RCB ವಿಕೆಟ್ ಕೀಪರ್​ ಸೇರಿ 5 ಪ್ಲೇಯರ್ಸ್​ಗೆ ಬಿಗ್​ ಶಾಕ್​.. ಸೆಂಟ್ರಲ್​ ಕಂಟ್ರಾಕ್ಟರ್​​ನಿಂದ ಔಟ್

author-image
Bheemappa
Updated On
RCB ವಿಕೆಟ್ ಕೀಪರ್​ ಸೇರಿ 5 ಪ್ಲೇಯರ್ಸ್​ಗೆ ಬಿಗ್​ ಶಾಕ್​.. ಸೆಂಟ್ರಲ್​ ಕಂಟ್ರಾಕ್ಟರ್​​ನಿಂದ ಔಟ್
Advertisment
  • A+ ಕ್ಯಾಟಗರಿಯಲ್ಲಿ ಸ್ಥಾನ ಪಡೆದಿರುವ ಸ್ಟಾರ್ ಆಟಗಾರರು ಇವರೇ!
  • RCB ವಿಕೆಟ್ ಕೀಪರ್​ ಸೇರಿ ಯಾರ್ ಯಾರನ್ನು ತೆಗೆದು ಹಾಕಲಾಗಿದೆ?
  • ಈ ಕೇಂದ್ರ ಒಪ್ಪಂದದಲ್ಲಿ ರವಿಚಂದ್ರನ್ ಅಶ್ವಿನ್​ಗೆ ಸ್ಥಾನ ಇದೆಯಾ..?

ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಕೊನೆಗೂ 2024-25ರ ಕೇಂದೀಯ ಒಪ್ಪಂದದ ಆಟಗಾರರ ಹೆಸರುಗಳನ್ನು ಬಿಡುಗಡೆ ಮಾಡಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಬುಮ್ರಾ, ಜಡೇಜಾ ಅವರು A+ ಕ್ಯಾಟಗರಿಯಲ್ಲಿ ವಾರ್ಷಿಕ 7 ಕೋಟಿ ಹಣ ಪಡೆಯುತ್ತಿದ್ದಾರೆ. ಆದರೆ ಪಟ್ಟಿಯಲ್ಲಿ ಕೆಲ ಆಟಗಾರರನ್ನು ಸೇರ್ಪೆಡೆ ಮಾಡಿಕೊಂಡ್ರೆ, ಐವರು ಪ್ಲೇಯರ್​ಗಳ ಹೆಸರನ್ನು ಕೈಬಿಡಲಾಗಿದೆ.

ರಿಷಬ್​ ಪಂತ್ ಅವರಿಗೆ ಬಿ ವಿಭಾಗದಿಂದ ಎ ವಿಭಾಗಕ್ಕೆ ಬಡ್ತಿ ನೀಡಲಾಗಿದೆ. ಬಿಸಿಸಿಐನ ವಾರ್ಷಿಕ ಕೇಂದ್ರೀಯ ಒಪ್ಪಂದದಲ್ಲಿ 2023-24ರ ಸೀಸನ್​​ನಲ್ಲಿ ಹೆಸರು ಪಡೆದಿದ್ದ ಆರ್​ಸಿಬಿ ವಿಕೆಟ್ ಕೀಪರ್​​ ಜಿತೇಶ್ ಶರ್ಮಾ ಹಾಗೂ ಮಾಜಿ ಸ್ಪಿನ್ನರ್ ಆರ್​​.ಆಶ್ವಿನ್ ಸೇರಿದಂತೆ ಇನ್ನು ಮೂವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಹೀಗಾಗಿ ಒಪ್ಪಂದದಂತೆ ಇವರಿಗೆ ಇನ್ಮುಂದೆ ಹಣ ಬರುವುದಿಲ್ಲ.

publive-image

ಶಾರ್ದೂಲ್ ಠಾಕೂರ್​; ಇವರು 2023ರಲ್ಲಿ ಟೀಮ್ ಇಂಡಿಯಾದಲ್ಲಿ ಕೊನೆಯದಾಗಿ ಆಡಿದ್ದರು. ಇಂಜುರಿಗೆ ತುತ್ತಾಗಿದ್ದರಿಂದ ರಣಜಿ ಟ್ರೋಫಿಯಲ್ಲಿ 2ನೇ ಹಂತದಲ್ಲಿ ಮಾತ್ರ ಮೈದಾನದಲ್ಲಿ ಕಾಣಿಸಿದ್ದರು. ಬಳಿಕ ಸರ್ಜರಿಗೆ ಒಳಗಾಗಿದ್ದರು. ಸದ್ಯ ಇವರನ್ನು 2024-25ರ ವಾರ್ಷಿಕ ಒಪ್ಪಂದದಿಂದ ಕೈಬಿಡಲಾಗಿದೆ.

ರವಿಚಂದ್ರನ್ ಅಶ್ವಿನ್; ಇವರನ್ನೂ ಒಪ್ಪಂದದಿಂದ ಹೊರಗಿಡಲಾಗಿದೆ. 2024ರ ಡಿಸೆಂಬರ್​ನಲ್ಲಿ ಟೀಮ್ ಇಂಡಿಯಾದ ಎಲ್ಲ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದಾರೆ. ಅಶ್ವಿನ್ ಗಬ್ಬಾದಲ್ಲಿ ನಡೆದ ಆಸ್ಟ್ರೇಲಿಯಾದ ವಿರುದ್ಧದ ಟೆಸ್ಟ್​ನಲ್ಲಿ ಕೊನೆಯದಾಗಿ ಆಡಿದ್ದರು.

ಆವೇಶ್ ಖಾನ್; 2024ರ ನವೆಂಬರ್​ನಲ್ಲಿ ಟೀಮ್ ಇಂಡಿಯಾದಲ್ಲಿ ಕೊನೆಯದಾಗಿ ಆವೇಶ್ ಖಾನ್ ಬೌಲಿಂಗ್ ಮಾಡಿದ್ದರು. ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಸದ್ಯ ನಡೆಯುತ್ತಿರುವ ಐಪಿಎಲ್​ ಸೀಸನ್​ನಲ್ಲಿ ಒಳ್ಳೆಯ ಪರ್ಫಾಮೆನ್ಸ್​ ತೋರುತ್ತಿದ್ದಾರೆ. ಆದ್ರೆ ದುರಾದೃಷ್ಟವಶಾತ್ ಆವೇಶ್​ ಖಾನ್​ರನ್ನ ಒಪ್ಪಂದದಿಂದ ಹೊರಗೆ ಇಡಲಾಗಿದೆ.

ಇದನ್ನೂ ಓದಿ:ನೋ ಪಿಜ್ಜಾ, ನೋ ಮಟನ್, ಒನ್ಲಿ ಕ್ರಿಕೆಟ್​.. 14ರ ವೈಭವ್ ಸೂರ್ಯವಂಶಿ ಕಮಿಟ್​ಮೆಂಟ್​ ಹೇಗಿದೆ?

publive-image

ಜಿತೇಶ್ ಶರ್ಮಾ; ಸದ್ಯ ಆರ್​ಸಿಬಿ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. 2024ರ ಜನವರಿಯಿಂದ ಟೀಮ್ ಇಂಡಿಯಾದಲ್ಲಿ ಜಿತೇಶ್ ಶರ್ಮಾ ಆಡಿಲ್ಲ. ಟಿ20 ವರ್ಲ್ಡ್​​ಕಪ್​ ಅವಕಾಶವನ್ನು ಕಳೆದುಕೊಂಡಿದ್ದಾರೆ. ಸದ್ಯ ಇವರನ್ನು ಕೇಂದ್ರಿಯ ಪಟ್ಟಿಯಿಂದ ತೆಗೆದು ಹಾಕಲಾಗಿದೆ.

KS ಭರತ್; ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕರೂ ಭರತ್ ತಮ್ಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ರಿಷಭ್ ಪಂತ್ ಟೀಮ್ ಇಂಡಿಯಾಕ್ಕೆ ಮರಳಿದ್ರೆ, ಬ್ಯಾಕ್​ಅಪ್​ ಆಗಿ ಧೃವ್ ಜುರೆಲ್​ ಅವರನ್ನು ವಿಕೆಟ್​ ಕೀಪರ್ ಆಗಿದ್ದಾರೆ. ಹೀಗಾಗಿ ಭರತ್​ ಅವಕಾಶದಿಂದ ವಂಚಿತರಾಗಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment