ಕಿಚ್ಚ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 11
BBK11 ಪ್ರಾರಂಭವಾಗಿ ಇನ್ನೂ ಒಂದು ದಿನ ಕಳೆದಿಲ್ಲ
ಬಿಗ್ ಬಾಸ್ ಪ್ರೋಗ್ರಾಂ ಹಾಳು ಮಾಡುತ್ತಾರಂತೆ ಈ ಲಾಯರ್
ಕಿಚ್ಚ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ಇನ್ನೂ ಒಂದು ವಾರ ಕಳೆದಿಲ್ಲ. ಅಷ್ಟರಲ್ಲೇ ಲಾಯರ್ ಜಗದೀಶ್ ಉಗ್ರ ಪ್ರತಾಪ ತೋರಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಜಗಳದಿಂದ ಕೆಂಡಾಮಂಡಲರಾದ ಅವರು ಕೊನೆಗೆ ಬಿಗ್ ಬಾಸ್ಗೇ ಅವಾಜ್ ಹಾಕಿದ್ದಾರೆ.
ಕ್ಯಾಮೆರಾ ಮುಂದೆ ಹೋಗಿ ಮಾತನಾಡಿದ ಲಾಯರ್ ಜಗದೀಶ್, ‘ಬಿಗ್ ಬಾಸ್ ನನಗೆ ಇಲ್ಲಿ ಇರೋಕೆ ಇಷ್ಟವಿಲ್ಲ. ನಾನು ಹೊರ ಹೋಗುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ: BBK11: ನನಗೆ ಇರೋಕೆ ಇಷ್ಟವಿಲ್ಲ, ಬಿಗ್ ಬಾಸ್ನಿಂದ ಹೊರ ಹೋಗುತ್ತೇನೆಂದ ಸ್ಪರ್ಧಿ!
ಬಿಗ್ ಬಾಸ್ಗೂ ಅವಾಜ್ ಹಾಕಿದ ಜಗದೀಶ್, ನಾನು ಈ ಪ್ರೋಗ್ರಾಂ ಹಾಳು ಮಾಡದಿದ್ದರೆ ನನ್ನ ಹೆಸರು ಜಗದೀಶ್ ಅಲ್ಲ ಎಂದಿದ್ದಾರೆ. ಯಾವನು ಕಾಲು ಇಡಬಾರದು ಇಲ್ಲಿ. ಮನಸ್ಸು ಮಾಡಿದ್ರೆ ನಾನು ಹೆಲಿಕಾಪ್ಟರ್ ತರಿಸುತ್ತೇನೆ. ಈ ಡೋರನ್ನೇ ಉಡಾಯಿಸಿ ಬಿಡುತ್ತೇನೆ. ನನ್ನನ್ನು ಎದುರಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸುತ್ತೀರಾ? ಓಡ್ಸಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಯವಿಟ್ಟು ನಿಮ್ಮ ರಾಜಕೀಯ ಜಗಳದಿಂದ ನನ್ನ ಹೆಸರು ಹೊರಗಿಡಿ.. ಸಚಿವೆಯ ವಿವಾದಿತ ಹೇಳಿಕೆಗೆ ನಟಿ ಸಮಂತಾ ಬೇಸರ
ಸದ್ಯ ಜಗದೀಶ್ ವರ್ತನೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ಈ ವಾರದ ಕೊನೆಯಲ್ಲಿ ಎಲಿಮಿನೇಶನ್ ಪ್ರಕ್ರಿಯೆ ಇರಲಿದ್ದು, ಜಗದೀಶ್ ಉಳಿಯುತ್ತಾರಾ? ಹೊರಹೋಗುತ್ತಾ? ಎಂಬ ಪ್ರಶ್ನೆಯೂ ಅಭಿಮಾನಿಗಳನ್ನು ಕಾಡತೊಡಗಿದೆ. ಇದಲ್ಲದೆ, ಬಿಗ್ ಬಾಸ್ಗೆ ಹಾಕಿದ ಅವಾಜ್ಗೆ ಕಿಚ್ಚ ಸುದೀಪ್ ಅವರು ಜಗದೀಶ್ಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರಾ? ಎಂಬ ಕುತೂಹಲತೆಯೂ ಅಭಿಮಾನಿಗಳನ್ನು ಕೆರಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಿಚ್ಚ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 11
BBK11 ಪ್ರಾರಂಭವಾಗಿ ಇನ್ನೂ ಒಂದು ದಿನ ಕಳೆದಿಲ್ಲ
ಬಿಗ್ ಬಾಸ್ ಪ್ರೋಗ್ರಾಂ ಹಾಳು ಮಾಡುತ್ತಾರಂತೆ ಈ ಲಾಯರ್
ಕಿಚ್ಚ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ಇನ್ನೂ ಒಂದು ವಾರ ಕಳೆದಿಲ್ಲ. ಅಷ್ಟರಲ್ಲೇ ಲಾಯರ್ ಜಗದೀಶ್ ಉಗ್ರ ಪ್ರತಾಪ ತೋರಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಜಗಳದಿಂದ ಕೆಂಡಾಮಂಡಲರಾದ ಅವರು ಕೊನೆಗೆ ಬಿಗ್ ಬಾಸ್ಗೇ ಅವಾಜ್ ಹಾಕಿದ್ದಾರೆ.
ಕ್ಯಾಮೆರಾ ಮುಂದೆ ಹೋಗಿ ಮಾತನಾಡಿದ ಲಾಯರ್ ಜಗದೀಶ್, ‘ಬಿಗ್ ಬಾಸ್ ನನಗೆ ಇಲ್ಲಿ ಇರೋಕೆ ಇಷ್ಟವಿಲ್ಲ. ನಾನು ಹೊರ ಹೋಗುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ: BBK11: ನನಗೆ ಇರೋಕೆ ಇಷ್ಟವಿಲ್ಲ, ಬಿಗ್ ಬಾಸ್ನಿಂದ ಹೊರ ಹೋಗುತ್ತೇನೆಂದ ಸ್ಪರ್ಧಿ!
ಬಿಗ್ ಬಾಸ್ಗೂ ಅವಾಜ್ ಹಾಕಿದ ಜಗದೀಶ್, ನಾನು ಈ ಪ್ರೋಗ್ರಾಂ ಹಾಳು ಮಾಡದಿದ್ದರೆ ನನ್ನ ಹೆಸರು ಜಗದೀಶ್ ಅಲ್ಲ ಎಂದಿದ್ದಾರೆ. ಯಾವನು ಕಾಲು ಇಡಬಾರದು ಇಲ್ಲಿ. ಮನಸ್ಸು ಮಾಡಿದ್ರೆ ನಾನು ಹೆಲಿಕಾಪ್ಟರ್ ತರಿಸುತ್ತೇನೆ. ಈ ಡೋರನ್ನೇ ಉಡಾಯಿಸಿ ಬಿಡುತ್ತೇನೆ. ನನ್ನನ್ನು ಎದುರಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸುತ್ತೀರಾ? ಓಡ್ಸಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಯವಿಟ್ಟು ನಿಮ್ಮ ರಾಜಕೀಯ ಜಗಳದಿಂದ ನನ್ನ ಹೆಸರು ಹೊರಗಿಡಿ.. ಸಚಿವೆಯ ವಿವಾದಿತ ಹೇಳಿಕೆಗೆ ನಟಿ ಸಮಂತಾ ಬೇಸರ
ಸದ್ಯ ಜಗದೀಶ್ ವರ್ತನೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ಈ ವಾರದ ಕೊನೆಯಲ್ಲಿ ಎಲಿಮಿನೇಶನ್ ಪ್ರಕ್ರಿಯೆ ಇರಲಿದ್ದು, ಜಗದೀಶ್ ಉಳಿಯುತ್ತಾರಾ? ಹೊರಹೋಗುತ್ತಾ? ಎಂಬ ಪ್ರಶ್ನೆಯೂ ಅಭಿಮಾನಿಗಳನ್ನು ಕಾಡತೊಡಗಿದೆ. ಇದಲ್ಲದೆ, ಬಿಗ್ ಬಾಸ್ಗೆ ಹಾಕಿದ ಅವಾಜ್ಗೆ ಕಿಚ್ಚ ಸುದೀಪ್ ಅವರು ಜಗದೀಶ್ಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರಾ? ಎಂಬ ಕುತೂಹಲತೆಯೂ ಅಭಿಮಾನಿಗಳನ್ನು ಕೆರಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ