GT ವಿರುದ್ಧ ಆರ್​ಸಿಬಿಗೆ ಬಿಗ್​ ಚಾಲೆಂಜ್.. ಈ 6 ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಗೆಲುವು ನಮ್ಮದೇ..!

author-image
Ganesh
Updated On
RCBಗೆ ಮತ್ತೆ ಕೈಕೊಟ್ಟ ಟಾಸ್​.. ಪ್ಲೇಯಿಂಗ್-11ರಲ್ಲಿ ಬಲಿಷ್ಠ ಬೆಂಗಳೂರು ತಂಡ ಹೇಗಿದೆ?
Advertisment
  • ಚಿನ್ನಸ್ವಾಮಿಯಲ್ಲಿ ಆರ್​​ಸಿಬಿ vs ಗುಜರಾತ್​​ ಮುಖಾಮುಖಿ
  • ಜಿತೇಶ್, ಲಿವಿಂಗ್​ಸ್ಟೋನ್​​​​​​​​​​​​​ ಫೈಯರ್ ಮಾಡೋದು ಯಾವಾಗ?
  • ಚಿನ್ನಸ್ವಾಮಿಯಲ್ಲಿ RCB ಡಿಫರೆಂಟ್ ಗೇಮ್ ಆಡಬೇಕಾ?

ಸತತ ಎರಡು ಪಂದ್ಯಗಳ ಗೆಲುವಿನೊಂದಿಗೆ ಆತ್ಮವಿಶ್ವಾಸದಿಂದ ಬೀಗುತ್ತಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಇದೀಗ, ಹೋಮ್​​ ಗ್ರೌಂಡ್ ಎಂ.ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಯುದ್ಧಕ್ಕೆ ಸಜ್ಜಾಗಿದೆ. ಟೂರ್ನಿಯಲ್ಲಿ ಇದೇ ಮೊದಲ ಬಾರಿ ತವರಿನಲ್ಲಿ ಆಡುತ್ತಿರುವ ಆರ್​ಸಿಬಿ, ಲೋಕಲ್ ಫ್ಯಾನ್ಸ್​ಗೆ ಕಿಕ್ ನೀಡಲು ತುದಿಗಾಲಲ್ಲಿ ನಿಂತಿದೆ. ಅಷ್ಟೇ ಅಲ್ಲ. ತವರಿನಲ್ಲಿ ಗುಜರಾತ್​​ ಟೈಟನ್ಸ್​​​ ವಿರುದ್ಧ ಗೆದ್ದು ಹ್ಯಾಟ್ರಿಕ್​ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿದೆ.

ಕೊಲ್ಕತ್ತಾ, ಚೆನ್ನೈ ಚಕ್ರವ್ಯೂಹವನ್ನ ಯಶಸ್ವಿಯಾಗಿ ಭೇದಿಸಿರುವ ರಾಯಲ್ ಚಾಲೆಂಜರ್ಸ್​​ ಬೆಂಗಳೂರು ತಂಡ, ಇದೀಗ ತವರಿನಲ್ಲಿ ಅಗ್ನಿಪರೀಕ್ಷೆಗೆ ಸಿದ್ಧವಾಗಿದೆ. ಚಿನ್ನಸ್ವಾಮಿಯಲ್ಲಿ 50-50 ಸಾಧನೆ ಮಾಡಿರುವ ಆರ್​ಸಿಬಿ, ಗುಜರಾತ್​​ ಟೈಟನ್ಸ್​​ ವಿರುದ್ಧ ಭರ್ಜರಿ ಗೆಲುವಿನ ಲೆಕ್ಕಾಚಾರದಲ್ಲಿದೆ. ಟೂರ್ನಿಯಲ್ಲಿ ಬೆಂಗಳೂರು ತಂಡ ಒಂದೇ ಒಂದು ಪಂದ್ಯ ಸೋತಿಲ್ಲ. ಗುಜರಾತ್​​ ಮೊದಲ ಪಂದ್ಯ ಸೋತು 2ನೇ ಪಂದ್ಯದಲ್ಲಿ ಬಲಿಷ್ಟ ಮುಂಬೈ ಮಣಿಸಿದೆ. ಉಭಯ ತಂಡಗಳೂ ಗೆಲುವಿನ ಓಟ ಮುಂದುವರೆಸೋ ಲೆಕ್ಕಾಚಾರದಲ್ಲಿವೆ.

ಆರ್​ಸಿಬಿಗೆ ಬೇಕು ಭರ್ಜರಿ ಸ್ಟಾರ್ಟ್

ಕೊಲ್ಕತ್ತಾ ವಿರುದ್ಧ 95 ರನ್, ಸಿಎಸ್​​ಕೆ ವಿರುದ್ಧ 45 ರನ್​​ ಜೊತೆಯಾಟದ ಕಾಣಿಕೆ ನೀಡಿರುವ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್, ಗುಜರಾತ್​ ವಿರುದ್ಧವೂ ಉತ್ತಮ ಜೊತೆಯಾಟ ಆಡಬೇಕಿದೆ. ಉಭಯ ಆಟಗಾರರು ಪವರ್​ ಪ್ಲೇನಲ್ಲಿ ಸಾಲಿಡ್ ಬ್ಯಾಟಿಂಗ್ ನಡೆಸಿದ್ದಾರೆ. ಇಂದು ಚಿನ್ನಸ್ವಾಮಿಯಲ್ಲೂ ಇಬ್ಬರಿಂದ ಬೆಂಕಿ ಆಟ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಶ್ರೇಯಸ್​ ಅಯ್ಯರ್ ಮುಂದೆ ರಿಷಭ್ ಪಂತ್​ಗೆ ಮುಖಭಂಗ.. ಪ್ರಭಸಿಮ್ರನ್ ಅರ್ಧಶತಕ, ಲಕ್ನೋಗೆ ಗರ್ವಭಂಗ

publive-image

ಮುಂದುವರೆಯುತ್ತಾ ಪಾಟಿದಾರ್ ಅಗ್ರೆಸಿವ್ ಬ್ಯಾಟಿಂಗ್?

ಆರ್​ಸಿಬಿಯ ಮಿಡಲ್ ಆರ್ಡರ್​​​​​​​ ಪಂಟರ್​​​, ಕ್ಯಾಪ್ಟನ್ ರಜತ್ ಪಟಿದಾರ್. ಈಡನ್ ಗಾರ್ಡನ್ಸ್​ನಲ್ಲಿ 16 ಎಸೆತಗಳಲ್ಲಿ 34 ರನ್, ಚೆಪಾಕ್​ನಲ್ಲಿ 32 ಬಾಲ್​ಗಳಲ್ಲಿ 51 ರನ್​​ ಸಿಡಿಸಿರುವ ಪಟಿದಾರ್, ಟೂರ್ನಿಯಲ್ಲಿ 178ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​​ನಲ್ಲಿ ರನ್​ ಗಳಿಸುತ್ತಿದ್ದಾರೆ. ಚಿನ್ನಸ್ವಾಮಿಯಲ್ಲಿ ಪಟಿದಾರ್ ಇದೇ ಅಗ್ರೆಸಿವ್ ಬ್ಯಾಟಿಂಗ್ ಮುಂದುವರೆಸಿದ್ರೆ ಗುಜರಾತ್​​ ಖೇಲ್ ಖತಂ.

ಜಿತೇಶ್, ಲಿವಿಂಗ್​ಸ್ಟೋನ್​​​​​​​​​​​​​ ಫೈಯರ್ ಮಾಡೋದು ಯಾವಾಗ?

ಆರ್​ಸಿಬಿ ಒಳ್ಳೆ ಟ್ರ್ಯಾಕ್​ನಲ್ಲೇ ಇದೆ. ಆದ್ರೆ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಮತ್ತು ಬಿಗ್ ಹಿಟ್ಟರ್ ಲಿಯಾಮ್ ಲಿವಿಂಗ್​ಸ್ಟೋನ್​​​ ಬ್ಯಾಟ್​​ನಿಂದ, ನಿರೀಕ್ಷಿತ ರನ್​ ಬರ್ತಿಲ್ಲ. ಜಿತೇಶ್, ಲಿವಿಂಗ್​ಸ್ಟೋನ್ ಇಬ್ಬರೂ ಇಂದು ಕ್ಲಿಕ್ ಆಗಿದ್ದೇ ಆದ್ರೆ ಆರ್​ಸಿಬಿ ಬ್ಯಾಟಿಂಗ್​​​ಗೆ ಮತ್ತಷ್ಟು ಬಲ ಬರಲಿದೆ.

ಕೃನಾಲ್ ಪಾಂಡ್ಯ ಬ್ಯಾಟ್​​​ನಿಂದ ವೈಫಲ್ಯ

ಬೆಂಗಳೂರು ತಂಡ ಬ್ಯಾಟಿಂಗ್​​​​ನಲ್ಲೇನೋ ಬಲಿಷ್ಟವಾಗಿ ಕಾಣ್ತಿದೆ. ನಂಬರ್ 9 ಸ್ಲಾಟ್​​ವರೆಗೂ ಆರ್​ಸಿಬಿಗೆ, ಬ್ಯಾಟಿಂಗ್ ಡೆಪ್ತ್ ಇದೆ. ಲೋವರ್ ಡೌನ್​ನಲ್ಲಿ ಆಲ್​ರೌಂಡರ್ ಕೃನಾಲ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್​ ಬ್ಯಾಟ್​​ನಿಂದ ಅಲ್ಪ ಸ್ವಲ್ಪ ಕಾಣಿಕೆ ನೀಡಬೇಕಿದೆ. ಇಬ್ಬರೂ ರನ್​​ ಕಾಣಿಕೆ ನೀಡಿದ್ರೆ ಎದುರಾಳಿಗಳ ವಿರುದ್ಧ 100 ಪರ್ಸೆಂಟ್ ಮೇಲುಗೈ ಸಾಧಿಸಬಹುದು.

ಇದನ್ನೂ ಓದಿ: ಆರ್​ಸಿಬಿಯ ಇಬ್ಬರು ಬೌಲರ್​ಗಳಿಂದ GTಗೆ ನಡುಕ.. ಇವತ್ತು ಗುಜರಾತ್​ ಬ್ಯಾಟರ್​ಗಳು ಧ್ವಂಸ ಪಕ್ಕಾ..!

publive-image

ಬೆಂಗಳೂರಿನಲ್ಲಿ ಆರ್​ಸಿಬಿ ಪೇಸರ್ಸ್​​ಗೆ ಸವಾಲ್?

ಚೆನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿಗೆ ಖಂಡಿತ ಬಿಗ್ ಚಾಲೆಂಜ್ ಎದುರಾಗಲಿದೆ. ಯಾಕಂದ್ರೆ ಚಿನ್ನಸ್ವಾಮಿ ಪಿಚ್, ಬ್ಯಾಟ್ಸ್​​ಮನ್​​ಗಳಿಗೆ ಹೇಳಿ ಮಾಡಿಸಿದ ಪಿಚ್. ಹಾಗಾಗಿ ಆರ್​ಸಿಬಿಯ ತ್ರಿವಳಿ ವೇಗಿಗಳಾದ ಜೋಷ್ ಹೇಜಲ್​ವುಡ್, ಭುವನೇಶ್ವರ್ ಕುಮಾರ್ ಮತ್ತು ಯಶ್ ದಯಾಳ್​​ಗೆ ಈ ಪಿಚ್​ನಲ್ಲಿ ಬೌಲಿಂಗ್ ಮಾಡೋದು ಸವಾಲಾಗಲಿದೆ. ಸ್ಪಿನ್ನರ್​ಗಳಾದ ಕೃನಾಲ್ ಮತ್ತು ಸುಯೇಶ್ ಶರ್ಮಾಗೂ ಇಲ್ಲಿ ಬೌಲಿಂಗ್ ಮಾಡೋದು ಅಷ್ಟು ಸುಲಭ ಇಲ್ಲ.

ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಡಿಫರೆಂಟ್ ಗೇಮ್ ಆಡಬೇಕಾ?

ಈಡನ್ ಗಾರ್ಡನ್ಸ್​ನಲ್ಲಿ ಸಕ್ಸಸ್​ಫುಲ್ ಚೇಸಿಂಗ್, ಚೆನ್ನೈನಲ್ಲಿ 191 ರನ್​ಗಳನ್ನ ಡಿಫೆಂಡ್ ಮಾಡಿಕೊಂಡಿರುವ ಆರ್​ಸಿಬಿ, ಚಿನ್ನಸ್ವಾಮಿಯಲ್ಲಿ ಡಿಫರೆಂಟ್ ಗೇಮ್ ಅಡಲೇಬೇಕು. ಗೇಮ್​​ ಪ್ಲಾನ್ ಬದಲಾಗಬೇಕು ಮತ್ತು ಟ್ಯಾಕ್ಟಿಕ್ಸ್​ ಕೂಡ ಬದಲಾಗಬೇಕು. ಟಾಸ್ ಗೆದ್ರೆ ಉತ್ತಮ ನಿರ್ಣಯ ಕೈಗೊಳ್ಳಬೇಕು. ನಾಯಕ ಪಾಟಿದಾರ್​​ಗೆ ಚಿನ್ನಸ್ವಾಮಿ ಕಂಡೀಷನ್ಸ್​​ ಚೆನ್ನಾಗಿ ಗೊತ್ತಿರೋದ್ರಿಂದ ಗೆಲ್ಲಲು ಪ್ಲಾನ್ ಎ ಜೊತೆಗೆ ಪ್ಲಾನ್ ಬಿ ಮತ್ತು ಪ್ಲಾನ್ ಸಿ ಕೂಡ ರೆಡಿ ಮಾಡಿಕೊಳ್ಳಬೇಕು.

ಒಟ್ನಲ್ಲಿ, ಗೆಲುವಿನ ಟ್ರ್ಯಾಕ್​​ನಲ್ಲಿ ಸಾಗ್ತಿರುವ ಆರ್​ಸಿಬಿಗೆ ಶಕ್ತಿ ತುಂಬಲು, ಇಂದು ಲಾಯಲ್​ ಅಭಿಮಾನಿಗಳ ಬಳಗವೇ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸುತ್ತಿದೆ. ಆರ್​ಸಿಬಿಗೆ ಶುಭವಾಗಲಿ. ತವರಿನಲ್ಲಿ ಪಟೀದಾರ್ ಪಡೆ ವಿಜಯೋತ್ಸವ ಆಚರಿಸಲಿ. ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಲಿ. ಇದೇ ನಮ್ಮೆಲ್ಲರ ಆಶಯ.. ಜೈ ಹೋ ಆರ್​ಸಿಬಿ.

ಇದನ್ನೂ ಓದಿ: RCB vs GT: ಬೆಂಗಳೂರಲ್ಲೇ ಪಂದ್ಯ, ಹೆಚ್ಚು ಬಾರಿ ಗೆದ್ದ ತಂಡ ಯಾವುದು? ಕಂಪ್ಲೀಟ್​ ಮಾಹಿತಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment