/newsfirstlive-kannada/media/post_attachments/wp-content/uploads/2024/08/Rohit-Sharma_KL-Rahul.jpg)
ಎಲ್ಲಾ ಆಟಗಾರರಿಗೂ ಅಂತ್ಯ ಇದ್ದೇ ಇರುತ್ತೆ. ಆದ್ರೆ, ಇಂಥಹ ಟೈಮ್ನಲ್ಲಿ ಬಿಸಿಸಿಐನ ಸೂಚನೆ ಎಷ್ಟು ಸರಿ ಎಂಬ ಪ್ರಶ್ನೆ ಮೂಡುತ್ತೆ. ಯಾಕಂದ್ರೆ. ಇಂಗ್ಲೆಂಡ್ ಸರಣಿಯನ್ನಾಡುವ ಮುನ್ನವೇ ಚಾಂಪಿಯನ್ಸ್ ಟ್ರೋಫಿಯ ಅಂತ್ಯದೊಂದಿಗೆ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ವೃತ್ತಿ ಜೀವನಕ್ಕೆ ಅಂತ್ಯವಾಡುವ ಸೂಚನೆ ನೀಡಿದೆ. ಇದು ರೋಹಿತ್ ಶರ್ಮಾರ ಆಟದ ಮೇಲೂ ಎಫೆಕ್ಟ್ ಆಗುತ್ತೆ. ತಂಡದ ಫಲಿತಾಂಶದ ಮೇಲೂ ಪರಿಣಾಮ ಬೀರುತ್ತೆ. ಹೀಗಾಗಿ ಬಿಸಿಸಿಐ, ಈ ಹೇಳಿಕೆ ಎಷ್ಟು ಸರಿ ಎಂಬ ಪ್ರಶ್ನೆಯನ್ನು ಉದ್ಬವಿಸುವಂತೆ ಮಾಡಿದೆ.
ಕೊಹ್ಲಿಗೊಂದು ನ್ಯಾಯ.. ರೋಹಿತ್ಗೆ ಒಂದು ನ್ಯಾಯ..!
ರೋಹಿತ್ ಶರ್ಮಾಗೆ ನಿಮ್ ದಾರಿ ನೋಡಿಕೊಳ್ಳಲು ಸೂಚಿಸಿರುವ ಬಿಸಿಸಿಐ, ವಿರಾಟ್ ಕೊಹ್ಲಿ ವಿಚಾರದಲ್ಲಿ ಮಾತ್ರ ಸಾಫ್ಟ್ ಕಾರ್ನರ್ ತೋರಿದೆ. ಮತ್ತಷ್ಟು ದಿನಗಳ ಕಾಲ ಏಕದಿನ ಫಾರ್ಮೆಟ್ನಲ್ಲಿ ಮುಂದುವರಿಸುವ ಅಭಯ ನೀಡಿದೆ. ಇದು ಸಹಜವಾಗೇ ರೋಹಿತ್ ಶರ್ಮಾಗೊಂದು ನ್ಯಾಯ. ವಿರಾಟ್ಗೊಂದು ನ್ಯಾಯನಾ ಎಂಬ ಪ್ರಶ್ನೆ ಮಾಡುವಂತೆ ಮಾಡಿದೆ. ಇದಕ್ಕೆ ಕಾರಣ ಇಬ್ಬರ ಆಟ ಹಾಗೂ ವಯಸ್ಸು ಹಾಗೂ ಫಾರ್ಮ್.
ಟೆಸ್ಟ್ ಫಾರ್ಮೆಟ್ಗೆ ಹೋಲಿಕೆ ಮಾಡಿದ್ರೆ, ಏಕದಿನ ಫಾರ್ಮೆಟ್ನಲ್ಲಿ ವಿರಾಟ್ಗಿಂತ ರೋಹಿತ್, ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಇಬ್ಬರ ವಯಸ್ಸಿನ ಅಂತರದಲ್ಲೂ ಹೆಚ್ಚೇನಿಲ್ಲ. ಹೀಗಾಗಿ ರೋಹಿತ್ ಶರ್ಮಾ ವಿಚಾರದಲ್ಲಿ ಬಿಸಿಸಿಐ ಆಟ ಆಡ್ತಿದೆಯಾ ಎಂಬ ಅನುಮಾನ ಮೂಡಿಸದಿರಲ್ಲ. ಅಷ್ಟೇ ಅಲ್ಲ! ಏಕದಿನ ಫಾರ್ಮೆಟ್ಗೆ ಹೊಸ ನಾಯಕನಾಗಿ ಯಾರನ್ನ ನೇಮಿಸಬೇಕು ಅನ್ನೋ ಸ್ಪಷ್ಟ ನಿಲುವಿಗೂ ಬಂದಾಗಿದೆಯಂತೆ.
ಕೊನೆ ಸೆಲೆಕ್ಷನ್ ಮೀಟಿಂಗ್ನಲ್ಲಿ ರೋಹಿತ್ ಶರ್ಮಾ ಜೊತೆ ಸೆಲೆಕ್ಟರ್ಸ್, ಬಿಸಿಸಿಐ ಚರ್ಚೆ ನಡೆಸಿದೆ. ಚಾಂಪಿಯನ್ಸ್ ಟ್ರೋಫಿ ನಂತರ ಭವಿಷ್ಯ ನಿರ್ಧರಿಸಲು ತಿಳಿಸಿದೆ. ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಹಾಗೂ ಏಕದಿನ ವಿಶ್ವಕಪ್ ದೃಷ್ಟಿಯಿಂದ ಲಾಂಗ್ ಟರ್ಮ್ ಪ್ಲಾನ್ನಲ್ಲಿದೆ ಎಂದರು ಬಿಸಿಸಿಐ ಅಧಿಕಾರಿ.
ಕ್ಯಾಪ್ಟನ್ ರೋಹಿತ್ ಏನಂದ್ರು?
ಕೆಲ ವರ್ಷಗಳಿಂದ ರಿಪೋರ್ಟ್ಸ್ ಬರ್ತಾನೆ ಇದೆ. ನಾನು ರಿಪೋರ್ಟ್ ಬಗ್ಗೆ ಕ್ಲಾರಿಫೈ ಮಾಡಲು ಇಲ್ಲಿಲ್ಲ. ನನಗೀಗ ಇಂಗ್ಲೆಂಡ್ ಹಾಗೂ ಚಾಂಫಿಯನ್ಸ್ ಟ್ರೋಫಿ ಮುಖ್ಯವಾಗಿದೆ. ನನ್ನ ಫೋಕಸ್, ಈ ಗೇಮ್ಸ್ ಮೇಲಿದೆ. ಈ ನಂತರ ಏನಾಗಲಿದೆ ಎಂದು ನೋಡೋಣ ಎಂದಿದ್ದಾರೆ ಕ್ಯಾಪ್ಟನ್ ರೋಹಿತ್ ಶರ್ಮಾ.
ಇದನ್ನೂ ಓದಿ:ಬೆಳಗ್ಗೆ ಎದ್ದ ಕೂಡಲೇ ಸ್ಮಾರ್ಟ್ಫೋನ್ ನೋಡುತ್ತೀರಾ? ಈ ಸಮಸ್ಯೆ ಕಾಡುತ್ತೆ ಹುಷಾರ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ