/newsfirstlive-kannada/media/post_attachments/wp-content/uploads/2024/05/Gambhir_2.jpg)
ಗೌತಮ್ ಗಂಭೀರ್.. ಟೀಮ್ ಇಂಡಿಯಾದ ಚುಕ್ಕಾಣಿ ಹಿಡಿದು ಜಸ್ಟ್ ಆರೇ ಆರು ತಿಂಗಳಾಗಿವೆ. 6 ತಿಂಗಳಲ್ಲೇ ಟೀಮ್ ಇಂಡಿಯಾದ ಆಂತರಿಕ ಕಲಹಗಳು ಒಂದೊಂದಾಗಿ ಹೊರಬೀಳ್ತಿವೆ. ಇದರ ಮಧ್ಯೆ ಗೌತಮ್ ಗಂಭೀರ್ ಭವಿಷ್ಯದ ಪ್ರಶ್ನೆಯೂ ಉದ್ಭವ ಆಗಿದೆ.
ಗೌತಮ್ ಗಂಭೀರ್ ಟೀಮ್ ಇಂಡಿಯಾದ ಹೆಡ್ ಕೋಚ್ ಆದ್ಮೇಲಿಂದ ನಿರೀಕ್ಷೆ ಡಬಲ್ ಆಗಿತ್ತು. ಟೀಮ್ ಇಂಡಿಯಾಗೆ ತಕ್ಕ ಕೋಚ್ ಸಿಕ್ಕಾಯ್ತು. ಇನ್ಮುಂದೆ ನಮ್ದೇ ಹವಾ ಅಂತಾ ಕೊಂಡಾಡಿದ್ದಾಯ್ತು. ಯಾವ ಟೀಮ್ ಇಂಡಿಯಾ ಕೋಚ್ ಎಂಟ್ರಿಗೂ ಸಿಗದಷ್ಟು ಬಿಲ್ಡಪ್ ಗಂಭೀರ್ಗೆ ಸಿಕ್ಕಿತ್ತು. ಗಂಭೀರ್ ಬಂದಾಯ್ತು ಗೆಲುವು ನಮ್ದೇ ಅನ್ನೋ ರೇಂಜ್ನಲ್ಲಿ ಹೊಗಳಿ ಅಟ್ಟಕ್ಕೇರಿಸಿದ್ದಾಯ್ತು. ಅಖಾಡಕ್ಕಿಳಿದ ಗಂಭೀರ್, ಫಸ್ಟ್ ಸಿರೀಸ್ನಲ್ಲಿ ಮಾಡಿದ ಚಮತ್ಕಾರಕ್ಕೆ, ಬಿಟ್ಟಿ ಡೈಲಾಗ್ಸ್ಗೆ ಇದು ಅಸಲಿ ಕೋಚಿಂಗ್ ಸ್ಟ್ರೈಲ್ ಅಂತಾನೇ ಕೊಂಡಾಡಿದ್ರು. ಆದ್ರೀಗ ಇದೇ ಹೆಡ್ ಕೋಚ್ ಗಂಭೀರ್ ಭವಿಷ್ಯ ಅಂತತ್ರಕ್ಕೆ ಸಿಲುಕಿದೆ.
ಇದನ್ನೂ ಓದಿ:ರೋಹಿತ್ರನ್ನು ಹೊರಗಿಟ್ಟಿದ್ದು ಗಂಭೀರ ಅಲ್ಲ; ಈ ನಿರ್ಧಾರದ ಹಿಂದೆ ಮತ್ತೊಬ್ಬ ವ್ಯಕ್ತಿಯ ಕೈವಾಡ..!
ಗಂಭೀರ್ ತಲೆದಂಡಕ್ಕೆ ಕೌಂಟ್ಡೌನ್..!
6 ತಿಂಗಳ ಹಿಂದೆ ಹೆಡ್ ಕೋಚ್ ಹುದ್ದೆಗೇರಿದ್ದ ಗಂಭೀರ್, ಹೆಡ್ ಕೋಚ್ ಸ್ಥಾನ ಕಳೆದುಕೊಳ್ಳುವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರಣ ಕಳೆದ ಟೀಮ್ ಇಂಡಿಯಾದ ಸಾಲು ಸಾಲು ವೈಫಲ್ಯಗಳು. ಟಿ20 ಫಾರ್ಮೆಟ್ನಲ್ಲಿ ಹೊರತು ಪಡೆಸಿದ್ರೆ ಗಂಭೀರ್ ಅಂಡರ್ನಲ್ಲಿ ಸಾಲು ಸಾಲು ಸೋಲುಗಳನ್ನ ಭಾರತ ಅನುಭವಿಸಿದೆ. ಶ್ರೀಲಂಕಾ ಎದುರಿನ ಏಕದಿನ ಸರಣಿ.. ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಯ ಮುಖಭಂಗ.. ಸದ್ಯ ನಡೀತಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಹಿನ್ನಡೆ ಹಾಗೂ ಟೀಮ್ ಇಂಡಿಯಾ ಆಟಗಾರರ ಪ್ರದರ್ಶನ ಪಾತಾಳಕ್ಕೆ ಕುಸಿದಿದೆ. ಆಂತರಿಕೆ ಕಚ್ಚಾಟಕ್ಕೂ ನಾಂದಿಯಾಡಿದೆ. ಇದೆಲ್ಲವೂ ಕೋಚ್ ಗಂಭೀರ್, ಕಾರ್ಯವೈಖರಿಯನ್ನೇ ಪ್ರಶ್ನೆ ಮಾಡಿಲ್ಲ. ಗಂಭೀರ್, ಕೋಚ್ ತಲೆದಂಡಕ್ಕೂ ನಾಂದಿಯಾಡಿದೆ.
ಕೋಚ್ ಬದಲಾವಣೆಗೆ ಬಿಗ್ಬಾಸ್ಗಳ ಚಿಂತನೆ
ಗಂಭೀರ್ ಕಾರ್ಯ ವೈಖರಿಯ ಬಗ್ಗೆ ತೀವ್ರ ಅಸಮಾಧಾನ ಹೊಂದಿರುವ ಬಿಗ್ಬಾಸ್ಗಳು, ಕೋಚ್ ಬದಲಾವಣೆ ಬಗ್ಗೆ ಚಿಂತನೆ ನಡೆಸಿದ್ದಾರೆ. ಇದು ಸಹಜವಾಗೇ ಗೌತಮ್ ಗಂಭೀರ್, ಕೋಚ್ ಹುದ್ದೆ ಅಲುಗಾಡುವಂತೆ ಮಾಡಿದೆ. ಹುದ್ದೆಯಿಂದ ಕಿತ್ತೆಸೆಯೋ ಮುನ್ನ ಬಿಸಿಸಿಐ ಬಿಗ್ಬಾಸ್ಗಳು, ಗಂಭೀರ್ಗೆ 2 ತಿಂಗಳಲ್ಲಿ ಎರಡು ಟಾಸ್ಕ್ ನೀಡಿದ್ದಾರೆ. ಆ ಎರಡು ಟಾಸ್ ಗೆದರಷ್ಟೇ ಕೋಚ್ ಆಗಿ ಉಳಿಯುವ ಷರತ್ತು ಮುಂದಿಟ್ಟಿದ್ದಾರೆ.
ಇದನ್ನೂ ಓದಿ:2025ರಲ್ಲಿ ಟೇಕ್ ಆಫ್ ಆಗಿ 2024ರಲ್ಲಿ ಲ್ಯಾಂಡ್ ಆದ ವಿಮಾನ.. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ!
ಸಿಡ್ನಿಯಲ್ಲಿ ಸೋತರೆ ಹೊಸ ಕೋಚ್
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ, ಈಗಾಗಲೇ ಸಾಲು ಸಾಲು ಸೋಲುಂಡಿದೆ. ಸರಣಿ ಸಮಬಲ ಮಾಡಿಕೊಳ್ಳುವ ತನಕದಲ್ಲಿದೆ. ಇದೇ ಸಿಡ್ನಿ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಮುಖಭಂಗ ಅನುಭವಿಸಿದ್ರೆ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ಉಳಿಯೋದು ಅನುಮಾನವಾಗಿದೆ.
ಗಂಭೀರ್ ಅಂಡರ್ನಲ್ಲಿ ಟೀಮ್ ಇಂಡಿಯಾ ಗೆದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಹೀಗಾಗಿ ಗೌತಮ್ ಗಂಭೀರ್ ಭವಿಷ್ಯ ಪ್ರಶ್ನಾರ್ಹವಾಗಿದೆ. ಇವತ್ತಿನಿಂದ ಆರಂಭವಾಗಿರುವ ಸಿಡ್ನಿ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಗೆದರಷ್ಟೇ ಗೌತಮ್ ಗಂಭೀರ್ಗೆ ಉಳಿಗಾಲ ಇಲ್ಲ. ಟೆಸ್ಟ್ ತಂಡದ ಕೋಚ್ ಹುದ್ದೆಯಿಂದ ಗೇಟ್ ಪಾಸ್ ಫಿಕ್ಸ್.
ಟ್ರೋಫಿ ಸೋತರೆ ವೈಟ್ಬಾಲ್ನಿಂದ ಔಟ್
ಸಿಡ್ನಿ ಸವಾಲು ಗೆಲ್ಲುವ ಟಾಸ್ಕ್ ನೀಡಿರುವ ಬಿಸಿಸಿಐ ಬಿಗ್ಬಾಸ್ಗಳು, ವೈಟ್ ಬಾಲ್ ಫಾರ್ಮೆಟ್ ಕೋಚ್ ಆಗಿ ಉಳಿಯಬೇಕಾದ್ರೆ ಫೆಬ್ರವರಿ 19ರಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲೇಬೇಕಾದ ಷರತ್ತು ವಿಧಿಸಿದ್ದಾರೆ. ಒಂದು ವೇಳೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತದೇ ವೈಫಲ್ಯ ಅನುಭವಿಸಿದ್ರೆ. ಟೆಸ್ಟ್ ಮಾತ್ರವಲ್ಲ.. ವೈಟ್ಬಾಲ್ ಫಾರ್ಮೆಟ್ನಿಂದಲೂ ಗೌತಮ್ ಗಂಭೀರ್ ಕಿಕ್ ಔಟ್ ಆಗ್ತಾರೆ ಎನ್ನಲಾಗ್ತಿದೆ.
ಇದನ್ನೂ ಓದಿ:ಅಮ್ಮ ನೀನೇಕೆ ಎಷ್ಟು ಕ್ರೂರಿಯಾದೆ..? ಮುದ್ದಾದ ಅವಳಿ ಮಕ್ಕಳ ಜೀವ ತೆಗೆದ ತಾಯಿ..
2 ತಿಂಗಳಲ್ಲಿ.. 2 ಟಾಸ್ಕ್ ಗೆಲ್ತಾರಾ ಗಂಭೀರ್?
ಎಂಥವರಿಗೂ ಇಂಥ ಪ್ರಶ್ನೆ ಕಾಡೇ ಕಾಡುತ್ತೆ. ಗಂಭೀರ್ ಕೋಚ್ ಆಗಿ ವೈಫಲ್ಯ ಕಂಡಿರುವುದೇ ಏಕದಿನ ಹಾಗೂ ಟೆಸ್ಟ್ ಫಾರ್ಮೆಟ್ನಲ್ಲಿ. ಏಕದಿನ ಫಾರ್ಮೆಟ್ನಲ್ಲಿ ಸಿಂಹಳೀಯರ ಎದುರೇ ಸೋತಿರುವ ಟೀಮ್ ಇಂಡಿಯಾ, ಚಾಂಪಿಯನ್ಸ್ ಟ್ರೋಫಿಯಲ್ಲಿ ಬಲಾಢ್ಯ ತಂಡಗಳಿಗೆ ಫೈಟ್ ನೀಡುತ್ತಾ ಅನ್ನೋದೇ ಪ್ರಶ್ನೆ. ಕಳೆದ 6 ತಿಂಗಳಿಂದ ಏಕದಿನ ಸರಣಿಯನ್ನೇ ಆಡದ ಟೀಮ್ ಇಂಡಿಯಾ, ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಇಂಗ್ಲೆಂಡ್ ಎದುರು ಕೇವಲ 3 ಏಕದಿನ ಪಂದ್ಯಗಳನ್ನಾಡಲಿದೆ. ಇಷ್ಟರಲ್ಲೇ ಕೋಚ್ ಗಂಭೀರ್, ಸಕ್ಸಸ್ ಫುಲ್ ಟೀಮ್ ಕಟ್ಟಿ ಗೆಲ್ತಾರಾ ಅಂದ್ರೆ ನಿಜಕ್ಕೂ ಡೌಟೇ.
ಇದನ್ನೂ ಓದಿ:BBK11; ಬಿಗ್ಬಾಸ್ನಲ್ಲಿ ಸಿಹಿ ಮುತ್ತಿನ ಸುರಿಮಳೆ.. ಯಾರು ಯಾರಿಗೆ ಎಷ್ಟು ಕಿಸ್ ಕೊಟ್ಟರು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್