ಸ್ಟಾರ್​ ಕ್ರಿಕೆಟರ್​ಗೆ ಗುಡ್​ನ್ಯೂಸ್​ ಸಿಗುತ್ತಾ.. ಶ್ರೇಯಸ್ ಅಯ್ಯರ್​ಗೆ ಒಲಿಯುತ್ತಾ ಮಹತ್ವದ ಕಾಂಟ್ರ್ಯಾಕ್ಟ್?​

author-image
Bheemappa
Updated On
ಪಂತ್, ಗಿಲ್​​ ಅಲ್ಲವೇ ಅಲ್ಲ.. ರೋಹಿತ್ ನಂತರ ODI ಕ್ಯಾಪ್ಟನ್ಸಿ ಪಟ್ಟ ಈ ಆಟಗಾರನಿಗೆ ಬಹುತೇಕ ಫಿಕ್ಸ್..!
Advertisment
  • ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೇಯಸ್ ಚಾಂಪಿಯನ್ ಆಟ ಹೇಗಿದೆ
  • ದೇಸಿ ಕ್ರಿಕೆಟ್​ನಿಂದ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲೂ ಅದ್ಭುತ ಬ್ಯಾಟಿಂಗ್
  • ಕಳೆದ ಬಾರಿ IPLನ ಚಾಂಪಿಯನ್ ಟೀಮ್​ ನಾಯಕ ಆಗಿದ್ದ ಅಯ್ಯರ್

ಕಳೆದೊಂದು ವರ್ಷದಿಂದ ಶ್ರೇಯಸ್ ಅಯ್ಯರ್ ಬ್ಯಾಟ್, ಸದ್ದು ಮಾಡುತ್ತಲೇ ಇದೆ. ದೇಸಿ ಕ್ರಿಕೆಟ್, ಐಪಿಎಲ್, ಇಂಗ್ಲೆಂಡ್ ಸೀರಿಸ್ ಮತ್ತು ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲೂ ಮುಂಬೈಕರ್, ಸೈಲೆಂಟ್ ಆಗಿ ಪರ್ಫಾಮ್ ಮಾಡ್ತಿದ್ದಾರೆ. ಟೀಮ್ ಇಂಡಿಯಾದ ಬ್ಯಾಕ್​​​ ಬೋನ್ ಎನಿಸಿಕೊಂಡಿರುವ ಶ್ರೇಯಸ್​​​ಗೆ, ಸದ್ಯದಲ್ಲೇ ಗುಡ್​​ನ್ಯೂಸ್ ಸಿಗೋದು ಪಕ್ಕಾ ಆಗಿದೆ.

ಹಾರ್ಡ್​ ವರ್ಕ್​​, ಡೆಡಿಕೇಷನ್, ಕಮಿಟ್​ಮೆಂಟ್ ಜೊತೆಗೆ ಕಮ್​ಬ್ಯಾಕ್ ಮಾಡೋದು ಹೇಗೆ ಅಂತ, ಶ್ರೇಯಸ್ ಅಯ್ಯರ್​ನ ನೋಡಿ ಕಲೀಬೇಕು. ಆವತ್ತು ಬಿಗ್​ಬಾಸ್​​ಗಳ ಮಾತಿಗೆ ಬೆಲೆ ಕೊಡದೆ ದೇಸಿ ಕ್ರಿಕೆಟ್​​ ಕಡೆಗಣಿಸಿದ್ದ ಶ್ರೇಯಸ್​​, 1 ವರ್ಷ ಟೀಮ್ ಇಂಡಿಯಾದಿಂದ ದೂರ ಉಳಿದು, ವನವಾಸ ಅನುಭವಿಸಿದ್ದರು. ಆದ್ರೀಗ ತನ್ನ ತಪ್ಪಿನಿಂದ ಪಾಠ ಕಲಿತಿರುವ ಶ್ರೇಯಸ್ ಅಯ್ಯರ್, ಡೊಮೆಸ್ಟಿಕ್ ಮತ್ತು ಇಂಟರ್​ನ್ಯಾಷನಲ್​ ಕ್ರಿಕೆಟ್​​ನಲ್ಲಿ ಧೂಳೆಬ್ಬಿಸುತ್ತಿದ್ದಾರೆ.

publive-image

ಚಾಂಪಿಯನ್ಸ್​ ಟ್ರೋಫಿಯಲ್ಲಿ ಶ್ರೇಯಸ್

ಪ್ರಸಕ್ತ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಶ್ರೇಯಸ್​​​, 4 ಪಂದ್ಯಗಳಿಂದ 195 ರನ್​ ಕಲೆ ಹಾಕಿದ್ದಾರೆ. 49 ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್​ ಕಲೆಹಾಕಿರುವ ಮುಂಬೈಕರ್, 2 ಅರ್ಧಶತಕ ಸಿಡಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಶ್ರೇಯಸ್, ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನಾಡಿದ್ದರು. ಆಂಗ್ಲರ ಎದುರು ಅಬ್ಬರಿಸಿದ್ದ ಶ್ರೇಯಸ್, ತನ್ನ ತಾಖತ್ತೇನು ಅನ್ನೋದನ್ನ ವಿಶ್ವಕ್ಕೆ ತೋರಿಸಿದ್ದರು.

ಇಂಗ್ಲೆಂಡ್ ಏಕದಿನ ಸರಣಿಯಲ್ಲಿ ಶ್ರೇಯಸ್

ಆಂಗ್ಲರ ಎದುರು 3 ಏಕದಿನ ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಶ್ರೇಯಸ್, 60ರ ಬ್ಯಾಟಿಂಗ್ ಸರಾಸರಿಯಲ್ಲಿ 181 ರನ್​​ ಕಲೆಹಾಕಿದ್ದರು. ಶ್ರೇಯಸ್ ಬ್ಯಾಟ್​ನಿಂದ 2 ಅರ್ಧಶತಕಗಳು ದಾಖಲಾಗಿತ್ತು.

ಇನ್ನು ದೇಸಿ ಕ್ರಿಕೆಟ್​​ನಲ್ಲಿ ಶ್ರೇಯಸ್ ಆರ್ಭಟ ಬಲು ಜೋರಾಗಿತ್ತು. ಎದುರಾಳಿ ಬೌಲರ್​ಗಳನ್ನ ಚೆಂಡಾಡಿರುವ ಶ್ರೇಯಸ್, ರನ್​​ ಮಳೆ ಸುರಿಸಿದ್ದಾರೆ.

ದೇಸಿ ಕ್ರಿಕೆಟ್​ನಲ್ಲಿ ಶ್ರೇಯಸ್ ಧಮಾಕ

  • ಐಪಿಎಲ್​ನಲ್ಲಿ 351 ರನ್ ಮತ್ತು ಟ್ರೋಫಿ
  • ರಣಜಿ ಟೂರ್ನಿಯಲ್ಲಿ 480 ರನ್
  • ವಿಜಯ್ ಹಜಾರೆ ಟೂರ್ನಿಯಲ್ಲಿ 325​ ರನ್
  • ಸೈಯ್ಯದ್ ಮುಷ್ತಾಕ್ ಅಲಿಯಲ್ಲಿ 345 ರನ್ ಮತ್ತು ಟ್ರೋಫಿ

ಇದನ್ನೂ ಓದಿ:ಅಕ್ರಮ ಗಣಿಗಾರಿಕೆ ಪ್ರಶ್ನಿಸಿದ್ದಕ್ಕೆ ಶಿಕ್ಷೆ; ಮಠದಿಂದಲೇ ಸ್ವಾಮೀಜಿಯನ್ನ ಹೊರ ಹಾಕಿದ ಕೆಲ ಭಕ್ತರು!

publive-image

ಕಳೆದೊಂದು ವರ್ಷದಲ್ಲಿ ಶ್ರೇಯಸ್ NEXT LEVELನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಶ್ರೇಯಸ್​​​​ ಆಡಿದ ಆಟಕ್ಕೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿರೋದಂತೂ ಸುಳ್ಳಲ್ಲ.

ಶ್ರೇಯಸ್​​ಗೆ ಸಿಗುತ್ತಾ ಬಿಸಿಸಿಐ ಕಾಂಟ್ರ್ಯಾಕ್ಟ್..?​​

ಸದ್ಯ ಶ್ರೇಯಸ್​ ಅಯ್ಯರ್, ಟೀಮ್ ಇಂಡಿಯಾದ ಸಾಮಾನ್ಯ ಆಟಗಾರ. ಆದ್ರೆ ಈ ಸೈಲೆಂಟ್ ಪರ್ಫಾಮರ್​​, ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐನಿಂದ ANNUAL CONTRACT ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಬಿಗ್​ಬಾಸ್​ಗಳು ಮುಂಬೈಕರ್​ಗೆ ಯಾವ ಗ್ರೇಡ್ ಕಾಂಟ್ರ್ಯಾಕ್ಟ್ ಕೊಡ್ತಾರೋ ಗೊತ್ತಿಲ್ಲ. ಆದ್ರೆ ಅಯ್ಯರ್ ಮಾತ್ರ, ಬಿಸಿಸಿಐ ಕಾಂಟ್ರ್ಯಾಕ್ಟ್​​​​ ಪಡೆಯೋಕೆ ಅರ್ಹ ಆಟಗಾರ ಅನ್ನೋದ್ರಲ್ಲಿ, ಯಾವುದೇ ಅನುಮಾನವಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment