ಕೊಹ್ಲಿ ನಾಯಕತ್ವ ತೊರೆದಾಗಲೂ ಕೇಳಿಬಂದಿತ್ತು ಇವರ ಹೆಸರು
ಟೆಸ್ಟ್ ಪಂದ್ಯಗಳಿಗೆ ಹೇಳಿ ಮಾಡಿಸಿದ ಸ್ಟಾರ್ ಆಟಗಾರ ಇವರು
ಬಿಸಿಸಿಐ ನಿರ್ಧಾರದ ವಿರುದ್ಧ ನಡೀತಿದೆ ಭಾರೀ ಚರ್ಚೆ
ರೋಹಿತ್ ಶರ್ಮಾಗೆ ಟೆಸ್ಟ್ ಕ್ಯಾಪ್ಟನ್ಸಿ ನೀಡಿ ಬಿಸಿಸಿಐ ತಪ್ಪು ಮಾಡ್ತಾ? ಅಂದು ರಹಾನೆಗೆ ಟೆಸ್ಟ್ ಕ್ಯಾಪ್ಟನ್ಸಿ ಪಟ್ಟ ನೀಡದೆ ಎಡವಿಬಿಡ್ತಾ? ಇಂಥದ್ದೊಂದು ಪ್ರಶ್ನೆ ಉದ್ಭವವಾಗ್ತಿದೆ. ಅಷ್ಟೇ ಅಲ್ಲ, ಕ್ರಿಕೆಟ್ ವಲಯದಲ್ಲೂ ರಹಾನೆ ಬಗ್ಗೆ ಇಂಥದ್ದೊಂದು ಚರ್ಚೆ ನಡೀತಿದೆ.
ಅಜಿಂಕ್ಯಾ ರಹಾನೆ.. ಟೀಮ್ ಇಂಡಿಯಾದ ಕ್ಲಾಸ್ ಬ್ಯಾಟ್ಸ್ಮನ್.. ಕಂಡೀಷನ್ಸ್ಗೆ ತಕ್ಕಂತೆ ತನ್ನನ್ನ ತಾನೂ ಮೋಲ್ಡ್ ಮಾಡಿಕೊಳ್ಳುವ ರಹಾನೆ, ಸ್ವದೇಶದಲ್ಲೇ ಅಲ್ಲ. ವಿದೇಶದಲ್ಲೂ ಬ್ಯಾಟಿಂಗ್ ಝಲಕ್ ತೋರಿಸ್ತಾರೆ. ಇನ್ಫ್ಯಾಕ್ಟ್ ಈ ಮುಂಬೈಕರ್ ಟೆಕ್ನಿಕಲಿ ಹೈರೇಂಜ್ ಪ್ಲೇಯರ್ ಅನ್ನೋದಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಕಟ್ಟಿದ ಹೋರಾಟದ ಇನ್ನಿಂಗ್ಸೇ ಸಾಕ್ಷಿ.
ಆಸ್ಟ್ರೇಲಿಯನ್ನರ ದಾಳಿಗೆ ಸಿಲುಕಿ ಹಿಟ್ಮ್ಯಾನ್ ರೋಹಿತ್, ಶುಭ್ಮನ್ ಗಿಲ್, ಚೇತಶ್ವರ ಪೂಜಾರ, ವಿರಾಟ್ ಕೊಹ್ಲಿ ಪವಿಲಿಯನ್ ಪರೇಡ್ ನಡೆಸಿದ್ರೆ, ರಹಾನೆ ಪಾಲಿಗೆ ಪುನರುಜ್ಜೀವನದ ಟೆಸ್ಟ್ ಅಂತಾನೇ ಬಿಂಬಿತವಾಗಿರೋ WTC ಫೈನಲ್ನಲ್ಲಿ ಅದ್ಭುತ ಆಟದ ಮೂಲಕ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಿದರು. ಆದ್ರೆ ಇದೇ ಇನ್ನಿಂಗ್ಸ್ ರಹಾನೆಯನ್ನ ಟೆಸ್ಟ್ ಕ್ರಿಕೆಟ್ನ ನಾಯಕನನ್ನಾಗಿ ನೇಮಿಸಬೇಕು ಎಂಬ ಚರ್ಚೆಯನ್ನ ಹುಟ್ಟಿಹಾಕಿದೆ. ಇದಕ್ಕೆಲ್ಲಾ ಕಾರಣ ರೋಹಿತ್ ಶರ್ಮಾರ ಟೆಸ್ಟ್ ಕ್ಯಾಪ್ಟನ್ಸಿ.
ಟೆಸ್ಟ್ ಕ್ರಿಕೆಟ್ಗೆ ಬೇಕಿರಲಿಲ್ಲ ರೋಹಿತ್ ನಾಯಕತ್ವ
ನಿಜಕ್ಕೂ ಇದು ಸತ್ಯ. ಯಾಕಂದ್ರೆ, ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ನ ಅಧಿಪತಿಯಾಗಿ ಮರೆಯುತ್ತಿದ್ದ ಕಾಲದಲ್ಲೇ, ವಿರಾಟ್ ಟೆಸ್ಟ್ ಕ್ಯಾಪ್ಟನ್ಸಿ ತ್ಯಜಿಸಬೇಕಾಯ್ತು. ಅಂದು ಹಿಟ್ಮ್ಯಾನ್ ರೋಹಿತ್ ಶರ್ಮಾಗೆ ಪಟ್ಟ ಕಟ್ಟಿದ್ದ ಬಿಸಿಸಿಐ, ನಿಜಕ್ಕೂ ರಿಯಲ್ ಲೀಡರ್ಶಿಪ್ ಹೊಂದಿದ್ದ ವೈಸ್ ಕ್ಯಾಪ್ಟನ್ ರಹಾನೆಯನ್ನು ಮರೆತಿತ್ತು. ಅಷ್ಟೇ ಅಲ್ಲ, ರಹಾನೆಯನ್ನು ಸೈಡ್ಲೈನ್ ಮಾಡಿ ತಂಡದಿಂದಲೂ ಗೇಟ್ಪಾಸ್ ನೀಡಿತ್ತು. ಆದ್ರೆ ಅಂದು ಹಿಟ್ಮ್ಯಾನ್ಗೆ ಟೆಸ್ಟ್ ಕ್ರಿಕೆಟ್ನ ಪಟ್ಟ ಕಟ್ಟಿದ ಪ್ರತಿಫಲವೇ ಟೀಮ್ ಇಂಡಿಯಾ, ಇಂದು ಬೆಸ್ಟ್ ಪರ್ಫಾಮೆನ್ಸ್ ನೀಡುವಲ್ಲಿ ಎಡವುತ್ತಿದೆ.
ಕ್ರಿಕೆಟ್ನ ರಿಯಲ್ ಗೇಮ್ನಲ್ಲಿ ಅಸಲಿ ಲೀಡರ್ ಸ್ಕಿಲ್ಸ್ ತೋರಿಸಬೇಕಿದ್ದ ರೋಹಿತ್, ಫುಲ್ ಸ್ಟ್ರೆಂಥ್ ಟೀಮ್ನೊಂದಿಗೂ ಸಕ್ಸಸ್ ಕಾಣೋಕೆ ತಿಣುಕಾಡ್ತಿದ್ದಾರೆ. ಅಷ್ಟೇ ಅಲ್ಲ, ಗೇಮ್ಪ್ಲಾನ್, ಸ್ಟ್ರಾಟರ್ಜಿಗಳಲ್ಲೂ ವಿಫಲರಾಗ್ತಿರೋ ರೋಹಿತ್, ಬೌಲರ್ಗಳ ಮೇಲೆ ಆನ್ಫೀಲ್ಡ್ನಲ್ಲೇ ಕೆಂಡಕಾರುತ್ತಿದ್ದಾರೆ. ಇದು ಸಹಜವಾಗೇ ರೋಹಿತ್ ಶರ್ಮಾರ ಕ್ಯಾಪ್ಟನ್ಸಿಯನ್ನ ಪ್ರಶ್ನಿಸುವಂತೆ ಮಾಡಿದೆ. ರೋಹಿತ್ ಬದಲಿಗೆ ರಹಾನೆಗೆ ಪಟ್ಟಬೇಕಿತ್ತು ಎಂಬ ಅಭಿಪ್ರಾಯಗಳೂ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ. ಇದು ನಿಜ ಕೂಡ.
ಟೆಸ್ಟ್ ಕ್ರಿಕೆಟ್ಗೆ ಬೇಕಿತ್ತು ರಹಾನೆಯಂಥ ಕ್ಯಾಪ್ಟನ್
ವಿರಾಟ್ ಪದತ್ಯಾಗದ ಬಳಿಕ ನಿಜಕ್ಕೂ ಈ ಸ್ಥಾನಕ್ಕೆ ಅರ್ಹ ವ್ಯಕ್ತಿ ಅಜಿಂಕ್ಯಾ ರಹಾನೆ. ಮಿಡಲ್ ಆರ್ಡರ್ ಬ್ಯಾಟಿಂಗ್ ಜವಾಬ್ದಾರಿಯ ಜೊತೆ ಜೊತೆಗೆ ವೈಸ್ ಕ್ಯಾಪ್ಟನ್ ಆಗಿಯೂ ಪಳಗಿದ್ದ ಮುಂಬೈಕರ್, ವಿರಾಟ್ ಅಲಭ್ಯತೆಯ ಸಮಯದಲ್ಲಿ ನಾಯಕನಾಗಿಯೂ ಸಕ್ಸಸ್ ಕಂಡಿದ್ದರು. ಎದುರಾಳಿಯನ್ನು ರೀಡ್ ಮಾಡೋದರಲ್ಲಿ ಪಂಟರ್ ಆಗಿದ್ದ ರಹಾನೆ, ಫೀಲ್ಡ್ಪ್ಲೇಸ್ಮೆಂಟ್, ಬೌಲಿಂಗ್ ಚೇಂಜಸ್ ಮೂಲಕ ಒತ್ತಡ ಹೇರುತ್ತಿದ್ದರು. ಕೂಲ್ ಆ್ಯಂಡ್ ಕಾಮ್ ಆಗಿಯೇ ನಾಯಕತ್ವ ನಿಭಾಯಿಸುವ ಮೂಲಕ ಸಕ್ಸಸ್ಫುಲ್ ಲೀಡರ್ ಎನಿಸಿಕೊಂಡಿದ್ದರು. ಆದ್ರೀಗ ಇಂಥದ್ದೊಂದು ಗುಣವೇ ಟೀಮ್ ಇಂಡಿಯಾ ಕ್ಯಾಪ್ಟನ್ನಲ್ಲಿ ಕಾಣದಂತಾಗಿದೆ.
ಟೆಸ್ಟ್ ಕ್ಯಾಪ್ಟನ್ಸಿಯಲ್ಲಿ ರಹಾನೆಗಿಲ್ಲ ಸೋಲು
ಆಗೊಮ್ಮೆ, ಈಗೊಮ್ಮೆ ಟೀಮ್ ಇಂಡಿಯಾವನ್ನ ಮುನ್ನಡೆಸಿರೋ ರಹಾನೆ, ಟೆಸ್ಟ್ನಲ್ಲಿ ಸೋಲಿಲ್ಲದ ಸರದಾರ. 6 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನ ಮುನ್ನಡೆಸಿರೋ ರಹಾನೆ, 4ರಲ್ಲಿ ಗೆಲುವಿನ ದಡ ಸೇರಿಸಿದ್ರೆ. ಇನ್ನುಳಿದ 2 ಪಂದ್ಯಗಳಲ್ಲಿ ಡ್ರಾ ಫಲಿತಾಂಶ ಕಂಡಿದ್ದಾರೆ. ಈ ಫಲಿತಾಂಶಗಳಿಂದಲೇ ರಹಾನೆ ಟೆಸ್ಟ್ಗೆ ಪರ್ಫೆಕ್ಟ್ ಕ್ಯಾಪ್ಟನ್ ಎಂಬ ಮಾತು ಹೇಳ್ತಿಲ್ಲ. ಇದಕ್ಕೆ ಮೇನ್ ರೀಸನ್ ಇದೆ. ಅದೇ 2021ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸಿರೀಸ್.
ಈ ಸೀರಿಸ್ ನೆನಪಿರಬೇಕು. ಸ್ಟಾರ್ ಆಟಗಾರರ ಇಂಜುರಿ. 36 ರನ್ಗಳ ಆಲೌಟ್. ವಿರಾಟ್ ಕೊಹ್ಲಿಯ ಅಲಭ್ಯತೆ.. ಇದೆಲ್ಲವನ್ನು ಕಂಡಿದ್ದ ದಿಗ್ಗಜರು, ಟೀಮ್ ಇಂಡಿಯಾ ಕ್ಲೀನ್ಸ್ವೀಪ್ ಮುಖಭಂಗ ಗ್ಯಾರಂಟಿಯ ಭವಿಷ್ಯ ನುಡಿದಿದ್ದರು. ಆದ್ರೆ ನಂತರ ನಾಯಕತ್ವದ ಜವಾಬ್ದಾರಿಯನ್ನ ಹೆಗಲಿಗೇರಿಸಿಕೊಂಡ ರಹಾನೆ, ಯುವ ಪಡೆಯೊಂದಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆದ್ದು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಈ ಟೆಸ್ಟ್ ಸರಣಿ ನೆನೆಪು ನಿಜಕ್ಕೂ ಇಂದಿಗೂ ರೋಮಾಂಚಕರಿ.
ರಹಾನೆಗೆ ಟೆಸ್ಟ್ ಪಟ್ಟ ಕಟ್ಟದೆ ತಪ್ಪು ಮಾಡ್ತಾ ಬಿಸಿಸಿಐ?
ವೈಸ್ ಕ್ಯಾಪ್ಟನ್ ಆಗಿದ್ದ ರಹಾನೆ, ಟೆಸ್ಟ್ ಕ್ರಿಕೆಟ್ಗೆ ಬೇಕಿದ್ದ ಬ್ಯಾಟಿಂಗ್ ಆಫ್ ಸ್ಟ್ರೈಲ್ ಜೊತೆಗೆ ನಾಯಕತ್ವದ ಗುಣಗಳು ಇದ್ವು. ಆದ್ರೆ ಅಂದು ಐಪಿಎಲ್ನ ಸಕ್ಸಸ್ ರೇಟ್ ಅನ್ನೇ ಇಂಟರ್ನ್ಯಾಷನಲ್ ಲೆವೆಲ್ ಕ್ರಿಕೆಟ್ನಲ್ಲಿ ಯೋಚಿಸಿದ್ದ ಬಿಸಿಸಿಐ, ಹಿಟ್ಮ್ಯಾನ್ ರೋಹಿತ್ ಶರ್ಮಾಗೆ ನಾಯಕತ್ವದ ಪಟ್ಟ ನೀಡಿತು. ಇದು ವೈಟ್ ಬಾಲ್ ಫಾರ್ಮೆಟ್ಗೆ ಒಕೆ. ಬಟ್ ಟೆಸ್ಟ್ ಎಂಬ ರಿಯಲ್ ಗೇಮ್ನಲ್ಲಿ ನಿಜಕ್ಕೂ ಬೇಡವಾಗಬೇಕಿತ್ತು. ಯಾಕಂದ್ರೆ ಹಿಟ್ಮ್ಯಾನ್ ರೋಹಿತ್, ಟೆಸ್ಟ್ ಕ್ರಿಕೆಟ್ನಲ್ಲಿ ಕ್ಯಾಪ್ಟನ್ಸಿಯಾಗಿ ಕಾರ್ಯ ನಿರ್ವಹಿಸಿದಕ್ಕಿಂತ ಇಂಜುರಿಯಿಂದ ಹೊರಗುಳಿದಿದ್ದೇ ಹೆಚ್ಚು. ಇಂಥಹ ವೇಳೆ ರೋಹಿತ್ಗೆ ಪಟ್ಟ ಕಟ್ಟಿ ತಪ್ಪು ಮಾಡಿದಕ್ಕಿಂತ ಇನ್ನೇನು? ಒಟ್ಬಲ್ಲಿ.. ಅದೇನೇ ಆಗಲಿ.. ಅಂದು ತಪ್ಪು ಮಾಡಿದ್ದ ಬಿಸಿಸಿಐ, ಭವಿಷ್ಯದ ದೃಷ್ಟಿಯಿಂದಾದ್ರೂ ಅತ್ಯುತ್ತಮ ಆಟಗಾರನಿಗೆ ನಾಯಕತ್ವದ ಪಟ್ಟ ಕಟ್ಟಬೇಕಾದ ಅನಿವಾರ್ಯತೆ ಇದ್ದೇ ಇದೆ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಕೊಹ್ಲಿ ನಾಯಕತ್ವ ತೊರೆದಾಗಲೂ ಕೇಳಿಬಂದಿತ್ತು ಇವರ ಹೆಸರು
ಟೆಸ್ಟ್ ಪಂದ್ಯಗಳಿಗೆ ಹೇಳಿ ಮಾಡಿಸಿದ ಸ್ಟಾರ್ ಆಟಗಾರ ಇವರು
ಬಿಸಿಸಿಐ ನಿರ್ಧಾರದ ವಿರುದ್ಧ ನಡೀತಿದೆ ಭಾರೀ ಚರ್ಚೆ
ರೋಹಿತ್ ಶರ್ಮಾಗೆ ಟೆಸ್ಟ್ ಕ್ಯಾಪ್ಟನ್ಸಿ ನೀಡಿ ಬಿಸಿಸಿಐ ತಪ್ಪು ಮಾಡ್ತಾ? ಅಂದು ರಹಾನೆಗೆ ಟೆಸ್ಟ್ ಕ್ಯಾಪ್ಟನ್ಸಿ ಪಟ್ಟ ನೀಡದೆ ಎಡವಿಬಿಡ್ತಾ? ಇಂಥದ್ದೊಂದು ಪ್ರಶ್ನೆ ಉದ್ಭವವಾಗ್ತಿದೆ. ಅಷ್ಟೇ ಅಲ್ಲ, ಕ್ರಿಕೆಟ್ ವಲಯದಲ್ಲೂ ರಹಾನೆ ಬಗ್ಗೆ ಇಂಥದ್ದೊಂದು ಚರ್ಚೆ ನಡೀತಿದೆ.
ಅಜಿಂಕ್ಯಾ ರಹಾನೆ.. ಟೀಮ್ ಇಂಡಿಯಾದ ಕ್ಲಾಸ್ ಬ್ಯಾಟ್ಸ್ಮನ್.. ಕಂಡೀಷನ್ಸ್ಗೆ ತಕ್ಕಂತೆ ತನ್ನನ್ನ ತಾನೂ ಮೋಲ್ಡ್ ಮಾಡಿಕೊಳ್ಳುವ ರಹಾನೆ, ಸ್ವದೇಶದಲ್ಲೇ ಅಲ್ಲ. ವಿದೇಶದಲ್ಲೂ ಬ್ಯಾಟಿಂಗ್ ಝಲಕ್ ತೋರಿಸ್ತಾರೆ. ಇನ್ಫ್ಯಾಕ್ಟ್ ಈ ಮುಂಬೈಕರ್ ಟೆಕ್ನಿಕಲಿ ಹೈರೇಂಜ್ ಪ್ಲೇಯರ್ ಅನ್ನೋದಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಕಟ್ಟಿದ ಹೋರಾಟದ ಇನ್ನಿಂಗ್ಸೇ ಸಾಕ್ಷಿ.
ಆಸ್ಟ್ರೇಲಿಯನ್ನರ ದಾಳಿಗೆ ಸಿಲುಕಿ ಹಿಟ್ಮ್ಯಾನ್ ರೋಹಿತ್, ಶುಭ್ಮನ್ ಗಿಲ್, ಚೇತಶ್ವರ ಪೂಜಾರ, ವಿರಾಟ್ ಕೊಹ್ಲಿ ಪವಿಲಿಯನ್ ಪರೇಡ್ ನಡೆಸಿದ್ರೆ, ರಹಾನೆ ಪಾಲಿಗೆ ಪುನರುಜ್ಜೀವನದ ಟೆಸ್ಟ್ ಅಂತಾನೇ ಬಿಂಬಿತವಾಗಿರೋ WTC ಫೈನಲ್ನಲ್ಲಿ ಅದ್ಭುತ ಆಟದ ಮೂಲಕ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಿದರು. ಆದ್ರೆ ಇದೇ ಇನ್ನಿಂಗ್ಸ್ ರಹಾನೆಯನ್ನ ಟೆಸ್ಟ್ ಕ್ರಿಕೆಟ್ನ ನಾಯಕನನ್ನಾಗಿ ನೇಮಿಸಬೇಕು ಎಂಬ ಚರ್ಚೆಯನ್ನ ಹುಟ್ಟಿಹಾಕಿದೆ. ಇದಕ್ಕೆಲ್ಲಾ ಕಾರಣ ರೋಹಿತ್ ಶರ್ಮಾರ ಟೆಸ್ಟ್ ಕ್ಯಾಪ್ಟನ್ಸಿ.
ಟೆಸ್ಟ್ ಕ್ರಿಕೆಟ್ಗೆ ಬೇಕಿರಲಿಲ್ಲ ರೋಹಿತ್ ನಾಯಕತ್ವ
ನಿಜಕ್ಕೂ ಇದು ಸತ್ಯ. ಯಾಕಂದ್ರೆ, ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ನ ಅಧಿಪತಿಯಾಗಿ ಮರೆಯುತ್ತಿದ್ದ ಕಾಲದಲ್ಲೇ, ವಿರಾಟ್ ಟೆಸ್ಟ್ ಕ್ಯಾಪ್ಟನ್ಸಿ ತ್ಯಜಿಸಬೇಕಾಯ್ತು. ಅಂದು ಹಿಟ್ಮ್ಯಾನ್ ರೋಹಿತ್ ಶರ್ಮಾಗೆ ಪಟ್ಟ ಕಟ್ಟಿದ್ದ ಬಿಸಿಸಿಐ, ನಿಜಕ್ಕೂ ರಿಯಲ್ ಲೀಡರ್ಶಿಪ್ ಹೊಂದಿದ್ದ ವೈಸ್ ಕ್ಯಾಪ್ಟನ್ ರಹಾನೆಯನ್ನು ಮರೆತಿತ್ತು. ಅಷ್ಟೇ ಅಲ್ಲ, ರಹಾನೆಯನ್ನು ಸೈಡ್ಲೈನ್ ಮಾಡಿ ತಂಡದಿಂದಲೂ ಗೇಟ್ಪಾಸ್ ನೀಡಿತ್ತು. ಆದ್ರೆ ಅಂದು ಹಿಟ್ಮ್ಯಾನ್ಗೆ ಟೆಸ್ಟ್ ಕ್ರಿಕೆಟ್ನ ಪಟ್ಟ ಕಟ್ಟಿದ ಪ್ರತಿಫಲವೇ ಟೀಮ್ ಇಂಡಿಯಾ, ಇಂದು ಬೆಸ್ಟ್ ಪರ್ಫಾಮೆನ್ಸ್ ನೀಡುವಲ್ಲಿ ಎಡವುತ್ತಿದೆ.
ಕ್ರಿಕೆಟ್ನ ರಿಯಲ್ ಗೇಮ್ನಲ್ಲಿ ಅಸಲಿ ಲೀಡರ್ ಸ್ಕಿಲ್ಸ್ ತೋರಿಸಬೇಕಿದ್ದ ರೋಹಿತ್, ಫುಲ್ ಸ್ಟ್ರೆಂಥ್ ಟೀಮ್ನೊಂದಿಗೂ ಸಕ್ಸಸ್ ಕಾಣೋಕೆ ತಿಣುಕಾಡ್ತಿದ್ದಾರೆ. ಅಷ್ಟೇ ಅಲ್ಲ, ಗೇಮ್ಪ್ಲಾನ್, ಸ್ಟ್ರಾಟರ್ಜಿಗಳಲ್ಲೂ ವಿಫಲರಾಗ್ತಿರೋ ರೋಹಿತ್, ಬೌಲರ್ಗಳ ಮೇಲೆ ಆನ್ಫೀಲ್ಡ್ನಲ್ಲೇ ಕೆಂಡಕಾರುತ್ತಿದ್ದಾರೆ. ಇದು ಸಹಜವಾಗೇ ರೋಹಿತ್ ಶರ್ಮಾರ ಕ್ಯಾಪ್ಟನ್ಸಿಯನ್ನ ಪ್ರಶ್ನಿಸುವಂತೆ ಮಾಡಿದೆ. ರೋಹಿತ್ ಬದಲಿಗೆ ರಹಾನೆಗೆ ಪಟ್ಟಬೇಕಿತ್ತು ಎಂಬ ಅಭಿಪ್ರಾಯಗಳೂ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ. ಇದು ನಿಜ ಕೂಡ.
ಟೆಸ್ಟ್ ಕ್ರಿಕೆಟ್ಗೆ ಬೇಕಿತ್ತು ರಹಾನೆಯಂಥ ಕ್ಯಾಪ್ಟನ್
ವಿರಾಟ್ ಪದತ್ಯಾಗದ ಬಳಿಕ ನಿಜಕ್ಕೂ ಈ ಸ್ಥಾನಕ್ಕೆ ಅರ್ಹ ವ್ಯಕ್ತಿ ಅಜಿಂಕ್ಯಾ ರಹಾನೆ. ಮಿಡಲ್ ಆರ್ಡರ್ ಬ್ಯಾಟಿಂಗ್ ಜವಾಬ್ದಾರಿಯ ಜೊತೆ ಜೊತೆಗೆ ವೈಸ್ ಕ್ಯಾಪ್ಟನ್ ಆಗಿಯೂ ಪಳಗಿದ್ದ ಮುಂಬೈಕರ್, ವಿರಾಟ್ ಅಲಭ್ಯತೆಯ ಸಮಯದಲ್ಲಿ ನಾಯಕನಾಗಿಯೂ ಸಕ್ಸಸ್ ಕಂಡಿದ್ದರು. ಎದುರಾಳಿಯನ್ನು ರೀಡ್ ಮಾಡೋದರಲ್ಲಿ ಪಂಟರ್ ಆಗಿದ್ದ ರಹಾನೆ, ಫೀಲ್ಡ್ಪ್ಲೇಸ್ಮೆಂಟ್, ಬೌಲಿಂಗ್ ಚೇಂಜಸ್ ಮೂಲಕ ಒತ್ತಡ ಹೇರುತ್ತಿದ್ದರು. ಕೂಲ್ ಆ್ಯಂಡ್ ಕಾಮ್ ಆಗಿಯೇ ನಾಯಕತ್ವ ನಿಭಾಯಿಸುವ ಮೂಲಕ ಸಕ್ಸಸ್ಫುಲ್ ಲೀಡರ್ ಎನಿಸಿಕೊಂಡಿದ್ದರು. ಆದ್ರೀಗ ಇಂಥದ್ದೊಂದು ಗುಣವೇ ಟೀಮ್ ಇಂಡಿಯಾ ಕ್ಯಾಪ್ಟನ್ನಲ್ಲಿ ಕಾಣದಂತಾಗಿದೆ.
ಟೆಸ್ಟ್ ಕ್ಯಾಪ್ಟನ್ಸಿಯಲ್ಲಿ ರಹಾನೆಗಿಲ್ಲ ಸೋಲು
ಆಗೊಮ್ಮೆ, ಈಗೊಮ್ಮೆ ಟೀಮ್ ಇಂಡಿಯಾವನ್ನ ಮುನ್ನಡೆಸಿರೋ ರಹಾನೆ, ಟೆಸ್ಟ್ನಲ್ಲಿ ಸೋಲಿಲ್ಲದ ಸರದಾರ. 6 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನ ಮುನ್ನಡೆಸಿರೋ ರಹಾನೆ, 4ರಲ್ಲಿ ಗೆಲುವಿನ ದಡ ಸೇರಿಸಿದ್ರೆ. ಇನ್ನುಳಿದ 2 ಪಂದ್ಯಗಳಲ್ಲಿ ಡ್ರಾ ಫಲಿತಾಂಶ ಕಂಡಿದ್ದಾರೆ. ಈ ಫಲಿತಾಂಶಗಳಿಂದಲೇ ರಹಾನೆ ಟೆಸ್ಟ್ಗೆ ಪರ್ಫೆಕ್ಟ್ ಕ್ಯಾಪ್ಟನ್ ಎಂಬ ಮಾತು ಹೇಳ್ತಿಲ್ಲ. ಇದಕ್ಕೆ ಮೇನ್ ರೀಸನ್ ಇದೆ. ಅದೇ 2021ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸಿರೀಸ್.
ಈ ಸೀರಿಸ್ ನೆನಪಿರಬೇಕು. ಸ್ಟಾರ್ ಆಟಗಾರರ ಇಂಜುರಿ. 36 ರನ್ಗಳ ಆಲೌಟ್. ವಿರಾಟ್ ಕೊಹ್ಲಿಯ ಅಲಭ್ಯತೆ.. ಇದೆಲ್ಲವನ್ನು ಕಂಡಿದ್ದ ದಿಗ್ಗಜರು, ಟೀಮ್ ಇಂಡಿಯಾ ಕ್ಲೀನ್ಸ್ವೀಪ್ ಮುಖಭಂಗ ಗ್ಯಾರಂಟಿಯ ಭವಿಷ್ಯ ನುಡಿದಿದ್ದರು. ಆದ್ರೆ ನಂತರ ನಾಯಕತ್ವದ ಜವಾಬ್ದಾರಿಯನ್ನ ಹೆಗಲಿಗೇರಿಸಿಕೊಂಡ ರಹಾನೆ, ಯುವ ಪಡೆಯೊಂದಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆದ್ದು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಈ ಟೆಸ್ಟ್ ಸರಣಿ ನೆನೆಪು ನಿಜಕ್ಕೂ ಇಂದಿಗೂ ರೋಮಾಂಚಕರಿ.
ರಹಾನೆಗೆ ಟೆಸ್ಟ್ ಪಟ್ಟ ಕಟ್ಟದೆ ತಪ್ಪು ಮಾಡ್ತಾ ಬಿಸಿಸಿಐ?
ವೈಸ್ ಕ್ಯಾಪ್ಟನ್ ಆಗಿದ್ದ ರಹಾನೆ, ಟೆಸ್ಟ್ ಕ್ರಿಕೆಟ್ಗೆ ಬೇಕಿದ್ದ ಬ್ಯಾಟಿಂಗ್ ಆಫ್ ಸ್ಟ್ರೈಲ್ ಜೊತೆಗೆ ನಾಯಕತ್ವದ ಗುಣಗಳು ಇದ್ವು. ಆದ್ರೆ ಅಂದು ಐಪಿಎಲ್ನ ಸಕ್ಸಸ್ ರೇಟ್ ಅನ್ನೇ ಇಂಟರ್ನ್ಯಾಷನಲ್ ಲೆವೆಲ್ ಕ್ರಿಕೆಟ್ನಲ್ಲಿ ಯೋಚಿಸಿದ್ದ ಬಿಸಿಸಿಐ, ಹಿಟ್ಮ್ಯಾನ್ ರೋಹಿತ್ ಶರ್ಮಾಗೆ ನಾಯಕತ್ವದ ಪಟ್ಟ ನೀಡಿತು. ಇದು ವೈಟ್ ಬಾಲ್ ಫಾರ್ಮೆಟ್ಗೆ ಒಕೆ. ಬಟ್ ಟೆಸ್ಟ್ ಎಂಬ ರಿಯಲ್ ಗೇಮ್ನಲ್ಲಿ ನಿಜಕ್ಕೂ ಬೇಡವಾಗಬೇಕಿತ್ತು. ಯಾಕಂದ್ರೆ ಹಿಟ್ಮ್ಯಾನ್ ರೋಹಿತ್, ಟೆಸ್ಟ್ ಕ್ರಿಕೆಟ್ನಲ್ಲಿ ಕ್ಯಾಪ್ಟನ್ಸಿಯಾಗಿ ಕಾರ್ಯ ನಿರ್ವಹಿಸಿದಕ್ಕಿಂತ ಇಂಜುರಿಯಿಂದ ಹೊರಗುಳಿದಿದ್ದೇ ಹೆಚ್ಚು. ಇಂಥಹ ವೇಳೆ ರೋಹಿತ್ಗೆ ಪಟ್ಟ ಕಟ್ಟಿ ತಪ್ಪು ಮಾಡಿದಕ್ಕಿಂತ ಇನ್ನೇನು? ಒಟ್ಬಲ್ಲಿ.. ಅದೇನೇ ಆಗಲಿ.. ಅಂದು ತಪ್ಪು ಮಾಡಿದ್ದ ಬಿಸಿಸಿಐ, ಭವಿಷ್ಯದ ದೃಷ್ಟಿಯಿಂದಾದ್ರೂ ಅತ್ಯುತ್ತಮ ಆಟಗಾರನಿಗೆ ನಾಯಕತ್ವದ ಪಟ್ಟ ಕಟ್ಟಬೇಕಾದ ಅನಿವಾರ್ಯತೆ ಇದ್ದೇ ಇದೆ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್