/newsfirstlive-kannada/media/post_attachments/wp-content/uploads/2025/07/BEN-STOKES-2.jpg)
ಇಂಡೋ-ಇಂಗ್ಲೆಂಡ್ ಮ್ಯಾಂಚೆಸ್ಟರ್ ಟೆಸ್ಟ್ ಮುಗಿದ ಅಧ್ಯಾಯ. ಟೀಮ್ ಇಂಡಿಯಾ ಆತ್ಯದ್ಭುತ ಹೋರಾಟ ಸಂಘಟಿಸಿದ್ದೂ ಆಯ್ತು. ಆರಂಭದಲ್ಲೇ ಪಂದ್ಯ ಗೆದ್ದೇ ಬಿಟ್ವಿ ಎಂದು ಮೆರೆದಾಡ್ತಿದ್ದ ಇಂಗ್ಲೆಂಡ್ ಕೆಚ್ಚೆದೆಯ ಹೋರಾಟದ ಮುಂದೆ ಮಂಡಿಯೂರಿ ಸರೆಂಡರ್ ಆಗಿದ್ದೂ ಆಯ್ತು. ಅಂತಿಮ ಹಂತದಲ್ಲಿ ನಡೆದ ವಿವಾದ ಮಾತ್ರ ತಣ್ಣಗಾಗಿಲ್ಲ.
ಶತಕದ ಹಾದಿಯಲ್ಲಿದ್ದಾಗ ಡ್ರಾಗೆ ಮುಂದಾದ ಸ್ಟೋಕ್ಸ್
ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಅಂತಿಮ ದಿನದಾಟದ ಅಂತ್ಯಕ್ಕೆ 15 ಓವರ್ಗಳು ಬಾಕಿ ಉಳಿದಿದ್ವು. ಈ ವೇಳೆಗಾಗಲೇ ಟೀಮ್ ಇಂಡಿಯಾ ಹೋರಾಟಕ್ಕೆ ಇಂಗ್ಲೆಂಡ್ ಬಳಲಿ ಬೆಂಡಾಗಿತ್ತು. ಹೀಗಾಗಿ ಆಂಗ್ಲರ ನಾಯಕ ಬೆನ್ ಸ್ಟೋಕ್ಸ್, ಡ್ರಾಗೆ ಮುಂದಾದ್ರು. ಆ ವೇಳೆಗೆ ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಶತಕದ ಹೊಸ್ತಿಲಲ್ಲಿದ್ರು. ಹೀಗಾಗಿ ಸ್ಟೋಕ್ಸ್ ಮನವಿಗೆ ಕ್ಯಾರೆ ಅನ್ನಲಿಲ್ಲ. ಇದ್ರಿಂದ ಇಂಗ್ಲೆಂಡ್ ಪ್ಲೇಯರ್ಸ್ vs ಇಂಡಿಯನ್ ಪ್ಲೇಯರ್ಸ್ ನಡುವೆ ಮಾತಿನ ಚಕಮಕಿ ನಡೀತು.
ಇದನ್ನೂ ಓದಿ: ಕೆಟ್ಟದಾಗಿ ಮೆಸೇಜ್ ಮಾಡೋರಿಗೆ ಇನ್ಮೇಲೆ ಇದೆ ಮಾರಿಹಬ್ಬ -ರಮ್ಯಾ ಕೇಸ್ ಬೆನ್ನಲ್ಲೇ ಮಹಿಳಾ ಆಯೋಗ ಮಾಸ್ಟರ್ ಪ್ಲಾನ್
ಪಂದ್ಯದ ಬಳಿಕ ಹ್ಯಾಂಡ್ಶೇಕ್ ಮಾಡದ ಸ್ಟೋಕ್ಸ್
ಟೀಮ್ ಇಂಡಿಯಾ ಡ್ರಾ ಒಪ್ಪದ ಮೇಲೆ ಒಲ್ಲದ ಮನಸ್ಸಿಂದಲೇ ಇಂಗ್ಲೆಂಡ್ ಬೇಕಾಬಿಟ್ಟಿ ಬೌಲಿಂಗ್ ಮಾಡಿತು. ಕೆಲವೇ ಓವರ್ಗಳಲ್ಲಿ ಜಡೇಜಾ, ವಾಷಿಂಗ್ಟನ್ ಸುಂದರ್ ಶತಕ ಪೂರೈಸಿದ್ರು. ಆ ಬಳಿಕ ಪಂದ್ಯ ಡ್ರಾ ಮಾಡಿಕೊಂಡ್ರು. ಈ ವೇಳೆ ಸ್ಟೋಕ್ಸ್ ಅತಿರೇಕದ ವರ್ತನೆ ತೋರಿದ್ರು. ಜಡೇಜಾ-ಸುಂದರ್ ಜೊತೆಗೆ ಹ್ಯಾಂಡ್ಶೇಕ್ ಕೂಡ ಮಾಡಲಿಲ್ಲ.
ಸುಂದರ್-ಜಡೇಜಾ ಶತಕಕ್ಕೆ ಅಡ್ಡಗಾಲು ಹಾಕಿದ್ದು ಸರೀನಾ..?
ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಸಿಡಿಸೋದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಮ್ಯಾಂಚೆಸ್ಟರ್ ಟೆಸ್ಟ್ನಲ್ಲಿ ಸುದೀರ್ಘ ಹೋರಾಟ ನಡೆಸಿದ್ದ ಜಡೇಜಾ, ಸುಂದರ್ ಶತಕ ಸಿಡಿಸಲು ನಿಜಕ್ಕೂ ಅರ್ಹರಿದ್ರು. ಅದ್ರಲ್ಲೂ ವಾಷಿಂಗ್ಟನ್ ಸುಂದರ್ ಚೊಚ್ಚಲ ಟೆಸ್ಟ್ ಶತಕದ ಹೊಸ್ತಿಲಲ್ಲಿದ್ರು. ಹೋರಾಟ ನಡೆಸಿ ತಂಡವನ್ನ ಸೋಲಿನಿಂದ ಪಾರು ಮಾಡಿದವರ ಶತಕಕ್ಕೆ ಅಡ್ಡಗಾಲು ಹಾಕಿದ್ದು ತಪ್ಪೇ.
ಬೆನ್ ಸ್ಟೋಕ್ಸ್ ವರ್ತನೆಗೆ ಮಾಜಿ ಕ್ರಿಕೆಟಿಗರು ಕಿಡಿ..!
ಆನ್ಫೀಲ್ಡ್ ಆಟ ಅಂತ್ಯವಾದ ಬೆನ್ನಲ್ಲೇ ಈ ಘಟನೆ ಚರ್ಚೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿರೋ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಆಟಗಾರರ ಬೆಂಬಲಕ್ಕೆ ನಿಂತಿದ್ದಾರೆ.
90 ರನ್ಗಳಿಸಿ ಒಬ್ಬ, 85 ರನ್ಗಳಿಸಿ ಒಬ್ಬ ಬ್ಯಾಟಿಂಗ್ ಮಾಡ್ತಿದ್ದಾಗ ಅವರು ಶತಕ ಸಿಡಿಸಲು ಅರ್ಹರಲ್ಲವೇ? ಇಂಗ್ಲೆಂಡ್ ತಂಡದ ಅಟಗಾರರು ಹೀಗೆ ಸಾಧನೆಯ ಹೊಸ್ತಿಲಲ್ಲಿದ್ದಾಗ ಮೈದಾನದಿಂದ ಹೊರ ಬರ್ತಾರಾ? ಇಲ್ಲ, ನಮ್ಮ ಆಟಗಾರರು ಚಂಡಮಾರುತ ಎದುರಿಸಿದ್ರು. ಅವರು ಶತಕಕ್ಕೆ ಅರ್ಹರು. ನಾವಿಲ್ಲಿ ಯಾರನ್ನೂ ಮೆಚ್ಚಿಸೋಕೆ ಬಂದಿಲ್ಲ-ಗೌತಮ್ ಗಂಭಿರ್
ಅದು ಸರಿಯಾದ ನಿರ್ಧಾರ. ಫೀಲ್ಡ್ಗಿಳಿದ ಮೇಲೆ ಅದ್ರಲ್ಲೂ 140 ಓವರ್ ಬೌಲಿಂಗ್ ಮಾಡಿದ ಮೇಲೆ ನಿಮಗೆ ಹತಾಶೆಯಾಗುತ್ತೆ. ಇಂಗ್ಲೆಂಡ್ ತಂಡದಲ್ಲಿ ಆ ಹತಾಶೆ ಇತ್ತು. ನನಗೆ ಭಾರತ ಯಾಕೆ ಹಾಗೆ ಮಾಡಿತು ಅನ್ನೋದು ಅರ್ಥವಾಗುತ್ತೆ. 5 ವರ್ಷ ಕಳೆದ ಬಳಿಕ ಅ ಸ್ಕೋರ್ಕಾರ್ಡ್ ನೋಡಿದ್ರೆ, ಪಂದ್ಯವನ್ನ ಉಳಿಸಿದ 2 ಅದ್ಭುತ ಶತಕಗಳು ಕಾಣುತ್ತವೆ. ಜೊತೆಗೆ ಶುಭಮನ್ ಶತಕ. ಅಗ ಹ್ಯಾರಿ ಬ್ರೂಕ್ರ 37MPH ಬಾಲ್ ಮರೆತುಹೋಗಿರುತ್ತೆ -ಇಂಗ್ಲೆಂಡ್ ಮಾಜಿ ಕ್ಯಾಪ್ಟನ್ ಅಲಿಸ್ಟರ್ ಕುಕ್
ಅದ್ರಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ. ಇಂಗ್ಲೆಂಡ್ ಬೌಲರ್ಗಳಿಗೆ ಸುಸ್ತಾಗಿತ್ತು. ಕಾಲುಗಳಿಗೆ ಸುಸ್ತಾಗಿತ್ತು. ಅದಕ್ಕೆ ಮುಗಿಸಲು ನಿರ್ಧರಿಸಿದ್ರು. ಅವರಿಬ್ಬರು 80, 90 ರನ್ಗಳಿಸಲು ತುಂಬಾ ಕಷ್ಟಪಟ್ಟಿದ್ರು. ಅವರಿಗೆ ಟೆಸ್ಟ್ ಶತಕ ಬೇಕಿತ್ತು. ಹ್ಯಾರಿ ಬ್ರೂಕ್ ಬಳಿ ಬೌಲಿಂಗ್ ಮಾಡಿಸಬಾರದಿತ್ತು. ನನಗೆ ಸಿಲ್ಲಿ ಅನಿಸಿತು. ಇಂಡಿಯಾ ಡ್ರಾಗೆ ಅರ್ಹವಾಗಿತ್ತು. ಜಡೇಜಾ-ಸುಂದರ್ ಕೊನೆಯವರೆಗೂ ಅಲ್ಲಿರಲು ಅರ್ಹರಾಗಿದ್ರು- ಇಂಗ್ಲೆಂಡ್ ಮಾಜಿ ನಾಯಕ ನಾಸೀರ್ ಹುಸೇನ್
ಗೆದ್ದಾಗಷ್ಟೇ ಸ್ಟೋಕ್ಸ್ಗೆ ಕ್ರೀಡಾಸ್ಫೂರ್ತಿ ಮೆರೆಯೋದಾ?
ಇದಕ್ಕೂ ಹಿಂದಿನ ಲಾರ್ಡ್ಸ್ ಟೆಸ್ಟ್ನಲ್ಲೂ ರವೀಂದ್ರ ಜಡೇಜಾ ಇಂತಹದ್ದೇ ಹೋರಾಟ ನಡೆಸಿದ್ರು. ದುರಾದೃಷ್ಟವಶಾತ್ ಫಲ ಸಿಗಲಿಲ್ಲ. ಇಂಗ್ಲೆಂಡ್ ಗೆದ್ದ ಬಳಿಕ ಸ್ಟೋಕ್ಸ್, ಜಡೇಜಾನ ತಬ್ಬಿಕೊಂಡು ಸಂತೈಸಿದ್ರು. ಗೆದ್ದಾಗ ಕ್ರೀಡಾಸ್ಫೂರ್ತಿ ಮರೆದಿದ್ದ ಸ್ಟೋಕ್ಸ್, ಡ್ರಾನಲ್ಲಿ ಪಂದ್ಯ ಅಂತ್ಯವಾದ ಮೇಲೆ ಕ್ರೀಡಾಸ್ಫೂರ್ತಿ ಮರೆತು ಬಿಟ್ರು. ಇದು ಬೆನ್ಸ್ಟೋಕ್ಸ್ ಅಂತಾ ಆಟಗಾರರಿಗೆ ಇದು ಶೋಭೆ ತರಲ್ಲ.
ಇದನ್ನೂ ಓದಿ: ಐ ಲವ್ ಯೂ ಹೇಳೋದ್ರಲ್ಲಿ ತಪ್ಪಿಲ್ಲ -ಪೋಕ್ಸೋ ಕೇಸ್ಗೆ ಸಂಬಂಧಿಸಿ ಹೈಕೋರ್ಟ್ನಿಂದ ಮಹತ್ವದ ತೀರ್ಪು
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ