/newsfirstlive-kannada/media/post_attachments/wp-content/uploads/2024/10/bbk-119.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಶುರುವಾಗಿ 5 ದಿನ ಕಳೆದಿದೆ. ಆದರೆ ಬಿಗ್ಬಾಸ್ ಶುರುವಾದ ದಿನದಿಂದಲೇ ಸ್ಪರ್ಧಿಗಳ ಮಧ್ಯೆ ಗಲಾಟೆ ನಡೆದಿದೆ. ಸ್ವರ್ಗ ಹಾಗೂ ನರಕ ಎಂಬ ಎರಡು ಕಾನ್ಸೆಪ್ಟ್ ಮೂಲಕವೇ ಸ್ಪರ್ಧಿಗಳ ಮಧ್ಯೆ ಮೈಮನಸ್ಸು ಮೂಡಿದಂತೆ ಆಗಿದೆ.
ಇದನ್ನೂ ಓದಿ: BBK11: ಶಿಶಿರ್ಗೆ ಏನಾಯ್ತು? ಕಣ್ಣೀರು ಹಾಕಿದ ಬಿಗ್ ಬಾಸ್ ಸ್ಪರ್ಧಿಗಳು
ಸದ್ಯ ಬಿಗ್ಬಾಸ್ ಮನೆಯಲ್ಲಿ ಒಟ್ಟು 17 ಸ್ಪರ್ಧಿಗಳು ಇದ್ದಾರೆ. ಏಳು ಮಂದಿ ಬಿಗ್ಬಾಸ್ ನರಕಕ್ಕೆ ಸೇರಿದ್ದಾರೆ. ಇನ್ನೂ 10 ಜನ ಸ್ವರ್ಗದಲ್ಲಿ ಇದ್ದಾರೆ. ಆದರೆ ಇದೇ ಸ್ವರ್ಗದಲ್ಲಿ ಇರೋ 10 ಸ್ಪರ್ಧಿಗಳಲ್ಲಿ ಕ್ರಿಮಿನಲ್ ಲಾಯರ್ ಜಗದೀಶ್ ಕೂಡ ಒಬ್ಬರು. ಇದೇ ಜಗದೀಶ್ ಬಿಗ್ಬಾಸ್ ಮನೆಯಲ್ಲಿರೋ ಎಲ್ಲರ ಜೊತೆ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಬಿಗ್ ಬಾಸ್ನಿಂದ ಚೈತ್ರಾರನ್ನು ಹೊರಗೆ ಹಾಕಿ, ಇಲ್ಲದಿದ್ರೆ ಕಾರ್ಯಕ್ರಮ ಸ್ಥಗಿತ ಮಾಡಿಸುತ್ತೇನೆ ಎಂದ ವಕೀಲ!
ನಿನ್ನೆ ನಡೆದ ಎಪಿಸೋಡ್ನಲ್ಲಿಯೂ ಜಗದೀಶ್ ಅವರು ಸುಖಾ ಸುಮ್ಮನೆ ಉಗ್ರಂ ಮಂಜು ಅವರ ಮೇಲೆ ರೇಗಾಡಿದ್ದಾರೆ. ಬಳಿಕ ಬಿಗ್ಬಾಸ್ ಮನೆಯಲ್ಲಿರೋ ಕನ್ಫೆಷನ್ ರೂಂನ ಬಾಗಿಲು ಮುರಿದು ಹಾಕಿದ್ದಾರೆ. ಅಷ್ಟೇ ಅಲ್ಲದೇ ಸ್ಪರ್ಧಿಗಳ ಬಗ್ಗೆ ವೈಯಕ್ತಿಕವಾಗಿ ಮಾತಾಡಿದ್ದಾರೆ. ಕೆಲ ಹೊತ್ತಿನ ಬಳಿಕ ಬಂದು ಮತ್ತೆ ಕ್ಷಮೆ ಕೇಳಿದ್ದಾರೆ.
ಜಗದೀಶ್ ಅವರು ಕ್ಷಮೆ ಕೇಳುತ್ತಿದ್ದ ವೇಳೆ ಭವ್ಯಾ ಗೌಡ ಅವರು ಇವರು ಹೀಗೆ ಮಾಡ್ತಾ ಇರೋದನ್ನು ನೋಡಿ ಸುದೀಪ್ ಸರ್ ಇವರನ್ನೇ ಒದ್ದು ಹೊರಗಡೆ ಹಾಕ್ತಾರೆ ಅಂತ ಹೇಳಿದ್ದಾರೆ. ಅಷ್ಟರ ಮಟ್ಟಿಗೆ ಬಿಗ್ಬಾಸ್ ಮನೆಯಲ್ಲಿ ಸೌಂಡ್ ಮಾಡ್ತಾ ಇದ್ದಾರೆ. ನಾಳೆಯ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ನಿರ್ಧಾರ ಏನಾಗುತ್ತೆ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ