/newsfirstlive-kannada/media/post_attachments/wp-content/uploads/2025/02/rajat_patidar_KOHLI.jpg)
ಸರ್ಪ್ರೈಸ್ ರೀತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನಾಯಕನ ಗಾದಿಗೇರಿರುವ ರಜತ್ ಪಾಟಿದಾರ್ ಮುಂದೆ ಸಾಲು ಸಾಲು ಸವಾಲುಗಳಿವೆ. ಆ ಸವಾಲುಗಳನ್ನ ಮೀರಿ ನಿಂತ್ರೆ ಮಾತ್ರ ಕಪ್ ನಮ್ದು. ಇಲ್ಲದಿದ್ರೆ, ಈ ಸೀಸನ್ನಲ್ಲೂ ಕಪ್ ಕನಸಾಗೇ ಉಳಿಯಲಿದೆ.
ಅಷ್ಟಕ್ಕೂ ಆ ಸವಾಲುಗಳೇನು?
ಐಪಿಎಲ್ ಸೀಸನ್ 16ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ಹುರುಪಿನೊಂದಿಗೆ ಸಜ್ಜಾಗಿದೆ. ನೂತನ ನಾಯಕನಾಗಿ ನೇಮಕವಾಗಿರೋ ರಜತ್ ಪಟಿದಾರ್, ಆರ್ಸಿಬಿಯ ಸಿಂಹಾಸನವೇರಿದ್ದಾರೆ. ಅಂದ್ಹಾಗೆ ಐಪಿಎಲ್ನ ಒನ್ ಆಫ್ ದ ಜನಪ್ರಿಯ ಹಾಗೂ ಶ್ರೀಮಂತ ತಂಡದ ನಾಯಕತ್ವ ವಹಿಸಿಕೊಂಡಿರೋ ಪಾಟಿದಾರ್ ಮುಂದಿನ ಹಾದಿ ಕಠಿಣವಾಗಿದೆ.
ಇದನ್ನೂ ಓದಿ: AB ಡಿವಿಲಿಯರ್ಸ್ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಆರ್ಸಿಬಿ; ಅಸಲಿಗೆ ನಡೆದಿದ್ದೇನು?
ಚಾಲೆಂಜ್ ನಂ.1: ಪರ್ಫೆಕ್ಟ್ ಪ್ಲೇಯಿಂಗ್-XI ಸೆಲೆಕ್ಟ್ ಮಾಡ್ಬೇಕು
ಆರ್ಸಿಬಿ ನಾಯಕನ ಗಾದಿಗೇರಿರುವ ರಜತ್ ಪಾಟಿದಾರ್ ಮುಂದಿರೋ ದೊಡ್ಡ ಟಾಸ್ಕೇ ಟೀಮ್ ಬಿಲ್ಡ್ ಮಾಡೋದು. ಈ ಹಿಂದಿನ 17 ಸೀಸನ್ಗಳಲ್ಲೂ ಆರ್ಸಿಬಿ ಈ ವಿಚಾರದಲ್ಲಿ ಎಡವಿದೆ. ಪಂದ್ಯದಿಂದ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆಗಳ ಮೇಲೆ ಬದಲಾವಣೆಗಳಾಗಿ ಅಂತಿಮವಾಗಿ ಸೋಲಿನ ದರ್ಶನವಾಗಿದೆ. ಈ ಸೀಸನ್ಗೂ ಮುನ್ನ ರಜತ್ ಪಾಟಿದಾರ್ ಕಂಡಿಷನ್ಸ್ಗೆ ತಕ್ಕಂತೆ ಪರ್ಫೆಕ್ಟ್ ಪ್ಲೇಯಿಂಗ್ ಇಲೆವೆನ್ನ ಸೆಟ್ ಮಾಡಿಕೊಳ್ಳಬೇಕಿದೆ.
ಚಾಲೆಂಜ್ ನಂ.2: ಸೂಪರ್ ಸ್ಟಾರ್ಸ್ನ ಹ್ಯಾಂಡಲ್ ಮಾಡಬೇಕು
ಕೊಹ್ಲಿ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್ವುಡ್, ಕೃನಾಲ್ ಪಾಂಡ್ಯ, ಲಿವಿಂಗ್ಸ್ಟೋನ್, ಫಿಲ್ ಸಾಲ್ಟ್ರಂತ ಸೂಪರ್ ಸ್ಟಾರ್ ಆಟಗಾರರು ಆರ್ಸಿಬಿಯಲ್ಲಿದ್ದಾರೆ. ಇವರಿಗೆಲ್ಲ ಹೋಲಿಸಿದ್ರೆ, ರಜತ್ ಪಾಟಿದಾರ್ಗೆ ಅನುಭವ ಕಡಿಮೆ, ಜನಪ್ರಿಯತೆಯೂ ಕಡಿಮೆ. ಈ ಸೂಪರ್ಸ್ಟಾರ್ಗಳನ್ನ ಹ್ಯಾಂಡಲ್ ಮಾಡೋದು ರಜತ್ ಪಟಿದಾರ್ಗೆ ದೊಡ್ಡ ಸವಾಲಾಗಲಿದೆ. ಯಾವುದಾದರೂ ವಿಚಾರದಲ್ಲಿ ಯಡವಟ್ಟಾದ್ರೆ, ಕಳೆದ ಸಲ ಮುಂಬೈ ಫ್ರಾಂಚೈಸಿಯಲ್ಲಾದಂತೆ ಬಿರುಕು ಸೃಷ್ಟಿಯಾಗೋ ಅಪಾಯವಿದೆ.
ಇದನ್ನೂ ಓದಿ: Valentine’s Day: ಗಂಡನ ಸಾಲದಿಂದ ಚಿಗುರಿದ ಪ್ರೀತಿ.. ವಸೂಲಿಗೆ ಬರ್ತಿದ್ದ ಏಜೆಂಟ್ ಜೊತೆ ಲೇಡಿ ಪರಾರಿ..!
ಚಾಲೆಂಜ್ ನಂ.3: ದೊಡ್ಡ ಜವಾಬ್ದಾರಿ, ಹೆಚ್ಚಿನ ಒತ್ತಡ
ಆರ್ಸಿಬಿ ಐಪಿಎಲ್ ಲೋಕದ ಬಿಗ್ಬುಲ್. ಕಪ್ ಗೆದ್ದಿಲ್ಲ ಅಂದ್ರೂ ಇದ್ರ ಜನಪ್ರಿಯತೆಗೆ ಕಡಿಮೆಯಿಲ್ಲ. ಕರ್ನಾಟಕ, ಇಂಡಿಯಾ ಮಾತ್ರವಲ್ಲ.. ವಿಶ್ವದೆಲ್ಲೆಡೆ ಅಭಿಮಾನಿಗಳ ದಂಡಿದೆ. ಬಿಗ್ ಫ್ರಾಂಚೈಸಿ ಅಂದಮೇಲೆ ಅಷ್ಟೇ ಒತ್ತಡವೂ ಇದೆ. ಅದ್ರಲ್ಲೂ ಕಪ್ ಗೆಲುವಿನ ಪ್ರೆಶರ್ ಸ್ವಲ್ಪ ಹೆಚ್ಚೇ ಇದೆ. ಕಳೆದ 17 ಸೀಸನ್ಗಳಿಂದ ಆರ್ಸಿಬಿ ಒಟ್ಟು 7 ನಾಯಕರನ್ನ ಕಂಡಿದೆ. ಯಾರೊಬ್ಬರೂ ಕೂಡ ಆರ್ಸಿಬಿಯನ್ನ ಚಾಂಪಿಯನ್ ಮಾಡಿಲ್ಲ. ಕಪ್ ನಮ್ದೇ ಅನ್ನೋ ಫ್ಯಾನ್ಸ್ ಪ್ರತಿ ಬಾರಿ ನಿರಾಸೆ ಅನುಭವಿಸಿದ್ದಾರೆ. ಅಭಿಮಾನಿಗಳ ಕಪ್ ಕನಸನ್ನು ನನಸಾಗಿಸೋದೇ ದೊಡ್ಡ ಸವಾಲು.
ಚಾಲೆಂಜ್ ನಂ.4: ಮುಂದೆ ನಿಂತು ತಂಡ ಲೀಡ್ ಮಾಡಬೇಕು!
ನಾಯಕನಾಗಿ ಮಧ್ಯಪ್ರದೇಶ ತಂಡವನ್ನ ರಜತ್ ಪಾಟಿದಾರ್ ಯಶಸ್ವಿಯಾಗಿ ಮುನ್ನಡೆಸಿರಬಹುದು. ಬ್ಯಾಟಿಂಗ್ನಲ್ಲೂ ಮಿಂಚಿರಬಹುದು. ಆರ್ಸಿಬಿನೇ ಬೇರೆ. ಇಲ್ಲಿನ ಪ್ರೆಶರ್ ಬೇರೆ. ಸ್ಪಿನ್ ಎದುರು ಆರ್ಭಟಿಸೋ ರಜತ್ ಪಾಟಿದಾರ್ ಬ್ಯಾಟಿಂಗ್, ಪೇಸ್ ಬೌಲಿಂಗ್ ಎದುರು ಅಷ್ಟಕಷ್ಟೇ. ಇದೀಗ ಕ್ಯಾಪ್ಟನ್ ಪಟ್ಟವೇರಿರುವ ಪಾಟಿದಾರ್ ಬ್ಯಾಟ್ ಹಿಡಿದು ಪರ್ಫಾಮ್ ಮಾಡಿ captain leading from the front ಅಂತಾರಲ್ಲ ಆ ಮಾತಿನಂತೆ ಮುಂದೆ ನಿಂತು ತಂಡವನ್ನ ಲೀಡ್ ಮಾಡಬೇಕಿದೆ.
ಇದನ್ನೂ ಓದಿ: IPLನ ಮೊದಲ ಪಂದ್ಯ RCB ವಿರುದ್ಧ ಅಖಾಡಕ್ಕೆ ಇಳಿಯೋ ಟೀಮ್ ಯಾವುದು.. ಉದ್ಘಾಟನೆ ಪಂದ್ಯ ನಡೆಯುವುದೆಲ್ಲಿ?
ಚಾಲೆಂಜ್ ನಂ.5: ಚಿನ್ನಸ್ವಾಮಿ ಚಾಲೆಂಜ್ ಗೆಲ್ಲಬೇಕಿದೆ
ಆರ್ಸಿಬಿ ತಂಡಕ್ಕಿರೋ ದೊಡ್ಡ ಸವಾಲೇ ಹೋಮ್ ಗ್ರೌಂಡ್ ಚಿನ್ನಸ್ವಾಮಿ ಸ್ಟೇಡಿಯಂ. ತವರಿನಲ್ಲಿ ಆಡೋ 7 ಪಂದ್ಯಗಳನ್ನ ಗೆದ್ರೆ, ಪ್ಲೇ ಆಫ್ ಹಾದಿ ಸುಗಮವಾಗಲಿದೆ. 7 ಪಂದ್ಯ ಗೆಲ್ಲಲು ಹರಸಾಹಸ ಮಾಡಬೇಕಿದೆ. ಚಿನ್ನಸ್ವಾಮಿ ಮೈದಾನ ಬ್ಯಾಟ್ಸ್ಮನ್ಗಳ ಪಾಲಿಗೆ ಸ್ವರ್ಗ. ಚಿಕ್ಕ ಬೌಂಡರಿಗಳು ಇರೋ ಗ್ರೌಂಡ್ ಪಿಚ್ಗಳು ಬ್ಯಾಟಿಂಗ್ ಟ್ರ್ಯಾಕ್ಗಳು. ಇಲ್ಲಿ ಬ್ಯಾಟ್ಸ್ಮನ್ಗಳನ್ನ ಕಟ್ಟಿ ಹಾಕೋದು ನಿಜಕ್ಕೂ ಟಫ್ ಚಾಲೆಂಜ್. ಬೌಲರ್ಸ್ ಪಿಕ್ ಮಾಡೋದು, ಗೇಮ್ಪ್ಲಾನ್ ರೂಪಿಸೋದು ಈ ವಿಚಾರದಲ್ಲಿ ಪಾಟಿದಾರ್ ಸರಿಯಾದ ಪ್ಲಾನ್ ಮಾಡಬೇಕು.
ಇವಿಷ್ಟೇ ಅಲ್ಲ, ಇನ್ನೂ ಹಲವು ಸವಾಲುಗಳು ಐಪಿಎಲ್ ಅಖಾಡದಲ್ಲಿ ರಜತ್ ಪಾಟಿದಾರ್ಗೆ ಎದುರಾಗಲಿವೆ. ಆ ಸವಾಲುಗಳನ್ನ ಮೆಟ್ಟಿ ನಿಂತು RCB ರಾಜ ರಜತ್ ಯುದ್ಧ ಗೆಲ್ತಾರಾ? ಚೊಚ್ಚಲ ಕಪ್ ಗೆಲ್ಲಿಸ್ತಾರಾ? ಕಾದು ನೋಡೋಣ.
ಇದನ್ನೂ ಓದಿ: ‘ಪ್ರೀತಿ ಅಂದರೆ..’ ಪ್ರೇಮಿಗಳಿಗಾಗಿ ಸ್ಪೆಷಲ್ಲಾಗಿ ಕವಿತೆ ಬರೆದ ಸಿಂಗಾರ ಸಿರಿಯೇ ಖ್ಯಾತಿಯ ಪ್ರಮೋದ್ ಮರವಂತೆ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್