/newsfirstlive-kannada/media/post_attachments/wp-content/uploads/2024/08/Ganesh-2.jpg)
ಇದು ಹಬ್ಬ ಹರಿದಿನಗಳ ಮಾಸ. ಸದ್ಯದಲ್ಲೇ ಗಣೇಶ ಹಬ್ಬ ಬರುತ್ತಿದೆ. ನಾಡಿನಾದ್ಯಂತ ಜನರು ಗಣೇಶ ಹಬ್ಬದ ಆಚರಣೆಗೆ ತಯಾರಾಗುತ್ತಿದ್ದಾರೆ. ಆದರೆ ಗಣೇಶ ಚತುರ್ಥಿಗೂ ಮುನ್ನ ಪೊಲೀಸ್​ ಇಲಾಖೆ ನಿಯಮ ಪಾಲಿಸುವಂತೆ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ. ಗೈಡ್​​ಲೈನ್ಸ್​ ಅನುಗುಣವಾಗಿ ಹಬ್ಬವನ್ನು ಆಚರಿಸಬೇಕಿದೆ.
ಗೌರಿ ಗಣೇಶ ಹಬ್ಬಕ್ಕೆ ಪೊಲೀಸ್ ಇಲಾಖೆ ಯಿಂದ ಗೈಡ್ ಲೈನ್ಸ್ ಬಿಡುಗಡೆ..
*ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಅನುಮತಿ ಕಡ್ಡಾಯ.
*ಗಣೇಶ ಮೂರ್ತಿ ಪ್ರತಿಷ್ಟಾಪನೆಯಿಂದ ಸಾರ್ವಜನಿಕ ವಾಹನಗಳಿಗೆ ತೊಂದರೆ ಯಾಗಬಾರದು, ಸಂಚಾರ ಒತ್ತಡವಿರುವ ರಸ್ತೆ ಗಳಲ್ಲಿ ಗಣೇಶ ಪ್ರತಿಷ್ಠಾಪಿಸುವಂತಿಲ್ಲ.
*ಗಣೇಶ ಪ್ರತಿಷ್ಠಾಪನೆ ಗೆ ಬಲವಂತವಾಗಿ ಹಣ ವಸೂಲು ಮಾಡುವಂತಿಲ್ಲ.
*ಗಣೇಶ ಪ್ರತಿಷ್ಟಾಪನೆ ಗೆ ಶಾಮಿಯಾನ ಹಾಕಲು ಬಿಬಿಎಂಪಿ ಅನುಮತಿ ಪಡೆಯುವುದು ಕಡ್ಡಾಯ.
ಇದನ್ನೂ ಓದಿ: ಬೆಂಗಳೂರಿಗೂ ಆಸ್ನಾ ಎಫೆಕ್ಟ್​.. ನಿನ್ನೆಯಂತೆ ಇಂದು ಬರಲಿದೆ ಮಳೆ.. ಬೇಗ ಗೂಡು ಸೇರಿಕೊಳ್ಳಿ
* ವಿವಾದಿತ ಸ್ಥಳದಲ್ಲಿ ಗಣೇಶ ಪ್ರತಿಷ್ಟಾಪನೆ ಮಾಡುವಂತಿಲ್ಲ, ಜಾಗದ ಮಾಲೀಕರ ಅನುಮತಿ ಪಡೆಯಬೇಕು
* ಫ್ಲೆಕ್ಸ್ ಗಳು, ಬೋರ್ಡ್​ಗಳು, ಬ್ಯಾನರ್​ಗಳನ್ನು ಅಳವಡಿಸುವಂತಿಲ್ಲ.
* ಗಣೇಶ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದರೆ ಆಯೋಜಕರು ಜವಾಬ್ದಾರರು.
* ಗಣೇಶ ಮೂರ್ತಿ ಇರುವ ಜಾಗದಲ್ಲಿ 24 ಗಂಟೆಗಳ ಕಾಲ ಸಿಸಿಟಿವಿ, ಬೆಳಕು ಇರುವಂತೆ ನಿಗಾವಹಿಸುವುದು.
* ಮೆರವಣಿಗೆ ವೇಳೆ ಯಾವುದೇ ಅವಘಡ ಸಂಭವಿಸಿದ್ರೆ ಆಯೋಜಕರೆ ಹೊಣೆ.
* ಧ್ವನಿವರ್ಧಕಗಳ ಬಳಕೆಗೆ ಬೆಳಗ್ಗೆ ಆರು ಗಂಟೆಯಿಂದ ರಾತ್ರಿ ಗಂಟೆ ವರೆಗೆ ಮಾತ್ರ ಅವಕಾಶ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us