newsfirstkannada.com

ಧರ್ಮಸ್ಥಳಕ್ಕೆ ಹೊರಟಿದ್ದ ಬೆಂಗಳೂರು ಯಾತ್ರಿಕ ಮಾರ್ಗ ಮಧ್ಯದಲ್ಲೇ ಸಾವು; ಟಾಯ್ಲೆಟ್​ಗೆ ಹೋಗಿದ್ದಾಗ ಬಂದ ಯಮ

Share :

Published March 2, 2024 at 2:28pm

    ಬೆಂಗಳೂರು ನಿವಾಸಿ ಮಧುಸೂಧನ್ (52) ಮೃತ ದುರ್ದೈವಿ

    ಟಿಟಿ ವಾಹನದಲ್ಲಿ 12 ಜನರ ತಂಡ ಧರ್ಮಸ್ಥಳಕ್ಕೆ ಹೊರಟಿತ್ತು

    ಬಣಕಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

ಚಿಕ್ಕಮಗಳೂರು: ಬೆಂಗಳೂರಿನ ಯಾತ್ರಿಕ ಶೌಚಾಲಯಕ್ಕೆ ಹೋದಾಗ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.

ಬೆಂಗಳೂರು ನಿವಾಸಿ ಮಧುಸೂಧನ್ (52) ಮೃತ ದುರ್ದೈವಿ. ಬೆಂಗಳೂರಿನಿಂದ 12 ಜನರ ತಂಡ ಧರ್ಮಸ್ಥಳಕ್ಕೆ ಟಿಟಿ ವಾಹನದ ಮೂಲಕ ಹೊರಟಿದ್ದರು. ಮೂತ್ರ ವಿಸರ್ಜನೆಗೆ ಎಂದು ಕೊಟ್ಟಿಗೆಹಾರ ಶೌಚಾಲಯಕ್ಕೆ ಹೋದಾಗ ದುರ್ಘಟನೆ ಸಂಭವಿಸಿದೆ.

ಕೂಡಲೇ ಅವರನ್ನು ಬಣಕಲ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಾರ್ಗ ಮಧ್ಯೆಯೇ ವೈದ್ಯರು ಸಾವನ್ನಪ್ಪಿರೋದಾಗಿ ತಿಳಿಸಿದ್ದಾರೆ. ಬಣಕಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧರ್ಮಸ್ಥಳಕ್ಕೆ ಹೊರಟಿದ್ದ ಬೆಂಗಳೂರು ಯಾತ್ರಿಕ ಮಾರ್ಗ ಮಧ್ಯದಲ್ಲೇ ಸಾವು; ಟಾಯ್ಲೆಟ್​ಗೆ ಹೋಗಿದ್ದಾಗ ಬಂದ ಯಮ

https://newsfirstlive.com/wp-content/uploads/2024/03/AMBULENCE-1.jpg

    ಬೆಂಗಳೂರು ನಿವಾಸಿ ಮಧುಸೂಧನ್ (52) ಮೃತ ದುರ್ದೈವಿ

    ಟಿಟಿ ವಾಹನದಲ್ಲಿ 12 ಜನರ ತಂಡ ಧರ್ಮಸ್ಥಳಕ್ಕೆ ಹೊರಟಿತ್ತು

    ಬಣಕಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

ಚಿಕ್ಕಮಗಳೂರು: ಬೆಂಗಳೂರಿನ ಯಾತ್ರಿಕ ಶೌಚಾಲಯಕ್ಕೆ ಹೋದಾಗ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.

ಬೆಂಗಳೂರು ನಿವಾಸಿ ಮಧುಸೂಧನ್ (52) ಮೃತ ದುರ್ದೈವಿ. ಬೆಂಗಳೂರಿನಿಂದ 12 ಜನರ ತಂಡ ಧರ್ಮಸ್ಥಳಕ್ಕೆ ಟಿಟಿ ವಾಹನದ ಮೂಲಕ ಹೊರಟಿದ್ದರು. ಮೂತ್ರ ವಿಸರ್ಜನೆಗೆ ಎಂದು ಕೊಟ್ಟಿಗೆಹಾರ ಶೌಚಾಲಯಕ್ಕೆ ಹೋದಾಗ ದುರ್ಘಟನೆ ಸಂಭವಿಸಿದೆ.

ಕೂಡಲೇ ಅವರನ್ನು ಬಣಕಲ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಾರ್ಗ ಮಧ್ಯೆಯೇ ವೈದ್ಯರು ಸಾವನ್ನಪ್ಪಿರೋದಾಗಿ ತಿಳಿಸಿದ್ದಾರೆ. ಬಣಕಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More