ಪ್ರಾತಿನಿಧಿಕ ಚಿತ್ರ
ಒಂಥರಾ ವಿಚಿತ್ರ ಸ್ಟೋರಿ. ಪೊಲೀಸ್ರಿಗೆ ತಲೆನೋವಾದ ಕಹಾನಿ
ಇದು ಎರಡು ಜೋಡಿಯ ಕಥೆ. ನಾಲ್ಕು ಮನಸುಗಳು ಕಥೆ!
ರೂಮ್ ಒಂದರಲ್ಲಿ ಬೇರೊಬ್ಬಳ ಜೊತೆಗಿದ್ದ ಪತಿರಾಯ
ಬೆಂಗಳೂರು: ನೋಟದಲ್ಲಿ ನಗೆಯ ಬೀರಿ.. ಮಾತಿನಲ್ಲಿ ಮೋಡಿಯ ಮಾಡಿದವಳ ಪರಸಂಗ ಇದೀಗ ಎರಡು ಕುಟುಂಬಗಳು ಬೀದಿಗೆ ಬೀಳುವಂತೆ ಮಾಡಿಬಿಟ್ಟಿದೆ. ಇದು ಎರಡು ಜೋಡಿಯ ಕಥೆ. ನಾಲ್ಕು ಮನಸುಗಳು ಕಥೆ. ಒಂದು ಕ್ಷಣದ ಖುಷಿಗಾಗಿ ತಮ್ಮವರನ್ನೆಲ್ಲಾ ಬಿಟ್ಟು ಪ್ರೇಮ ಲೋಕಕ್ಕೆ ಹಾರಿದ ಜೋಡಿಯ ಕಥೆ.
ತನ್ನ ಗಂಡ ಬೇರೆಯವಳ ಜೊತೆ ಹೋಟೆಲ್ನ ರೂಮ್ ಒಂದರಲ್ಲಿ ಇದ್ದಾನೆ ಅಂತ ಗೊತ್ತಾಗ್ತಿದ್ದಂತೆ ಫ್ಯಾಮಿಲಿ ಸಮೇತ ಹೋಗಿ ಅಟ್ಯಾಕ್ ಮಾಡಿದ್ದ ಮಹಿಳೆ. ಹೆಸರು ವಸೀಂ. 7 ವರ್ಷಗಳಿಂದೆ ಸುಮೈಯಾ ಬಾನು ಎಂಬಾಕೆಯನ್ನ ಮದುವೆ ಆಗಿದ್ದ. ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಒಂದು ಮಗುವೂ ಇದೆ. ಅದ್ಯಾಕೋ ಏನೋ ಮನಸು ಬದಲಿಸಿದ್ದ ಆತ ದಿಲ್ ಷಾದ್ ಎಂಬಾಕೆಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ. ಇತ್ತ ದಿಲ್ ಷಾದ್ಗೂ ಮದುವೆಯಾಗಿದ್ದು ಆಕೆಯ ಗಂಡ ತನ್ನ ಹೆಂಡತಿಯ ಬರುವಿಕೆಗಾಗಿ ಕಾಯ್ತಾ ಇದ್ದಾರೆ.
ಹೋಟೆಲ್ನಲ್ಲಿ ಸಿಕ್ಕಾಕೊಂಡ ಮೇಲೆ ಪುಟ್ಟೇನ ಹಳ್ಳಿಯಲ್ಲಿ ದೂರು ದಾಖಲಾಗಿತ್ತು. ವಸೀಂ ಪತ್ನಿ ದಾಖಲಿಸಿದ್ದ ದೂರನ್ನ ಆಧರಿಸಿ ವಿಚಾರಣೆ ಮಾಡಿ ಇಬ್ಬರಿಗೂ ಬುದ್ದಿ ಹೇಳಿ ಪೊಲೀಸರು ಮನೆಗೆ ಕಳಿಸಿದ್ರು. ನಿಮ್ಮ ನಿಮ್ಮ ಸಂಸಾರ ಚೆನ್ನಾಗಿ ನೋಡ್ಕೊಳಿ ಅಂದಿದ್ರು. ಆದ್ರೆ ಇವರಿಬ್ಬರು ನಮಗೇ ನಮ್ಮಿಬ್ಬರ ಪ್ರೀತಿಯೇ ಇಂಪಾರ್ಟೆಂಟ್ ಅಂತ ಈಗ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾರೆ.
ಈಗ ಮತ್ತೆ ಪುಟ್ಟೇನ ಹಳ್ಳಿಯಲ್ಲಿ ಸುಮೈಯಾ ಬಾನು ತನ್ನ ಗಂಡ ಕಾಣೆಯಾಗಿದ್ದಾನೆ ಅಂತ ಮತ್ತು ದಿಲ್ ಷಾದ್ ಪತಿ ತನ್ನ ಪತ್ನಿ ಕಾಣೆಯಾಗಿದ್ದಾಳೆ. ಇಬ್ಬರೂ ಜೊತೆಗೆ ಹೋಗಿದ್ದಾರೆ ಹುಡುಕಿ ಕೊಡಿ ಅಂತ ದೂರು ದಾಖಲಿಸಿದ್ದಾರೆ. ಆದ್ರೆ ಇಲ್ಲಿ ಮದುವೆಗಿಂದ ಪ್ರೀತಿಯೇ ಮುಖ್ಯ ಅಂತ ಹೋಗಿರೋ ಜೋಡಿಯನ್ನ ಹುಡುಕೋದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಒಂಥರಾ ವಿಚಿತ್ರ ಸ್ಟೋರಿ. ಪೊಲೀಸ್ರಿಗೆ ತಲೆನೋವಾದ ಕಹಾನಿ
ಇದು ಎರಡು ಜೋಡಿಯ ಕಥೆ. ನಾಲ್ಕು ಮನಸುಗಳು ಕಥೆ!
ರೂಮ್ ಒಂದರಲ್ಲಿ ಬೇರೊಬ್ಬಳ ಜೊತೆಗಿದ್ದ ಪತಿರಾಯ
ಬೆಂಗಳೂರು: ನೋಟದಲ್ಲಿ ನಗೆಯ ಬೀರಿ.. ಮಾತಿನಲ್ಲಿ ಮೋಡಿಯ ಮಾಡಿದವಳ ಪರಸಂಗ ಇದೀಗ ಎರಡು ಕುಟುಂಬಗಳು ಬೀದಿಗೆ ಬೀಳುವಂತೆ ಮಾಡಿಬಿಟ್ಟಿದೆ. ಇದು ಎರಡು ಜೋಡಿಯ ಕಥೆ. ನಾಲ್ಕು ಮನಸುಗಳು ಕಥೆ. ಒಂದು ಕ್ಷಣದ ಖುಷಿಗಾಗಿ ತಮ್ಮವರನ್ನೆಲ್ಲಾ ಬಿಟ್ಟು ಪ್ರೇಮ ಲೋಕಕ್ಕೆ ಹಾರಿದ ಜೋಡಿಯ ಕಥೆ.
ತನ್ನ ಗಂಡ ಬೇರೆಯವಳ ಜೊತೆ ಹೋಟೆಲ್ನ ರೂಮ್ ಒಂದರಲ್ಲಿ ಇದ್ದಾನೆ ಅಂತ ಗೊತ್ತಾಗ್ತಿದ್ದಂತೆ ಫ್ಯಾಮಿಲಿ ಸಮೇತ ಹೋಗಿ ಅಟ್ಯಾಕ್ ಮಾಡಿದ್ದ ಮಹಿಳೆ. ಹೆಸರು ವಸೀಂ. 7 ವರ್ಷಗಳಿಂದೆ ಸುಮೈಯಾ ಬಾನು ಎಂಬಾಕೆಯನ್ನ ಮದುವೆ ಆಗಿದ್ದ. ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಒಂದು ಮಗುವೂ ಇದೆ. ಅದ್ಯಾಕೋ ಏನೋ ಮನಸು ಬದಲಿಸಿದ್ದ ಆತ ದಿಲ್ ಷಾದ್ ಎಂಬಾಕೆಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ. ಇತ್ತ ದಿಲ್ ಷಾದ್ಗೂ ಮದುವೆಯಾಗಿದ್ದು ಆಕೆಯ ಗಂಡ ತನ್ನ ಹೆಂಡತಿಯ ಬರುವಿಕೆಗಾಗಿ ಕಾಯ್ತಾ ಇದ್ದಾರೆ.
ಹೋಟೆಲ್ನಲ್ಲಿ ಸಿಕ್ಕಾಕೊಂಡ ಮೇಲೆ ಪುಟ್ಟೇನ ಹಳ್ಳಿಯಲ್ಲಿ ದೂರು ದಾಖಲಾಗಿತ್ತು. ವಸೀಂ ಪತ್ನಿ ದಾಖಲಿಸಿದ್ದ ದೂರನ್ನ ಆಧರಿಸಿ ವಿಚಾರಣೆ ಮಾಡಿ ಇಬ್ಬರಿಗೂ ಬುದ್ದಿ ಹೇಳಿ ಪೊಲೀಸರು ಮನೆಗೆ ಕಳಿಸಿದ್ರು. ನಿಮ್ಮ ನಿಮ್ಮ ಸಂಸಾರ ಚೆನ್ನಾಗಿ ನೋಡ್ಕೊಳಿ ಅಂದಿದ್ರು. ಆದ್ರೆ ಇವರಿಬ್ಬರು ನಮಗೇ ನಮ್ಮಿಬ್ಬರ ಪ್ರೀತಿಯೇ ಇಂಪಾರ್ಟೆಂಟ್ ಅಂತ ಈಗ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾರೆ.
ಈಗ ಮತ್ತೆ ಪುಟ್ಟೇನ ಹಳ್ಳಿಯಲ್ಲಿ ಸುಮೈಯಾ ಬಾನು ತನ್ನ ಗಂಡ ಕಾಣೆಯಾಗಿದ್ದಾನೆ ಅಂತ ಮತ್ತು ದಿಲ್ ಷಾದ್ ಪತಿ ತನ್ನ ಪತ್ನಿ ಕಾಣೆಯಾಗಿದ್ದಾಳೆ. ಇಬ್ಬರೂ ಜೊತೆಗೆ ಹೋಗಿದ್ದಾರೆ ಹುಡುಕಿ ಕೊಡಿ ಅಂತ ದೂರು ದಾಖಲಿಸಿದ್ದಾರೆ. ಆದ್ರೆ ಇಲ್ಲಿ ಮದುವೆಗಿಂದ ಪ್ರೀತಿಯೇ ಮುಖ್ಯ ಅಂತ ಹೋಗಿರೋ ಜೋಡಿಯನ್ನ ಹುಡುಕೋದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ