ಕಾಲ್ತುಳಿತ ಪ್ರಕರಣ.. ಬಿಸಿಸಿಐ ನಿರ್ಧಾರದಿಂದ KSCAಗೆ ಭಾರೀ ಪೆಟ್ಟು..!

author-image
Ganesh
Updated On
ಕಾಲ್ತುಳಿತ ಪ್ರಕರಣ.. ಬಿಸಿಸಿಐ ನಿರ್ಧಾರದಿಂದ KSCAಗೆ ಭಾರೀ ಪೆಟ್ಟು..!
Advertisment
  • ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಲ್ಲಿ ಕೆಎಸ್​ಸಿಎಗೆ ಬರೆ
  • ಮಹಿಳಾ ಟಿ20 ವಿಶ್ವಕಪ್ ಪಂದ್ಯಗಳ ಮೇಲೆ ಕರಿಛಾಯೆ..?
  • ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಆಯ್ತಾ ಶಿಕ್ಷೆ..?

ಕಾಲ್ತುಳಿತ ಕೇಸ್​​ನ ಕಪ್​​ ಚುಕ್ಕೆ ಆರ್​​ಸಿಬಿಗೆ ಸರ್ಕಾರಕ್ಕೆ ಎಷ್ಟು ಹಿನ್ನಡೆಯುಂಟು ಮಾಡಿದ್ಯೋ, ಇಲ್ವೋ ಗೊತ್ತಿಲ್ಲ. ಕೆಎಸ್​​ಸಿಎಗೆ ಮಾತ್ರ ದೊಡ್ಡ ಮಟ್ಟದ ಹಿನ್ನಡೆಯಾಗಿದೆ. ಚಿನ್ನಸ್ವಾಮಿಯ ಮೈದಾನದಲ್ಲಿ ನಡೀಬೇಕಿದ್ದ ಮಹತ್ವದ ಪಂದ್ಯಗಳು ಬೆಂಗಳೂರಿಂದ ಹೊರಗೆ ಶಿಫ್ಟ್​ ಆಗಿವೆ.

ಕಾಲ್ತುಳಿತ ಪ್ರಕರಣದಲ್ಲಿ ಕೆಎಸ್​ಸಿಎಗೆ ಬರೆ

ಚಿನ್ನಸ್ವಾಮಿಯ ಸ್ಟೇಡಿಯಂ ಬಳಿಕ ಕಾಲ್ತುಳಿತ ಪ್ರಕರಣದಲ್ಲಿ ಸರಿ, ತಪ್ಪುಗಳ ಚರ್ಚೆ ನಡೀತಿದೆ. ಈ ವಿಚಾರದಲ್ಲಿ ಒಂದು ವರ್ಗ ಕೆಎಸ್​ಸಿಎ ಮೇಲೆ ಗೂಬೆ ಕೂರಿಸ್ತಿದ್ರೆ, ಮತ್ತೊಂದು ವರ್ಗ ರಾಜ್ಯ ಸರ್ಕಾರದ ನಡೆಯ ಬಗ್ಗೆಯೇ ಪ್ರಶ್ನಿಸ್ತಿದೆ. ಇನ್ನೊಂದು ವರ್ಗ ಆರ್​ಸಿಬಿಯತ್ತ ಕೈ ತೋರಿಸ್ತಿದೆ. ಈ ಪ್ರಕರಣದಲ್ಲಿ ನೈತಿಕ ಹೊಣೆಗಾರಿಕೆ ಹೊತ್ತು ಕೆಎಸ್​ಸಿಎ ಕಾರ್ಯದರ್ಶಿ ಶಂಕರ್​, ಖಂಜಾಚಿ ಜೈರಾಮ್ ರಾಜೀನಾಮೆ ಸಹ ನೀಡಿದ್ದಾಗಿದೆ. ಇದೆಲ್ಲದರ ಮಧ್ಯೆ ಚಿನ್ನಸ್ವಾಮಿಯಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನ ಬೇರೆಡೆಗೆ ಶಿಫ್ಟ್​ ಮಾಡಲಾಗಿದೆ.

ಕಾಲ್ತುಳಿತ ದುರಂತಕ್ಕೂ ಮುನ್ನ ಭಾರತ ಎ ಹಾಗೂ ಸೌತ್ ಆಫ್ರಿಕಾ ಎ ನಡುವಿನ 3 ಏಕದಿನ ಪಂದ್ಯಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ವೇದಿಕೆಯಾಗಿತ್ತು. ನವೆಂಬರ್ 13ರಿಂದ ನವೆಂಬರ್ 16ರ ತನಕ ಈ ಸರಣಿ ನಡೆಯಬೇಕಿತ್ತು. ಈ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿಯಿಂದ ಗುಜರಾತ್​ನ ರಾಜಕೋಟ್​​ಗೆ ಶಿಫ್ಟ್​ ಆಗಿದೆ.

ಕಾಲ್ತುಳಿತ ಪ್ರಕರಣವೇ ಪಂದ್ಯಗಳ ಸ್ಥಳಾಂತರಕ್ಕೆ ಕಾರಣ?

ಒಂದ್ಕಡೆ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಬಿಸಿಯ ನಡುವೆಯೇ ಚಿನ್ನಸ್ವಾಮಿಯ ಪಂದ್ಯಗಳ ಸ್ಥಳಾಂತರ ನಡಿತಿದೆ. ಇದಕ್ಕೆ ಕಾಲ್ತುಳಿತ ದುರಂತವೇ ಕಾರಣ ಎನ್ನಲಾಗ್ತಿದೆ. ಕೆಎಸ್​ಸಿಎ ಅಧ್ಯಕ್ಷ ರಘುರಾಮ್​ ಭಟ್​, ಇದಕ್ಕೆ ಬೇರೆಯದ್ದೇ ವ್ಯಾಖ್ಯಾನ ನೀಡಿದ್ದಾರೆ.

ಇದನ್ನೂ ಓದಿ: ಆಟವಾಡುತ್ತಿದ್ದಾಗ ಕರೆಂಟ್ ಶಾಕ್; ಬೆಸ್ಕಾಂ ನಿರ್ಲಕ್ಷ್ಯಕ್ಕೆ 11 ವರ್ಷದ ಬಾಲಕಿ ದುರಂತ

publive-image

ಅದಕ್ಕೂ ಇದಕ್ಕೂ ಸಂಬಂಧ ಇಲ್ಲ!

ಕಾಲ್ತುಳಿತ ಪ್ರಕರಣಕ್ಕೂ ಚಿನ್ನಸ್ವಾಮಿ ಸ್ಟೇಡಿಯಂನಿಂದ ಪಂದ್ಯಗಳ ಸ್ಥಳಾಂತರಕ್ಕೂ ಸಂಬಂಧ ಇಲ್ಲ. ಈ ಪ್ರಕರಣ ನಡೆದ ಸಮಯದಲ್ಲೇ ಕಾರಣಕ್ಕೆ ಸಂಬಂಧ ಕಲ್ಪಿಸಲಾಗ್ತಿದೆ. ಅಷ್ಟೇ ಹೊರತು ಪಂದ್ಯಗಳ ಸ್ಥಳಾಂತರಕ್ಕೂ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ-ರಘುರಾಮ್​ ಭಟ್​, KSCA ಅಧ್ಯಕ್ಷ

ಮಹಿಳಾ ಟಿ20 ವಿಶ್ವಕಪ್ ಪಂದ್ಯಗಳ ಮೇಲೆ ಕರಿಛಾಯೆ..?

ಭಾರತ ಎ, ಸೌತ್ ಆಫ್ರಿಕಾ ಎ ನಡುವಿನ ಪಂದ್ಯಗಳು ಮಾತ್ರವಲ್ಲ. ಇದೇ ವರ್ಷ ಭಾರತ ಹಾಗೂ ಶ್ರೀಲಂಕಾ ಸಹಯೋಗದಲ್ಲಿ ಮಹಿಳಾ ಟಿ-20 ವಿಶ್ವಕಪ್ ನಡೆಯಲಿದೆ. 12 ವರ್ಷಗಳ ಬಳಿಕ ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೂ ಚಿನ್ನಸ್ವಾಮಿಯೇ ವೇದಿಕೆಯಾಗಿದೆ. ಉದ್ಘಟನಾ ಪಂದ್ಯಕ್ಕೆ ಮಾತ್ರವಲ್ಲ. ಅಕ್ಟೋಬರ್​ 30ರಂದು ನಡೆಯಲಿರುವ ಸೆಮಿಫೈನಲ್​-2 ಹಾಗೂ ಫೈನಲ್​ ಪಂದ್ಯವೂ ಚಿನ್ನಸ್ವಾಮಿಯಲ್ಲೇ ಆಯೋಜಿಸಲಾಗಿದೆ. ಆದ್ರೀಗ ಕಾಲ್ತುಳಿತದ ಪ್ರಕರಣದಿಂದ ಈ ಪಂದ್ಯಗಳು ಸಹ ಬೆಂಗಳೂರಿನಿಂದ ಹೊರಗೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಬಿಸಿಸಿಐ ವಲಯದಲ್ಲಿ ಚರ್ಚೆಗಳು ನಡೆದಿವೆ.

ಶಾಂತಾ ರಂಗಸ್ವಾಮಿ ಬೇಸರ
50 ವರ್ಷಗಳಿಂದ ಅಭಿಮಾನಿಗಳಿಗೆ ಸಂತಸ ನೀಡಿದ ಕ್ರೀಡಾಂಗಣದಲ್ಲಿ ದುರಂತ ನಡೆದಿದ್ದನ್ನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಹಿಳಾ ವಿಶ್ವಕಪ್ ಪಂದ್ಯಗಳನ್ನ ಬೆಂಗಳೂರಿನಿಂದ ಹೊರಗೆ ಸ್ಥಳಾಂತರಿಸಿದರೆ, ಅದು ರಾಜ್ಯ ಕ್ರಿಕೆಟ್‌ಗೆ ದೊಡ್ಡ ಹೊಡೆತವಾಗುತ್ತದೆ-ಶಾಂತ ರಂಗಸ್ವಾಮಿ, ಮಾಜಿ ಕ್ರಿಕೆಟರ್

publive-image

18 ವರ್ಷಗಳ ಬಳಿಕ ಆರ್​ಸಿಬಿ ಕಪ್ ಗೆದ್ದ ಖುಷಿ, 18 ಗಂಟೆಯೂ ಉಳಿಯಲಿಲ್ಲ. ಸಂಭ್ರಮವನ್ನ ಸೂತಕ ಆವರಿಸಿತು. ಕರ್ನಾಟಕ ಕ್ರಿಕೆಟ್​ಗೂ ಈ ಒಂದು ಘಟನೆ ಕಪ್ಪು ಚುಕ್ಕೆಯಾಗಿ ಉಳಿಯಲಿದೆ. ದಿನದಿಂದ ದಿನಕ್ಕೆ ಈ ಪ್ರಕರಣದ ಸುತ್ತು ಒಂದಲ್ಲ ಒಂದು ಬೆಳವಣಿಗೆಗಳು ನಡೀತಾನೇ ಇದೆ. ಚಿನ್ನಸ್ವಾಮಿ ಸ್ಟೇಡಿಯಂನಿಂದ ಮ್ಯಾಚ್​ ಶಿಫ್ಟ್​ ಆಗೋ ಹಂತಕ್ಕೂ ತಲುಪಿದ್ದಾಗಿದೆ. ಇದರ ನಡುವೆ ಸ್ಟೇಡಿಯಂನೇ ಶಿಫ್ಟ್​ ಮಾಡ್ತೀವಿ ಅಂತಾ ಸರ್ಕಾರ ಹೇಳ್ತಿದೆ. ಇದೆಲ್ಲಾ ಎಲ್ಲಿಗೆ ಹೋಗಿ ತಲುಪುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ: RCB ಅಭಿಮಾನಿಗಳಿಗೆ ಗುಡ್​ನ್ಯೂಸ್​.. ಯುನೈಟೆಡ್ ಸ್ಪಿರಿಟ್ಸ್ ಕಂಪನಿ ಕೊಟ್ಟ ಸ್ಪಷ್ಟನೆ ಏನು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment