/newsfirstlive-kannada/media/post_attachments/wp-content/uploads/2025/02/BHADRAVATI-MLA.jpg)
ನಮ್ಮ ಅಪ್ಪ ಯಾರ್ ಗೊತ್ತಾ? ನಮ್ ತಾತಾ ಯಾರ್ ಗೊತ್ತಾ ? ಅಂತಾನೇ ಕೆಲವರು ಮೆರೀತಿರ್ತಾರೆ. ಆ ಲಿಸ್ಟ್ಗೆ ಭದ್ರಾವತಿ ಶಾಸಕ ಸಂಗಮೇಶ್ ಪುತ್ರ ಕೂಡ ಸೇರಿಕೊಂಡಿದ್ದಾರೆ. ಈ ಬಗ್ಗೆ ಆರೋಪ ಒಂದನ್ನ ಜೆಡಿಎಸ್ ಮಾಡಿದೆ. ಜೊತೆಗೆ ವಿಡಿಯೋ ಸಾಕ್ಷಿಯೊಂದು ರಿಲೀಸ್ ಆಗಿದೆ.
ಇದನ್ನೂ ಓದಿ:ಮುಡಾ ಕೇಸ್ನಲ್ಲಿ ED ಶಾಕ್; ಸಿಎಂ ಸಿದ್ದರಾಮಯ್ಯ ಪತ್ನಿ, ಸಚಿವ ಬೈರತಿ ಸುರೇಶ್ಗೆ ತಾತ್ಕಾಲಿಕ ರಿಲೀಫ್!
ಮಹಿಳೆಯರಿಗೆ ಗೌರವ ಇಲ್ಲ, ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆಯೇ ಇಲ್ಲ.. ಇದು ವಿಪಕ್ಷಗಳ ಟೀಕೆ. ಇದಕ್ಕೆ ಹೊಸ ಸೇರ್ಪಡೆ ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರ ಪುತ್ರ ಬಿ.ಎಸ್. ಬಸವೇಶನ ಘನಂಧಾರಿ ಕೆಲಸ. ಗೂಂಡಾಗಿರಿ ವರ್ತನೆ ನಡೆಸಿದ ಆರೋಪ ಕೇಳಿ ಬಂದಿದೆ.
ಅಧಿಕಾರಿಯೊಬ್ಬರು ನನಗೆ ಫೋನ್ ಮಾಡೋಕೆ ಹೇಳಿ ಅಂದಿದ್ದೇ ತಪ್ಪಾಯ್ತಾ? ಹಾಗೆ ಮಾತಾಡೋದಕ್ಕೆ ಶುರುಮಾಡಿದವನು ಭೂ ವಿಜ್ಞಾನಿ ಅಂತ ನೋಡದೇ, ಅದ್ರಲ್ಲೂ ಮಹಿಳೆಗೆ ಬಾಯಿಗೆ ಬಂದ ಹಾಗೆ ಬೈದಿದ್ದಾರೆ ಎಂದು ಆರೋಪಿಸಲಾಗಿದೆ.
ಭದ್ರಾವತಿಯಲ್ಲಿ ಒಂದು ಪೈಸೆ ಅಭಿವೃದ್ಧಿ ಕೆಲಸ ಮಾಡದ ನಾಲಾಯಕ್ ಕಾಂಗ್ರೆಸ್ ಶಾಸಕ ಸಂಗಮೇಶ್. ಪುತ್ರನನ್ನೂ ಸರಿಯಾಗಿ ಬೆಳೆಸಿಲ್ಲ ಅಂತ ಜೆಡಿಎಸ್ ಕಿಡಿಕಾರಿದೆ. ಅಪ್ಪ ಎಂಎಲ್ಎ ನಮ್ಮನ್ನ ಕೇಳೋರಿಲ್ಲ ಅಂತ ಮಗ ಬಸವೇಶನ ದಂಧೆಯೇ ಅಕ್ರಮ ಮರಳುಗಾರಿಕೆ. ವೃತ್ತಿನೇ ಗೂಂಡಾಗಿರಿ, ಪ್ರವೃತ್ತಿಯೇ ಲೂಟಿ ಅಂತ ಲೋಕಲ್ ದಳ ಲೀಡರ್ಸ್ ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ:ರಾಜ್ಯ ಬಿಜೆಪಿ ಬಂಡಾಯಕ್ಕೆ ಬ್ರೇಕ್? ಯತ್ನಾಳ್ಗೆ ನೋಟಿಸ್, ಸೋಮಣ್ಣ ಮನೆಯಲ್ಲಿ ಮೀಟಿಂಗ್! ಮುಂದೇನು?
ಬಿ.ಎಸ್. ಬಸವೇಶಗೆ ಸಂಬಂಧಿಸಿದ ಅಕ್ರಮ ಮರಳುಗಾರಿಕೆಯನ್ನ ತಡೆಯಲು ಭೂ ವಿಜ್ಞಾನಿ ಜ್ಯೋತಿ ಬಂದಿದ್ದಾರೆ. ಇದೇ ವೇಳೆ ಬಸವೇಶನ ಶಿಷ್ಯನೊಬ್ಬ ಜ್ಯೋತಿ ಅವರಿಗೆ ಫೋನ್ ಮಾಡಿ ಮಾತಾಡಿ ಅಂತ ಕೊಟ್ಟಿದ್ದಾನೆ. ನನ್ನ ನಂಬರ್ಗೆ ಕರೆ ಮಾಡೋಕೆ ಹೇಳು ಅಂತ ಜ್ಯೋತಿ ಹೇಳಿದ್ದಾರಷ್ಟೇ. ಅಷ್ಟಕ್ಕೆ ಬಾಯಿಗೆ ಬಂದ ಹಾಗೆ ಅಶ್ಲೀಲ ಶಬ್ಧಗಳಿಂದ ನಿಂದಿಸಿದ್ದಾನಂತೆ ಬಸವೇಶ್
ರಾಜ್ಯದಲ್ಲಿರುವ ಮಹಿಳಾ ಆಯೋಗ ಏನು ಮಾಡ್ತಿದೆ? ಮಹಿಳೆಯ ಗೌರವಕ್ಕೆ ಧಕ್ಕೆ ತಂದಿರುವ ಹೆಣ್ಣು ನಿಂದಕ ಶಾಸಕರ ಪುತ್ರನ ವಿರುದ್ಧ ಸರ್ಕಾರ ತಕ್ಷಣವೇ ಪ್ರಕರಣ ದಾಖಲಿಸಿ, ಬಂಧಿಸಬೇಕು ಅಂತ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್, ಸಚಿವೆ ಹೆಬ್ಬಾಳ್ಕರ್ಗೆ ಟ್ಯಾಗ್ ಮಾಡಿ ಬಿಜೆಪಿ ಟ್ವೀಟ್ ಮಾಡಿ ಆಗ್ರಹಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ