/newsfirstlive-kannada/media/post_attachments/wp-content/uploads/2024/10/Rain.jpg)
ಬೆಂಗಳೂರಲ್ಲಿ ಮುಂಜಾನೆಯಿಂದಲೇ ವರುಣ ಅಬ್ಬರಿಸುತ್ತಿದ್ದಾನೆ. ಬಿಟ್ಟು ಬಿಡದೆ ಸುರಿಯುತ್ತಿದ್ದಾನೆ. ಮಳೆಯಿಂದಾಗಿ ಶಾಲೆ-ಕಾಲೇಜು, ಕೆಲಸಕ್ಕೆ ಹೋಗುವವರು ಸಮಸ್ಯೆ ಎದುರಿಸುವಂತಾಗಿದೆ.
ಅಂಡರ್​ ಪಾಸ್​ ಜಲಾವೃತ
ಮುಂಜಾನೆಯಿಂದ ಸುರಿಯುವ ಮಳೆಯಿಂದ ರಸ್ತೆಯಲ್ಲೆಲ್ಲಾ ನೀರು ನಿಂತು ವಾಹನ ಸವಾರರು ಪರದಾಟ ನಡೆಸಿದ್ದಾರೆ. ಅಂಡರ್​ಪಾಸ್​ಗಳು ಜಲಾವೃತಗೊಂಡಿದ್ದು, ಕಿ.ಮೀವರೆಗೂ ಟ್ರಾಫಿಕ್​ ಜಾಮ್​ ಉಂಟಾಗಿದೆ.
ಮೆಜೆಸ್ಟಿಕ್​, ಉತ್ತರಹಳ್ಳಿಯಲ್ಲಿ ಟ್ರಾಫಿಕ್​ ಜಾಮ್
ಮೆಜೆಸ್ಟಿಕ್​ ಸುತ್ತಮುತ್ತ ಮಳೆಗೆ ಸವಾರರು ಹೈರಾಣಗಿದ್ದಾರೆ. ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ. ಅತ್ತ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲೂ ಟ್ರಾಫಿಕ್ ಜಾಮ್ ಉಂಟಾಗಿದೆ. ಬರೋಬ್ಬರಿ 2 ಕಿಲೋಮೀಟರ್​ವರೆಗೂ ಟ್ರಾಫಿಕ್ ಜಾಮ್ ಆಗಿದ್ದು, ಶಾಲಾ- ಕಾಲೇಜುಗಳಿಗೆ ಮತ್ತು ಕಚೇರಿಗೆ ತೆರಳಲು ಪರದಾಡಿದ್ದಾರೆ.
ಇದನ್ನೂ ಓದಿ: Bengaluru: ಬೆಳಗ್ಗೆಯಿಂದ ಸುರಿಯುತ್ತಿರೋ ಮಳೆ.. ನೆಲಕ್ಕುರುಳಿದ ಮರ, ಹೊಳೆಯಂತಾದ ರಸ್ತೆ​​
/newsfirstlive-kannada/media/post_attachments/wp-content/uploads/2024/10/Tree-fall-bengaluru.jpg)
ನೆಲಕ್ಕುರುಳಿದ ಮರ
ಮಳೆಯಿಂದಾಗಿ HMT ಲೇಔಟ್​​ನಲ್ಲಿ ಬೃಹದಾಕಾರದ ಮರ ಧರೆಗುರುಳಿದೆ. ಬೆಳಿಗ್ಗೆ 5 ಗಂಟೆ ಸುಮಾರಿಗೆ ಮರ ನೆಲಕ್ಕುರುಳಿದ್ದು, ಮರ ಬಿದ್ದ ಪರಿಣಾಮ ಮನೆ ಮುಂದೆ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. 3 ತಿಂಗಳ ಹಿಂದೆ ಮರ ತೆರವು ಮಾಡುವಂತೆ ಬಿಬಿಎಂಪಿಗೆ ದೂರು ನೀಡಿದ್ದರು ಕ್ಯಾರೆ ಎಂದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
/newsfirstlive-kannada/media/post_attachments/wp-content/uploads/2024/10/Bengaluru-1.jpg)
ಮಳೆಯಿಂದಾಗಿ ಸಾಲು ಸಾಲು ಸಮಸ್ಯೆ
ಗೊರಗುಂಟೆಪಾಳ್ಯ ಸುತ್ತಮುತ್ತ ಕೂಡ ಮಳೆಯಿಂದಾಗಿ ಸಮಸ್ಯೆ ಉಂಟಾಗಿದೆ. ಕೆಲಸ-ಕಾರ್ಯಗಳಿಗೆ ಹೋಗಲಾಗದೇ ಜನರ ಪರದಾಡಿದ್ದಾರೆ. ಮಳೆಯಿಂದಾಗಿ ಸಿಲ್ಕ್ ಬೋರ್ಡ್​​ನಲ್ಲಿ​​ ಟ್ರಾಫಿಕ್​ ಜಾಮ್​ ಉಂಟಾಗಿದೆ. ರಸ್ತೆಯಲ್ಲಿ ಮಳೆ ನೀರು ನಿಂತು ಕೆರೆಯಂತಾಗಿದೆ. ವಾಹನ ಸವಾರರ ಪರದಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/10/rain-2.jpg)
ರಸ್ತೆಯಲ್ಲಿ ನಿಂತ ನೀರು
ವಿಂಡ್​ಸನ್​ ಮ್ಯಾನರ್​ ಅಂಡರ್​ಪಾಸ್​ ಬಳಿ ಅವಾಂತರ ಸೃಷ್ಟಿಯಾಗಿದೆ. ಜಲಾವೃತವಾದ ರಸ್ತೆಯಲ್ಲೇ ವಾಹನ ಸವಾರರು ಓಡಾಡುತ್ತಿದ್ದಾರೆ. ಮಳೆಯಿಂದಾಗಿ ರಸ್ತೆಯಲ್ಲಿ ಕ್ರಮೇಣವಾಗಿ ನೀರು ಹೆಚ್ಚಳವಾಗುತ್ತಿದ್ದು, ಹೊಂಡ-ಗುಂಡಿ ಕಾಣದೆ ವಾಹನ ಸವಾರರು ಹೈರಾಣಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/10/rain-1.jpg)
ಪ್ಯಾಲೇಸ್​​ ರಸ್ತೆಯ ಕತೆಯೇನು?
ಪ್ಯಾಲೇಸ್ ರಸ್ತೆಯಲ್ಲಿ ಮಳೆಯಿಂದಾಗಿ ಟ್ರಾಫಿಕ್​ ಜಾಮ್ ಉಂಟಾಗಿದೆ. ಶಾಂತಿನಗರ ಡಬಲ್ ರೋಡ್​ನಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ. ಸಮರ್ಪಕ ಕಾಮಗಾರಿಯಿಲ್ಲದೆ ರಸ್ತೆಯಲ್ಲಿ ನೀರು ನಿಂತಿದೆ.
ಬಸ್​ ಇಲ್ಲದೆ ಪರದಾಟ
ಒಂದೆಡೆ ಮಳೆ ಮತ್ತೊಂದೆಡೆ ಬಸ್​ ಇಲ್ಲದೆ ಪ್ರಯಾಣಿಕರು ಹೈರಾಣಾಗಿದ್ದಾರೆ. ಬನಶಂಕರಿ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಸ್​ಗಾಗಿ ಪರದಾಟ ನಡೆಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಬಸ್​ಗಾಗಿ ಕಾದಿದ್ದಾರೆ. ಕೆಂಗೇರಿ ಬಸ್ ಟರ್ಮಿನಲ್​ನಲ್ಲಿ ಇದೇ ವಿಚಾರವಾಗಿ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಬಸ್​ ವ್ಯವಸ್ಥೆ ಮಾಡದ ಡಿಪೋ ಸಿಬ್ಬಂದಿ ವಿರುದ್ಧ ಗರಂ ಆಗಿದ್ದಾರೆ.
ಚನ್ನಸಂದ್ರ, RR ನಗರದ ರಸ್ತೆ, ಸದಾಶಿವನಗರ, ಮೇಕ್ರಿ ಸರ್ಕಲ್, ಟೌನ್ ಹಾಲ್ ವ್ಯಾಪ್ತಿಯಲ್ಲಿ ಮಳೆ ಸಿಂಚನವಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us