/newsfirstlive-kannada/media/post_attachments/wp-content/uploads/2025/03/HARDIK-PANDYA-1.jpg)
ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವು ನಾಡಿದ್ದ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಈ ಮಧ್ಯೆ ಟೀಂ ಇಂಡಿಯಾದ ಪ್ಲೇಯಿಂಗ್-11ನಲ್ಲಿ ಮಹತ್ವದ ಬದಲಾವಣೆ ಆಗುತ್ತಾ ಎಂಬ ಚರ್ಚೆ ಮುನ್ನಲೆಗೆ ಬಂದಿದೆ.
ಟೀಂ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಭಾರತ ತಂಡವು ಪ್ಲೇಯಿಂಗ್-XIರಲ್ಲಿ ಯಾವುದೇ ಬದಲಾವಣೆ ಮಾಡಬಾರದು ಮತ್ತು 4 ಸ್ಪಿನ್ನರ್ಗಳನ್ನು ಆಡಿಸುವ ಸೂತ್ರಕ್ಕೆ ಅಂಟಿಕೊಳ್ಳಬೇಕು ಎಂದು ಬಲವಾಗಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಫೈನಲ್ನಲ್ಲಿ ನಾಲ್ವರು ರಿಯಲ್ ಗೇಮ್ ಚೇಂಜರ್; ಈ ಸ್ಟಾರ್ ಮಿಂಚಿದ್ರೆ ಟ್ರೋಫಿ ಗ್ಯಾರಂಟಿ..!
ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ಇಬ್ಬರನ್ನೂ ಸೇರಿಸಿಕೊಂಡಿರುವುದು ತಂಡದ ಬಲವನ್ನು ಹೆಚ್ಚಿಸಿದೆ. ಅವರಿಬ್ಬರ ಕಾಂಬಿನೇಷನ್ ಹಾಳು ಮಾಡಬಾರದು. ಫೈನಲ್ ಪಂದ್ಯದಲ್ಲಿ ನನ್ನ ಪ್ರಕಾರ, ನಾಲ್ವರು ಸ್ಪಿನ್ನರ್ ಇದ್ದೇ ಇರುತ್ತಾರೆ ಎನಿಸುತ್ತೆ. ಹಾಗೆಯೇ ಇರಬೇಕು. ಚಕ್ರವರ್ತಿ ಸೇರ್ಪಡೆ, ಕುಲ್ದೀಪ್ ಸೇರ್ಪಡೆ ಅವರು ಎಷ್ಟು ಪರಿಣಾಮಕಾರಿ ಅನ್ನೋದು ತಂಡಕ್ಕೆ ಗೊತ್ತಾಗಿದೆ. ಕೆಲವೊಮ್ಮೆ ವಿಕೆಟ್ ಬೀಳದಿದ್ದರೂ ಅವು ಅತ್ಯುತ್ತಮ ಡಾಡ್ ಬಾಲ್ಗಳಾಗಿವೆ. ನನ್ನ ಪ್ರಕಾರ ತಂಡದಲ್ಲಿ ಯಾವುದೇ ಬದಲಾವಣೆ ಇರಬಾರದು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಚಿನ್ನದ ಬ್ಯಾಟ್ ಯಾರ ಪಾಲಾಗುತ್ತೆ..? ರೇಸ್ನಲ್ಲಿ ನಾಲ್ವರು ಆಟಗಾರರು..!
ಆಸಿಸ್ ವಿರುದ್ಧದ ಪ್ಲೇಯಿಂಗ್-11:
ರೋಹಿತ್ ಶರ್ಮಾ (ಕ್ಯಾಪ್ಟನ್), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಸರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಂದ್ರ ಜಡೇಜಾ, ಮೊಹ್ಮದ್ ಶಮಿ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್