್ಲಿದ್ದ ಆಟಗಾರರಿಗೆ ನಿರೀಕ್ಷೆಯಂತೆ ಹೊಸ ಟಾಸ್ಕ್ ನೀಡಿದ್ದು ಟೀಮ್ ಇಂಡಿಯಾದ ಖಾಯಂ ಸ್ಟಾರ್ಗಳನ್ನ ದುಲೀಪ್ ಟ್ರೋಫಿಯಲ್ಲಿ ಆಡಿಸಲು ಮುಂದಾಗಿದೆ.
ಇದನ್ನೂ ಓದಿ: ಲಿಂಗ ವಿವಾದದಲ್ಲಿ ಸಿಲುಕಿ ಚಿನ್ನ ಗೆದ್ದ ಬಾಕ್ಸರ್.. ಪ್ಯಾರಿಸ್ನಿಂದ ಮೂರು F-16 ಜೆಟ್ಗಳ ರಕ್ಷಣೆಯಲ್ಲಿ ತವರಿಗೆ ವಾಪಸ್..!
ಕೆಲ ದಿನಗಳ ಹಿಂದಷ್ಟೇ ಬಿಗ್ಬಾಸ್ಗಳ ಜೊತೆ ಸಭೆ ನಡೆಸಿದ್ದ ಕೋಚ್ ಗೌತಮ್ ಗಂಭೀರ್, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಮುಂಬರೋ ಟೆಸ್ಟ್ ಸರಣಿಗಳ ಸಿದ್ಧತೆಯ ಬಗ್ಗೆ ಚರ್ಚಿಸಿದ್ರು. ಸಿದ್ಧತೆಯ ಭಾಗವಾಗಿ ದುಲೀಪ್ ಟ್ರೋಫಿಯಲ್ಲಿ ಸ್ಟಾರ್ ಆಟಗಾರರನ್ನ ಆಡಿಸೋ ನಿರ್ಧಾರ ಮಾಡಿದ್ರು. ಸಪ್ಟೆಂಬರ್ 5ರಿಂದ ಆರಂಭವಾಗೋ ಟೂರ್ನಿಗೆ ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ ಟೀಮ್ ಅನೌನ್ಸ್ ಮಾಡಿದೆ.
ಕೈ ಕೊಟ್ಟ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
ಬಹು ವರ್ಷಗಳ ಬಳಿಕ ಟೀಮ್ ಇಂಡಿಯಾದ ಸ್ಟಾರ್ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಡೊಮೆಸ್ಟಿಕ್ ಅಂಗಳಕ್ಕೆ ಮರಳ್ತಾರೆ ಎನ್ನಲಾಗಿತ್ತು. ಬಿಸಿಸಿಐ ಕೂಡ ಈ ಬಗ್ಗೆ ಸೂಚನೆ ನೀಡಿತ್ತು. ರೋಹಿತ್-ಕೊಹ್ಲಿ ದುಲೀಪ್ ಟ್ರೋಫಿಯಿಂದ ಹಿಂದೆ ಸರಿದಿದ್ದಾರೆ. ಇವ್ರ ಜೊತೆಗೆ ಸೀನಿಯರ್ಗಳಾದ ಜಸ್ಪ್ರಿತ್ ಬೂಮ್ರಾ, ಆರ್ ಅಶ್ವಿನ್ ಕೂಡ ಈ ಟೂರ್ನಿಯಿಂದ ಹೊರಗುಳಿದಿದ್ದಾರೆ.
ದುಲೀಪ್ ಟ್ರೋಫಿ ಕಣದಲ್ಲಿ ಸೂಪರ್ ಸ್ಟಾರ್ಗಳು
ಕೊಹ್ಲಿ-ರೋಹಿತ್ ಹೊರತಾಗಿ ಟೀಮ್ ಇಂಡಿಯಾದ ಹಲವು ಸೂಪರ್ ಸ್ಟಾರ್ಗಳು ಟೂರ್ನಿಯಲ್ಲಿ ಆಡ್ತಿದ್ದಾರೆ. ಕೆ.ಎಲ್ ರಾಹುಲ್, ಶುಭ್ಮನ್ ಗಿಲ್, ಕುಲ್ದೀಪ್ ಯಾದವ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ರವೀಂದ್ರ ಜಡೇಜಾ, ಸೂರ್ಯಕುಮಾರ್, ಶ್ರೇಯಸ್ ಅಯ್ಯರ್ ಸೇರಿದಂತೆ ಹಲವು ಆಟಗಾರರು ಆಡಲಿದ್ದಾರೆ. ಈ ದುಲೀಪ್ ಟ್ರೋಫಿಯಲ್ಲಿ ಇವ್ರು ನೀಡೋ ಪ್ರದರ್ಶನ ಟೆಸ್ಟ್ ತಂಡದ ಸೆಲೆಕ್ಷನ್ಗೆ ಮಾನದಂಡವಾಗಲಿದೆ.
ಇದನ್ನೂ ಓದಿ:ಮಗಳು IAS ಆಗುವ ಕನಸು ಕಂಡಿದ್ದ ಅಪ್ಪ-ಅಮ್ಮ; ಕನಸು ನನಸು ಆದಾಗ ಸಂಭ್ರಮಿಸಲು ಅವರೇ ಇರಲಿಲ್ಲ
ಯುವ ಆಟಗಾರರಿಗೆ ಒಲಿದ ನಾಯಕನ ಪಟ್ಟ
ಹೊಸ ಫಾರ್ಮೆಟ್ನಲ್ಲಿ ಆಡ್ತಿರೋ ದುಲೀಪ್ ಟ್ರೋಫಿಯಲ್ಲಿ 4 ತಂಡಗಳನ್ನ ಆಯ್ಕೆ ಮಾಡಲಾಗಿದೆ. ತಂಡಗಳಲ್ಲಿ ಸೀನಿಯರ್ ಆಟಗಾರರು ಇದ್ರೂ ಕೂಡ ನಾಯಕತ್ವದ ಜವಾಬ್ದಾರಿಯನ್ನ ಯುವ ಆಟಗಾರರಿಗೆ ವಹಿಸಲಾಗಿದೆ. ಎ ತಂಡಕ್ಕೆ ಶುಭ್ಮನ್ ಗಿಲ್, ಬಿ ತಂಡಕ್ಕೆ ಅಭಿಮನ್ಯು ಈಶ್ವರನ್, ಸಿ ತಂಡಕ್ಕೆ ಋತುರಾಜ್ ಗಾಯಕ್ವಾಡ್ ಹಾಗೂ ಡಿ ತಂಡಕ್ಕೆ ಶ್ರೇಯಸ್ ಅಯ್ಯರ್ಗೆ ಸಾರಥ್ಯವನ್ನ ವಹಿಸಲಾಗಿದೆ.
ಕೆಟ್ಟ ಮೇಲೆ ಬುದ್ಧಿ ಕಲಿತ ಇಶಾನ್ ಕಿಶನ್
ಕಳೆದ ವರ್ಷ ಬಿಸಿಸಿಐ ಬಾಸ್ಗಳ ಮಾತಿಗೆ ಕ್ಯಾರೇ ಅನ್ನದೇ, ರಣಜಿ ಟ್ರೋಫಿ ಟೂರ್ನಿಯನ್ನಾಡಲು ನೋ ಎಂದಿದ್ದ ಇಶಾನ್ ಕಿಶನ್ ಕೆಟ್ಟ ಮೇಲೆ ಬುದ್ಧಿ ಕಲಿತಂತಿದೆ. ಡೊಮೆಸ್ಟಿಕ್ ಕ್ರಿಕೆಟ್ ಆಡಲ್ಲ ಎಂದು ಮೊಂಡುತನ ಸಾಧಿಸಿದ್ದ ಇಶಾನ್ ಕಿಶನ್, ಟೀಮ್ ಇಂಡಿಯಾದಿಂದ ದೂರವಾಗಿದ್ರು. ಡೊಮೆಸ್ಟಿಕ್ ಕ್ರಿಕೆಟ್ ಆಡಿದ್ರೆ ಮಾತ್ರ, ಸ್ಥಾನ ಸಿಗೋದು ಎಂದು ಬಿಸಿಸಿಐ ಎಚ್ಚರಿಕೆ ನೀಡಿತ್ತು. ಇದೀಗ ಕೆಟ್ಟ ಮೇಲೆ ಬುದ್ಧಿ ಕಲಿತಿರೋ ಕಿಶನ್ ಡೊಮೆಸ್ಟಿಕ್ ಕ್ರಿಕೆಟ್ಗೆ ಮರಳಿದ್ದು, ದುಲೀಪ್ ಟ್ರೋಫಿಯಲ್ಲಿ ಆಡಲಿದ್ದಾರೆ.
ಕಣದಲ್ಲಿ ಅಗ್ನಿಪರೀಕ್ಷೆಗಿಳಿದ ಕನ್ನಡದ ಸ್ಟಾರ್ಸ್
ಕೆ.ಎಲ್ ರಾಹುಲ್ ಮಾತ್ರವಲ್ಲದೇ ಕರ್ನಾಟಕದ ಹಲವು ಆಟಗಾರರು ಕೂಡ ಟೂರ್ನಿಯ ಭಾಗವಾಗಿದ್ದಾರೆ. ಕಮ್ಬ್ಯಾಕ್ ಕನವರಿಕೆಯಲ್ಲಿರೋ ಮಯಾಂಕ್ ಅಗರ್ವಾಲ್, ಇಂಜುರಿಯಿಂದ ಫಿಟ್ ಆಗಿ ವಾಪಾಸ್ಸಾಗ್ತಿರೋ ಪ್ರಸಿದ್ಧ ಕೃಷ್ಣ ಮೇಲೆ ಎಲ್ಲರ ಕಣ್ಣಿದೆ. ಇವ್ರ ಜೊತೆಗೆ ಯುವ ಆಟಗಾರರಾದ ವಿದ್ವತ್ ಕಾವೇರಪ್ಪ, ವೈಶಾಕ್ ವಿಜಯ್ ಕುಮಾರ್, ದೇವದತ್ತ್ ಪಡಿಕ್ಕಲ್ ಕೂಡ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.
ಬಾಂಗ್ಲಾದೇಶ ಟೆಸ್ಟ್ ಸರಣಿಯೂ ಸೇರಿದಂತೆ ಮುಂದಿನ 5 ತಿಂಗಳಲ್ಲಿ ಟೀಮ್ ಇಂಡಿಯಾ ಒಟ್ಟು 10 ಟೆಸ್ಟ್ ಪಂದ್ಯಗಳನ್ನ ಆಡಲಿದೆ. ಈ ಪಂದ್ಯಗಳಿಗೆ ಸಿದ್ಧತೆಯ ದೃಷ್ಟಿಯಿಂದ ದುಲೀಪ್ ಟ್ರೋಫಿ ಮಹತ್ವ ಪಡೆದುಕೊಂಡಿದೆ. ಸ್ಥಾನ ಪಡೆದಿರುವ ಸ್ಟಾರ್ಸ್ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಹೇಗೆ ಪರ್ಫಾಮ್ ಮಾಡ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: IPL ಮಾದರಿಯಲ್ಲೇ ಮತ್ತೊಂದು ಲೀಗ್; ಬಿಸಿಸಿಐ ಮುಂದೆ ಬಿಗ್ ಪ್ರಾಜೆಕ್ಟ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ದುಲೀಪ್ ಟ್ರೋಫಿ ಕಣದಲ್ಲಿ ಸೂಪರ್ ಸ್ಟಾರ್ಗಳು
ಯುವ ಆಟಗಾರರಿಗೆ ನಾಯಕನ ಪಟ್ಟ ಒಲಿದು ಬಂದಿದೆ
ಕಣದಲ್ಲಿ ಅಗ್ನಿಪರೀಕ್ಷೆಗಿಳಿದ ಕನ್ನಡದ ಸ್ಟಾರ್ಸ್ ಯಾರೆಲ್ಲ ಇದ್ದಾರೆ?
ಬಹು ನಿರೀಕ್ಷೆ ಹುಟ್ಟು ಹಾಕಿದ್ದ ದುಲೀಪ್ ಟ್ರೋಫಿ ಟೂರ್ನಿಗೆ ಕೊನೆಗೂ ತಂಡಗಳು ಅನೌನ್ಸ್ ಆಗಿವೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಡೊಮೆಸ್ಟಿಕ್ ಕ್ರಿಕೆಟ್ ಆಡ್ತಾರೆ ಅನ್ನೋ ನಿರೀಕ್ಷೆ ಹುಸಿಯಾಗಿದೆ. ಇಬ್ಬರ ಹೊರತಾಗಿ ಟೀಮ್ ಇಂಡಿಯಾದ ಉಳಿದ ಸ್ಟಾರ್ಗಳು ಡೊಮೆಸ್ಟಿಕ್ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.
ಶ್ರೀಲಂಕಾ ಪ್ರವಾಸದಲ್ಲಿ ಮುಖಭಂಗ ಅನುಭವಿಸಿದ ಬಳಿಕ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ. ಮುಂಬರೋ ಬಾಂಗ್ಲಾದೇಶ ಸರಣಿಗೆ ಇನ್ನೂ ತಿಂಗಳಿಗೂ ಹೆಚ್ಚು ಕಾಲ ಅಂತರವಿದೆ. ಈ ಗ್ಯಾಪ್ನಲ್ಲಿ ರೆಸ್ಟ್ ಮಾಡೋ ಲೆಕ್ಕಾಚಾರದಲ್ಲಿದ್ದ ಆಟಗಾರರಿಗೆ ನಿರೀಕ್ಷೆಯಂತೆ ಹೊಸ ಟಾಸ್ಕ್ ನೀಡಿದ್ದು ಟೀಮ್ ಇಂಡಿಯಾದ ಖಾಯಂ ಸ್ಟಾರ್ಗಳನ್ನ ದುಲೀಪ್ ಟ್ರೋಫಿಯಲ್ಲಿ ಆಡಿಸಲು ಮುಂದಾಗಿದೆ.
ಇದನ್ನೂ ಓದಿ: ಲಿಂಗ ವಿವಾದದಲ್ಲಿ ಸಿಲುಕಿ ಚಿನ್ನ ಗೆದ್ದ ಬಾಕ್ಸರ್.. ಪ್ಯಾರಿಸ್ನಿಂದ ಮೂರು F-16 ಜೆಟ್ಗಳ ರಕ್ಷಣೆಯಲ್ಲಿ ತವರಿಗೆ ವಾಪಸ್..!
ಕೆಲ ದಿನಗಳ ಹಿಂದಷ್ಟೇ ಬಿಗ್ಬಾಸ್ಗಳ ಜೊತೆ ಸಭೆ ನಡೆಸಿದ್ದ ಕೋಚ್ ಗೌತಮ್ ಗಂಭೀರ್, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಮುಂಬರೋ ಟೆಸ್ಟ್ ಸರಣಿಗಳ ಸಿದ್ಧತೆಯ ಬಗ್ಗೆ ಚರ್ಚಿಸಿದ್ರು. ಸಿದ್ಧತೆಯ ಭಾಗವಾಗಿ ದುಲೀಪ್ ಟ್ರೋಫಿಯಲ್ಲಿ ಸ್ಟಾರ್ ಆಟಗಾರರನ್ನ ಆಡಿಸೋ ನಿರ್ಧಾರ ಮಾಡಿದ್ರು. ಸಪ್ಟೆಂಬರ್ 5ರಿಂದ ಆರಂಭವಾಗೋ ಟೂರ್ನಿಗೆ ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ ಟೀಮ್ ಅನೌನ್ಸ್ ಮಾಡಿದೆ.
ಕೈ ಕೊಟ್ಟ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
ಬಹು ವರ್ಷಗಳ ಬಳಿಕ ಟೀಮ್ ಇಂಡಿಯಾದ ಸ್ಟಾರ್ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಡೊಮೆಸ್ಟಿಕ್ ಅಂಗಳಕ್ಕೆ ಮರಳ್ತಾರೆ ಎನ್ನಲಾಗಿತ್ತು. ಬಿಸಿಸಿಐ ಕೂಡ ಈ ಬಗ್ಗೆ ಸೂಚನೆ ನೀಡಿತ್ತು. ರೋಹಿತ್-ಕೊಹ್ಲಿ ದುಲೀಪ್ ಟ್ರೋಫಿಯಿಂದ ಹಿಂದೆ ಸರಿದಿದ್ದಾರೆ. ಇವ್ರ ಜೊತೆಗೆ ಸೀನಿಯರ್ಗಳಾದ ಜಸ್ಪ್ರಿತ್ ಬೂಮ್ರಾ, ಆರ್ ಅಶ್ವಿನ್ ಕೂಡ ಈ ಟೂರ್ನಿಯಿಂದ ಹೊರಗುಳಿದಿದ್ದಾರೆ.
ದುಲೀಪ್ ಟ್ರೋಫಿ ಕಣದಲ್ಲಿ ಸೂಪರ್ ಸ್ಟಾರ್ಗಳು
ಕೊಹ್ಲಿ-ರೋಹಿತ್ ಹೊರತಾಗಿ ಟೀಮ್ ಇಂಡಿಯಾದ ಹಲವು ಸೂಪರ್ ಸ್ಟಾರ್ಗಳು ಟೂರ್ನಿಯಲ್ಲಿ ಆಡ್ತಿದ್ದಾರೆ. ಕೆ.ಎಲ್ ರಾಹುಲ್, ಶುಭ್ಮನ್ ಗಿಲ್, ಕುಲ್ದೀಪ್ ಯಾದವ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ರವೀಂದ್ರ ಜಡೇಜಾ, ಸೂರ್ಯಕುಮಾರ್, ಶ್ರೇಯಸ್ ಅಯ್ಯರ್ ಸೇರಿದಂತೆ ಹಲವು ಆಟಗಾರರು ಆಡಲಿದ್ದಾರೆ. ಈ ದುಲೀಪ್ ಟ್ರೋಫಿಯಲ್ಲಿ ಇವ್ರು ನೀಡೋ ಪ್ರದರ್ಶನ ಟೆಸ್ಟ್ ತಂಡದ ಸೆಲೆಕ್ಷನ್ಗೆ ಮಾನದಂಡವಾಗಲಿದೆ.
ಇದನ್ನೂ ಓದಿ:ಮಗಳು IAS ಆಗುವ ಕನಸು ಕಂಡಿದ್ದ ಅಪ್ಪ-ಅಮ್ಮ; ಕನಸು ನನಸು ಆದಾಗ ಸಂಭ್ರಮಿಸಲು ಅವರೇ ಇರಲಿಲ್ಲ
ಯುವ ಆಟಗಾರರಿಗೆ ಒಲಿದ ನಾಯಕನ ಪಟ್ಟ
ಹೊಸ ಫಾರ್ಮೆಟ್ನಲ್ಲಿ ಆಡ್ತಿರೋ ದುಲೀಪ್ ಟ್ರೋಫಿಯಲ್ಲಿ 4 ತಂಡಗಳನ್ನ ಆಯ್ಕೆ ಮಾಡಲಾಗಿದೆ. ತಂಡಗಳಲ್ಲಿ ಸೀನಿಯರ್ ಆಟಗಾರರು ಇದ್ರೂ ಕೂಡ ನಾಯಕತ್ವದ ಜವಾಬ್ದಾರಿಯನ್ನ ಯುವ ಆಟಗಾರರಿಗೆ ವಹಿಸಲಾಗಿದೆ. ಎ ತಂಡಕ್ಕೆ ಶುಭ್ಮನ್ ಗಿಲ್, ಬಿ ತಂಡಕ್ಕೆ ಅಭಿಮನ್ಯು ಈಶ್ವರನ್, ಸಿ ತಂಡಕ್ಕೆ ಋತುರಾಜ್ ಗಾಯಕ್ವಾಡ್ ಹಾಗೂ ಡಿ ತಂಡಕ್ಕೆ ಶ್ರೇಯಸ್ ಅಯ್ಯರ್ಗೆ ಸಾರಥ್ಯವನ್ನ ವಹಿಸಲಾಗಿದೆ.
ಕೆಟ್ಟ ಮೇಲೆ ಬುದ್ಧಿ ಕಲಿತ ಇಶಾನ್ ಕಿಶನ್
ಕಳೆದ ವರ್ಷ ಬಿಸಿಸಿಐ ಬಾಸ್ಗಳ ಮಾತಿಗೆ ಕ್ಯಾರೇ ಅನ್ನದೇ, ರಣಜಿ ಟ್ರೋಫಿ ಟೂರ್ನಿಯನ್ನಾಡಲು ನೋ ಎಂದಿದ್ದ ಇಶಾನ್ ಕಿಶನ್ ಕೆಟ್ಟ ಮೇಲೆ ಬುದ್ಧಿ ಕಲಿತಂತಿದೆ. ಡೊಮೆಸ್ಟಿಕ್ ಕ್ರಿಕೆಟ್ ಆಡಲ್ಲ ಎಂದು ಮೊಂಡುತನ ಸಾಧಿಸಿದ್ದ ಇಶಾನ್ ಕಿಶನ್, ಟೀಮ್ ಇಂಡಿಯಾದಿಂದ ದೂರವಾಗಿದ್ರು. ಡೊಮೆಸ್ಟಿಕ್ ಕ್ರಿಕೆಟ್ ಆಡಿದ್ರೆ ಮಾತ್ರ, ಸ್ಥಾನ ಸಿಗೋದು ಎಂದು ಬಿಸಿಸಿಐ ಎಚ್ಚರಿಕೆ ನೀಡಿತ್ತು. ಇದೀಗ ಕೆಟ್ಟ ಮೇಲೆ ಬುದ್ಧಿ ಕಲಿತಿರೋ ಕಿಶನ್ ಡೊಮೆಸ್ಟಿಕ್ ಕ್ರಿಕೆಟ್ಗೆ ಮರಳಿದ್ದು, ದುಲೀಪ್ ಟ್ರೋಫಿಯಲ್ಲಿ ಆಡಲಿದ್ದಾರೆ.
ಕಣದಲ್ಲಿ ಅಗ್ನಿಪರೀಕ್ಷೆಗಿಳಿದ ಕನ್ನಡದ ಸ್ಟಾರ್ಸ್
ಕೆ.ಎಲ್ ರಾಹುಲ್ ಮಾತ್ರವಲ್ಲದೇ ಕರ್ನಾಟಕದ ಹಲವು ಆಟಗಾರರು ಕೂಡ ಟೂರ್ನಿಯ ಭಾಗವಾಗಿದ್ದಾರೆ. ಕಮ್ಬ್ಯಾಕ್ ಕನವರಿಕೆಯಲ್ಲಿರೋ ಮಯಾಂಕ್ ಅಗರ್ವಾಲ್, ಇಂಜುರಿಯಿಂದ ಫಿಟ್ ಆಗಿ ವಾಪಾಸ್ಸಾಗ್ತಿರೋ ಪ್ರಸಿದ್ಧ ಕೃಷ್ಣ ಮೇಲೆ ಎಲ್ಲರ ಕಣ್ಣಿದೆ. ಇವ್ರ ಜೊತೆಗೆ ಯುವ ಆಟಗಾರರಾದ ವಿದ್ವತ್ ಕಾವೇರಪ್ಪ, ವೈಶಾಕ್ ವಿಜಯ್ ಕುಮಾರ್, ದೇವದತ್ತ್ ಪಡಿಕ್ಕಲ್ ಕೂಡ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.
ಬಾಂಗ್ಲಾದೇಶ ಟೆಸ್ಟ್ ಸರಣಿಯೂ ಸೇರಿದಂತೆ ಮುಂದಿನ 5 ತಿಂಗಳಲ್ಲಿ ಟೀಮ್ ಇಂಡಿಯಾ ಒಟ್ಟು 10 ಟೆಸ್ಟ್ ಪಂದ್ಯಗಳನ್ನ ಆಡಲಿದೆ. ಈ ಪಂದ್ಯಗಳಿಗೆ ಸಿದ್ಧತೆಯ ದೃಷ್ಟಿಯಿಂದ ದುಲೀಪ್ ಟ್ರೋಫಿ ಮಹತ್ವ ಪಡೆದುಕೊಂಡಿದೆ. ಸ್ಥಾನ ಪಡೆದಿರುವ ಸ್ಟಾರ್ಸ್ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಹೇಗೆ ಪರ್ಫಾಮ್ ಮಾಡ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: IPL ಮಾದರಿಯಲ್ಲೇ ಮತ್ತೊಂದು ಲೀಗ್; ಬಿಸಿಸಿಐ ಮುಂದೆ ಬಿಗ್ ಪ್ರಾಜೆಕ್ಟ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್