ಫೈನಲ್​ ಪಂದ್ಯದ ಪ್ಲೇಯಿಂಗ್-11ರಲ್ಲಿ ಭಾರೀ ಬದಲಾವಣೆ? ಅಸಲಿ ವಿಚಾರ ಬಿಚ್ಚಿಟ್ಟ ಗವಾಸ್ಕರ್..!

author-image
Ganesh
Updated On
ಫೈನಲ್​ ಪಂದ್ಯದ ಪ್ಲೇಯಿಂಗ್-11ರಲ್ಲಿ ಭಾರೀ ಬದಲಾವಣೆ? ಅಸಲಿ ವಿಚಾರ ಬಿಚ್ಚಿಟ್ಟ ಗವಾಸ್ಕರ್..!
Advertisment
  • ಮಾಜಿ ಕ್ರಿಕೆಟಿಗನ ಪ್ರಕಾರ ತಂಡ ಹೇಗಿರಬೇಕು?
  • ನಾಲ್ವರು ಸ್ಪಿನ್ನರ್​​ ಆಯ್ಕೆ ಬಗ್ಗೆ ಗವಾಸ್ಕರ್ ಏನಂದ್ರು?
  • ಭಾನುವಾರ ಚಾಂಪಿಯನ್ಸ್​ ಟ್ರೋಫಿ ಫೈನಲ್ ಪಂದ್ಯ

ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವು ನಾಡಿದ್ದ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಈ ಮಧ್ಯೆ ಟೀಂ ಇಂಡಿಯಾದ ಪ್ಲೇಯಿಂಗ್-11ನಲ್ಲಿ ಮಹತ್ವದ ಬದಲಾವಣೆ ಆಗುತ್ತಾ ಎಂಬ ಚರ್ಚೆ ಮುನ್ನಲೆಗೆ ಬಂದಿದೆ.

ಟೀಂ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಭಾರತ ತಂಡವು ಪ್ಲೇಯಿಂಗ್-XIರಲ್ಲಿ ಯಾವುದೇ ಬದಲಾವಣೆ ಮಾಡಬಾರದು ಮತ್ತು 4 ಸ್ಪಿನ್ನರ್‌ಗಳನ್ನು ಆಡಿಸುವ ಸೂತ್ರಕ್ಕೆ ಅಂಟಿಕೊಳ್ಳಬೇಕು ಎಂದು ಬಲವಾಗಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಫೈನಲ್​ನಲ್ಲಿ ನಾಲ್ವರು ರಿಯಲ್ ಗೇಮ್ ಚೇಂಜರ್; ಈ ಸ್ಟಾರ್​ ಮಿಂಚಿದ್ರೆ ಟ್ರೋಫಿ ಗ್ಯಾರಂಟಿ..!

publive-image

ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ಇಬ್ಬರನ್ನೂ ಸೇರಿಸಿಕೊಂಡಿರುವುದು ತಂಡದ ಬಲವನ್ನು ಹೆಚ್ಚಿಸಿದೆ. ಅವರಿಬ್ಬರ ಕಾಂಬಿನೇಷನ್​​ ಹಾಳು ಮಾಡಬಾರದು. ಫೈನಲ್ ಪಂದ್ಯದಲ್ಲಿ ನನ್ನ ಪ್ರಕಾರ, ನಾಲ್ವರು ಸ್ಪಿನ್ನರ್​​ ಇದ್ದೇ ಇರುತ್ತಾರೆ ಎನಿಸುತ್ತೆ. ಹಾಗೆಯೇ ಇರಬೇಕು. ಚಕ್ರವರ್ತಿ ಸೇರ್ಪಡೆ, ಕುಲ್‌ದೀಪ್ ಸೇರ್ಪಡೆ ಅವರು ಎಷ್ಟು ಪರಿಣಾಮಕಾರಿ ಅನ್ನೋದು ತಂಡಕ್ಕೆ ಗೊತ್ತಾಗಿದೆ. ಕೆಲವೊಮ್ಮೆ ವಿಕೆಟ್ ಬೀಳದಿದ್ದರೂ ಅವು ಅತ್ಯುತ್ತಮ ಡಾಡ್ ಬಾಲ್​ಗಳಾಗಿವೆ. ನನ್ನ ಪ್ರಕಾರ ತಂಡದಲ್ಲಿ ಯಾವುದೇ ಬದಲಾವಣೆ ಇರಬಾರದು ಎಂದು ಸುನಿಲ್ ಗವಾಸ್ಕರ್​ ಹೇಳಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಚಿನ್ನದ ಬ್ಯಾಟ್ ಯಾರ ಪಾಲಾಗುತ್ತೆ..? ರೇಸ್​ನಲ್ಲಿ ನಾಲ್ವರು ಆಟಗಾರರು​..!

ಆಸಿಸ್​ ವಿರುದ್ಧದ ಪ್ಲೇಯಿಂಗ್-11:

ರೋಹಿತ್ ಶರ್ಮಾ (ಕ್ಯಾಪ್ಟನ್), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಸರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಂದ್ರ ಜಡೇಜಾ, ಮೊಹ್ಮದ್ ಶಮಿ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment