/newsfirstlive-kannada/media/post_attachments/wp-content/uploads/2024/05/bhavani-revanna-1.jpg)
ಬೆಂಗಳೂರು: ಹಾಸನ ಮಹಿಳೆಯ ಕಿಡ್ನ್ಯಾಪ್ ಕೇಸ್​ನಲ್ಲಿ ಭವಾನಿ ರೇವಣ್ಣ ಕಣ್ತಪ್ಪಿಸಿಕೊಂಡಿದ್ದರು. ಆದರೀಗ ಈ ಪ್ರಕರಣದ ಸಂಬಂಧ ಅವರಿಗೆ ಬಿಗ್​ ರಿಲೀಫ್ ಸಿಕ್ಕಿದೆ. ಮಧ್ಯಂತರ ಜಾಮೀನು ಮಂಜೂರಾಗಿದೆ.
ಹೈಕೋರ್ಟ್​ ಏಕಸದಸ್ಯ ಪೀಠದಿಂದ ಭವಾನಿ ರೇವಣ್ಣ ಅವರಿಗೆ ಜಾಮೀನು ಸಿಕ್ಕಿದೆ. ಹೀಗಾಗಿ 1 ಗಂಟೆ ವೇಳೆಗೆ SIT ಮುಂದೆ ಹಾಜರಾಗಲು ಸೂಚನೆ ನೀಡಲಾಗಿದೆ. ಜೊತೆಗೆ ತನಿಖೆಗೆ ಸಹಕರಿಸುವಂತೆ ಕೋರ್ಟ್​ನಿಂದ ಸೂಚನೆ ಹೊರಡಿಸಲಾಗಿದೆ.
ಹಾಸನ ಮಹಿಳೆಯ ಕಿಡ್ನಾಪ್​ ಕೇಸ್​ಗೆ ಸಂಬಂಧಿಸಿ ಭವಾನಿ ರೇವಣ್ಣ ಅವರನ್ನು ಎಸ್​ಐಟಿ ತನಿಖೆಗೆ ಕರೆದಿತ್ತು. ಆದರೆ ಬಂಧನದ ಭೀತಿಯಲ್ಲಿದ್ದ ಭವಾನಿಯವರು ತನಿಖೆ ಸಹಕರಿಸಿದೆ ಕಣ್ಮರೆಯಾಗಿದ್ದರು. ನಂತರ ಎಸ್​ಐಟಿ ತಂಡ ಅವರನ್ನು ಬಂಧಿಸಲು ಮುಂದಾಗಿತ್ತು. ಆದರೆ ಭವಾನಿಯವರು ಎಲ್ಲೂ ಸಿಕ್ಕಿರಲಿಲ್ಲ. ಇದೀಗ ಹೈಕೋರ್ಟ್​ ಏಕಸದಸ್ಯ ಪೀಠದಿಂದ ಭವಾನಿ ರೇವಣ್ಣ ಅವರಿಗೆ ಜಾಮೀನು ಸಿಕ್ಕಿದೆ. ತನಿಖೆಗೆ ಸಹಕರಿಸುವಂತೆ ಕೋರ್ಟ್​ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us