newsfirstkannada.com

ಮನೆಯ ಬಾತ್​ ರೂಂನಲ್ಲಿ ಗಂಡನ ಶವ.. ಅನುಮಾನ ಹುಟ್ಟಿಸಿದೆ ಈ ಸಾವು.. ಪೊಲೀಸರಿಂದ ತನಿಖೆ ಶುರು

Share :

Published January 13, 2024 at 9:13am

Update January 13, 2024 at 9:20am

    ತಂದೆಗೆ ಮಗನ ಸಾವಿನ ಬಗ್ಗೆ ಅನುಮಾನ

    ಇದು ಸಹಜ ಸಾವಲ್ಲ ಕೊಲೆ ಎಂಬ ಶಂಕೆ

    ಪೊಲೀಸರಿಂದ ತನಿಖೆ ಶುರು, ಆರೋಪಿಗಾಗಿ ಹುಡುಕಾಟ

ಬೆಂಗಳೂರು: ವ್ಯಕ್ತಿಯೋರ್ವ ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ಹೆಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಆಂಧ್ರ ಮೂಲದ ವೆಂಕಟರಮಣ ನಾಯಕ್ (35) ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಇಂದು ಕೊಲೆ‌ ಎಂಬ ಶಂಕೆ ವ್ಯಕ್ತವಾಗಿದೆ.

ವೆಂಕಟರಮಣ ಕ್ರೋಮಾ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದನು. ಮನೆಯ ಬಾತ್ ರೂಮ್ ನಲ್ಲಿ ವೆಂಕಟರಮಣ ಮೃತ ದೇಹ ಸಿಕ್ಕಿದೆ. ಈ ಬಗ್ಗೆ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಪತ್ನಿ ನೀಡಿದ ಮಾಹಿತಿಯಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವೆಂಕಟರಮಣನನ್ನು ಕೊಲೆ ಮಾಡಲಾಗಿದೆ ಅನುಮಾನ ಹುಟ್ಟಿದೆ. ಹೀಗಾಗಿ ಮೃತನ ತಂದೆ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಸದ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವೆಂಕಟರಮಣ ಪರಿಚಯಸ್ತರಿಂದಲೇ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹೆಚ್ ಎಸ್ ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆಯ ಬಾತ್​ ರೂಂನಲ್ಲಿ ಗಂಡನ ಶವ.. ಅನುಮಾನ ಹುಟ್ಟಿಸಿದೆ ಈ ಸಾವು.. ಪೊಲೀಸರಿಂದ ತನಿಖೆ ಶುರು

https://newsfirstlive.com/wp-content/uploads/2024/01/Venkataramana.jpg

    ತಂದೆಗೆ ಮಗನ ಸಾವಿನ ಬಗ್ಗೆ ಅನುಮಾನ

    ಇದು ಸಹಜ ಸಾವಲ್ಲ ಕೊಲೆ ಎಂಬ ಶಂಕೆ

    ಪೊಲೀಸರಿಂದ ತನಿಖೆ ಶುರು, ಆರೋಪಿಗಾಗಿ ಹುಡುಕಾಟ

ಬೆಂಗಳೂರು: ವ್ಯಕ್ತಿಯೋರ್ವ ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ಹೆಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಆಂಧ್ರ ಮೂಲದ ವೆಂಕಟರಮಣ ನಾಯಕ್ (35) ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಇಂದು ಕೊಲೆ‌ ಎಂಬ ಶಂಕೆ ವ್ಯಕ್ತವಾಗಿದೆ.

ವೆಂಕಟರಮಣ ಕ್ರೋಮಾ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದನು. ಮನೆಯ ಬಾತ್ ರೂಮ್ ನಲ್ಲಿ ವೆಂಕಟರಮಣ ಮೃತ ದೇಹ ಸಿಕ್ಕಿದೆ. ಈ ಬಗ್ಗೆ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಪತ್ನಿ ನೀಡಿದ ಮಾಹಿತಿಯಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವೆಂಕಟರಮಣನನ್ನು ಕೊಲೆ ಮಾಡಲಾಗಿದೆ ಅನುಮಾನ ಹುಟ್ಟಿದೆ. ಹೀಗಾಗಿ ಮೃತನ ತಂದೆ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಸದ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವೆಂಕಟರಮಣ ಪರಿಚಯಸ್ತರಿಂದಲೇ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹೆಚ್ ಎಸ್ ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More