ಯುವಕನ ಕೊಲೆ ಸುದ್ದಿ ಕೇಳಿ ಕುಟುಂಬಸ್ಥರಿಗೆ ಭಾವನಾ ಬೆಳಗೆರೆ ಸಾಂತ್ವನ
ಈ ಕೊಲೆಯನ್ನು ನಾನು ಖಂಡಿಸುತ್ತೇನೆ ನಟ ದರ್ಶನ್ಗೆ ಶಿಕ್ಷೆಯಾಗಲೇಬೇಕು
ಪತ್ನಿ 5 ತಿಂಗಳ ಗರ್ಭಿಣಿ ತುಂಬಾ ನೊಂದುಕೊಂಡಿದ್ದಾರೆ ಎಂದ ಭಾವನಾ ಬೆಳಗೆರೆ
ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಟ ದರ್ಶನ್ ಜೊತೆಗೆ 13 ಆರೋಪಿಗಳನ್ನು ಕೊಲೆ ಕೇಸ್ನಲ್ಲಿ ಬಂಧಿಸಲಾಗಿದೆ. ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಮೃತ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಆತನನ್ನು ಕಿಡ್ನಾಪ್ ಮಾಡಿ ಶೆಡ್ನಲ್ಲಿ ಇರಿಸಿ ಕೊಲೆಗೈದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ನಟ ದರ್ಶನ್ ಸೇರಿದಂತೆ 13 ಜನರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಸ್ಟೇಷನ್ ಮುಂದೆ ಜಮಾಯಿಸಿದ ದರ್ಶನ್ ಫ್ಯಾನ್ಸ್.. ಪೊಲೀಸ್ರು ಮಾಡಿದ್ದೇನು?
ಈ ಕೊಲೆಯಾದ ಸುದ್ದಿ ತಿಳಿಯುತ್ತಿದ್ದಂತೆ ರವಿ ಬೆಳಗೆರೆ ಮಗಳು, ನಟ ಶ್ರೀನಗರ ಕಿಟ್ಟಿ ಅವರ ಪತ್ನಿ ಬಿಗ್ಬಾಸ್ ಖ್ಯಾತಿಯ ಭಾವನಾ ಬೆಳಗೆರೆ ಅವರು ರೇಣುಕಾಸ್ವಾಮಿ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಭಾವನ ಬೆಳಗೆರೆ, ಮೃತ ರೇಣುಕಾಸ್ವಾಮಿ ಪತ್ನಿಯ ಮಾತುಗಳನ್ನು ಕೇಳಿ ನನ್ನ ಕಣ್ಣಲ್ಲಿ ನೀರು ಬಂತು. ಅವರಿಗೆ ಏನ್ ಮಾಡಬೇಕು ಅಂತಾ ಗೊತ್ತಾಗುತ್ತಿಲ್ಲ. 5 ತಿಂಗಳ ಗರ್ಭಿಣಿಯಾಗಿದ್ದಾರೆ. ತುಂಬಾ ನೊಂದುಕೊಂಡಿದ್ದಾರೆ. ನಾನು ಇಂದು ಮುಂಜಾನೆ ಚಿತ್ರದುರ್ಗಕ್ಕೆ ಒಂದು ಕಾರ್ಯಕ್ರಮದ ನಿಮಿತ್ತ ಬಂದಿದ್ದೆ. ಆದರೆ ಇದರ ಮಧ್ಯೆ ಈ ಸುದ್ದಿ ನೋಡಿದ್ದೇನೆ. ಸುಮಾರು 10 ನಿಮಿಷ ನ್ಯೂಸ್ ನೋಡಿ ನನಗೆ ತಿಳಿಯಿತು. ರೇಣುಕಾಸ್ವಾಮಿ ಮೃತಪಟ್ಟಿರೋ ವಿಚಾರ ಮನೆಯಲ್ಲಿ ಎಲ್ಲರಿಗೂ ಗೊತ್ತಿಲ್ಲ. ಪತ್ನಿ ಹಾಗೂ ಕುಟುಂಬಸ್ಥರಿಗೆ ಬಿಟ್ಟು ಯಾರಿಗೂ ಇದು ಕೊಲೆ ಅಂತ ಗೊತ್ತಾಗಿಲ್ಲ ಎಂದಿದ್ದಾರೆ.
ಕೆಲಸಕ್ಕೆ ಹೋಗುತ್ತೇನೆ ಅಂತ ಮನೆ ಬಿಟ್ಟು ರೇಣುಕಾಸ್ವಾಮಿ ಹೋಗಿದ್ದನಂತೆ. ಸರಿಯಾಗಿ ಮಾತ್ರೆ ತಗೋ ಅಂತ ಪತ್ನಿಗೆ ರೇಣುಕಾಸ್ವಾಮಿ ಹೇಳಿದ್ದ. ರೇಣುಕಾಸ್ವಾಮಿ ದರ್ಶನ್ ಅಭಿಮಾನಿ ಅಂತ ಹೇಳುತ್ತಾರೆ. ಆದರೆ ರೇಣುಕಾಸ್ವಾಮಿ ಅವರ ಮನೆಯಲ್ಲಿ ನಟ ದರ್ಶನ್ ಅವರ ಯಾವ ಫೋಟೋ ಕೂಡ ಇಲ್ಲ. ಮತ್ತೆ ಮನೆಯವರಿಗೆ ರೇಣುಕಾಸ್ವಾಮಿ ಫೇಸ್ ಬುಕ್ನಲ್ಲಿ ಕಾಮೆಂಟ್ ಮಾಡಿರೋ ವಿಚಾರದ ಬಗ್ಗೆ ಏನೂ ಗೊತ್ತಿಲ್ಲ ಎಂದು ಭಾವನಾ ಬೆಳಗೆರೆ ತಿಳಿಸಿದ್ದಾರೆ.
ಕೆಲಸಕ್ಕೆ ಹೋದವನು ಮನೆಗೆ ವಾಪಸ್ ಬಂದಿಲ್ಲ ಅಂತ ಹೇಳುತ್ತಿದ್ದಾರೆ. ಕುಟುಂಬಸ್ಥರ ಪರಿಸ್ಥಿತಿ ನೋಡಿದ್ರೆ ಕರುಳು ಚುರ್ ಎನ್ನುತ್ತೆ. ಇನ್ನು, ಹೀಗೆ ಮಾತನ್ನು ಮುಂದುವರೆಸಿದ ಅವರು, ಇಂತಹ ಸಾವಿರ ಕಾಮೆಂಟ್ಗಳಿಗೆ ತಲೆ ಕೆಡೆಸಿಕೊಳ್ಳಬಾರದು. ಹೀಗೆ ಮಾಡಿದ್ರೆ, ಸೈಬರ್ ಕ್ರೈಮ್ಗೆ ಬಿಟ್ಟು ಬಿಟ್ಟರೆ ಒಳ್ಳೆಯದು. ಯಾವೆಲ್ಲಾ ಕಾಮೆಂಟ್ಸ್ಗಳಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಅಷ್ಟರ ಮಟ್ಟಿಗೆ ಇರಬೇಕು. ಒಂದು ಕಾಮೆಂಟ್ನಿಂದ ಪ್ರಾಣ ಹೋಗುತ್ತೆ ಅಂದ್ರೆ ಸೋಷಿಯಲ್ ಮಿಡಿಯಾ ಯಾವ ಮಟ್ಟಕೆ ಹೋಗುತ್ತಿದೆ ಅಂತ ಚಿಂತೆ ಆಗುತ್ತೆ. ಒಂದು ಸ್ಟಾರ್ ಗಿರಿಯನ್ನು ಜನ ಹೇಗೆ ತೆಗೆದುಕೊಳ್ಳುತ್ತಿದ್ದಾರೆ. ಇಷ್ಟು ದೊಡ್ಡ ಸ್ಟಾರ್ಗಳಿಂದ ಇಂತಹ ಮಟ್ಟಕ್ಕೆ ರಿಯಾಕ್ಟ್ ಮಾಡ್ತಾ ಇರೋದು ನಾಚಿಕೆಗೇಡಿನ ಸಂಗತಿ. ಈ ಕೊಲೆಯನ್ನು ನಾನು ಖಂಡಿಸುತ್ತೇನೆ. ಯಾರೇ ತಪ್ಪು ಮಾಡಿದ್ರೆ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಯುವಕನ ಕೊಲೆ ಸುದ್ದಿ ಕೇಳಿ ಕುಟುಂಬಸ್ಥರಿಗೆ ಭಾವನಾ ಬೆಳಗೆರೆ ಸಾಂತ್ವನ
ಈ ಕೊಲೆಯನ್ನು ನಾನು ಖಂಡಿಸುತ್ತೇನೆ ನಟ ದರ್ಶನ್ಗೆ ಶಿಕ್ಷೆಯಾಗಲೇಬೇಕು
ಪತ್ನಿ 5 ತಿಂಗಳ ಗರ್ಭಿಣಿ ತುಂಬಾ ನೊಂದುಕೊಂಡಿದ್ದಾರೆ ಎಂದ ಭಾವನಾ ಬೆಳಗೆರೆ
ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಟ ದರ್ಶನ್ ಜೊತೆಗೆ 13 ಆರೋಪಿಗಳನ್ನು ಕೊಲೆ ಕೇಸ್ನಲ್ಲಿ ಬಂಧಿಸಲಾಗಿದೆ. ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಮೃತ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಆತನನ್ನು ಕಿಡ್ನಾಪ್ ಮಾಡಿ ಶೆಡ್ನಲ್ಲಿ ಇರಿಸಿ ಕೊಲೆಗೈದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ನಟ ದರ್ಶನ್ ಸೇರಿದಂತೆ 13 ಜನರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಸ್ಟೇಷನ್ ಮುಂದೆ ಜಮಾಯಿಸಿದ ದರ್ಶನ್ ಫ್ಯಾನ್ಸ್.. ಪೊಲೀಸ್ರು ಮಾಡಿದ್ದೇನು?
ಈ ಕೊಲೆಯಾದ ಸುದ್ದಿ ತಿಳಿಯುತ್ತಿದ್ದಂತೆ ರವಿ ಬೆಳಗೆರೆ ಮಗಳು, ನಟ ಶ್ರೀನಗರ ಕಿಟ್ಟಿ ಅವರ ಪತ್ನಿ ಬಿಗ್ಬಾಸ್ ಖ್ಯಾತಿಯ ಭಾವನಾ ಬೆಳಗೆರೆ ಅವರು ರೇಣುಕಾಸ್ವಾಮಿ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಭಾವನ ಬೆಳಗೆರೆ, ಮೃತ ರೇಣುಕಾಸ್ವಾಮಿ ಪತ್ನಿಯ ಮಾತುಗಳನ್ನು ಕೇಳಿ ನನ್ನ ಕಣ್ಣಲ್ಲಿ ನೀರು ಬಂತು. ಅವರಿಗೆ ಏನ್ ಮಾಡಬೇಕು ಅಂತಾ ಗೊತ್ತಾಗುತ್ತಿಲ್ಲ. 5 ತಿಂಗಳ ಗರ್ಭಿಣಿಯಾಗಿದ್ದಾರೆ. ತುಂಬಾ ನೊಂದುಕೊಂಡಿದ್ದಾರೆ. ನಾನು ಇಂದು ಮುಂಜಾನೆ ಚಿತ್ರದುರ್ಗಕ್ಕೆ ಒಂದು ಕಾರ್ಯಕ್ರಮದ ನಿಮಿತ್ತ ಬಂದಿದ್ದೆ. ಆದರೆ ಇದರ ಮಧ್ಯೆ ಈ ಸುದ್ದಿ ನೋಡಿದ್ದೇನೆ. ಸುಮಾರು 10 ನಿಮಿಷ ನ್ಯೂಸ್ ನೋಡಿ ನನಗೆ ತಿಳಿಯಿತು. ರೇಣುಕಾಸ್ವಾಮಿ ಮೃತಪಟ್ಟಿರೋ ವಿಚಾರ ಮನೆಯಲ್ಲಿ ಎಲ್ಲರಿಗೂ ಗೊತ್ತಿಲ್ಲ. ಪತ್ನಿ ಹಾಗೂ ಕುಟುಂಬಸ್ಥರಿಗೆ ಬಿಟ್ಟು ಯಾರಿಗೂ ಇದು ಕೊಲೆ ಅಂತ ಗೊತ್ತಾಗಿಲ್ಲ ಎಂದಿದ್ದಾರೆ.
ಕೆಲಸಕ್ಕೆ ಹೋಗುತ್ತೇನೆ ಅಂತ ಮನೆ ಬಿಟ್ಟು ರೇಣುಕಾಸ್ವಾಮಿ ಹೋಗಿದ್ದನಂತೆ. ಸರಿಯಾಗಿ ಮಾತ್ರೆ ತಗೋ ಅಂತ ಪತ್ನಿಗೆ ರೇಣುಕಾಸ್ವಾಮಿ ಹೇಳಿದ್ದ. ರೇಣುಕಾಸ್ವಾಮಿ ದರ್ಶನ್ ಅಭಿಮಾನಿ ಅಂತ ಹೇಳುತ್ತಾರೆ. ಆದರೆ ರೇಣುಕಾಸ್ವಾಮಿ ಅವರ ಮನೆಯಲ್ಲಿ ನಟ ದರ್ಶನ್ ಅವರ ಯಾವ ಫೋಟೋ ಕೂಡ ಇಲ್ಲ. ಮತ್ತೆ ಮನೆಯವರಿಗೆ ರೇಣುಕಾಸ್ವಾಮಿ ಫೇಸ್ ಬುಕ್ನಲ್ಲಿ ಕಾಮೆಂಟ್ ಮಾಡಿರೋ ವಿಚಾರದ ಬಗ್ಗೆ ಏನೂ ಗೊತ್ತಿಲ್ಲ ಎಂದು ಭಾವನಾ ಬೆಳಗೆರೆ ತಿಳಿಸಿದ್ದಾರೆ.
ಕೆಲಸಕ್ಕೆ ಹೋದವನು ಮನೆಗೆ ವಾಪಸ್ ಬಂದಿಲ್ಲ ಅಂತ ಹೇಳುತ್ತಿದ್ದಾರೆ. ಕುಟುಂಬಸ್ಥರ ಪರಿಸ್ಥಿತಿ ನೋಡಿದ್ರೆ ಕರುಳು ಚುರ್ ಎನ್ನುತ್ತೆ. ಇನ್ನು, ಹೀಗೆ ಮಾತನ್ನು ಮುಂದುವರೆಸಿದ ಅವರು, ಇಂತಹ ಸಾವಿರ ಕಾಮೆಂಟ್ಗಳಿಗೆ ತಲೆ ಕೆಡೆಸಿಕೊಳ್ಳಬಾರದು. ಹೀಗೆ ಮಾಡಿದ್ರೆ, ಸೈಬರ್ ಕ್ರೈಮ್ಗೆ ಬಿಟ್ಟು ಬಿಟ್ಟರೆ ಒಳ್ಳೆಯದು. ಯಾವೆಲ್ಲಾ ಕಾಮೆಂಟ್ಸ್ಗಳಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಅಷ್ಟರ ಮಟ್ಟಿಗೆ ಇರಬೇಕು. ಒಂದು ಕಾಮೆಂಟ್ನಿಂದ ಪ್ರಾಣ ಹೋಗುತ್ತೆ ಅಂದ್ರೆ ಸೋಷಿಯಲ್ ಮಿಡಿಯಾ ಯಾವ ಮಟ್ಟಕೆ ಹೋಗುತ್ತಿದೆ ಅಂತ ಚಿಂತೆ ಆಗುತ್ತೆ. ಒಂದು ಸ್ಟಾರ್ ಗಿರಿಯನ್ನು ಜನ ಹೇಗೆ ತೆಗೆದುಕೊಳ್ಳುತ್ತಿದ್ದಾರೆ. ಇಷ್ಟು ದೊಡ್ಡ ಸ್ಟಾರ್ಗಳಿಂದ ಇಂತಹ ಮಟ್ಟಕ್ಕೆ ರಿಯಾಕ್ಟ್ ಮಾಡ್ತಾ ಇರೋದು ನಾಚಿಕೆಗೇಡಿನ ಸಂಗತಿ. ಈ ಕೊಲೆಯನ್ನು ನಾನು ಖಂಡಿಸುತ್ತೇನೆ. ಯಾರೇ ತಪ್ಪು ಮಾಡಿದ್ರೆ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ