ಬಿಸಿಸಿಐ ಮುಂದಿದೆ ಐದಾತ್ತು ವರ್ಷಗಳ ದೂರದೃಷ್ಟಿ
ಟೆಸ್ಟ್ನಲ್ಲಿ ಬಲಿಷ್ಠ ಬೌಲಿಂಗ್ ತಂಡ ಕಟ್ಟುವ ಪ್ಲಾನ್
ಸ್ಟ್ರಾಂಗ್ ಫೌಂಡೇಷನ್ಗೆ BCCI ಮೆಗಾ ಪ್ಲಾನ್
ಟೀಮ್ ಇಂಡಿಯಾದಲ್ಲಿ ಬ್ಯಾಟ್ಸ್ಮನ್ಸ್ ಇಲ್ವಾ? ಬ್ಯಾಕ್ ರೆಡಿ ಇದೆ. ವಿಕೆಟ್ ಕೀಪರ್ಗಳು ಇಲ್ವಾ? ಬ್ಯಾಕ್ ಅಪ್ಗೆ ಐದಾರು ಮಂದಿ ರೇಸ್ನಲ್ಲಿದ್ದಾರೆ. ಸ್ಪಿನ್ನರ್ಗಳು ಇಲ್ವಾ..? ಲೆಕ್ಕ ಇಲ್ಲದಷ್ಟು ಮಂದಿ ಇದ್ದಾರೆ. ಆದ್ರೆ, ಬೌಲಿಂಗ್ ವಿಭಾಗಕ್ಕೆ ಬ್ಯಾಕ್ ಆಪ್ ಯಾರು ಅಂದ್ರೆ ಮಾತ್ರ ಉತ್ತರ ಸಿಗಲಾರದು. ಇದೇ ಕಾರಣಕ್ಕೀಗ ಬಿಸಿಸಿಐ ಮೆಗಾ ಪ್ಲಾನ್ ಮಾಡ್ತಿದೆ. ಅದೇನು?
ನಮ್ಮ ಫಾಸ್ಟ್ ಬೌಲರ್ಗಳಿಗೆ ವಯಸ್ಸಾಗಿದೆ. ಆದ್ರೆ, ಇವ್ರೇ ನಮ್ಮ ಮ್ಯಾಚ್ ವಿನ್ನರ್ ಬೌಲರ್ಗಳು. ಈ ಮ್ಯಾಚ್ ವಿನ್ನರ್ ಬೌಲರ್ಗಳ ಸರಾಸರಿ ವಯಸ್ಸೀಗ 30 ವರ್ಷ. ಇದಕ್ಕೆ ಹೇಳ್ತಿರೋದು ನಮ್ಮ ಫಾಸ್ಟ್ ಬೌಲರ್ಗಳಿಗೆ ವಯಸ್ಸಾಯ್ತಾಪ್ಪ ಎಂದು. ಮೂವತ್ತರ ವೇಗಿಗಳು ಯಾವಾಗ ಇಂಜುರಿಯಿಂದ ಬ್ರೇಕ್ ಡೌನ್ ಆಗ್ತಾರೋ ಅನ್ನೋದೇ ಗೊತ್ತಿಲ್ಲ. ಇದೇ ಆತಂಕದಲ್ಲೇ ಈ ಸಿನೀಯತ್ಗಳಿಗೆ ವರ್ಕ್ ಲೋಡ್ ಮ್ಯಾನೇಜ್ಮೆಂಟ್ ಅಡಿಯಲ್ಲಿ ವಿಶ್ರಾಂತಿ ನೀಡ್ತಾನೆ ಇದೆ. ಹೀಗಾದ್ರೂ ಇಂಜುರಿ ಮಾತ್ರ ನಿಂತಿಲ್ಲ. ತಂಡಕ್ಕೂ ಹಿನ್ನಡೆಯಾಗಿದ್ದು ತಪ್ತಿಲ್ಲ. ಆದ್ರೀಗ ಇದೆಲ್ಲಕ್ಕೂ ಫುಲ್ಸ್ಟಾಪ್ ಬೀಳೋ ಕಾಲ ಹತ್ತಿರವಿದೆ.
ಸ್ಟ್ರಾಂಗ್ ಫೌಂಡೇಷನ್ಗೆ ಬಿಸಿಸಿಐನಿಂದ ಮೆಗಾ ಪ್ಲಾನ್..!
ಸದ್ಯ ಟೀಮ್ ಇಂಡಿಯಾದಲ್ಲಿ ಡೆಡ್ಲಿ ಫಾಸ್ಟ್ ಬೌಲರ್ಗಳಿದ್ದಾರೆ ನಿಜ. ಇವರ ವಯಸ್ಸೇ ಟೀಮ್ ಇಂಡಿಯಾಗೆ ಮಾರಕವಾಗ್ತಿದೆ. ಪ್ರತಿ ಸರಣಿಯಲ್ಲೂ ಒಬ್ಬರಿಲ್ಲ ಅಂದ್ರು, ಒಬ್ಬರು ಇಂಜುರಿ ಆಗ್ತಿದ್ದಾರೆ. ಇದು ಸಹಜವಾಗೇ ಟೀಮ್ ಇಂಡಿಯಾಗೆ ಸೆಟ್ ಬ್ಯಾಕ್ ಆಗ್ತಿದೆ. ಇದೇ ಕಾರಣಕ್ಕೀಗ ಬಿಸಿಸಿಐ ಮೆಗಾ ಪ್ಲಾನ್ ರೂಪಿಸಿ, ಯಂಗ್ ಫಾಸ್ಟ್ ಬೌಲರ್ಗಳ ಸೆಟ್ ಆಫ್ ಪೂಲ್ನ ರೆಡಿ ಮಾಡಿದೆ. ಆ ಮೂಲಕ ಸ್ಟ್ರಾಂಗ್ ಫೌಂಡೇಶನ್ ಕಟ್ಟಲು ಮುಂದಾಗಿದೆ. ಇದಕ್ಕಾಗಿಯೇ ಯುವ ವೇಗಿಗಳ ಮೇಲೆ ಇನ್ವೆಸ್ಟ್ ಮಾಡ್ತಿದೆ.
ಜಮ್ಮು ಕಾಶ್ಮೀರದ ಮೂಲದ 24ರ ಉಮ್ರನ್ ಮಲಿಕ್ ಹಾಗೂ 27 ವರ್ಷದ ಪಶ್ಚಿಮ ಬಂಗಾಳದ ಆಕಾಶ್ ದೀಪ್, ಕರ್ನಾಟಕದ ವೈಶಾಕ್ ವಿಜಯ್ ಕುಮಾರ್, 25 ವರ್ಷದ ವಿದ್ವತ್ ಕಾವೇರಪ್ಪ ಸೇರಿದಂತೆ ಡೆಲ್ಲಿ ಮೂಲದ ಮಯಾಂಕ್ ಯಾದವ್ಗೆ ಬೆಳಸಲು ಮುಂದಾಗಿದೆ. ಟಿ-20 ಸ್ಪೆಷಲಿಸ್ಟ್ ಬೌಲರ್ ಆಗಿರುವ ಆರ್ಶ್ದೀಪ್ ಸಿಂಗ್ಗೂ ಬಿಗ್ಬಾಸ್ಗಳು, ಹೆಚ್ಚು ಹೆಚ್ಚು ರೆಡ್ ಬಾಲ್ ಕ್ರಿಕೆಟ್ ಆಡುವಂತೆ ಸೂಚಿಸಿದೆ.
ಹಿರಿಯರ ವೇಗಿಗಳ ಬ್ಯಾಕ್ಅಪ್ ಆಗಿ ಬೆಳೆಸಲು ಪ್ಲಾನ್..!
ಡೊಮೆಸ್ಟಿಕ್ ಕ್ರಿಕೆಟ್ನಲ್ಲಿನ ಪ್ರತಿಭಾನ್ವಿತ ಯುವ ಬೌಲರ್ಗಳನ್ನ ಗುರುತಿಸಿರುವ ಬಿಸಿಸಿಐ, ಹಿರಿಯ ವೇಗಿಗಳಾದ ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ಗೆ ಪರ್ಯಾಯವಾಗಿ ಬೆಳಸಲು ಮುಂದಾಗಿದೆ. ಈ ನಿಟ್ಟಿನಲ್ಲೇ ಈ ಯುವ ಆಟಗಾರರಿಗೆ ಸ್ಪೆಷಲ್ ಕಾಂಟ್ರಾಕ್ಟ್ ಕೂಡ ನೀಡಿದೆ. ಈ ಯೋಚನೆಯ ಹಿಂದೆ ಟೀಮ್ ಇಂಡಿಯಾದ ಭವಿಷ್ಯ ಲೆಕ್ಕಚಾರವೂ ಅಡಗಿದೆ.
ಭವಿಷ್ಯದ ಟೀಮ್ ಇಂಡಿಯಾಗೆ ಗಟ್ಟಿ ಅಡಿಪಾಯ..!
ಟೀಮ್ ಇಂಡಿಯಾದ ವೇಗದ ಡಿಪಾರ್ಟ್ಮೆಂಟ್ Transaction Periodನಲ್ಲಿದೆ. ಈ ನಿಟ್ಟಿನಲ್ಲಿ ಸ್ಟೇಬಲ್ ಫೌಂಡೇಷನ್ ಹಾಕುತ್ತಿದೆ. ಒಂದು ಸೆಟ್ ಆಫ್ ಪೂಲ್ನ ರೆಡಿ ಮಾಡಿರುವ ಬಿಸಿಸಿಐ, ಐದತ್ತು ವರ್ಷಗಳ ಕಾಲ ರೆಡ್ ಬಾಲ್ ಕ್ರಿಕೆಟ್ನಲ್ಲಿ ಸಕ್ಸಸ್ ಕಾಣುವ ದೂರದೃಷ್ಟಿ ಹೊಂದಿದೆ. ಈ ನಿಟ್ಟಿನಲ್ಲಿ ಸದೃಢ ಬೌಲಿಂಗ್ ಲೈನ್ ಆಪ್ಗೆ ಅಡಿಪಾಯ ನಿರ್ಮಿಸುತ್ತಿದೆ.
ಒಟ್ನಲ್ಲಿ! ಅತ್ತ ಟೀಮ್ ಇಂಡಿಯಾದ ಮೇನ್ ವೆಪನ್ಗಳ ವಯಸ್ಸಾಗ್ತಿದ್ರೆ. ಇತ್ತ ಬಿಸಿಸಿಐ ಪ್ರತಿಭಾನ್ವಿತ ಆಟಗಾರರನ್ನ ಬೆಳಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಇದು ನಿಜಕ್ಕೂ ಟೀಮ್ ಇಂಡಿಯಾ ಮುಂದಿನ ಸಕ್ಸಸ್ನಲ್ಲಿ ಮಹತ್ತರ ಪಾತ್ರವನ್ನೇ ವಹಿಸೋದ್ರಲ್ಲಿ ಅನುಮಾನವೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಬಿಸಿಸಿಐ ಮುಂದಿದೆ ಐದಾತ್ತು ವರ್ಷಗಳ ದೂರದೃಷ್ಟಿ
ಟೆಸ್ಟ್ನಲ್ಲಿ ಬಲಿಷ್ಠ ಬೌಲಿಂಗ್ ತಂಡ ಕಟ್ಟುವ ಪ್ಲಾನ್
ಸ್ಟ್ರಾಂಗ್ ಫೌಂಡೇಷನ್ಗೆ BCCI ಮೆಗಾ ಪ್ಲಾನ್
ಟೀಮ್ ಇಂಡಿಯಾದಲ್ಲಿ ಬ್ಯಾಟ್ಸ್ಮನ್ಸ್ ಇಲ್ವಾ? ಬ್ಯಾಕ್ ರೆಡಿ ಇದೆ. ವಿಕೆಟ್ ಕೀಪರ್ಗಳು ಇಲ್ವಾ? ಬ್ಯಾಕ್ ಅಪ್ಗೆ ಐದಾರು ಮಂದಿ ರೇಸ್ನಲ್ಲಿದ್ದಾರೆ. ಸ್ಪಿನ್ನರ್ಗಳು ಇಲ್ವಾ..? ಲೆಕ್ಕ ಇಲ್ಲದಷ್ಟು ಮಂದಿ ಇದ್ದಾರೆ. ಆದ್ರೆ, ಬೌಲಿಂಗ್ ವಿಭಾಗಕ್ಕೆ ಬ್ಯಾಕ್ ಆಪ್ ಯಾರು ಅಂದ್ರೆ ಮಾತ್ರ ಉತ್ತರ ಸಿಗಲಾರದು. ಇದೇ ಕಾರಣಕ್ಕೀಗ ಬಿಸಿಸಿಐ ಮೆಗಾ ಪ್ಲಾನ್ ಮಾಡ್ತಿದೆ. ಅದೇನು?
ನಮ್ಮ ಫಾಸ್ಟ್ ಬೌಲರ್ಗಳಿಗೆ ವಯಸ್ಸಾಗಿದೆ. ಆದ್ರೆ, ಇವ್ರೇ ನಮ್ಮ ಮ್ಯಾಚ್ ವಿನ್ನರ್ ಬೌಲರ್ಗಳು. ಈ ಮ್ಯಾಚ್ ವಿನ್ನರ್ ಬೌಲರ್ಗಳ ಸರಾಸರಿ ವಯಸ್ಸೀಗ 30 ವರ್ಷ. ಇದಕ್ಕೆ ಹೇಳ್ತಿರೋದು ನಮ್ಮ ಫಾಸ್ಟ್ ಬೌಲರ್ಗಳಿಗೆ ವಯಸ್ಸಾಯ್ತಾಪ್ಪ ಎಂದು. ಮೂವತ್ತರ ವೇಗಿಗಳು ಯಾವಾಗ ಇಂಜುರಿಯಿಂದ ಬ್ರೇಕ್ ಡೌನ್ ಆಗ್ತಾರೋ ಅನ್ನೋದೇ ಗೊತ್ತಿಲ್ಲ. ಇದೇ ಆತಂಕದಲ್ಲೇ ಈ ಸಿನೀಯತ್ಗಳಿಗೆ ವರ್ಕ್ ಲೋಡ್ ಮ್ಯಾನೇಜ್ಮೆಂಟ್ ಅಡಿಯಲ್ಲಿ ವಿಶ್ರಾಂತಿ ನೀಡ್ತಾನೆ ಇದೆ. ಹೀಗಾದ್ರೂ ಇಂಜುರಿ ಮಾತ್ರ ನಿಂತಿಲ್ಲ. ತಂಡಕ್ಕೂ ಹಿನ್ನಡೆಯಾಗಿದ್ದು ತಪ್ತಿಲ್ಲ. ಆದ್ರೀಗ ಇದೆಲ್ಲಕ್ಕೂ ಫುಲ್ಸ್ಟಾಪ್ ಬೀಳೋ ಕಾಲ ಹತ್ತಿರವಿದೆ.
ಸ್ಟ್ರಾಂಗ್ ಫೌಂಡೇಷನ್ಗೆ ಬಿಸಿಸಿಐನಿಂದ ಮೆಗಾ ಪ್ಲಾನ್..!
ಸದ್ಯ ಟೀಮ್ ಇಂಡಿಯಾದಲ್ಲಿ ಡೆಡ್ಲಿ ಫಾಸ್ಟ್ ಬೌಲರ್ಗಳಿದ್ದಾರೆ ನಿಜ. ಇವರ ವಯಸ್ಸೇ ಟೀಮ್ ಇಂಡಿಯಾಗೆ ಮಾರಕವಾಗ್ತಿದೆ. ಪ್ರತಿ ಸರಣಿಯಲ್ಲೂ ಒಬ್ಬರಿಲ್ಲ ಅಂದ್ರು, ಒಬ್ಬರು ಇಂಜುರಿ ಆಗ್ತಿದ್ದಾರೆ. ಇದು ಸಹಜವಾಗೇ ಟೀಮ್ ಇಂಡಿಯಾಗೆ ಸೆಟ್ ಬ್ಯಾಕ್ ಆಗ್ತಿದೆ. ಇದೇ ಕಾರಣಕ್ಕೀಗ ಬಿಸಿಸಿಐ ಮೆಗಾ ಪ್ಲಾನ್ ರೂಪಿಸಿ, ಯಂಗ್ ಫಾಸ್ಟ್ ಬೌಲರ್ಗಳ ಸೆಟ್ ಆಫ್ ಪೂಲ್ನ ರೆಡಿ ಮಾಡಿದೆ. ಆ ಮೂಲಕ ಸ್ಟ್ರಾಂಗ್ ಫೌಂಡೇಶನ್ ಕಟ್ಟಲು ಮುಂದಾಗಿದೆ. ಇದಕ್ಕಾಗಿಯೇ ಯುವ ವೇಗಿಗಳ ಮೇಲೆ ಇನ್ವೆಸ್ಟ್ ಮಾಡ್ತಿದೆ.
ಜಮ್ಮು ಕಾಶ್ಮೀರದ ಮೂಲದ 24ರ ಉಮ್ರನ್ ಮಲಿಕ್ ಹಾಗೂ 27 ವರ್ಷದ ಪಶ್ಚಿಮ ಬಂಗಾಳದ ಆಕಾಶ್ ದೀಪ್, ಕರ್ನಾಟಕದ ವೈಶಾಕ್ ವಿಜಯ್ ಕುಮಾರ್, 25 ವರ್ಷದ ವಿದ್ವತ್ ಕಾವೇರಪ್ಪ ಸೇರಿದಂತೆ ಡೆಲ್ಲಿ ಮೂಲದ ಮಯಾಂಕ್ ಯಾದವ್ಗೆ ಬೆಳಸಲು ಮುಂದಾಗಿದೆ. ಟಿ-20 ಸ್ಪೆಷಲಿಸ್ಟ್ ಬೌಲರ್ ಆಗಿರುವ ಆರ್ಶ್ದೀಪ್ ಸಿಂಗ್ಗೂ ಬಿಗ್ಬಾಸ್ಗಳು, ಹೆಚ್ಚು ಹೆಚ್ಚು ರೆಡ್ ಬಾಲ್ ಕ್ರಿಕೆಟ್ ಆಡುವಂತೆ ಸೂಚಿಸಿದೆ.
ಹಿರಿಯರ ವೇಗಿಗಳ ಬ್ಯಾಕ್ಅಪ್ ಆಗಿ ಬೆಳೆಸಲು ಪ್ಲಾನ್..!
ಡೊಮೆಸ್ಟಿಕ್ ಕ್ರಿಕೆಟ್ನಲ್ಲಿನ ಪ್ರತಿಭಾನ್ವಿತ ಯುವ ಬೌಲರ್ಗಳನ್ನ ಗುರುತಿಸಿರುವ ಬಿಸಿಸಿಐ, ಹಿರಿಯ ವೇಗಿಗಳಾದ ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ಗೆ ಪರ್ಯಾಯವಾಗಿ ಬೆಳಸಲು ಮುಂದಾಗಿದೆ. ಈ ನಿಟ್ಟಿನಲ್ಲೇ ಈ ಯುವ ಆಟಗಾರರಿಗೆ ಸ್ಪೆಷಲ್ ಕಾಂಟ್ರಾಕ್ಟ್ ಕೂಡ ನೀಡಿದೆ. ಈ ಯೋಚನೆಯ ಹಿಂದೆ ಟೀಮ್ ಇಂಡಿಯಾದ ಭವಿಷ್ಯ ಲೆಕ್ಕಚಾರವೂ ಅಡಗಿದೆ.
ಭವಿಷ್ಯದ ಟೀಮ್ ಇಂಡಿಯಾಗೆ ಗಟ್ಟಿ ಅಡಿಪಾಯ..!
ಟೀಮ್ ಇಂಡಿಯಾದ ವೇಗದ ಡಿಪಾರ್ಟ್ಮೆಂಟ್ Transaction Periodನಲ್ಲಿದೆ. ಈ ನಿಟ್ಟಿನಲ್ಲಿ ಸ್ಟೇಬಲ್ ಫೌಂಡೇಷನ್ ಹಾಕುತ್ತಿದೆ. ಒಂದು ಸೆಟ್ ಆಫ್ ಪೂಲ್ನ ರೆಡಿ ಮಾಡಿರುವ ಬಿಸಿಸಿಐ, ಐದತ್ತು ವರ್ಷಗಳ ಕಾಲ ರೆಡ್ ಬಾಲ್ ಕ್ರಿಕೆಟ್ನಲ್ಲಿ ಸಕ್ಸಸ್ ಕಾಣುವ ದೂರದೃಷ್ಟಿ ಹೊಂದಿದೆ. ಈ ನಿಟ್ಟಿನಲ್ಲಿ ಸದೃಢ ಬೌಲಿಂಗ್ ಲೈನ್ ಆಪ್ಗೆ ಅಡಿಪಾಯ ನಿರ್ಮಿಸುತ್ತಿದೆ.
ಒಟ್ನಲ್ಲಿ! ಅತ್ತ ಟೀಮ್ ಇಂಡಿಯಾದ ಮೇನ್ ವೆಪನ್ಗಳ ವಯಸ್ಸಾಗ್ತಿದ್ರೆ. ಇತ್ತ ಬಿಸಿಸಿಐ ಪ್ರತಿಭಾನ್ವಿತ ಆಟಗಾರರನ್ನ ಬೆಳಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಇದು ನಿಜಕ್ಕೂ ಟೀಮ್ ಇಂಡಿಯಾ ಮುಂದಿನ ಸಕ್ಸಸ್ನಲ್ಲಿ ಮಹತ್ತರ ಪಾತ್ರವನ್ನೇ ವಹಿಸೋದ್ರಲ್ಲಿ ಅನುಮಾನವೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್