/newsfirstlive-kannada/media/post_attachments/wp-content/uploads/2025/01/BLY_KIDNAP_1.jpg)
ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಆಗಿದ್ದ ಬಳ್ಳಾರಿ ಡಾಕ್ಟರ್ ಕೇಸ್ ಸುಖ್ಯಾಂತವಾಗಿದೆ. ನಿನ್ನೆ ಬೆಳಗ್ಗೆ ಕಿಡ್ನಾಪ್ ಆಗಿದ್ದ ಬಳ್ಳಾರಿ ಜಿಲ್ಲಾಸ್ಪತ್ರೆ ವೈದ್ಯ ಸುನೀಲ್ರನ್ನ ಅಪಹರಣಕಾರರು ಊರು ಸುತ್ತಾಡಿಸಿ ಕೈಗೆ 300 ರೂಪಾಯಿ ಕೊಟ್ಟು ಅಜ್ಞಾತ ಸ್ಥಳದಲ್ಲಿ ಬಿಟ್ಟು ಹೋಗಿದ್ದಾರೆ..
ಜಿಲ್ಲಾಸ್ಪತ್ರೆ ವೈದ್ಯ ಸುನೀಲ್ ಕಿಡ್ನಾಪ್ ಪ್ರಕರಣ ಸುಖಾಂತ್ಯ
ಬಳ್ಳಾರಿ ಜಿಲ್ಲಾಸ್ಪತ್ರೆ ವೈದ್ಯ ಸುನೀಲ್ ಕಿಡ್ನಾಪ್ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ನಿನ್ನೆ ಬೆಳಗ್ಗೆ ಡಾಕ್ಟರ್ ಸುನೀಲ್ ವಾಕಿಂಗ್ ಮಾಡುವಾಗ ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ವೈದ್ಯ ಸುನೀಲ್ರನ್ನು ಕಿಡ್ನ್ಯಾಪ್ ಮಾಡಿದ್ದರು. ಬೆಳಗ್ಗೆ ಅಪಹರಣ ಮಾಡಿದವರು. ಊರೂರು ಸುತ್ತಾಡಿಸಿದ ಬಿಟ್ಟು ಕಳಿಸಿದ್ದು, ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
6 ಕೋಟಿ ಹಣ ಬೇಡಿಕೆ ಇಟ್ಟಿದ್ದ ದುಷ್ಕರ್ಮಿಗಳು
ಬಳ್ಳಾರಿ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯರಾಗಿರುವ ಡಾ.ಸುನೀಲ್ ಅವರನ್ನ ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಸುನೀಲ್ ಅವರ ಮೊಬೈಲ್ನಿಂದ ಸುನೀಲ್ ಸಹೋದರ ವೇಣು ಅವರಿಗೆ ಕರೆ ಮಾಡಿ 3 ಕೋಟಿ ನಗದು ಹಾಗೂ 3 ಕೋಟಿ ಮೌಲ್ಯದ ಬಂಗಾರಕ್ಕೆ ಡಿಮ್ಯಾಂಡ್ ಮಾಡಿದ್ದರು. ವೈದ್ಯನ ಅಪಹರಣದ ಸುದ್ದಿ ತಿಳಿಯುತ್ತಿದ್ದಂತೆ ಬಳ್ಳಾರಿ ಪೊಲೀಸರು ಫುಲ್ ಅಲರ್ಟ್ ಆಗಿ, ಶೋಧ ಕಾರ್ಯಕ್ಕೆ ಮುಂದಾಗಿದ್ದರು.
ಕೈಗೆ ₹300 ಕೊಟ್ಟು ಬಿಟ್ಟು ಹೋದ ಕಿಡ್ನಾಪರ್ಸ್
ಆರು ಕೋಟಿಗೆ ಬೇಡಿಕೆ ಇಟ್ಟಿದ್ದ ಅಪಹರಣಕಾರರಿಗೆ ಅದೇನ್ ಬುದ್ಧಿ ಬಂತೋ ಗೊತ್ತಿಲ್ಲ. ರಾತ್ರಿ 8 ಸುಮಾರಿಗೆ ಸೋಮಸಮುದ್ರ ಗ್ರಾಮದ ಬಳಿ ಡಾಕ್ಟರ್ ಸುನೀಲ್ ಅವರನ್ನ ಬಿಟ್ಟು ಕಳಿಸಿದ್ದಾರೆ. ಈ ವೇಳೆ ವೈದ್ಯ ಸುನೀಲ್ ಕೈಗೆ 300 ರೂಪಾಯಿ ಕೊಟ್ಟು ಬಸ್ ಹತ್ಕೊಂಡು ಹೋಗಿ ಅಂತಾ ಬಿಟ್ಟು ಕಳಿಸಿದ್ದಾರೆ. ಕಿಡ್ನಾಪರ್ಸ್ ಬಿಡುತ್ತಿದ್ದಂತೆ ಬದುಕಿತಲೇ ಬಡ ಜೀವ ಅಂತಾ ಓಡೋಡಿ ಬಂದ ಡಾಕ್ಟರ್ ಸುನೀಲ್, ಮನೆಯವ್ರನ್ನ ಸಂಪರ್ಕಿಸಿ ಬಳಿಕ ಮನೆಗೆ ಬಂದಿದ್ದಾರೆ.
ಇದನ್ನೂ ಓದಿ:ಗೊಂಬೆಯಾಟದ ಭೀಮವ್ವಗೆ ಪದ್ಮಶ್ರೀ.. ಗ್ರಾಮೀಣ ಭಾರತದ ರಿಯಲ್ ಸೂಪರ್ ಸ್ಟಾರ್ಸ್ ಇವ್ರು! ಹೇಗೆ ಗೊತ್ತಾ?
ಇನ್ನು, ವೈದ್ಯರ ಕಿಡ್ನಾಪ್ಗೆ ಅವರ ಸಹೋದರರನ ವ್ಯವಹಾರ ಲಿಂಕ್ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಆದ್ರೀಗ ಪ್ರಕರಣ ಸುಖಾಂತ್ಯ ಕಂಡಿದೆ. ವೈದ್ಯ ಸುನೀಲ್ನಲ್ಲಿ ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ. ಸದ್ಯ ಅವರ ಕಣ್ಣಿನ ಭಾಗಕ್ಕೆ ಪೆಟ್ಟಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಆದ್ರೆ, ಡಾಕ್ಟರ್ರನ್ನ ಕಿಡ್ನಾಪ್ ಮಾಡಿದ್ದು ಯಾರು? ಯಾಕಾಗಿ ಕಿಡ್ನಾಪ್ ಮಾಡಿದರು ಅನ್ನೋದು ಪೊಲೀಸರ ತನಿಖೆಯಿಂದಲೇ ತಿಳಿದು ಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ