/newsfirstlive-kannada/media/post_attachments/wp-content/uploads/2024/08/rain-18.jpg)
[caption id="attachment_80387" align="alignnone" width="800"] ನಿನ್ನೆ ರಾತ್ರಿ ಬೆಂಗಳೂರಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರಿದ್ದಿದ್ದಾನೆ. ನಗರದ ಕೆ.ಆರ್​.ಮಾರ್ಕೆಟ್, ಜೆ.ಸಿ ರೋಡ್, ವಿಜಯನಗರ, ಕಾಮಾಕ್ಷಿಪಾಳ್ಯ ಸೇರಿದಂತೆ ಹಲವು ಏರಿಯಾಗಳಲ್ಲಿ ಭಾರೀ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.[/caption]
[caption id="attachment_80383" align="alignnone" width="800"] ಮಳೆಯಿಂದಾಗಿ ಓಕುಳಿಪುರಂ ಅಂಡರ್ ಪಾಸ್​ನಲ್ಲಿ ನೀರು ನಿಂತಿದೆ. ಪರಿಣಾಮ ಅಂಡರ್​ಪಾಸ್​ನಲ್ಲಿ ಆ್ಯಂಬುಲೆನ್ಸ್ ಕೆಟ್ಟು ನಿಂತಿದೆ.ಇದರಿಂದ ಹಾಸನದಿಂದ ಬಂದಿದ್ದ ರೋಗಿ ಪರದಾಡುವಂತೆ ಆಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.[/caption]
[caption id="attachment_80382" align="alignnone" width="800"] ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಂಭಾಗ ರಸ್ತೆ ಸಂಪೂರ್ಣ ನೀರಿನಲ್ಲಿ ಮುಳುಗಡೆ ಆಗಿದೆ. ರಸ್ತೆಯಲ್ಲಿ ಸುಮಾರು ಎರಡು ಅಡಿಯಷ್ಟು ನೀರು ನಿಂತಿದೆ.[/caption]
[caption id="attachment_80385" align="alignnone" width="800"] ನೀರು ಸರಾಗವಾಗಿ ಹರಿದು ಹೋಗದೇ ವಾಹನ ಸವಾರರು ಪರದಾಟ ನಡೆಸ್ತಿದ್ದಾರೆ. ಸಿಲ್ಕ್ ಬೋರ್ಡ್​ನಲ್ಲಿ ಕಾರು ಒಂದು ನೀರಲ್ಲಿ ಮುಳುಗಿದೆ.[/caption]
[caption id="attachment_80386" align="alignnone" width="800"] ಇನ್ನು ಕೆ.ಆರ್.ಮಾರ್ಕೆಟ್ ಸುತ್ತಮುತ್ತ ರಸ್ತೆಗಳಲ್ಲಿ ಸಂಪೂರ್ಣ ಜಲ ದಿಗ್ಬಂಧನ ಆಗಿದೆ. ಚಿಕ್ಕಪೇಟೆ, ಸುಲ್ತಾನ್ ಪೇಟೆ, ಬಳೇಪೇಟೆ, ಕಾಟನ್ ಪೇಟೆ ರಸ್ತೆಯಲ್ಲಿ ಸಂಪೂರ್ಣ ಜಾಲವೃತವಾಗಿದೆ.[/caption]
[caption id="attachment_80384" align="alignnone" width="800"] ಸುಲ್ತಾನ್ ಪೇಟೆ ಮುಖ್ಯ ರಸ್ತೆ ಸಂಪೂರ್ಣ ರಸ್ತೆ ಬಂದ್ ಆಗಿದೆ. ಅಂಗಡಿ ಮುಗ್ಗಟ್ಟುಗಳಿಗೆ ನೀರು ನುಗ್ಗಿದೆ.[/caption]
[caption id="attachment_80380" align="alignnone" width="800"] ಮಧ್ಯ ರಾತ್ರಿ ಸುಮಾರು 2 ಗಂಟೆಗೆ ಶುರುವಾದ ಮಳೆ, ಎರಡ್ಮೂರು ಗಂಟೆಗಳ ಕಾಲ ಬಿಟ್ಟು ಬಿಡದೇ ಗುಡುಗು ಸಹಿತ ಮಳೆಯಾಗಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳೆಲ್ಲ ಜಲಾವೃತವಾಗಿದೆ.[/caption]
[caption id="attachment_80381" align="alignnone" width="800"] ನೀರಿನಲ್ಲಿ ವಾಹನ ಸವಾರರು ಸಂಚರಿಸಲಾಗದೇ ಪರದಾಡುತ್ತಿದ್ದಾರೆ. ಬೆಳಗ್ಗೆ ಎದ್ದು ವಿವಿಧ ಆಫೀಸ್​ಗಳಿಗೆ ಹೋಗುವ ಉದ್ಯೋಗಿಗಳು ಮಳೆಯಿಂದಾಗಿ ಕಿರಿಕಿರಿ ಅನುಭವಿಸ್ತಿದ್ದಾರೆ.[/caption]
[caption id="attachment_80389" align="alignnone" width="800"] ಬೆಂಗಳೂರಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಭಾರೀ ಅವಾಂತರ ಸೃಷ್ಟಿಯಾಗಿದೆ, ಅಲ್ಲದೇ ಕೆಲವು ಅಪಾರ್ಟ್​ಮೆಂಟ್​ಗಳಲ್ಲೂ ನೀರು ನುಗ್ಗಿದೆ. ಜನರಿಗೆ ಭಾರೀ ತೊಂದರೆ ಆಗ್ತಿದೆ.[/caption]
[caption id="attachment_80388" align="alignnone" width="800"] ನಿನ್ನೆ ರಾತ್ರಿಯಿಂದ ಬಂದ ಮಳೆಗೆ ಮರದ ಕೊಂಬೆ ಧರೆಗೆ ಉರುಳಿದೆ. ಗೋವಿಂದರಾಜನಗರದಲ್ಲಿ ಕಾರಿನ ಮೇಲೆ ಮರದ ಕೊಂಬೆ ಬಿದ್ದಿದೆ. ಅತ್ತ ಸಿಲ್ಕ್​ ಬೋರ್ಡ್​ನಲ್ಲಿ ಬಿಳಿ ಬಣ್ಣದ ಕಾರು ನೀರಿನಲ್ಲಿ ಕೆಟ್ಟು ನಿಂತಿದೆ.[/caption]
[caption id="attachment_80391" align="alignnone" width="800"] ಜಯದೇವ ಹಾಸ್ಪಿಟಲ್​ ಅಂಡರ್​ಪಾಸ್​ನಲ್ಲಿ ರಿಕ್ಷಾ ಕೆಟ್ಟು ಹೋಗಿ ಚಾಲಕ ತಳ್ಳಿಕೊಂಡು ಹೋಗುವ ದೃಶ್ಯ ನ್ಯೂಸ್​ಫಸ್ಟ್ಗೆ ಸಿಕ್ಕಿದೆ[/caption]
[caption id="attachment_80390" align="alignnone" width="800"] ಜಯದೇವ ಹಾಸ್ಪಿಟಲ್​ ಅಂಡರ್​ಪಾಸ್​ನಲ್ಲಿ ಸ್ಕೂಟರ್​ ಕೆಟ್ಟು ಹೋಗಿ ಸವಾರ ಮತ್ತು ಹಿಂಬದಿ ಸವಾರ ಪರದಾಡಿದ ಸ್ಥಿತಿ ನಿರ್ಮಾಣವಾಗಿತ್ತು.[/caption]
[caption id="attachment_80394" align="alignnone" width="800"] ಹೆ​ಎಎಲ್​ ಬಳಿ ಕಪೌಂಡ್​ ಕುಸಿದು ನೀರೆಲ್ಲ ಅಪಾರ್ಟ್​​ಮೆಂಟ್​ ಒಳಗೆ ನುಗ್ಗಿದೆ.[/caption]
[caption id="attachment_80392" align="alignnone" width="800"] ಮಳೆಯಿಂದಾಗಿ ಜಯದೇವ ಹಾಸ್ಪಿಟಲ್​ ಅಂಡರ್​ಪಾಸ್​ನಲ್ಲಿ ನೀರು ನಿಂತ ದೃಶ್ಯ[/caption]
[caption id="attachment_80393" align="alignnone" width="800"] ನಿರಂತರ ಸುರಿದ ಮಳೆಯಿಂದಾಗಿ ಜಯದೇವ ಹಾಸ್ಪಿಟಲ್​ ಅಂಡರ್​ಪಾಸ್​ನಲ್ಲಿ ವಾಹನ ಸವಾರರು ಪರದಾಡಿದ್ದಾರೆ.[/caption]