/newsfirstlive-kannada/media/post_attachments/wp-content/uploads/2024/06/SURYA-KUMAR.jpg)
ಮುಂದಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ಗೆ ಹಲವು ತಂಡಗಳು ಆಟಗಾರರ ರಿಲೀಸ್ ಪಟ್ಟಿಯನ್ನು ಫೈನಲ್​ ಮಾಡಿಲ್ಲ. ಮುಂಬೈ ಇಂಡಿಯನ್ಸ್​ ಕೂಡ ಹಲವರನ್ನು ರಿಲೀಸ್​ ಮಾಡಲು ಮುಂದಾಗಿದೆ. ಭಾರತ ಟಿ20 ಕ್ರಿಕೆಟ್​​ ತಂಡದ ಸೂರ್ಯಕುಮಾರ್​ ಯಾದವ್​ ಕೂಡ ಮುಂಬೈ ಇಂಡಿಯನ್ಸ್ ತಂಡದಲ್ಲಿ ಉಳಿದುಕೊಳ್ಳುವುದು ಕಷ್ಟ. ಇದಕ್ಕೆ ಕಾರಣ ಇವರು ಸಹ ನಾಯಕತ್ವವನ್ನು ಬಯಸುತ್ತಿದ್ದಾರೆ. ಹೀಗಾಗಿ ಸೂರ್ಯಕುಮಾರ್​ ಬೇರೆ ತಂಡಗಳತ್ತ ಮುಖ ಮಾಡಬಹುದು. ಈ ಅವಕಾಶವನ್ನು ಬಳಸಿಕೊಳ್ಳಲು ಎಲ್ಲ ತಂಡಗಳು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿವೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನ ಸ್ಥಾನ ತುಂಬ ಬಲ್ಲ ಆಟಗಾರರ ಪಟ್ಟಿಯಲ್ಲಿ ಕೇವಲ ಕೆ.ಎಲ್​ ರಾಹುಲ್​ ಮಾತ್ರವಲ್ಲ ಸೂರ್ಯಕುಮಾರ್​ ಯಾದವ್​ ಕೂಡ ಇದ್ದಾರೆ. ಇವರು ಟೀಮ್ ಇಂಡಿಯಾದ ನಾಯಕರಾಗಿಯೂ ತಮ್ಮ ಕ್ಷಮತೆ ಸಾಬೀತು ಪಡಿಸಿದ್ದಾರೆ. ಹೀಗಾಗಿ ಇವರ ಮೇಲೂ ಡೆಲ್ಲಿ ಕ್ಯಾಪಿಟಲ್ಸ್ ಹದ್ದಿನ ಕಣ್ಣಿಟ್ಟಿದೆ. ಜತೆಗೆ ಆರ್​​ಸಿಬಿ ಕೂಡ ಸೂರ್ಯ ಅವರನ್ನು ಬಿಡ್​ ಮಾಡಬಹುದು. ಆದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್​​ ಎಲ್ಲಾ ಮಾಸ್ಟರ್​ ಪ್ಲಾನ್​​​ ಮಾಡಿದ್ದು, ಸೂರ್ಯ ಅವರನ್ನು ಖರೀದಿ ಮಾಡಲು ಚಿಂತಿಸಿದೆ.
ಇಂಡಿಯನ್​ ಪ್ರೀಮಿಯರ್​​ ಲೀಗ್​​ 2025ರ ಮೆಗಾ ಆಕ್ಷನ್​​ಗೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು? ಯಾರನ್ನು ಬಿಡಬೇಕು ಎಂಬುದರ ಬಗ್ಗೆ ಐಪಿಎಲ್​​ ತಂಡಗಳು ತೀರ್ಮಾನಿಸುತ್ತಿವೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ತನ್ನ ರೀಟೈನ್​ ಲಿಸ್ಟ್​​ ಫೈನಲ್​ ಮಾಡಿದೆ. ಇತ್ತೀಚಿನ ವರದಿಗಳ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರನ್ನು ಕೈ ಬಿಡುವ ಸಾಧ್ಯತೆಯಿದೆ.
ಡೆಲ್ಲಿ ತಂಡದಿಂದ ಪಂತ್​ಗೆ ಗೇಟ್​ ಪಾಸ್​​
ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಆಗಿದ್ದ ರಿಕ್ಕಿ ಪಾಂಟಿಂಗ್ ಈ ವರ್ಷದ ಆರಂಭದಲ್ಲೇ ತಂಡ ತೊರೆದಿದ್ದರು. ಇದರ ಬೆನ್ನಲ್ಲೇ ರಿಷಭ್ ಪಂತ್ ಕೂಡ ಐಪಿಎಲ್ನಲ್ಲಿ ಡೆಲ್ಲಿ ತಂಡವನ್ನು ತೊರೆಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ರಿಷಭ್ ಪಂತ್ 2024ರ ಐಪಿಎಲ್​​​ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಹಾಗಾಗಿ ಪಂತ್​ ಅವರನ್ನು ತಂಡದಿಂದ ಬಿಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ