ಕುಡಿಯಲು ನೀರಿಲ್ಲ, ಗ್ಯಾಸ್​ ಹಚ್ಚಲು ಭಯ, ಹಾವುಗಳ ಹಾವಳಿ; ಸಾಯಿ ಲೇಔಟ್‌ ಸ್ಥಿತಿ ಯಾರಿಗೂ ಬೇಡ!

author-image
admin
Updated On
ಕುಡಿಯಲು ನೀರಿಲ್ಲ, ಗ್ಯಾಸ್​ ಹಚ್ಚಲು ಭಯ, ಹಾವುಗಳ ಹಾವಳಿ; ಸಾಯಿ ಲೇಔಟ್‌ ಸ್ಥಿತಿ ಯಾರಿಗೂ ಬೇಡ!
Advertisment
  • ನಿವಾಸಿಗಳಿಗೆ ಶೀತ, ಕೆಮ್ಮು, ನೆಗಡಿ, ಜ್ವರ ಸೇರಿ ಚರ್ಮದ ಸಮಸ್ಯೆ
  • ವಾಟರ್​​ ಬಾಟಲ್​ಗಳನ್ನ ಮನೆ ಮನೆಗೆ ಜೆಸಿಬಿಯಲ್ಲಿ ಪೂರೈಕೆ
  • ಇದು ಒಂದು ದ್ವೀಪದಂತೆ ಕಾಣುತ್ತಿರುವ ಸಾಯಿ ಲೇಔಟ್ ಪರಿಸ್ಥಿತಿ

ಬೆಂಗಳೂರಲ್ಲಿ ಒಂದು ದ್ವೀಪದಂತೆ ಕಾಣುತ್ತಿರುವ ಸಾಯಿ ಲೇಔಟ್​​ ಅಕ್ಷರಶಃ ನೀರಲ್ಲಿ ಮುಳುಗಿದೆ. ಅಲ್ಲಿನ ಜನರ ಸಂಕಷ್ಟ ಇನ್ನೂ ಸುಧಾರಿಸಿಲ್ಲ. 48 ಗಂಟೆ ಕಳೆಯುತ್ತಾ ಬಂದರೂ ಸಮಸ್ಯೆಗಳು ಹೆಚ್ಚಾಗುತ್ತಿವೆಯೇ ವಿನಃ ಕಮ್ಮಿಯಾಗುತ್ತಿಲ್ಲ. ಮಳೆರಾಯನ ರಣಕೇಕೆಗೆ ಅಲ್ಲಿನ ಜನರ ಸ್ಥಿತಿ ತೀರ ಹದಗೆಡುತ್ತಿದೆ.

publive-image

ಇಂಥಾ ಮಹಾಮಳೆಯಾಗುತ್ತಾ ಇದ್ದರೂ ಸಾಯಿಲೇಔಟ್​​ನ ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಕಾರಣ ಅವರೆಲ್ಲಾ ಮನೆಯಲ್ಲಿ ಸಿಲುಕಿ ಬಿಟ್ಟಿದ್ದಾರೆ. ಮನೆಯಲ್ಲಿ ಕರೆಂಟ್​ ಇಲ್ಲ, ನೀರಿಲ್ಲ, ದಿಕ್ಕು ಕಾಣದೇ ಕಂಗಾಲಾಗಿದ್ದಾರೆ. ಅವರಿಗೆ ಮುಖ್ಯವಾಗಿ ನೀರಿನ ಸಮಸ್ಯೆ ಆಗಿದ್ದು, ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈಗಾಗಲೇ ಬಿಬಿಎಂಪಿ ಸಿಬ್ಬಂದಿಗಳು ವಾಟರ್​​ ಬಾಟಲ್​ಗಳನ್ನ ಮನೆ ಮನೆಗೆ ಜೆಸಿಬಿಯಲ್ಲಿ ಪೂರೈಕೆ ಮಾಡುತ್ತಿದ್ದಾರೆ.

publive-image

ಹಿರಿಯರು ಆರೋಗ್ಯದಿಂದ ಬಳಲಿದ್ದಾರೆ.. ಬಿಸಿ ನೀರಿಗೆ ಪರದಾಟ
ಇಲ್ಲಿ ಮತ್ತೊಂದು ಸಮಸ್ಯೆ ಏನೆಂದರೆ ಇಲ್ಲಿ ಕೆಲವರು ಪೇಷೆಂಟ್​​ಗಳಿದ್ದಾರೆ. ಕೆಲ ಹಿರಿಯ ವ್ಯಕ್ತಿಗಳು, ಜ್ವರದಿಂದ ಬಳಲುತ್ತಿದ್ದಾರೆ. ಈ ಸಮಯದಲ್ಲಿ ಅವರಿಗೆ ಬಿಸಿ ನೀರು ಬೇಕು. ಆದರೇ ಬಾಟಲ್​ನಲ್ಲಿ ಸಿಕ್ಕ ನೀರನ್ನ ಬಿಸಿ ಮಾಡಲು ಅವರಿಗೆ ಆಗುತ್ತಿಲ್ಲ. ಯಾಕಂದರೇ ಈಗ ಸಾಯಿಲೇಔಟ್​ನಲ್ಲಿ ಕರೆಂಟ್​ ಕಟ್​ ಆಗಿದೆ. ಗ್ಯಾಸ್​​ ಹಚ್ಚಲು ನೀರಲ್ಲಿ ಮುಳುಗಿರುವ ಕಾರಣಕ್ಕೆ ಭಯ ಆವರಿಸಿದೆ.

ಇದನ್ನೂ ಓದಿ: ಪವಿತ್ರಾಗೌಡ ಕೈ ಹಿಡಿದುಕೊಂಡು ಹೊರಗೆ ಬಂದ ದರ್ಶನ್‌.. ಕೋರ್ಟ್‌ನಲ್ಲಿ ಅಸಲಿಗೆ ಆಗಿದ್ದೇನು? 

ಸದ್ಯಕ್ಕೆ ಸಾಯಿ ಲೇಔಟ್ ನಿವಾಸಿಗಳಿಗೆ ಶೀತ, ಕೆಮ್ಮು, ನೆಗಡಿ, ಜ್ವರ ಸೇರಿದಂತೆ ಚರ್ಮದ ಸಮಸ್ಯೆಗಳು ಕಾಣಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳಿಗೆ, ಬಿಬಿಎಂಪಿ ಆರೋಗ್ಯ ಸಿಬ್ಬಂದಿಯಿಂದ ತುರ್ತು ಔಷಧಿಯ ವ್ಯವಸ್ಥೆ ಮಾಡಲಾಗಿದೆ. ರೋಗನಿರೋಧಕ ಔಷಧಿ ಸೇರಿದಂತೆ ಹಲವು ಬಗೆಯ ಔಷಧಿಗಳನ್ನ ಅವರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲಿನ ಮಕ್ಕಳಿಗೂ ವಿಶೇಷವಾಗಿ ಔಷಧಿಗಳನ್ನ ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಪೂರೈಕೆ ಮಾಡುತ್ತಿದ್ದಾರೆ.

publive-image

ನೀರಲ್ಲಿ ಹಾವು ಮರಿಗಳ ತೊಳಲಾಟ
ಮಹಾಮಳೆಯಿಂದ ಸಾಯಿಲೇಔಟ್ ದ್ವೀಪವಾಗಿದ್ದು ನಿಜ. ಆದರೆ ಆ ದ್ವೀಪದ ನೀರಲ್ಲಿ ಹಾವುಗಳು ಸಹ ಒದ್ದಾಡುತ್ತಾ ಕಂಡಿವೆ. ಎಲ್ಲಿಂದಲೋ ಕೊಚ್ಚಿಕೊಂಡು ಬಂದ ಹಾವು ಮರಿಗಳು ಏಕಾಏಕಿ ಮನೆಗಳಲ್ಲಿ ಪ್ರತ್ಯಕ್ಷವಾಗಿವೆ. ಕೂಡಲೇ ಭೇಟಿ ಕೊಟ್ಟ ಉರಗ ತಜ್ಞರು, ಆ ಹಾವಿನ ಮರಿಗಳನ್ನ ಹಿಡಿದು ರಕ್ಷಣೆ ಮಾಡಿದ್ದಾರೆ.

publive-image

ಸಾಯಿ ಲೇಔಟ್‌ಗೆ ಬಂದ ಸಿವಿಲ್‌ ಡಿಫೆನ್ಸ್ ಟೀಮ್​
ಅತ್ತ ಇಡೀ ಲೇಔಟ್​ ಮುಳುಗುತ್ತಿದ್ದಂತೆ ರಕ್ಷಣೆಗೆ ಬಂದಿದ್ದು ಅಗ್ನಿ ಶಾಮಕ ದಳ ಆಗಮಿಸಿದೆ. ಅಗ್ನಿ ಶಾಮಕ ಟೀಮ್​ ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿದೆ. ಈ ದಿನ ಬೆಳಗ್ಗೆ ಮತ್ತೆ ಮಳೆ ರಣಕೇಕೆ ಹಾಕಿದ ಕಾರಣಕ್ಕೆ ಬೆಳಗ್ಗೆ ಮತ್ತೆ ನೀರಿನ ಪ್ರಮಾಣ ಹೆಚ್ಚಾಗಿದೆ. ಅಗ್ನಿಶಾಮಕ ದಳದ ಜೊತೆಗೆ ಈಗ ಸಾಯಿ ಲೇಔಟ್​​ಗೆ ಸಿವಿಲ್‌ ಡಿಫೆನ್ಸ್ ಟೀಂ ಎಂಟ್ರಿ ಕೊಟ್ಟಿದೆ. ಜೆಸಿಬಿ ಮೂಲಕ ಸಿವಿಲ್ ಡಿಫೆನ್ಸ್ ಸಿಬ್ಬಂದಿಯಿಂದ ರಕ್ಷಣಾಕಾರ್ಯಕ್ಕೆ ಇಳಿದು, ಹಲವಾರು ಮಂದಿಯನ್ನ, ಭೀತಿಯಲಿದ್ದ ಮಹಿಳೆಯರನ್ನ ಈ ಟೀಮ್​ ರಕ್ಷಣೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment