Advertisment

ಸುಪ್ರೀಂ ಕಟಕಟೆಗೆ ಹೋಗುತ್ತಾ ದರ್ಶನ್ ಕೇಸ್..? ಬೆಂಗಳೂರು ಪೊಲೀಸರಿಂದ ಮಹತ್ವದ ಪ್ಲಾನ್

author-image
Ganesh
Updated On
ಸುಪ್ರೀಂ ಕಟಕಟೆಗೆ ಹೋಗುತ್ತಾ ದರ್ಶನ್ ಕೇಸ್..? ಬೆಂಗಳೂರು ಪೊಲೀಸರಿಂದ ಮಹತ್ವದ ಪ್ಲಾನ್
Advertisment
  • ದರ್ಶನ್​​ಗೆ ಶಾಕ್​​​ ನೀಡಲು ಮುಂದಾದ ಪೊಲೀಸ್ ಅಧಿಕಾರಿಗಳು
  • ಮಧ್ಯಂತರ ಜಾಮೀನು ಪಡೆದು ಚಿಕಿತ್ಸೆ ಪಡೆಯುತ್ತಿರುವ ದರ್ಶನ್
  • ಗೃಹ ಇಲಾಖೆ ಅನುಮತಿ ಕೊಟ್ರೆ ದರ್ಶನ್​​ ಕೇಸ್​ಗೆ ಬಿಗ್ ಟ್ವಿಸ್ಟ್

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಹೈಕೋರ್ಟ್​ನಿಂದ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ದರ್ಶನ್​ಗೆ ನೀಡಿರುವ ಜಾಮೀನನ್ನು ರದ್ದು ಕೋರಿ ಅರ್ಜಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Advertisment

ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಪೊಲೀಸರು ರಾಜ್ಯ ಗೃಹ ಇಲಾಖೆಗೆ ಬೆಂಗಳೂರು ಪೊಲೀಸರು ಪತ್ರ ಬರೆದಿದ್ದಾರೆ. ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ನಟ ದರ್ಶನ್​ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಜಾಮೀನು ಪ್ರಶ್ನಿಸಲು ಇದೀಗ ಪೊಲೀಸರು ಹೆಜ್ಜೆಯಿಟ್ಟಿದ್ದಾರೆ. ಮೊದಲು ಕಾನೂನು ಸಲಹೆ ಪಡೆದು ಇದೀಗ ಗೃಹ ಇಲಾಖೆಗೆ ಅನುಮತಿ ಕೋರಿ ಪತ್ರ ಬರೆಯಲಾಗಿದೆ. ರಾಜ್ಯ ಗೃಹ ಇಲಾಖೆ ಈ ಪತ್ರವನ್ನು ಕಾನೂನು ಇಲಾಖೆಗೆ ರವಾನಿಸಲಿದೆ. ಕಾನೂನು ಇಲಾಖೆಗೆ ಪರಾಮರ್ಶಿಸಲು ಪತ್ರವನ್ನು ರವಾನಿಸಲಿದೆ. ಆ ನಂತರ ಗೃಹ ಇಲಾಖೆಯಿಂದ ಅನುಮತಿಯ ಬಗ್ಗೆ ತೀರ್ಮಾನವಾಗಲಿದೆ.

ಇದನ್ನೂ ಓದಿ:ದರ್ಶನ್ ಆರೋಗ್ಯ ಅಪ್​ಡೇಟ್ಸ್; ಬಿಜಿಎಸ್​​ನಲ್ಲಿ ಸರ್ಜರಿಗೆ ಗ್ರೀನ್ ಸಿಗ್ನಲ್

Advertisment

ವಿಶೇಷ ಸೂಚನೆ: DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment