ಕ್ಯಾಪ್ಟನ್​ ರೋಹಿತ್​​ ಶರ್ಮಾಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ; ಇನ್ನೂ ಒಂದೇ ತಿಂಗಳು ಟೈಮ್​​

author-image
Ganesh Nachikethu
Updated On
ತಂಡದಿಂದ ರೋಹಿತ್​ ಶರ್ಮಾರನ್ನೇ ಕೈ ಬಿಟ್ಟ ಭಾರತದ ಮುಖ್ಯ ಕೋಚ್​​ ಗಂಭೀರ್​​; ಕಾರಣವೇನು?
Advertisment
  • ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಕೌಂಟ್​ಡೌನ್ ಶುರು!
  • ದುಬೈಗೆ ಹಾರಲು ಕ್ಯಾಪ್ಟನ್​​ ರೋಹಿತ್ ಶರ್ಮಾ ಪಡೆ ರೆಡಿ
  • ಯುಎಇ ಪ್ರಯಾಣದ ಹೊತ್ತಲ್ಲೇ ರೋಹಿತ್ ಫ್ಯೂಚರ್ ಡಿಬೇಟ್

ಚಾಂಪಿಯನ್ಸ್​ ಟ್ರೋಫಿಗೆ ಕೌಂಟ್​ಡೌನ್ ಶುರುವಾಗಿದ್ದು, ದುಬೈಗೆ ಹಾರಲು ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಸಜ್ಜಾಗಿ ನಿಂತಿದೆ. ಆದ್ರೆ, ಯುಎಇ ಪ್ರಯಾಣದ ಹೊತ್ತಿನಲ್ಲೇ ರೋಹಿತ್ ಶರ್ಮಾರ ಫ್ಯೂಚರ್ ಡಿಬೇಟ್​​​ ಮತ್ತೆ ಮುನ್ನಲೆಗೆ ಬಂದಿದೆ. ರೋಹಿತ್ ಭವಿಷ್ಯದ ಬಗ್ಗೆ ಬಿಸಿಸಿಐ ಮೂಲಗಳೇ ಒಂದು ಹೇಳ್ತಿದ್ರೆ, ರೋಹಿತ್ ಮತ್ತೊಂದು ಹೇಳ್ತಿದ್ದಾರೆ. ಆದ್ರೆ, ಇದೆಲ್ಲವನ್ನು ನೋಡ್ತಿರುವ ಫ್ಯಾನ್ಸ್​ ಮಾತ್ರ, ಈ ಟೈಮ್​ನಲ್ಲಿ ಇದು ಬೇಕಿತ್ತಾ ಅಂತಿದ್ದಾರೆ.

ಕೆಲ ವರ್ಷಗಳಿಂದ ರಿಪೋರ್ಟ್ಸ್​ ಬರ್ತಾನೆ ಇದೆ. ನಾನು ರಿಪೋರ್ಟ್​ ಬಗ್ಗೆ ಕ್ಲಾರಿಫೈ ಮಾಡಲು ಇಲ್ಲಿಲ್ಲ. ನನಗೀಗ ಇಂಗ್ಲೆಂಡ್ ಹಾಗೂ ಚಾಂಫಿಯನ್ಸ್​ ಟ್ರೋಫಿ ಮುಖ್ಯವಾಗಿದೆ. ನನ್ನ ಫೋಕಸ್, ಈ ಗೇಮ್ಸ್​ ಮೇಲಿದೆ. ಈ ನಂತರ ಏನಾಗಲಿದೆ ಎಂದು ನೋಡೋಣ ಎಂದಿದ್ದಾರೆ ಕ್ಯಾಪ್ಟನ್​ ರೋಹಿತ್ ಶರ್ಮಾ.

ಹಿಟ್​ಮ್ಯಾನ್ ರೋಹಿತ್, ತನ್ನ ಕ್ರಿಕೆಟ್​ ಕರಿಯರ್ ಬಗ್ಗೆ ನೀಡಿದ ಕ್ಲಾರಿಟಿ ಇದು. ಚಾಂಪಿಯನ್ಸ್​ ಟ್ರೋಫಿ ಬಗ್ಗೆ ಮಾತ್ರನೇ ನನ್ನ ಫೋಕಸ್ ಎಂದಿರುವ ರೋಹಿತ್ ಚಾಂಪಿಯನ್ಸ್​ ಟ್ರೋಫಿ ಅದ್ಮೇಲೆ ಏನ್ ಆಗುತ್ತೆ ನೋಡೋಣ ಎಂಬ ಕ್ಲಿಯರ್ ಕಟ್​ ಮೆಸೇಜ್ ನೀಡಿದ್ದಾರೆ. ಆದ್ರೆ, ಬಿಸಿಸಿಐ ಮೂಲಗಳು ಮಾತ್ರ, ಬೇರೆಯದ್ದೇ ಕಥೆ ಹೇಳ್ತಿವೆ.

ಮುಂದಿನ ಭವಿಷ್ಯ ನಿರ್ಧರಿಸಿ..!

ಕೊನೆ ಸೆಲೆಕ್ಷನ್ ಮೀಟಿಂಗ್​ನಲ್ಲಿ ರೋಹಿತ್ ಶರ್ಮಾ ಜೊತೆ ಸೆಲೆಕ್ಟರ್ಸ್, ಬಿಸಿಸಿಐ ಚರ್ಚೆ ನಡೆಸಿದೆ. ಚಾಂಪಿಯನ್ಸ್​ ಟ್ರೋಫಿ ನಂತರ ಭವಿಷ್ಯ ನಿರ್ಧರಿಸಲು ತಿಳಿಸಿದೆ. ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್​​​ ಹಾಗೂ ಏಕದಿನ ವಿಶ್ವಕಪ್ ದೃಷ್ಟಿಯಿಂದ ಲಾಂಗ್ ಟರ್ಮ್​ ಪ್ಲಾನ್​​​ನಲ್ಲಿದೆ ಎಂದರು ಬಿಸಿಸಿಐ ಅಧಿಕಾರಿ.

ಇದನ್ನೂ ಓದಿ:ಎಬಿಡಿ ತಂಡಕ್ಕೆ ಕರೆತರಲು RCB ಸರ್ವ ಪ್ರಯತ್ನ.. ಈ ಜೂನಿಯರ್​ಗೆ ಇದೆ ಆ ಸ್ಕಿಲ್​ಗಳು!

ಐಸಿಸಿ ಚಾಂಪಿಯನ್ಸ್​ ಟ್ರೋಫಿ ಸೆಲೆಕ್ಷನ್ ಮೀಟಿಂಗ್​ನಲ್ಲೇ ಸೆಲೆಕ್ಷನ್ ಕಮಿಟಿ, ಬಿಸಿಸಿಐ ರೋಹಿತ್ ಶರ್ಮಾಗೆ ಡೈಡ್​ ಲೈನ್ ನೀಡಿದೆ. ಚಾಂಪಿಯನ್ಸ್​ ಟ್ರೋಫಿ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದೆ. ಆದ್ರೀಗ ಬಿಸಿಸಿಐನ ಈ ನಡೆ ಎಷ್ಟು ಸರಿ ಎಂಬ ಪ್ರಶ್ನೆ ಹುಟ್ಟುಹಾಕುವಂತೆ ಮಾಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment