newsfirstkannada.com

ಕೊಹ್ಲಿ ಯಶ್ಸಸ್ಸಿನ ಹಿಂದೆ ಧೋನಿಯ ಕಿವಿಮಾತಿದೆ.. ಮಾಹಿ ಹೇಳಿದ ಮಾತನ್ನು ನೆನಪಿಸಿಕೊಂಡ ವಿರಾಟ್​

Share :

Published February 27, 2024 at 12:03pm

Update February 27, 2024 at 1:49pm

    ಧೋನಿ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಕೊಹ್ಲಿ

    ವಿರಾಟ್​​ ಯಶಸ್ಸಿನ ಹಿಂದೆ ಧೋನಿ ಆಡಿದ ಮಾತೊಂದಿಗೆ

    ಅಷ್ಟಕ್ಕೂ ಮಹೇಂದ್ರ ಸಿಂಗ್​ ಧೋನಿ ಹೇಳಿದ ಆ ಮಾತೇನು ಗೊತ್ತಾ?

ವಿರಾಟ್​​ ಕೊಹ್ಲಿಯ ಆನ್​ಫೀಲ್ಡ್​​ ಸಕ್ಸಸ್​ ಹಿಂದೆ ಕಠಿಣ ಪರಿಶ್ರಮ, ಛಲದ ಹೋರಾಟ ಎಲ್ಲವೂ ಇದೆ ಅನ್ನೋದು ನಿಮಗೆ ಗೊತ್ತು. ಆದರೆ, ಆಫ್​ ದ ಫೀಲ್ಡ್​ನಲ್ಲಿ ಕೊಹ್ಲಿ ಯಶಸ್ಸು ಕಂಡಿರೋದ್ರ ಹಿಂದೆ ಧೋನಿಯ ಆ ಒಂದು ಕಿವಿಮಾತಿದೆ. ಅದೇನು ಗೊತ್ತಾ?ಈ​ ಸ್ಟೋರಿ ಓದಿ.

ವಿರಾಟ್​ ಕೊಹ್ಲಿ ವಿಶ್ವ ಕ್ರಿಕೆಟ್​ ಲೋಕವೇ ಕಂಡ ಸಕ್ಸಸ್​​ಫುಲ್​ ಬ್ಯಾಟ್ಸ್​​ಮನ್​ ಮತ್ತು ಕ್ಯಾಪ್ಟನ್​. ಸದ್ಯಕ್ಕಂತೂ ಕೊಹ್ಲಿಯನ್ನ ಮೀರಿಸೋರು ಸದ್ಯ ಕ್ರಿಕೆಟ್​ ಲೋಕದಲ್ಲಿ ಯಾರೂ ಇಲ್ಲ ಬಿಡಿ. ಆನ್​ಫೀಲ್ಡ್​ ಮಾತ್ರವಲ್ಲ. ಆಫ್​ ದ ಫೀಲ್ಡ್​ನಲ್ಲೂ ಕೊಹ್ಲಿ ಯಶಸ್ಸನ್ನ ಕಂಡಿದ್ದಾರೆ. ಕೊಹ್ಲಿಯ ಆನ್​ಫೀಲ್ಡ್​ ಸಕ್ಸಸ್​ ಹಿಂದೆ ಹಾರ್ಡ್​​ವರ್ಕ್ ಕೆಲಸ ಮಾಡಿದೆ. ಆದ್ರೆ, ಆಫ್​ ಫೀಲ್ಡ್​ನ ಸಕ್ಸಸ್​ ಹಿಂದೆ ಧೋನಿಯ ಆ ಒಂದು ಕಿವಿಮಾತು ಕೆಲಸ ಮಾಡಿದೆ.

ಧೋನಿ ಮತ್ತು ವಿರಾಟ್​ ಕೊಹ್ಲಿ

ಧೋನಿ ನಾಯಕತ್ವದಡಿಯಲ್ಲಿ ಆಡಿದ ಕೊಹ್ಲಿ ಕೇವಲ ಕ್ರಿಕೆಟ್​ನ ಪಟ್ಟುಗಳನ್ನ ಮಾತ್ರ ಕಲಿತಿಲ್ಲ. ಜೀವನದ ಪಾಠವನ್ನೂ ಕಲಿತಿದ್ದಾರೆ. ಅದರಲ್ಲೂ ಧೋನಿ ಒಮ್ಮೆ ಹೇಳಿದ ಮಾತು ಕೊಹ್ಲಿ ಜೀವನವನ್ನೇ ಬದಲಾಯಿಸಿ ಬಿಡ್ತಂತೆ. ಧೋನಿ ಜೊತೆ ಮಾತನಾಡುವಾಗ ಒಂದು ಮಾತು ಹೇಳಿದ್ರು. ಜೀವನದಲ್ಲಿ ಎಲ್ಲರನ್ನೂ ಎಲ್ಲಾ ಟೈಮಲ್ಲೂ ಖುಷಿ ಪಡಿಸೋಕೆ ಸಾಧ್ಯವಿಲ್ಲ. ಕೆಲವೊಮ್ಮೆ ನೀನು ಏನೇ ಹೇಳಿದ್ರೂ, ಕೇಳುವವನು ಅವನದೇ ಆದ ರೀತಿಯಲ್ಲಿ ತೆಗೆದುಕೊಳ್ತಾನೆ. ಹಾಗಾಗಿ ಎಲ್ಲರನ್ನೂ ಖುಷಿ ಪಡಿಸೋಕೆ ಹೋಗಬೇಡ. ನೀನು ಸರಿದಾರಿಯಲ್ಲಿದ್ರೆ, ಯಾರನ್ನೂ ಖುಷಿಪಡಿಸೋ ಅಗತ್ಯವಿಲ್ಲ ಅಂತಾ ಹೇಳಿದ್ರು. ಈ ಮಾತು ನನ್ನ ಜೀವನದ ಮೇಲೆ ತುಂಬಾ ಪರಿಣಾಮ ಬೀರಿತು ಎಂದು ಕೊಹ್ಲಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ ಯಶ್ಸಸ್ಸಿನ ಹಿಂದೆ ಧೋನಿಯ ಕಿವಿಮಾತಿದೆ.. ಮಾಹಿ ಹೇಳಿದ ಮಾತನ್ನು ನೆನಪಿಸಿಕೊಂಡ ವಿರಾಟ್​

https://newsfirstlive.com/wp-content/uploads/2023/07/Kohli-and-Dhoni.jpg

    ಧೋನಿ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಕೊಹ್ಲಿ

    ವಿರಾಟ್​​ ಯಶಸ್ಸಿನ ಹಿಂದೆ ಧೋನಿ ಆಡಿದ ಮಾತೊಂದಿಗೆ

    ಅಷ್ಟಕ್ಕೂ ಮಹೇಂದ್ರ ಸಿಂಗ್​ ಧೋನಿ ಹೇಳಿದ ಆ ಮಾತೇನು ಗೊತ್ತಾ?

ವಿರಾಟ್​​ ಕೊಹ್ಲಿಯ ಆನ್​ಫೀಲ್ಡ್​​ ಸಕ್ಸಸ್​ ಹಿಂದೆ ಕಠಿಣ ಪರಿಶ್ರಮ, ಛಲದ ಹೋರಾಟ ಎಲ್ಲವೂ ಇದೆ ಅನ್ನೋದು ನಿಮಗೆ ಗೊತ್ತು. ಆದರೆ, ಆಫ್​ ದ ಫೀಲ್ಡ್​ನಲ್ಲಿ ಕೊಹ್ಲಿ ಯಶಸ್ಸು ಕಂಡಿರೋದ್ರ ಹಿಂದೆ ಧೋನಿಯ ಆ ಒಂದು ಕಿವಿಮಾತಿದೆ. ಅದೇನು ಗೊತ್ತಾ?ಈ​ ಸ್ಟೋರಿ ಓದಿ.

ವಿರಾಟ್​ ಕೊಹ್ಲಿ ವಿಶ್ವ ಕ್ರಿಕೆಟ್​ ಲೋಕವೇ ಕಂಡ ಸಕ್ಸಸ್​​ಫುಲ್​ ಬ್ಯಾಟ್ಸ್​​ಮನ್​ ಮತ್ತು ಕ್ಯಾಪ್ಟನ್​. ಸದ್ಯಕ್ಕಂತೂ ಕೊಹ್ಲಿಯನ್ನ ಮೀರಿಸೋರು ಸದ್ಯ ಕ್ರಿಕೆಟ್​ ಲೋಕದಲ್ಲಿ ಯಾರೂ ಇಲ್ಲ ಬಿಡಿ. ಆನ್​ಫೀಲ್ಡ್​ ಮಾತ್ರವಲ್ಲ. ಆಫ್​ ದ ಫೀಲ್ಡ್​ನಲ್ಲೂ ಕೊಹ್ಲಿ ಯಶಸ್ಸನ್ನ ಕಂಡಿದ್ದಾರೆ. ಕೊಹ್ಲಿಯ ಆನ್​ಫೀಲ್ಡ್​ ಸಕ್ಸಸ್​ ಹಿಂದೆ ಹಾರ್ಡ್​​ವರ್ಕ್ ಕೆಲಸ ಮಾಡಿದೆ. ಆದ್ರೆ, ಆಫ್​ ಫೀಲ್ಡ್​ನ ಸಕ್ಸಸ್​ ಹಿಂದೆ ಧೋನಿಯ ಆ ಒಂದು ಕಿವಿಮಾತು ಕೆಲಸ ಮಾಡಿದೆ.

ಧೋನಿ ಮತ್ತು ವಿರಾಟ್​ ಕೊಹ್ಲಿ

ಧೋನಿ ನಾಯಕತ್ವದಡಿಯಲ್ಲಿ ಆಡಿದ ಕೊಹ್ಲಿ ಕೇವಲ ಕ್ರಿಕೆಟ್​ನ ಪಟ್ಟುಗಳನ್ನ ಮಾತ್ರ ಕಲಿತಿಲ್ಲ. ಜೀವನದ ಪಾಠವನ್ನೂ ಕಲಿತಿದ್ದಾರೆ. ಅದರಲ್ಲೂ ಧೋನಿ ಒಮ್ಮೆ ಹೇಳಿದ ಮಾತು ಕೊಹ್ಲಿ ಜೀವನವನ್ನೇ ಬದಲಾಯಿಸಿ ಬಿಡ್ತಂತೆ. ಧೋನಿ ಜೊತೆ ಮಾತನಾಡುವಾಗ ಒಂದು ಮಾತು ಹೇಳಿದ್ರು. ಜೀವನದಲ್ಲಿ ಎಲ್ಲರನ್ನೂ ಎಲ್ಲಾ ಟೈಮಲ್ಲೂ ಖುಷಿ ಪಡಿಸೋಕೆ ಸಾಧ್ಯವಿಲ್ಲ. ಕೆಲವೊಮ್ಮೆ ನೀನು ಏನೇ ಹೇಳಿದ್ರೂ, ಕೇಳುವವನು ಅವನದೇ ಆದ ರೀತಿಯಲ್ಲಿ ತೆಗೆದುಕೊಳ್ತಾನೆ. ಹಾಗಾಗಿ ಎಲ್ಲರನ್ನೂ ಖುಷಿ ಪಡಿಸೋಕೆ ಹೋಗಬೇಡ. ನೀನು ಸರಿದಾರಿಯಲ್ಲಿದ್ರೆ, ಯಾರನ್ನೂ ಖುಷಿಪಡಿಸೋ ಅಗತ್ಯವಿಲ್ಲ ಅಂತಾ ಹೇಳಿದ್ರು. ಈ ಮಾತು ನನ್ನ ಜೀವನದ ಮೇಲೆ ತುಂಬಾ ಪರಿಣಾಮ ಬೀರಿತು ಎಂದು ಕೊಹ್ಲಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More