/newsfirstlive-kannada/media/post_attachments/wp-content/uploads/2025/06/panduranga1.jpg)
ಬೀದರ್: ಬರೋಬ್ಬರಿ 18 ವರ್ಷಗಳ ಬಳಿಕ ಆರ್ಸಿಬಿ ವಿಜಯ ಪತಾಕೆ ಹಾರಿಸಿತ್ತು. ಪ್ರತಿ ವರ್ಷವು ಅಭಿಮಾನಿಗಳು ಈ ಸಲ ಕಪ್ ನಮ್ದೇ ಅಂತ ಹೇಳುತ್ತಿದ್ದರು. ಆದರೆ ಈ ಬಾರಿ ಕೋಟ್ಯಾಂತರ ಅಭಿಮಾನಿಗಳು ಹೆಮ್ಮೆಯಿಂದ ಈ ಸಲ ಕಪ್ ನಮ್ದು ಅಂತ ಹೇಳಿದ್ದರು.
ಇದನ್ನೂ ಓದಿ:ಕನ್ನಡ ಕೋಗಿಲೆ ಸಿಂಗರ್ ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು.. ಡಿವೋರ್ಸ್ಗೆ ಅರ್ಜಿ
ಬೀದರ್ನ ದಂಪತಿ ತಮಗೆ ತಾವೇ ಸವಾಲ್ ಹಾಕಿಕೊಂಡಿದ್ದರು. ಪತ್ನಿ ಆರ್ಸಿಬಿ ಗೆದ್ದರೆ ಪತಿಗೆ ಇನ್ನೊಂದು ಮದುವೆ ಮಾಡ್ತೀನಿ ಅಂತ ಹೇಳಿದ್ದರು. ಇತ್ತ ಆರ್ಸಿಬಿ ಸೋತರೆ ತಲೆ ಬೋಳಿಸಿಕೊಳ್ಳುತ್ತೇನೆ ಅಂತ ಸವಾಲು ಹಾಕಿಕೊಂಡು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದರು.
ಇದೀಗ ಹುಮನಾಬಾದ್ ನಿವಾಸಿಗಳಾದ ಪಾಂಡುರಂಗ ಹಾಗೂ ಜ್ಯೋತಿ ದಂಪತಿ ಫಜೀತಿ ಸಿಕ್ಕಿಹಾಕಿಕೊಂಡಿದ್ದಾರೆ. ಆರ್ಸಿಬಿ ಕಪ್ ಗೆದ್ರೆ ಪತಿಗೆ ಇನ್ನೊಂದು ಮದುವೆ ಅಂತ ಪತ್ನಿ ಹೇಳಿದ್ದಳು. ಆರ್ಸಿಬಿ ಕಪ್ ಸೋತ್ರೆ ತಲೆಬೊಳಿಸುತ್ತೇನೆ ಅಂತ ಪತಿ ಹೇಳಿದ್ದ. ಈಗ ಆರ್ಸಿಬಿ ಗೆದ್ದಿದೆ ಇನ್ನೊಂದು ಮದುವೆ ಮಾಡುವಂತೆ ಪತಿ ಪಟ್ಟು ಹಿಡಿದಿದ್ದಾನೆ. ಇನ್ನೂ, ಎರಡು ದಿನಗಳ ಹಿಂದಷ್ಟೇ ಮತ್ತೆ ರೀಲ್ಸ್ ಮಾಡಿ ವೀಕ್ಷಕರು ಹೇಗೆ ಹೇಳಿರೋ ಹಾಗೇ ಮಾಡುತ್ತೇನೆ ಅಂತ ಪಾಂಡುರಂಗ ವಿಡಿಯೋ ಹರಿಬಿಟ್ಟಿದ್ದಾನೆ.
ಇದನ್ನೂ ನೋಡಿದ ನೆಟ್ಟಿಗರು ಬೇಡಾ ಅಣ್ಣ ಪಾಪ ಅತ್ತಿಗೆ, ನೀವು ಹಾಗೇ ಮಾಡಬೇಡಿ ಅಣ್ಣ ಅಂತ ಕಾಮೆಂಟ್ಸ್ ಮಾಡಿದ್ದಾರೆ. ಮತ್ತೊಬ್ಬ ನೆಟ್ಟಿಗ ಚಾಲೆಂಜ್ ಕಟ್ಟಿದ್ ಮೇಲೆ ಆಗಲೇಬೇಕು ಆಗು ಅಣ್ಣ ಅಂತ ತಮಾಷೆ ಮಾಡುತ್ತಿದ್ದಾರೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಸದ್ಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ