Advertisment

6 ಗಂಟೆಗಳ ಸುದೀರ್ಘ ಮೀಟಿಂಗ್.. ಗಂಭೀರ್​, ರೋಹಿತ್​​ರ ಬೆಂಡೆತ್ತಿದ ಬಿಸಿಸಿಐ..!

author-image
Ganesh
Updated On
6 ಗಂಟೆಗಳ ಸುದೀರ್ಘ ಮೀಟಿಂಗ್.. ಗಂಭೀರ್​, ರೋಹಿತ್​​ರ ಬೆಂಡೆತ್ತಿದ ಬಿಸಿಸಿಐ..!
Advertisment
  • ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾಗೆ ಹೀನಾಯ ಸೋಲು
  • 12 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್​ ಸರಣಿ ಕಳೆದುಕೊಂಡ ಭಾರತ
  • ಎರಡು ಪ್ರಮುಖ ವಿಚಾರದ ಬಗ್ಗೆ ಸುದೀರ್ಘ ಚರ್ಚೆ

ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲನ್ನು ಎದುರಿಸಬೇಕಾಯಿತು. ಭಾರತದ ನೆಲದಲ್ಲಿ ನ್ಯೂಜಿಲೆಂಡ್ 3-0 ಐತಿಹಾಸಿಕ ಜಯ ದಾಖಲಿಸಿತು. ಈ ಮೂಲಕ ಭಾರತ ತಂಡ 12 ವರ್ಷಗಳ ಬಳಿಕ ತವರು ನೆಲದಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದೆ.

Advertisment

ಟೀಂ ಇಂಡಿಯಾ ಸೋಲಿನ ಬಗ್ಗೆ ಪ್ರಶ್ನೆಗಳು ಎದ್ದಿವೆ. ಬೆನ್ನಲ್ಲೇ ಬಿಸಿಸಿಐನ ಮ್ಯಾರಥಾನ್ ಸಭೆ ನಡೆಸಿ ಸೋಲಿನ ಹಿಂದಿನ ಕಾರಣ ತಿಳಿದುಕೊಳ್ಳಲು ಪ್ರಯತ್ನಿಸಿದೆ. ಸುಮಾರು 6 ಗಂಟೆಗಳ ಕಾಲ ನಡೆದ ಮ್ಯಾರಥಾನ್ ಸಭೆಯಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ, ಮುಖ್ಯ ಕೋಚ್ ಗೌತಮ್ ಗಂಭೀರ್, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಅಧ್ಯಕ್ಷ ರೋಜರ್ ಬಿನ್ನಿ ಉಪಸ್ಥಿತರಿದ್ದರು. ರೋಹಿತ್ ಮತ್ತು ಗಂಭೀರ್​ ಸಭೆಯಲ್ಲಿ ಟಾರ್ಗೆಟ್ ಆಗಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: ಸಚಿವ ಚಲುವರಾಯಸ್ವಾಮಿ ಜೊತೆ ಕಿರಿಕ್; ಕೈ ಕೈ ಮಿಲಾಯಿಸಿದ್ರಾ ಕಾಂಗ್ರೆಸ್​ ನಾಯಕರು..?

ನ್ಯೂಜಿಲೆಂಡ್ ವಿರುದ್ಧದ ಸೋಲನ್ನು ಬಿಸಿಸಿಐ ವಿವರವಾಗಿ ಪರಿಶೀಲಿಸಿದೆ. ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವುದು ಮತ್ತು ಗಂಭೀರ್ ಕೋಚಿಂಗ್ ಶೈಲಿಯ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ. ಇದು ಆರು ಗಂಟೆಗಳ ಮ್ಯಾರಥಾನ್ ಸಭೆಯಾಗಿದೆ. ಸೋಲಿನ ನಂತರ ನಿಗದಿಪಡಿಸಲಾಗಿತ್ತು. ಭಾರತ ಆಸ್ಟ್ರೇಲಿಯ ಪ್ರವಾಸಕ್ಕೆ ತೆರಳುತ್ತಿದ್ದು, ತಂಡವು ಮತ್ತೆ ಟ್ರ್ಯಾಕ್‌ಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಬಿಸಿಸಿಐ ಬಯಸಿದೆ. ಮುಂದಿನ ಪಂದ್ಯಗಳನ್ನು ಗೆಲ್ಲಲು ಗಂಭೀರ್-ರೋಹಿತ್-ಅಗರ್ಕರ್ ಏನು ಯೋಚಿಸುತ್ತಿದ್ದಾರೆ ಎಂದು ತಿಳಿಯಲು ಬಿಸಿಸಿಐ ಬಯಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisment

ಇದನ್ನೂ ಓದಿ:IND vs SA; ಫಸ್ಟ್​ ಅಲ್ಲಿ ಬ್ಯಾಟಿಂಗ್ ಅಬ್ಬರ.. ಸೆಕೆಂಡ್ ಆಫ್​ನಲ್ಲಿ ಭಾರತದ ಯುವ ಬೌಲರ್​ಗಳ ಆರ್ಭಟ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment