ಆಪರೇಷನ್ ಸಿಂಧೂರ್.. ಭಾರತ ಸರ್ಕಾರಕ್ಕೆ ಅಭಿನಂದನೆ ತಿಳಿಸಿದ ಭರತ್ ಭೂಷಣ್ ತಂದೆ

author-image
Veena Gangani
Updated On
ಆಪರೇಷನ್ ಸಿಂಧೂರ್.. ಭಾರತ ಸರ್ಕಾರಕ್ಕೆ ಅಭಿನಂದನೆ ತಿಳಿಸಿದ ಭರತ್ ಭೂಷಣ್ ತಂದೆ
Advertisment
  • ಉಗ್ರರ ದಾಳಿಯಿಂದ ಭರತ್ ಭೂಷಣ್ ದುರಂತ ಅಂತ್ಯ
  • ಸರ್ಕಾರಕ್ಕೆ ಅಭಿನಂದನೆ ತಿಳಿಸಿದ ಭರತ್ ಭೂಷಣ್ ತಂದೆ
  • ಪ್ರವಾಸದ ಖುಷಿಯಲ್ಲಿದ್ದವರ ಮೇಲೆ ಉಗ್ರರ ಭೀಕರ ದಾಳಿ ಆಗಿತ್ತು

ಬೆಂಗಳೂರು: ಸ್ವರ್ಗ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಏಪ್ರಿಲ್ 22ರಂದು ಉಗ್ರರು ಅಟ್ಟಹಾಸ ಮೆರೆದಿದ್ದರು. ಶಿವಮೊಗ್ಗದ ಮಂಜುನಾಥ್, ಹಾವೇರಿ ಮೂಲದ ಭರತ್​​ ಭೂಷಣ್​​ ಪ್ರಾಣ ಕಳೆದುಕೊಂಡಿದ್ದರು. ಪ್ರವಾಸಕ್ಕೆಂದು ಕುಟುಂಬದ ಜೊತೆ ಕಾಶ್ಮೀರಕ್ಕೆ ಹೋಗಿದ್ದರು ಬಲಿಯಾಗಿದ್ದರು. ಪಹಲ್ಗಾಮ್ ದಾಳಿಗೆ ಭಾರತ ಪ್ರತೀಕಾರದ ಬೆನ್ನಲ್ಲೇ ಭರತ್ ಭೂಷಣ್ ತಂದೆ ಸರ್ಕಾರಕ್ಕೆ ಅಭಿನಂದನೆ ತಿಳಿಸಿದ್ದಾರೆ.

ಇದನ್ನೂ ಓದಿ: ಹಫೀಜ್ ಅಡಗುತಾಣ ಉಡಾಯಿಸಿದ ರಫೇಲ್.. ಪಾಕ್ ಮೇಲೆ ಭಾರತ ಪ್ರಯೋಗಿಸಿದ ಅಸ್ತ್ರಗಳು ಯಾವ್ಯಾವುದು?

publive-image

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ಆರಂಭಿಸಿದೆ. ಇದರ ಅಡಿಯಲ್ಲಿ ರಾತ್ರೋರಾತ್ರಿ ಪಾಕಿಸ್ತಾನದಲ್ಲಿರುವ ಒಟ್ಟು 9 ಭಯೋತ್ಪಾದಕ ಅಡಗುತಾಣಗಳ ಮೇಲೆ ಅಟ್ಯಾಕ್ ಮಾಡಲಾಗಿದೆ. ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕೇವಲ 23 ನಿಮಿಷದಲ್ಲಿ ಪಾಕ್​ನ 9 ನೆಲೆಯನ್ನು ಉಡೀಸ್​ ಮಾಡಿದೆ. ಅದರಲ್ಲಿ ಬರೋಬ್ಬರಿ 80ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ.

publive-image

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಭರತ್ ಭೂಷಣ್ ತಂದೆ ಚನ್ನವೀರಪ್ಪ, ಭಾರತ ಒಳ್ಳೆ ರೀತಿಯಲ್ಲಿ ಪ್ರತಿಕಾರ ತೆಗೆದುಕೊಂಡಿದೆ. ಇಂತಹ ದಾಳಿಗಳು ಮೊದಲೇ ಆಗಬೇಕಿತ್ತು. ಅದರಿಂದ 26 ಜೀವಗಳು ಉಳಿಯುತ್ತಿದ್ದವು. 9 ಉಗ್ರರ ನೆಲೆಗಳನ್ನ ಧ್ವಂಸ ಮಾಡಿದ್ದಾರೆ. ಇಂತಹ ಇನ್ನಷ್ಟು ದಾಳಿಗಳು ಆಗಬೇಕಿದೆ. ಭಾರತದ ಜೊತೆಗೆ ಇತರ ದೇಶಗಳು ಕೈಜೋಡಿಸಬೇಕು. ನಮಗೆ ಆದ ದುಃಖ ಅಷ್ಟು ಬೇಗ ಮರೆಯಾಗಲ್ಲ. ಸರ್ಕಾರಕ್ಕೆ ಅಭಿನಂದನೆ ಸಲ್ಲಿಸ್ತೇನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment